Home namma chikmagalur ಡಿ.ಸಿ.ಸಿ ಬ್ಯಾಂಕ್ ದಿವಾಳಿಗೆ ಸಂಚು ?
namma chikmagalurchikamagalurHomeLatest News

ಡಿ.ಸಿ.ಸಿ ಬ್ಯಾಂಕ್ ದಿವಾಳಿಗೆ ಸಂಚು ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಚುನಾವಣೆಯ ಪ್ರಕ್ರಿಯೆ ಪ್ರಾರಂಭವಾಗಿ ಒಂದು ತಿಂಗಳಾಗಿದೆ.ಅಂದರೆ 30_6_2025 ರಂದು ಅಧಿಸೂಚನೆ ಹೊರಡಿಸಲಾಗಿತ್ತು ಈಗಾಗಲೇ ಸಹಕಾರಿ ಸಂಘಗಳು ಡೆಲಿಗೇಷನ್ ಕಳುಹಿಸಿ ಕೊಟ್ಟಿವೆ.ಆದರೆ ಚುನಾವಣಾ ಅಧಿಕಾರಿಗಳು 14/1 ರಂತೆ ಚುನಾವಣೆಯ ಅಧಿಸೂಚನೆ ಹಿಂಪಡಿದಿದ್ದಾರೆ ಇದರಿಂದಾಗಿ ಚುನಾವಣೆ ಪ್ರಕ್ರಿಯೆಗಳಿಗೆ ತಡೆಯಾಗಿದೆ.

ಅಂತರಘಟ್ಟೆ ,ಲಿಂಗದಹಳ್ಳಿ,ದೊಡ್ಡ ಬೋಕಿಕೆರೆ,ಸೊಲ್ಲಾಪುರ ಸಹಕಾರ ಸಂಘಗಳು ಮತ್ತು ಯಗಟಿ ಹಾಲು ಉತ್ಪಾದಕರ ಸಂಘಗಳ ಆಕ್ಷೇಪಣೆಗಳನ್ನು ಕಾರಣ ನೀಡಲಾಗಿದೆ.ಆದರೆ ಆಕ್ಷೇಪಣೆ ಸಲ್ಲಿಸಲು ಸಮಯ ಕೊಡಲಾಗಿದೆ ಇದರಿಂದ ಬ್ಯಾಂಕ್ ವ್ಯವಸ್ಥೆ ಮತ್ತು ವಹಿವಾಟುನ ಮೇಲೆ ಪರಿಣಾಮ ಬೀರುತ್ತದೆ ಎಂದು ಕಾನೂನು ತಜ್ಞರ ಅಭಿಪ್ರಾಯವಾಗಿದೆ.

ರಾಜ್ಯದಲ್ಲಿ ಕೋಲಾರ ಮತ್ತು ಮೈಸೂರು ಸಹಕಾರ ಬ್ಯಾಂಕುಗಳನ್ನು ದಿವಾಳಿಗೆ ತಳ್ಳಿರುವ ಸರ್ಕಾರ ಈಗ ಚಿಕ್ಕಮಗಳೂರು ಸಹಕಾರ ಬ್ಯಾಂಕ್ ಮೇಲೆ ಕಣ್ಣಾಕಿದೆ ಎಂದು ಸಹಕಾರಿ ಕ್ಷೇತ್ರದ ಹಿರಿಯರ ಅಭಿಪ್ರಾಯ. ಸರ್ವೋಚ್ಛ ನ್ಯಾಯಾಲಯದ ತೀರ್ಪುನಂತೆ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭವಾದ ಮೇಲೆ ಚುನಾವಣೆ ತಡೆಹಿಡಿಯುವ ಅವಕಾಶವಿಲ್ಲದಿದ್ದರು ಅಧಿಕಾರಸ್ಥರ ಒತ್ತಡದಿಂದ ಚುನಾವಣೆ ತಡೆಗಟ್ಟುವುದು ಎಷ್ಟರಮಟ್ಟಿಗೆ ಸರಿ ಈ ಸಂಬಂಧ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವುದು ಖಚಿತ ಎಂದು ಎಸ್.ಎಲ್.ಬೋಜೇಗೌಡರು ತಿಳಿಸಿದ್ದಾರೆ.

ಕಾಂಗ್ರೆಸ್ ನವರು ಚುನಾವಣೆ ಎದುರಿಸಲು ಸಾಧ್ಯವಿಲ್ಲ ಹೀಗಾಗಿ ವಾಮ ಮಾರ್ಗ ಹಿಡಿದು ಚುನಾವಣೆ ಅಧಿಸೂಚನೆ ಹಿಂದೆ ಪಡೆಯಲು ಒತ್ತಡ ತಂದಿದ್ದಾರೆ ಎನ್ನಲಾಗಿದೆ. ಶಾಸಕರುಗಳಾದ ಹೆಚ್.ಡಿ.ತಮ್ಮಯ್ಯ, ಕೆ.ಎಸ್.ಆನಂದ್ ಮತ್ತು ಜಿ.ಹೆಚ್.ಶ್ರೀನಿವಾಸ್ ಚುನಾವಣೆ ನಡೆಸದಂತೆ ಸರ್ಕಾರದ ಮೇಲೆ ಒತ್ತಡ ತಂದಿರುವುದರಿಂದ ಚುನಾವಣೆ ತಡೆಯುವ ಪ್ರಯತ್ನ ನಡೆದಿದೆ ಎಂಬ ಸುದ್ದಿ ಗುಟ್ಟಾಗಿ ಉಳಿದಿಲ್ಲ.

ಸಹಕಾರ ಕ್ಷೇತ್ರದಲ್ಲಿ ರಾಜಕೀಯ ಬೆರೆಸಿದರೆ ಅನಾಹುತ ಉಂಟಾಗಿ ಬ್ಯಾಂಕ್ ಗಳ ವ್ಯವಹಾರಕ್ಕೆ ಧಕ್ಕೆ ಉಂಟಾಗುತ್ತದೆ ಠೇವಣಿ ಇಟ್ಟವರು ಮತ್ತು ಸಾಲ ಪಡೆದು ವ್ಯವಹಾರ ನಡೆಸುವವರು ಮತ್ತು ಸಹಕಾರ ಸಂಘಗಳು ನಲುಗುವುದು ಗ್ಯಾರಂಟಿ.
ಸಹಕಾರ ರಂಗ ಈಗಾಗಲೇ ಅಧೋಗತಿಯತ್ತ ಸಾಗುತ್ತಿದೆ.ಕುಣಿಯಲಾರದವರಿಗೆ ನೆಲ ಡೊಂಕಾದ ರೀತಿಯಲ್ಲಿ ಚುನಾವಣೆ ತಡೆಯುವುವವರು ರೈತರ ಹಿತಾಸಕ್ತಿ ಮರೆಯಬಾರದು .

Conspiracy to bankrupt DCC Bank?

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...