ಬೀರೂರು: ಮನೆಯ ಮಾಲೀಕರು ಊರಿಗೆ ತೆರಳಿದ್ದ ವೇಳೆ ಕಳ್ಳರು ಮನೆಯ ಬಾಗಿಲು ಮುರಿದು ಒಳನುಗ್ಗಿ ₹1.45 ಲಕ್ಷ ಮೌಲ್ಯದ ಚಿನ್ನಾ ಹಾಗೂ ಬೆಳ್ಳಿ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬೀರೂರು ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಟ್ಟಣದ ರಾಜಾಜಿನಗರ ಬಡಾವಣೆ ವಾಸಿ ಎಸ್ಟೆಎಂ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಕುಮಾರ್ ಅವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ.
ಕುಮಾರ್ಅವರು ಕಳೆದವಾರ ರಜೆ ಪ್ರಯುಕ್ತ ಸ್ವಗ್ರಾಮವಾದ ಹೊಸದುರ್ಗ ತಾಲೂಕಿನ ದುಗ್ಗಾವರಕ್ಕೆ ತೆರಳಿದ್ದರು. ಸೋಮವಾರ ಬೆಳಗಿನ ಜಾವ ಸಹೋದ್ಯೋಗಿ ರಾಜೇಶ್ ದೂರವಾಣಿ ಮೂಲಕ ಮನೆಯ ಬಾಗಿಲು ಮುರಿದಿರುವ ಮಾಹಿತಿ ನೀಡಿದರು.
ಕಳ್ಳರು ಮನೆಯ ಬೀಗ ಮುರಿದು ಒಳನುಗ್ಗಿ ಬೆದ್ರೂಮ್ ವಾರ್ಡ್ ರೋಟ್ನಲ್ಲಿ ಇರಿಸಿದ್ದ ಒಂದು ಜತೆ ಬಂಗಾರದ ಓಲೆ. ಜುಮುಕಿ, ಮೂರು ಜತೆ ಬಂಗಾರದ ಓಲೆ. ಒಂದು ಬೆಳ್ಳಿಯ ಚೊಂಬು ಹಾಗೂ ನಾಲ್ಕು ಬೆಳ್ಳಿಯ ದೀಪಗಳನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ.
ಈ ಸಂಬಂಧ ಕುಮಾರ್ ಅವರು ಬೀರೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ಸಂಬಂಧ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
House door broken into and jewellery stolen
Leave a comment