Home Latest News MLC ಎಸ್ ಎಲ್ ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು
Latest News

MLC ಎಸ್ ಎಲ್ ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು

Share
Share

ಚಿಕ್ಕಮಗಳೂರು : ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ದೇವೇಂದ್ರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರ ಮೇಲೆ ಜಿಲ್ಲಾಧಿಕಾರಿಗೆ ದೂರು ಸಲ್ಲಸಿದ್ದು ನೌಕರರನ್ನು ಪದೇ,ಪದೇ ಮನೆಗೆ ಕರೆಯಿಸಿ ಬೆದರಿಕೆಯ ಜೊತೆಗೆ ಆಮಿಷ ಒಡ್ಡುತ್ತಿದ್ದು ರೆಸಾರ್ಟ್ನಲ್ಲಿ ಉಳಿಯಬೇಕು ನಾನು ಹೇಳಿದವರಿಗೆ ಮತ ನೀಡಬೇಕು ಎಂದು ಬೆದರಿಸುತ್ತಿರುವುದರಿಂದ ಮುಕ್ತ ಚುನಾವಣೆ ನಡೆಯುವುದಿಲ್ಲ ನಿರ್ಭಯವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲು ಒತ್ತಾಯ ಮಾಡಿರುವುದು ಚುನಾವಣೆಯಲ್ಲಿ ನಡೆಯುತ್ತಿರುವ ರಂಗಿನಾಟಕ್ಕೆ ಹೊಸ ತಿರುವು ಬಂದಿದೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಡಿಸೆಂಬರ್ 4 ರಂದು ನಡೆಯಲಿದೆ ಈಗಾಗಲೇ ಅಧ್ಯಕ್ಷ ,ಖಜಾಂಚಿ ಮತ್ತು ರಾಜ್ಯ ಪರಿಷತ್ ಗೆ ಸ್ಪರ್ಧೆಯಲ್ಲಿ ರುವವರು ದೇವೇಂದ್ರ ಮತ್ತು ಹೇಮಂತ್ ನೇತೃತ್ವದಲ್ಲಿ ಭರ್ಜರಿ ಬ್ಯಾಟಿಂಗ್ ಶುರುಮಾಡಿದ್ದಾರೆ. 73 ಮತದಾರರು ಇದ್ದು ಎರಡು ಗುಂಪಿನಲ್ಲಿ ನೇರವಾಗಿ ಗುರ್ತಿಸಿಕೊಂಡಿದ್ದರೆ ಕೆಲವರು ಅತ್ತಾ,ಇತ್ತಾ ಸುಳಿದಾಡಿದರೆ ಕೆಲವರು ನೇರವಾಗಿ ಯಾರ ಗುಂಪಿನ ಜೊತೆಯಲ್ಲಿ ಇಲ್ಲ ನಮಗೆ ಮತ ನೀಡುವುದು ಗೊತ್ತು ಎಂದಿದ್ದಾರೆ.

ಹತ್ತರಿಂದ ಹನ್ನೆರಡು ಜನಮಾತ್ರ ಅಯಾಯ ಗುಂಪಿನಲ್ಲಿ ರೆಸಾರ್ಟ್ ಪಾರ್ಟಿ ನಡೆಸುತ್ತಿದ್ದು ಕೆಲವರು ನಮಗೆ ಪಾರ್ಟಿ, ಪೇಮೆಂಟ್, ಗುಂಪು ಬೇಡ ಎಂದು ನೇರವಾಗಿ ಹೇಳಿ ಕಳಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಚಿಂತೆ ಶುರುವಾಗಿದೆ.
ಎರಡು ಗುಂಪಿಗೂ ರಾಜಕಾರಣಿಗಳ ಬೆಂಬಲವಿದೆ.ಆದರೆ ಪ್ರಾರಂಭದಿಂದಲೂ ಎಂ,ಎಲ್,ಸಿ ಬೋಜೇಗೌಡ ನೇರವಾಗಿ ಹೇಮಂತ್ ಪರ ನಿಂತಿದ್ದಾರೆ.ಇದನ್ನು ಹೆದರಿಸಲು ದೇವೇಂದ್ರ ನುಗ್ಗುತ್ತಿದ್ದು ಡಿಸೆಂಬರ್4 ರ ಸಂಜೆ ಯಾರ ಶಕ್ತಿ ಏನು ಎಂಬ ರಿಯಾಲಿಟಿ ತಿಳಿಯುತ್ತದೆ.

