Home namma chikmagalur chikamagalur ಲಕ್ಷ, ಲಕ್ಷ, ಅಲಕ್ಷ್ಯ ! ಹಣಕಾಸಿನ ವ್ಯವಹಾರ ಕುದುರುವುದಿಲ್ಲವೇ ?
chikamagalurHomeLatest Newsnamma chikmagalur

ಲಕ್ಷ, ಲಕ್ಷ, ಅಲಕ್ಷ್ಯ ! ಹಣಕಾಸಿನ ವ್ಯವಹಾರ ಕುದುರುವುದಿಲ್ಲವೇ ?

Share
Share

ಸುಖರಾಯಪಟ್ಟಣ:ಜನಪ್ರತಿನಿಧಿಗಳು,ಅಧಿಕಾರಿಗಳು, ಹೋರಾಟಗಾರರು ಲಕ್ಷ, ಲಕ್ಷ ಅಲಕ್ಷ್ಯ ಮಾಡುತ್ತಿರುವುದೇಕೆ? ಯಾರಾದರೂ ಲಕ್ಷ, ಲಕ್ಷ ನಿರ್ಲಕ್ಷ್ಯ ಮಾಡಲು ಸಾಧ್ಯವೇ? ಹೌದು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಇಲ್ಲಿನ ರೈತರ ಕೊರಗು.

ಲಕ್ಷ ಎಂದ ತಕ್ಷಣ ಜೊಲ್ಲು ಸುರಿಸುವ ಗಿರಾಕಿಗಳು ಈ ಬಗ್ಗೆ ಅಸಡ್ಡೆಯ ಮಾತುಗಳನ್ನು ಹೇಳುತ್ತಿರುವುದು ಏಕೆ? ಇದು ಲಕ್ಷ ಲಕ್ಷ ವ್ಯವಹಾರದ ಕತೆಯಲ್ಲಾ,ಅಂದರೆ ಸಖರಾಯಪಟ್ಟಣದ ಬಳಿ ಇರುವ ಲಕ್ಕ ಸಾಗರ ಕೆರೆಯ ಕತೆ ಇದು. ಹಾಯುವಳಿ ಕೆರೆಯಲ್ಲ ನಿಜ ಆದರೆ ಈ ಕೆರೆ ತುಂಬಿಸುವುದರಿಂದ ಕೆರೆಯ ಕೆಳಭಾಗದ ಹಳ್ಳಿಗಳಲ್ಲಿ ಅಂತರಜಲ ವೃದ್ದಿಯಾಗಿ ಕುಡಿಯುವ ನೀರು ಹಾಗು ಕೊಳವೆ ಬಾವಿಗಳು ತುಂಬುತ್ತವೆ ಎಂಬ ಸಾಮಾನ್ಯ ಜ್ಞಾನ ನಮ್ಮ ಜನಪ್ರತಿನಿಧಿಗಳಿಗಿಲ್ಲದಿರುವುದು ಈ ಭಾಗದ ರೖತರ ದೌರ್ಬಾಗ್ಯ.

ಈ ಕೆರೆ ತುಂಬಿಸಿದರೆ ಜನರಿಗೆ, ರೈತರಿಗೆ, ಪ್ರಾಣಿಗಳಿಗೆ ಉಪಯೋಗವಾಗುತ್ತದೆ. ಅದರೆ ನಮಗೇನು ಉಪಯೋಗ ಎಂದು ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಎಂದು ಈ ಭಾಗದ ಜನ ದೂರುತ್ತಿದ್ದಾರೆ.
ಕಡೂರು ತಾಲೂಕಿನ ಸಖರಾಯ ಪಟ್ಟಣದ ಹಸ್ತಿನಾಪುರದ ಸರ್ವೇ ನಂಬರ್ 6 ರಲ್ಲಿ 40 ಎಕರೆ ಪ್ರದೇಶದಲ್ಲಿ ಹಳೆಯ ಕೆರೆಯಿದೆ ಈ ಜಾಗವನ್ನು ಅರಣ್ಯ ಇಲಾಖೆಯವರು ಸೇರಿದಂತೆ ಒತ್ತುವರಿ ಮಾಡಲಾಗಿದೆ ಎಂಬ ದೂರಿದೆ ಈ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದಾರೆ.

ಹಲವು ಸಭೆ ನಡೆಸಿ ಒತ್ತುವರಿ ಜಾಗ ತೆರವುಗೊಳಿಸಲು ಒತ್ತಾಯ ಮಾಡಿದ್ದಾರೆ. ಅರಣ್ಯ ಇಲಾಖೆಯವರು ಜಾಗ ತೆರವು ಮಾಡಿ ಕೊಡಲು ಮೌಖಿಕವಾಗಿ ಹೇಳಿ ಸರ್ವೇ ಮಾಡಿಸಲು ಸೂಚನೆ ಸಹ ಕೊಟ್ಟಿದ್ದಾರೆ.ಎರಡು ಬಾರಿ ಸ್ಥಳಕ್ಕೆ ಹೋದ ಸರ್ವೇ ಇಲಾಖೆಯವರು ಇಲ್ಲ,ಸಲ್ಲದ ಕಾರಣಗಳನ್ನು ಹೇಳಿ ಪರಾರಿಯಾಗಿದ್ದಾರೆ.ಇದರಿಂದ ನಮಗೆ ಏನಾದರೂ ಸಿಗುತ್ತದೆ ಎಂದು ಹೋದ ಸರ್ವೇ ಇಲಾಖೆಯವರು ಕಾಸಿಲ್ಲ,ಕರಿಮಣಿ ಏಕೆ ಎಂದು ನಾಪತ್ತೆಯಾಗಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ.

