ಚಿಕ್ಕಮಗಳೂರು : ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ದೇವೇಂದ್ರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರ ಮೇಲೆ ಜಿಲ್ಲಾಧಿಕಾರಿಗೆ ದೂರು ಸಲ್ಲಸಿದ್ದು ನೌಕರರನ್ನು ಪದೇ,ಪದೇ ಮನೆಗೆ ಕರೆಯಿಸಿ ಬೆದರಿಕೆಯ ಜೊತೆಗೆ ಆಮಿಷ ಒಡ್ಡುತ್ತಿದ್ದು ರೆಸಾರ್ಟ್ನಲ್ಲಿ ಉಳಿಯಬೇಕು ನಾನು ಹೇಳಿದವರಿಗೆ ಮತ ನೀಡಬೇಕು ಎಂದು ಬೆದರಿಸುತ್ತಿರುವುದರಿಂದ ಮುಕ್ತ ಚುನಾವಣೆ ನಡೆಯುವುದಿಲ್ಲ ನಿರ್ಭಯವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲು ಒತ್ತಾಯ ಮಾಡಿರುವುದು ಚುನಾವಣೆಯಲ್ಲಿ ನಡೆಯುತ್ತಿರುವ ರಂಗಿನಾಟಕ್ಕೆ ಹೊಸ ತಿರುವು ಬಂದಿದೆ.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಡಿಸೆಂಬರ್ 4 ರಂದು ನಡೆಯಲಿದೆ ಈಗಾಗಲೇ ಅಧ್ಯಕ್ಷ ,ಖಜಾಂಚಿ ಮತ್ತು ರಾಜ್ಯ ಪರಿಷತ್ ಗೆ ಸ್ಪರ್ಧೆಯಲ್ಲಿ ರುವವರು ದೇವೇಂದ್ರ ಮತ್ತು ಹೇಮಂತ್ ನೇತೃತ್ವದಲ್ಲಿ ಭರ್ಜರಿ ಬ್ಯಾಟಿಂಗ್ ಶುರುಮಾಡಿದ್ದಾರೆ. 73 ಮತದಾರರು ಇದ್ದು ಎರಡು ಗುಂಪಿನಲ್ಲಿ ನೇರವಾಗಿ ಗುರ್ತಿಸಿಕೊಂಡಿದ್ದರೆ ಕೆಲವರು ಅತ್ತಾ,ಇತ್ತಾ ಸುಳಿದಾಡಿದರೆ ಕೆಲವರು ನೇರವಾಗಿ ಯಾರ ಗುಂಪಿನ ಜೊತೆಯಲ್ಲಿ ಇಲ್ಲ ನಮಗೆ ಮತ ನೀಡುವುದು ಗೊತ್ತು ಎಂದಿದ್ದಾರೆ.
ಹತ್ತರಿಂದ ಹನ್ನೆರಡು ಜನಮಾತ್ರ ಅಯಾಯ ಗುಂಪಿನಲ್ಲಿ ರೆಸಾರ್ಟ್ ಪಾರ್ಟಿ ನಡೆಸುತ್ತಿದ್ದು ಕೆಲವರು ನಮಗೆ ಪಾರ್ಟಿ, ಪೇಮೆಂಟ್, ಗುಂಪು ಬೇಡ ಎಂದು ನೇರವಾಗಿ ಹೇಳಿ ಕಳಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಚಿಂತೆ ಶುರುವಾಗಿದೆ.
ಎರಡು ಗುಂಪಿಗೂ ರಾಜಕಾರಣಿಗಳ ಬೆಂಬಲವಿದೆ.ಆದರೆ ಪ್ರಾರಂಭದಿಂದಲೂ ಎಂ,ಎಲ್,ಸಿ ಬೋಜೇಗೌಡ ನೇರವಾಗಿ ಹೇಮಂತ್ ಪರ ನಿಂತಿದ್ದಾರೆ.ಇದನ್ನು ಹೆದರಿಸಲು ದೇವೇಂದ್ರ ನುಗ್ಗುತ್ತಿದ್ದು ಡಿಸೆಂಬರ್4 ರ ಸಂಜೆ ಯಾರ ಶಕ್ತಿ ಏನು ಎಂಬ ರಿಯಾಲಿಟಿ ತಿಳಿಯುತ್ತದೆ.
ಗುಂಡು_ ತುಂಡಿನ ಜೊತೆಗೆ ಹಣ ಹಂಚಿಕೆ ಖಚಿತ ಎಂಬ ಮಾಹಿತಿಗೆ ಪೂರಕವಾಗಿ ಪ್ರತಿನಿಧಿ ಅಯ್ಕೆಯಲ್ಲಿ ಎರಡು ಸಾವಿರ ಹಣ ಮತ್ತು ಬೆಳ್ಳಿ ಬಟ್ಟಲು ಹಂಚಲಾಗಿದೆ.ಅಲ್ಲಲ್ಲಿ ಕೇಳಿಬರುತ್ತಿರುವಂತೆ ಇಪ್ಪತ್ತರಿಂದ ಮೂವತ್ತು ಸಾವಿರ ಹಂಚಬಹುದು ಎಂಬ ಗುಮಾನಿ ಮಾತ್ರ ಇದೆ.ಈ ಬಗ್ಗೆ ಅಭ್ಯರ್ಥಿಗಳು ಮಾತ್ರ ನಯವಾಗಿ ತಿರಸ್ಕರಿಸುತ್ತಾರೆ.
ಚುನಾವಣೆಯಲ್ಲಿ ಗೆಲ್ಲ ಬೇಕೆಂಬ ಹಠಕ್ಕೆ ಬಿದ್ದಿರುವ ಎರಡು ಗುಂಪಿನವರು ಎಲ್ಲಾ ಟ್ರಿಕ್ಸ್ ಗಳನ್ನು ಬಳಸುತ್ತಿದ್ದು ಅಣೆ,ಪ್ರಮಾಣ,ದೇವರ ಪ್ರಸಾದ ನೀಡಿ ಮತಗಳನ್ನು ಯಾವ ರೀತಿ ಹಾಕಬೇಕು ಯಾರಿಗೆ ಯಾವ ರೀತಿ ಸಂಖ್ಯೆ ಯಲ್ಲಿ ಒತ್ತ ಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.ಜೊತೆಗೆ ಹೆದರಿಕೆ,ಬೆದರಿಕೆ ಕೂಡ ಉಚಿತವಾಗಿ ಕೊಡಲಾಗಿದೆ.
ಒಟ್ಟಾರೆ ಝಣ,ಝಣ ಕಾಂಚಾಣದ ಸದ್ದಿನೊಂದಿಗೆ ತಂತ್ರ, ಕುತಂತ್ರ ಬಳಸಿ ಗೆಲುವು ನಮ್ಮದೇ ಎನ್ನುವ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.
Leave a comment