ಗುಂಡು_ ತುಂಡಿನ ಜೊತೆಗೆ ಹಣ ಹಂಚಿಕೆ ಖಚಿತ ಎಂಬ ಮಾಹಿತಿಗೆ ಪೂರಕವಾಗಿ ಪ್ರತಿನಿಧಿ ಅಯ್ಕೆಯಲ್ಲಿ ಎರಡು ಸಾವಿರ ಹಣ ಮತ್ತು ಬೆಳ್ಳಿ ಬಟ್ಟಲು ಹಂಚಲಾಗಿದೆ.ಅಲ್ಲಲ್ಲಿ ಕೇಳಿಬರುತ್ತಿರುವಂತೆ ಇಪ್ಪತ್ತರಿಂದ ಮೂವತ್ತು ಸಾವಿರ ಹಂಚಬಹುದು ಎಂಬ ಗುಮಾನಿ ಮಾತ್ರ ಇದೆ.ಈ ಬಗ್ಗೆ ಅಭ್ಯರ್ಥಿಗಳು ಮಾತ್ರ ನಯವಾಗಿ ತಿರಸ್ಕರಿಸುತ್ತಾರೆ.
ಚುನಾವಣೆಯಲ್ಲಿ ಗೆಲ್ಲ ಬೇಕೆಂಬ ಹಠಕ್ಕೆ ಬಿದ್ದಿರುವ ಎರಡು ಗುಂಪಿನವರು ಎಲ್ಲಾ ಟ್ರಿಕ್ಸ್ ಗಳನ್ನು ಬಳಸುತ್ತಿದ್ದು ಅಣೆ,ಪ್ರಮಾಣ,ದೇವರ ಪ್ರಸಾದ ನೀಡಿ ಮತಗಳನ್ನು ಯಾವ ರೀತಿ ಹಾಕಬೇಕು ಯಾರಿಗೆ ಯಾವ ರೀತಿ ಸಂಖ್ಯೆ ಯಲ್ಲಿ ಒತ್ತ ಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.ಜೊತೆಗೆ ಹೆದರಿಕೆ,ಬೆದರಿಕೆ ಕೂಡ ಉಚಿತವಾಗಿ ಕೊಡಲಾಗಿದೆ.
ಒಟ್ಟಾರೆ ಝಣ,ಝಣ ಕಾಂಚಾಣದ ಸದ್ದಿನೊಂದಿಗೆ ತಂತ್ರ, ಕುತಂತ್ರ ಬಳಸಿ ಗೆಲುವು ನಮ್ಮದೇ ಎನ್ನುವ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಅಂದರ್-ಬಾಹರ್ ಅಡ್ಡೆ ಮೇಲೆ ಪೊಲೀಸರ ದಾಳಿ – ಐವರ ಬಂಧನ

ಚಿಕ್ಕಮಗಳೂರು: ಹೊರವಲಯದ ಹುಕ್ಕುಂದ ಗ್ರಾಮದ ಖಾಲಿ ಜಾಗದಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಲಕ್ಷಾಂತರ ರೂಪಾಯಿ ಹಣವನ್ನು ಪಣವಾಗಿಟ್ಟುಕೊಂಡು ಅಂದರ್-ಬಾಹರ್ ಇಸ್ಪೀಟು ಜೂಜಾಟವಾಡುತ್ತಿದ್ದ ಹೈಟೆಕ್ ಅಡ್ಡೆಯ ಮೇಲೆ ಗ್ರಾಮಾಂತರ ಠಾಣೆಯ ಪಿಎಸ್‌ಐ...

30 ಲಕ್ಷ ರೂಪಾಯಿ ಹಣ ನೀಡುವಂತೆ ಬ್ಲಾಕ್‌ ಮೆಲ್

ಚಿಕ್ಕಮಗಳೂರು: ಎಡಿಟ್ ಮಾಡಿದ ಗೃಹಿಣಿಯೊಬ್ಬರ ಫೋಟೋಗಳನ್ನು ಅವರ ಮೊಬೈಲ್‌ಗೇ ಕಳುಹಿಸಿ, ಬರೋಬ್ಬರಿ 30 ಲಕ್ಷ ರೂಪಾಯಿ ಹಣ ನೀಡುವಂತೆ ಕಿಡಿಗೇಡಿಗಳು ಬೇಡಿಕೆಯಿಟ್ಟಿದ್ದ ಘಟನೆ ಬೆಳಕಿಗೆ ಬಂದಿದೆ. ಒಂದು ವೇಳೆ ಹಣ ನೀಡದಿದ್ದರೆ...

Related Articles

ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ

ಚಿಕ್ಕಮಗಳೂರು:  ಜಿಲ್ಲಾ ನ್ಯಾಯಾಲಯಕ್ಕೆ ಬಂದಿರುವ ಬಾಂಬ್ ಬೆದರಿಕೆ ಇ-ಮೇಲ್ ಆತಂಕಕ್ಕೆ ಕಾರಣವಾಗಿದೆ. ಮಧ್ಯಾಹ್ನ 1.30 ರಿಂದ...

5 ದಶಕದ ಬಳಿಕ ನಿಡಘಟ್ಟ ಆಂಜನೇಯಸ್ವಾಮಿ ದೇವಾಲಯಕ್ಕೆ ದಲಿತರ ಪ್ರವೇಶ

ಚಿಕ್ಕಮಗಳೂರು: ಇತಿಹಾಸ ಪ್ರಸಿದ್ಧ ಗಟಾಗಟಿ ದೇವರು ಎಂದು ಕರೆಯಲ್ಪಡುವ ಕಡೂರು ತಾಲೂಕಿನ ನಿಡಘಟ್ಟದ ಶ್ರೀ ಆಂಜನೇಯಸ್ವಾಮಿ ದೇವಾಲಯಕ್ಕೆ...

ದೇಶ ವ್ಯಾಪ್ತಿ ಛಾತ್ರೋನ್ ಕಿ ಗೂಂಚ್ ವಿದ್ಯಾರ್ಥಿ ಆಂದೋಲನ

ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರ ನೇತೃತ್ವದಲ್ಲಿ ಛಾತ್ರೋನ್ ಕಿ ಗೂಂಚ್ ಎಂಬ ದೇಶ ವ್ಯಾಪಿ...

ಕುಡಿಯುವ ನೀರು-ಜಾನುವಾರು ಮೇವಿಗೆ ಕೊರತೆಯಾಗದಂತೆ ಕ್ರಮಕ್ಕೆ ಸೂಚನೆ

ಚಿಕ್ಕಮಗಳೂರು: ಕುಡಿಯುವ ನೀರು, ಜಾನುವಾರುಗಳ ಮೇವಿಗೆ ಕೊರತೆಯಾಗದಂತೆ ಕ್ರಮ ಕೈಗೊಳ್ಳುವಂತೆ ಇಂಧನ, ಪ್ರವಾಸೋದ್ಯಮ ಹಾಗೂ ಚಿಕ್ಕಮಗಳೂರು...