ಶಾಸಕ ಹೆಚ್.ಡಿ.ತಮ್ಮಯ್ಯ ಬಳಿ ಹೇಳಲು ಹೋದರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಕಡೆ ಕೈ ತೋರಿಸುತ್ತಾರೆ ಎನ್ನಲಾಗಿದೆ. ಜಿಲ್ಲಾಧಿಕಾರಿ ಕಛೇರಿಯಿಂದ ಕಂದಾಯ ಇಲಾಖೆ, ಅರಣ್ಯ ಇಲಾಖೆ ಮತ್ತು ಸರ್ವೇ ಇಲಾಖೆಯವರು ಜಂಟಿ ಸರ್ವೇ ಮಾಡಲು ಮತ್ತೊಮ್ಮೆ ಸೂಚನೆ ಹೋಗಿರುವುದರಿಂದ ರೈತರ ಮುಖದಲ್ಲಿ ಗೆಲವಿನ ನಗೆ ಬಂದಿದೆ ಅದರೆ ಜನ ಪ್ರತಿನಿಧಿ ಶಾಸಕ ತಮ್ಮಯ್ಯ ಇನ್ನೊಬ್ಬರ ಕಡೆ ಬೆರಳು ತೋರಿಸುವ ಬದಲು ನಮ್ಮ ರೈತರಿಗೆ ಅನುಕೂಲ ಕಲ್ಪಿಸಿದರೆ ಮಾತ್ರ ಸಾಧ್ಯ ಲಕ್ಕ ಸಾಗರ ಕೆರೆ ಇತ್ತು ಎಂಬ ಹೆಸರು ಹೇಳ ಬಹುದು .

Financial matters are not smooth.

Share

Leave a comment

Leave a Reply

Your email address will not be published. Required fields are marked *

Don't Miss

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪುಟದ 13 ಸಚಿವರಿಗೆ ಖಾತೆ ಹಂಚಿಕೆ

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್  ಅವರು ತಮ್ಮ ಸಂಪುಟದ (Cabinet) ಮೊದಲ 13 ಸಚಿವರಿಗೆ ಖಾತೆಯನ್ನು ಇದೀಗ ಹಂಚಿಕೆ ಮಾಡಿದ್ದಾರೆ. ಮುಖ್ಯವಾಗಿ ಡಿಕೆಶಿ ಅವರು ಹಣಕಾಸು ಖಾತೆಯನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಯಾರಿಗೆ...

5.50 ಕೋಟಿಯ ಟಿಂಬರ್ ವ್ಯವಹಾರದಲ್ಲಿ ವಂಚನೆ

ಚಿಕ್ಕಮಗಳೂರು: ಕೋಟ್ಯಂತರ ರೂಪಾಯಿ ಮೌಲ್ಯದ ಟಿಂಬರ್ ವ್ಯವಹಾರಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ವಂಚನೆ, ಜಗಳ ಹಾಗೂ ಕೊಲೆ ಬೆದರಿಕೆ ಪ್ರಕರಣವೊಂದು ಆಲ್ಲೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಗೋಣಿಕೊಪ್ಪ...

Related Articles

ಬೆಲೆಏರಿಕೆ ಖಂಡಿಸಿ ನಗರದಲ್ಲಿ ಬ್ಲಾಕ್‌ಕಾಂಗ್ರೆಸ್ ವಿನೂತನ ಪ್ರತಿಭಟನೆ

ಚಿಕ್ಕಮಗಳೂರು : ಕೇಂದ್ರ ಸರ್ಕಾರದ ಬೆಲೆ ಏರಿಕೆ ಖಂಡಿಸಿ ಚಿಕ್ಕಮಗಳೂರು ಹಾಗೂ ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್...

ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ಗೆ ನುಗ್ಗಿದ ಯುವಕ ಬಂಧನ

ಚಿಕ್ಕಮಗಳೂರು: ಸರ್ಕಾರಿ ಮೆಡಿಕಲ್ ಕಾಲೇಜಿನ ಹುಡುಗಿಯರ ಹಾಸ್ಟೆಲ್‌ಗೆ ಮಧ್ಯರಾತ್ರಿ ನುಗ್ಗಿ ಯುವಕಮೋರ್ವ ಓಡಾಟ ನಡೆಸಿರುವ ಘಟನೆ...

ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷ

ಕೊಟ್ಟಿಗೆಹಾರ : ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರನ್ನು ಸಂಪರ್ಕಿಸುವ ಚಾರ್ಮಾಡಿ ಘಾಟಿಯಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು, ಮಳೆಗಾಲದ...

ತೀವ್ರಗೊಂಡ ಉದ್ಯಮಿ ಪತ್ನಿಯ ಆತ್ಮಹತ್ಯೆ ಪ್ರಕರಣ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ನಡೆದಿದ್ದು ನಗರದ ಉದ್ಯಮಿ ರಾಜೇಶ್ ಅವರ ಪತ್ನಿ ಸುಮ (55)...