Home namma chikmagalur chikamagalur ಬಿಜೆಪಿಗೆ ಜನತಾದಳದ ಠಕ್ಕರ್ ಕಾಂಗ್ರೆಸ್ ಗೆ ಟಾನಿಕ್ ಬಿಜೆಪಿ ಪಲ್ಟಿ !
chikamagalurHomeLatest Newsnamma chikmagalur

ಬಿಜೆಪಿಗೆ ಜನತಾದಳದ ಠಕ್ಕರ್ ಕಾಂಗ್ರೆಸ್ ಗೆ ಟಾನಿಕ್ ಬಿಜೆಪಿ ಪಲ್ಟಿ !

Share
Share

ರಾಷ್ಟ್ರದಲ್ಲಿ ಮತ್ತು ರಾಜ್ಯದಲ್ಲಿ ಜಾತ್ಯಾತೀತ ಜನತಾದಳ ಬಿಜೆಪಿ ಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಕೇಂದ್ರ ಸರ್ಕಾರದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಎರಡು ಬೃಹತ್ ಖಾತೆಗಳ ಸಚಿವರಾಗಿದ್ದಾರೆ.ಆದರೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕ್ಷೇತ್ರದಲ್ಲಿ ಇದಕ್ಕೆ ತದ್ವಿರುದ್ಧವಾಗಿ ಕಾಂಗ್ರೆಸ್ ಮತ್ತು ಜನತಾದಳ ಹೊಂದಾಣಿಕೆ ಮಾಡಿಕೊಂಡು ತಾಲ್ಲೂಕು ವ್ಯವಸಾಯ ಸಹಕಾರ ಮಾರುಕಟ್ಟೆಯ ಚುನಾವಣೆಯಲ್ಲಿ ಗೆದ್ದಿರುವುದು ಸೋಜಿಗದ ಸಂಗತಿ ಅಲ್ಲವೇ ಅಲ್ಲ .

ಅಜ್ಜಂಪುರ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಶಾಸಕ ಶ್ರೀನಿವಾಸ್ ಮೈ ಮರೆತು ಅಧಿಕಾರ ಕಳೆದುಕೊಂಡು ಕೈ,ಕೈ ಹಿಸುಕಿ ಕೊಂಡ ನಂತರ ಎಚ್ಚೆತ್ತು ಕೊಂಡರೆ.ಬಿಜೆಪಿ ಮಾಜಿ ಶಾಸಕ ಡಿ.ಎಸ್.ಸುರೇಶ್ ಮೈ ಮರೆತ ಫಲ ಕಳೆದ ಇಪ್ಪತ್ತು ವರ್ಷಗಳಿಂದ ಅಧಿಕಾರ ಹಿಡಿತ ಸಾಧಿಸಿದ್ದನ್ನು ಕೈ ಚೆಲ್ಲಿ ಕುಳಿತು ಕೊಳ್ಳುವಂತೆ ಮಾಡಿಕೊಂಡಿದ್ದಾರೆ.

ವಿ.ಎಸ್.ಎಸ್. ಎನ್ ಯಿಂದ ಆರು ಸ್ಥಾನ ಗೆದ್ದ ಬಿಜೆಪಿ ಯಾರು ಏನೂ ಮಾಡಲು ಸಾಧ್ಯ ಎಂಬ ಭ್ರಮೆ ಅಧಿಕಾರ ಕಳೆದುಕೊಳ್ಳುವಂತೆ ಮಾಡಿದೆ. ಜನತಾದಳದ ಎಂ.ನರೇಂದ್ರ ಹೊಂದಾಣಿಕೆ ಮಾಡಿಕೊಳ್ಳುವ ಬಗ್ಗೆ ಮಾತನಾಡಲು ಮೊಬೈಲ್ ಕರೆ ಮಾಡಿದಾಗ ಡಿ.ಎಸ್.ಸುರೇಶ್ ಕರೆ ಸ್ವೀಕರಿಸದೆ ನಿರ್ಲಕ್ಷ್ಯ ಮಾಡಿದ್ದರ ಫಲ ಹಾಲಿ ಶಾಸಕ ಕೈ ಎತ್ತಿ ಹಾರ ಹಾಕಿಸಿಕೊಂಡು ವಿಜಯೋತ್ಸವ ಆಚರಣೆ ಮಾಡಿಕೊಳ್ಳುತ್ತಿದ್ದರೆ ಸುರೇಶ್ ದಿಗಿಲು ಬೀಳುವಂತೆ ಮಾಡಿದೆ.

