Home ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?
Homechikamagalurnamma chikmagalurPolitical News

ಬಿ.ಎಲ್.ಶಂಕರ್ ಗೆ ಮತ್ತೆ ಮತ್ತೆ ಮಿಸ್…?

Share
Share

ಚಿಕ್ಕಮಗಳೂರು: ರಾಜ್ಯ ಸಭೆ ಅಥವಾ ವಿಧಾನ ಪರಿಷತ್ ಸ್ಥಾನಗಳಿಗೆ ಆಯ್ಕೆ ಮಾಡುವಾಗ ಬಿ.ಎಲ್.ಶಂಕರ್ ಹೆಸರು ಎವರೆಸ್ಟ್ ಶಿಖರದ ತುದಿ ಮುಟ್ಟಿರುತ್ತದೆ ಇನ್ನೂ ಖಚಿತ ಎನ್ನುವಾಗ ಶಂಕರ್ ಹೆಸರು ತೆರೆಮರೆಗೆ ಸರಿದು ಮಾಯಾವಾಗುತ್ತದೆ.

ಮುಖ್ಯ ಮಂತ್ರಿ ಸಿದ್ದರಾಮಯ್ಯ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಶಂಕರ್ ಪರ ಪ್ರಬಲವಾಗಿ ನಿಂತು ವಿಧಾನ ಪರಿಷತ್ ಗೆ ಕಳುಹಿಸಿ ಸಭಾಪತಿ ಮಾಡುವ ಲೆಕ್ಕಾಚಾರವನ್ನು ಹೈಕಮ್ಯಾಂಡ್ ಎಳ್ಳುನೀರು ಬಿಟ್ಟಿದೆ.ಇದರಿಂದಾಗಿ ಶಂಕರ್ ಗೆ ಮತ್ತೆ ಮತ್ತೆ ಮಿಸ್ ಹೊಡೆಯುತ್ತಿರುವುದು ಏಕೆ .

ಶಂಕರ್ ಸದಾಕಾಲವೂ ಚಟುವಟಿಕೆಯಲ್ಲಿ ಇರುತ್ತಾರೆ.ಕಾಲೇಜು ದಿನಗಳಿಂದ ಸಂಘಟನೆ,ಹೋರಾಟ ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಇಪ್ಪತ್ತೈದನೇ ವಯಸ್ಸಿನಲ್ಲಿ ವಿಧಾನ ಪರಿಷತ್ ಸದಸ್ಯರಾಗಿ ಯುವಜನ ಸೇವಾ ಮಂತ್ರಿಯಾಗಿ ದೇವೇಗೌಡರ ನೀಲಿ ಕಣ್ಣಿನ ಹುಡುಗನಾಗಿ ಸಕ್ರಿಯವಾಗಿದ್ದರು.ಬೆಳಗ್ಗೆ ವಿಧಾನ ಪರಿಷತ್ ಸದಸ್ಯರಾಗಿ ಸಂಜೆ ಮಂತ್ರಿಯಾದ ಶಂಕರ್ ಎಷ್ಟು ಗಟ್ಟಿಯಾಗಿದ್ದರು ಎಂಬುದಕ್ಕೆ ಸಾಕ್ಷಿ.

ದೇವೇಗೌಡರ ಜೊತೆಗೆ ಸಂಬಂಧ ಹಳಸಿದ ಮೇಲೆ ರಾಜಕೀಯವಾಗಿ ಮೂಲೆ ಗುಂಪಾಗಿ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಚಿಕ್ಕಮಗಳೂರು ರಾಜಕಾರಣದ ಸೂತ್ರಧಾರರಾಗಿದ್ದಾರೆ.

