ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನ ಚುನಾವಣೆ ಜನವರಿ 17 ಕ್ಕೆ ನಡೆಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಡಿ.ಎಸ್.ಸುರೇಶ್ ಅಧ್ಯಕ್ಷ ರಾಗಿ ಅಪೆಕ್ಸ್ ಬ್ಯಾಂಕ್ ಗೆ ಬೆಳ್ಳಿ ಪ್ರಕಾಶ್ ಅಧ್ಯಕ್ಷರಾಗಿದ್ದರ ಫಲ ರೈತರಿಗೆ ಹೆಚ್ಚಿನ ಸಾಲ ನೀಡಲಾಗಿದೆ.ಬ್ಯಾಂಕ್ ನ ಹೊಸ ಕಟ್ಟಡ ಕಟ್ಟಲಾಗಿದೆ ಆದರೂ ಕಾಂಗ್ರೆಸ್ ನವರ ಕೆಂಗಣ್ಣಿಗೆ ಗುರಿಯಾಗಿ ಒತ್ತಡ ತಂದು ಚುನಾವಣೆಗೆ ತಡೆ ಒಡ್ಡುವ ಮೂಲಕ ರೈತರಿಗೆ ತೊಂದರೆ ಕೊಟ್ಟಿದ್ದಾರೆ ಎನ್ನಲಾಗಿದೆ.
ಕಿಸಿಯಲಾರದವರಿಗೆ ಯಾವುದಾದರೂ ನೆಪ ಬೇಕಿತ್ತು ಹೀಗಾಗಿ ಚುನಾವಣೆ ತಡೆಯಿಡಿಯುವ ಪ್ರಯತ್ನ ನಡೆಸಿದವರಿಗೆ ಕೋರ್ಟ್ ತಪರಾಕಿ ಬಾರಿಸಿದೆ ಜೊತೆಗೆ ಚುನಾವಣೆ ನಡೆಸುವಂತೆ ಆದೇಶ ನೀಡಿದೆ ಇದರ ಫಲವಾಗಿ ಜನವರಿ 17 ರೊಳಗೆ ಚುನಾವಣೆ ಪ್ರಕ್ರಿಯೆ ಮುಗಿಸಬೇಕಾಗಿದೆ.
ಸಹಕಾರ ಕ್ಷೇತ್ರದಲ್ಲಿ ರಾಜಕಾರಣ ಬರಬಾರದು ಆದರೆ ತರೀಕೆರೆ ಶಾಸಕ ಶ್ರೀನಿವಾಸ್ ,ಕಡೂರು ಶಾಸಕ ಆನಂದ್ ಸರ್ಕಾರದ ಮೇಲೆ ಒತ್ತಡ ತಂದು ತಡೆಹಿಡಿಸಿರುವುದು ಗುಟ್ಟಾಗಿ ಉಳಿದಿಲ್ಲ. ಸೊಸೈಟಿಯಲ್ಲಿ ಅಧಿಕಾರ ಪಡೆಯದೆ ಪೇಚಾಡುವ ಇವರುಗಳು ಆನೆ,ಒಂಟೆ ಹತ್ತುವ ಕನಸು ಕಂಡು ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ನಂತರ ಚುನಾವಣೆ ತಡೆಯಿಡಿಸಿದ್ದರಿಂದ ಕಳೆದ ಎರಡು ತಿಂಗಳಿಂದ ಬ್ಯಾಂಕ್ ವ್ಯವಹಾರಕ್ಕೆ ತೀರ ಹಿನ್ನೆಡೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕಾಂಗ್ರೆಸ್ ಗೆಲ್ಲುವುದು ಒಂದರಿಂದ ಎರಡು ಸ್ಥಾನ ಗೆದ್ದರೆ ದೊಡ್ಡ ಸಾಧನೆ ಆದರೂ ನಾನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷ ಆಗಬೇಕು ಎಂದು ಹಗಲುಗನಸು ಕಾಣುವುದು ಎಷ್ಟರ ಮಟ್ಟಿಗೆ ಸರಿ ಅಧಿಕಾರಸ್ಥರ ಮಾತಿಗೆ ಮಣಿಯಾಕುವ ಅಧಿಕಾರಿಗಳ ಎಡವಟ್ಟಿನಿಂದ ಬ್ಯಾಂಕ್ ಜೊತೆಗೆ ರೈತರಿಗೆ ತೊಂದರೆ ಆಗಿರುವುದನ್ನು ಯಾರು ಸರಿಪಡಿಸುತ್ತಾರೆ.
DCC Bank which is facing Congress’s wrath will have elections on January 17.
Leave a comment