ಬಿಡಿ ಕ್ಷೇತ್ರದ ಏಳು ಸ್ಥಾನಗಳಗೆ ಚುನಾವಣೆ ನಡೆದುಕಾಂಗ್ರೆಸ್ ನ ಪ್ರಕಾಶ್ ವರ್ಮ,ದಯಾನಂದ, ಮಮತಾ, ಶೈಲ ಶ್ರೀ ಗೆಲುವು ಸಾಧಿಸಿದರೆ ಜನತಾದಳದ ಎಂ.ನರೇಂದ್ರ, ಉಮಾಶಂಕರ್ ಮತ್ತು ಹೆಚ್.ಸಿ.ಬಸವರಾಜಪ್ಪ ಗೆಲುವು ಸಾಧಿಸಿದರೆ ದಳದ ಇಟ್ಟಿಗೆ ಹಾಲಪ್ಪ ಅವಿರೋಧ ಆಯ್ಕೆ ಆಗಿದ್ದರು.ಹೀಗಾಗಿ ಜನತಾದಳ ಮತ್ತು ಕಾಂಗ್ರೆಸ್ ಅಧಿಕಾರ ಹಿಡಿಯುವುದು ಖಚಿತವಾಗಿದೆ.ಇದನ್ನು ನೋಡಿದರೆ ಅವಕಾಶವಾದಿ ರಾಜಕಾರಣಕ್ಕೆ ಜನ ಮಣಿ ಹಾಕುತ್ತಾರೆ ಎನ್ನಿಸುತ್ತಿದೆ ಎಂದು ಜನ ಮಾತನಾಡಿತ್ತಿರುವುದು ಸುಳ್ಳೇನಲ್ಲಾ.

ಕುಟುಂಬದ ರಾಜಕಾರಣ ಮಾಡದ ಸುರೇಶ್ ಯಾರಿಗೂ ತೊಂದರೆ ಕೊಡಲ್ಲ ಆದರೆ ಯಾವುದನ್ನು ಸಿರಿಯಸ್‌ ಗೆ ಪರಿಗಣಿಸಲ್ಲ ಜೊತೆಗೆ ಮೊಬೈಲ್ ತೆಗೆಯುವುದಿಲ್ಲ.ಇದರ ಪರಿಣಾಮ ಅನುಭವಿಸಿದರು ಎಚ್ಚೆತ್ತು ಕೊಳ್ಳದಿರುವುದು ಟಿ.ಎ.ಪಿ.ಸಿ.ಎಂ.ಎಸ್ ಅಧಿಕಾರ ಕಳೆದುಕೊಳ್ಳುವಂತಾಗಿದೆ.ಈ ಹಿಂದೆ ವಿಧಾನ ಸಭ ಚುನಾವಣೆಗೆ ಕೆಜೆಪಿ ಯಿಂದ ಸ್ಪರ್ಧೆ ಮಾಡಿದಾಗ ಹಲವು ಮುಂಖಡರು ಸುರೇಶ್ ಬೆಂಬಲಿಸಲು ಕಾದು ಕುಳಿತಿದ್ದರು ಸುರೇಶ್ ನಿರ್ಲಕ್ಷ್ಯ ಮಾಡಿದ್ದರಿಂದ ಐನೂರು ಮತಗಳಿಂದ ಸೋಲು ಅನುಭವಿಸಿದರೆ ಈಗ ನಡೆಯುತ್ತಿರುವ ಕುಟುಂಬ ರಾಜಕಾರಣಕ್ಕೆ ಕಾರಣರಾಗಿದ್ದಾರೆ ಎಂದು ಜನ ಮಾತನಾಡುತ್ತಿದ್ದಾರೆ.

BJP’s Janata Dal’s Thakkar Congress’s tonic BJP’s comeback!

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...