ಸ್ಪರ್ಧೆ ಮಾಡಿದ ಚುನಾವಣೆಯಲ್ಲಿ ಸೋಲು ಖಚಿತ ಎನ್ನುವ ಪರಿಸ್ಥಿತಿ ಕಳೆದ ಇಪ್ಪತ್ತೈದು ವರ್ಷಗಳಿಂದ ದೇವೇಗೌಡರ ಶಾಪದಿಂದ ಮುಕ್ತರಾಗಿಲ್ಲ.ಇನ್ನೂ ಕಾಂಗ್ರೆಸ್ ನ ಹಲವರು ಒಳಗೆ ಬತ್ತಿ ಇಡುತ್ತಿದ್ದಾರೆ ಎನ್ನುವವರು ಇದ್ದಾರೆ ಜಿಲ್ಲೆಯ ಶಾಸಕರುಗಳು ಶಂಕರ್ ಬರದಂತೆ ತಡೆದಿದ್ದಾರೆ ಎನ್ನುವವರು ಇದ್ದಾರೆ.ಶಂಕರ್ ಪವರ್‌ ಸೆಂಟರ್ ನಲ್ಲಿ ಇದ್ದರೆ ಜನರಿಂದ ಚುನಾಯಿತರಾದ ನಾವು ಇವರ ಬಳಿ ಹೋಗಬೇಕು ಎಂಬ ಲೆಕ್ಕಾಚಾರದಲ್ಲಿ ಮುಖ್ಯ ಮಂತ್ರಿ ಬಳಿ ಅಲವತ್ತು ಕೊಂಡು ಕಾಲು ಎಳೆದಿದ್ದಾರೆ ಎನ್ನುತ್ತಾರೆ.

ಕಳೆದ ಎರಡು ತಿಂಗಳಿಂದ ಶಂಕರ್ ಗೆ ಶುಭಾಶಯ ಕೇಳಿ,ಕೇಳಿ ಸಾಕಾಗಿದೆ ಅಂತೂ ಇಂತೂ ಶಂಕರ್ ಗೆ ವಿಧಾನ ಪರಿಷತ್ ಗೆ ಹೋಗುವ ಭಾಗ್ಯ ಬರಲಿಲ್ಲ. ಜಿಲ್ಲೆಯ ಮಾಜಿ ಮಂತ್ರಿ ಬೇಗಾನೆ ರಾಮಯ್ಯನವರ ಮಗಳು ಅನಿವಾಸಿ ಭಾರತೀಯ ಉಪಾಧ್ಯಕ್ಷೆ ಆರತಿಕೃಷ್ಣರನ್ನು ವಿಧಾನ ಪರಿಷತ್ ಗೆ ಕಳುಹಿಸಲು ಹೈಕಮ್ಯಾಂಡ್ ತೀರ್ಮಾನ ಮಾಡಿರುವುದರಿಂದ ಶಂಕರ್ ಗೆ ಮತ್ತೆ,ಮತ್ತೆ ಪ್ರಯತ್ನ ಮಾಡುವುದು ಬಿಟ್ಟು ಬೇರೆ ಯಾವ ಗ್ಯಾರಂಟಿ ಇಲ್ಲ.

B.L. Shankar misses again and again…?

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಪುಸ್ತಕ ಸಂಸ್ಕೃತಿ-ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ

ಚಿಕ್ಕಮಗಳೂರು: ಪುಸ್ತಕ ಸಂಸ್ಕೃತಿ ಸಾಮಾಜಿಕ ಜವಾಬ್ದಾರಿ ಬೆಳೆಸುತ್ತದೆ ಎಂದು ನ್ಯೂಸ್ ಕಿಂಗ್ ಆನ್ಲೈನ್ ಪತ್ರಿಕೆಯ ಸಂಪಾದಕ...

ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ ಕಾರು

ಕಳಸ: ಸೇತುವೆಗೆ ತಡೆಗೋಡೆ ಇಲ್ಲದ ಪರಿಣಾಮ ಪ್ರವಾಸಿಗರ ಕಾರೊಂದು ನಿಯಂತ್ರಣ ತಪ್ಪಿ ಸೋಮಾವತಿ ನದಿಗೆ ಉರುಳಿದ...

ಸ್ವಾತಂತ್ರ್ಯೋತ್ಸವದಲ್ಲಿ ದಲಿತ ಸಂಘಟನೆಗಳ ಪ್ರತಿಭಟನೆ 

ಚಿಕ್ಕಮಗಳೂರು: ನಗರದ ನೇತಾಜಿ ಸುಭಾಷ್‌ಚಂದ್ರ ಬೋಸ್ ಜಿಲ್ಲಾ ಕ್ರೀಡಾಂಗಣದಲ್ಲಿ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಮುಗಿದ ಬೆನ್ನಲ್ಲೇ ದಲಿತ...

‘ದೇಶ ಮೊದಲು’ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಿ

ಚಿಕ್ಕಮಗಳೂರು:  ಸ್ವಾತಂತ್ರ್ಯದ ೮೦ನೇ ವರ್ಷದ ಸಂಭ್ರಮ ಕೇವಲ ಹಬ್ಬದ ಆಚರಣೆಯಾಗದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ಕೃತಜ್ಞತೆ ಸಲ್ಲಿಸುವ,...