ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು ಕಳುವಾಗಿರುವ ಘಟನೆ ತಾಲ್ಲೂಕಿನ ಮಳಲೂರು ಗ್ರಾಮದಲ್ಲಿ ನಡೆದಿದೆ.
ಮಳಲೂರು ಗ್ರಾಮದ ಕೃಷಿಕ ಮೋಹನ್ (೪೩) ಅವರು ಈ ಕುರಿತು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮೋಹನ್ ಅವರ ಕುಟುಂಬವು ಮನೆಯಲ್ಲಿ ವಾಸವಾಗಿದ್ದು, ಸುಮಾರು ೨೫೦ ಗ್ರಾಂನಷ್ಟು ಚಿನ್ನಾಭರಣಗಳನ್ನು ಬೀರುವಿನಲ್ಲಿ ಇಟ್ಟುಕೊಂಡಿದ್ದರು. ಕುಟುಂಬದ ಕಾರ್ಯಕ್ರಮವೊಂದಕ್ಕೆ ತೆರಳಲು ಆಭರಣಗಳನ್ನು ತೆಗೆದುಕೊಳ್ಳಲು ಬೀರು ತೆರೆದಾಗ ಕೆಲವು ಒಡವೆಗಳು ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಪರಿಶೀಲಿಸಿದಾಗ ತಲಾ ೧೦ ಗ್ರಾಂ ತೂಕದ ಎರಡು ಚಿನ್ನದ ಸರಗಳು, ಸುಮಾರು ೫ ಗ್ರಾಂ ತೂಕದ ಒಂದು ಜೊತೆ ಒಲೆ ಜುಮುಕಿ ಹಾಗೂ ೩ ಗ್ರಾಂ ತೂಕದ ಉಂಗುರ ಸೇರಿ ಒಟ್ಟು ಸುಮಾರು ೨೮ ಗ್ರಾಂ ಚಿನ್ನಾಭರಣ ಕಳುವಾಗಿರುವುದು ಗೊತ್ತಾಗಿದೆ. ಇದರ ಅಂದಾಜು ಮೌಲ್ಯ ?೧.೬೮ ಲಕ್ಷ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ಜೊತೆಗೆ ಬೀರುವಿನಲ್ಲಿದ್ದ ?೨೦ ಸಾವಿರ ನಗದೂ ಕಾಣೆಯಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸರು, ಕಳವು ಮಾಡಿದವರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Gold jewellery and Rs 20000 cash stolen from home
Leave a comment