ಚಿಕ್ಕಮಗಳೂರು: ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.
ತಾಲ್ಲೂಕಿನ ಮಲ್ಲೇನಹಳ್ಳಿ ಗ್ರಾಮದ ಕುಮಾರಿಗಿರಿ ಕ್ಷೇತ್ರದ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ನಾಗರೀ ಕರ ಮತ್ತು ರೈತರ ಹೋರಾಟ ಸಮಿತಿ, ಬಗರ್ಹುಕುಂ ರೈತ ಸಂಘ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ರೈತ ರ ಜನಜೀವನ ಉಳಿಸುವಂತೆ ಆಯೋಜಿಸಿದ್ಧ ರೈತ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯಸರ್ಕಾರವು ಕಾಯ್ದಿಟ್ಟ ಅರಣ್ಯ ಹಾಗೂ ಡೀಮ್ಡ್ ಫಾರೆಸ್ಟ್ ಸಮಸ್ಯೆಗಳನ್ನು ಬಗೆಹರಿಸಲು ಎಸ್ಐ ಟಿ ತಂಡವನ್ನು ರಚಿಸಲಾಗಿದೆ. ಜಂಟಿ ಸರ್ವೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದ ಅವರು ರೈತರು ಸಮಸ್ಯೆಗಳ ನ್ನು ಪರಿಹರಿಸುವ ನಿಟ್ಟಿನಲ್ಲಿ ತಾವು ಸೇರಿದಂತೆ ಮೂಡಿಗೆರೆ, ಶೃಂಗೇರಿ ಶಾಸಕರು ಸಚಿವರೊಂದಿಗೆ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.
ಹಲವಾರು ವರ್ಷಗಳಿಂದ ಭೂಮಿ ಸಮಸ್ಯೆಯಿಂದ ನಲುಗುತ್ತಿರುವ ಕಡಿಮೆ ಭೂ ಒತ್ತುವರಿದಾರರಿಗೆ ಜಿಲ್ಲಾಧಿಕಾರಿ, ಕಂದಾಯ, ಅರಣ್ಯ, ಸರ್ವೆ ಇಲಾಖೆ ಅಧಿಕಾರಿಗಳು ಹಾಗೂ ಹೋರಾಟಗಾರರ ಸಮ್ಮುಖದ ಲ್ಲಿ ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಅರಣ್ಯ ಮತ್ತು ಕಂದಾಯ ಸಮಸ್ಯೆಗಳ ನಿವಾರಣೆಗಾಗಿ ಹೋರಾಟಗಾರರ ಮುಖೇನಾ ಸ ರ್ಕಾರ ಮಟ್ಟದಲ್ಲಿ ಶೇ.೭೦ರಷ್ಟು ಯಶಸ್ಸು ಗಳಿಸಿದ್ದೇವೆ. ಉಳಿದ ಶೇ.೩೦ ಫಲಿತಾಂಶ ಪೂರ್ಣಗೊಂಡಲ್ಲಿ ಮಾ ತ್ರ ರೈತರ ಸಮಸ್ಯೆಗಳು ಪರಿಹಾರವಾಗಲಿದೆ. ಆ ನಿಟ್ಟಿನಲ್ಲಿ ಸಣ್ಣ ರೈತಾಪಿ ವರ್ಗವು ಒಂದಾಗಬೇಕಿದೆ ಎಂದು ತಿಳಿಸಿದರು.
ತಾಲ್ಲೂಕಿನ ಲಕ್ಯಾ, ಕಸಬಾ ಹಾಗೂ ಜಾಗರ ಹೋಬಳಿ ವ್ಯಾಪ್ತಿಯ ಗ್ರಾಮಗಳಾದ ಅಲ್ಲಂಪುರ, ಅರಳ ಗುಪ್ಪೆ, ದಾಸರಹಳ್ಳಿ, ಲಕ್ಷ್ಮೀಪುರ, ಚರ್ಚೆಗುಡ್ಡ, ಹಳಸುಬಾಳು, ಕೊಂಬುಗತ್ತಿ, ನೀರುಗಂಡಿ ಸೇರಿದಂತೆ ಅ ನೇಕ ಗ್ರಾಮಗಳ ರೈತರ ಹಲವು ವರ್ಷಗಳೀಂದ ಅರಣ್ಯ ಹಾಗೂ ಕಂದಾಯ ಇಲಾಖೆಗೆ ಸಂಬಂಧಿಸಿದ ಗಂ ಭೀರ ಸಮಸ್ಯೆ ಪರಿಹರಿಸಲು ಸರ್ಕಾರ ಬದ್ಧವಾಗಿದೆ ಎಂದರು.
ರೈತರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿ ನಿರ್ಣಯಗಳು ಹಾಗೂ ಈವರೆಗೆ ರೈತ ಪರವಾಗಿ ನಡೆದಿರುವ ಆದೇಶಗಳು, ನಡವಳಿ ಬಗ್ಗೆ ಹಾಗೂ ಸಂಬಂಧಪಟ್ಟ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿ ಕಾರಿಗಳ ಗಮನ ಸೆಳೆದು ಶಾಶ್ವತ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತೇವೆ ಎಂ ದು ಹೇಳಿದರು.
ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್ಕುಮಾರ್ ಮಾತನಾಡಿ ರೈತ ರ ಭೂಮಿಗಳನ್ನು ಡೀಮ್ಡ್ ಫಾರೆಸ್ಟ್, ಮೀಸಲು ಅರಣ್ಯ ಅಧಿ ಸೂಚನೆ, ಸೂಕ್ಷ್ಮ ಪ್ರದೇಶ ಮೀಸಲು ಯೋಜ ನೆಗಳೆಂದು ಸಬೂಬು ನೀಡಿ ರೈತರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಬಹುತೇಕ ಹೋಬಳಿಗಳು ಒಂದಲ್ಲೊಂದು ಅರಣ್ಯ ಮತ್ತು ಕಂದಾಯ ಸಮಸ್ಯೆಯಿಂದ ಬಳ ಲುತ್ತಿದ್ದು, ಇದರಿಂದ ಜನಸಾಮಾನ್ಯರು ಹಾಗೂ ರೈತರಿಗೆ ಬಹಳಷ್ಟು ತೊಂದರೆಯಾಗಿದೆ. ಅಲ್ಲದೇ ರೈತರಿಗೆ ಅನಾನುಕೂಲ ಮಾಡಿ ಸಮಸ್ಯೆ ಪರಿಹರಿಸಲು ಸಹಕರಿಸದಿರುವುದನ್ನು ಸಮಿತಿ ಖಂಡಿಸುತ್ತದೆ ಎಂದರು.
ಶೀಘ್ರವೇ ರೈತರ ಸಮಸ್ಯೆಗಳ ನಿರ್ಧಾರವನ್ನು ಸರ್ಕಾರವು ಕಾರ್ಯರೂಪಕ್ಕೆ ತಂದಲ್ಲಿ ಸ್ಥಳೀಯವಾಗಿ ೫ ರಿಂದ ೬ ಸಾವಿರ ರೈತರಿಗೆ ಹಾಗೂ ಜಿಲ್ಲೆಯಾದ್ಯಂತ ಸುಮಾರು ೫೦ ರಿಂದ ೬೦ ಸಾವಿರ ಜನರಿಗೆ ನೇರ ಅನುಕೂಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ರೈತ ಹೋರಾಟಗಾರ ವೀರಭದ್ರಪ್ಪ ವಹಿಸಿದ್ದರು. ಈ ಸಂ ದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬೋರಯ್ಯ, ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ಸಂಚಾಲಕರುಗಳಾದ ಕೆ.ಕೆ.ರಘು, ಸಿ.ಎನ್.ಕುಮಾರ್, ರವಿಕುಮಾರ್, ಮಲ್ಲೇಶಪ್ಪ, ಮೋಹನ್ಕುಮಾರ್, ಎಂ. ಡಿ.ಕುಮಾರ್, ಮುಖಂಡರುಗಳಾದ ಮೈಲಿಮನೆ ಪೂರ್ಣೇಶ್, ರವಿಕುಮಾರ್, ಹುಣಸೇಮಕ್ಕಿ ಲಕ್ಷ್ಮಣ್, ವೈ. ಸಿ.ಸುನೀಲ್ಗೌಡ ಮುಂತಾದವರು ಉಪಸ್ಥಿತರಿದ್ದರು.
Poor farmers should not be singled out.
Leave a comment