ಚಿಕ್ಕಮಗಳೂರು: ಕಾಫಿನಾಡಿನಲ್ಲಿ ವರುಣನ ಅಬ್ಬರ ಜೋರಾಗಿದ್ದು ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಕಾಫಿ ಸಿಟಿ ಈಗ ಫುಲ್ ಕೂಲ್ ಆಗಿದೆ.
ಪ್ರಸಿದ್ಧ ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಹಾಗೂ ದತ್ತಪೀಠದ ಸುತ್ತಮುತ್ತಲೂ ಭಾರಿ ಮಳೆಯಾಗಿದ್ದು ಗಿರಿಪ್ರದೇಶ ಧೋ ಎಂದು ಸುರಿದ ಮಳೆಗೆ ಮಿಂದೆದ್ದಿದೆ ವಾರಂತ್ಯದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರ ಹಾಗೂ ಗಿರಿಪ್ರದೇಶಗಳಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರ ದಂಡು ಹರಿದುಬಂದಿದೆ.
ಆದರೆ, ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಮಂಜು ಮುಸುಕಿದ ವಾತಾವರಣ ನಿರ್ಮಾಣವಾಗಿದ್ದು ರಸ್ತೆ ಸರಿಯಾಗಿ ಕಾಣಿಸದೆ, ವಾಹನಗಳನ್ನು ಚಾಲನೆ ಮಾಡಲು ಸಾಧ್ಯವಾಗದೆ ಚಾಲಕರು ರಸ್ತೆ ಬದಿಯಲ್ಲೇ ನಿಲ್ಲಿಸುವಂತಾಗಿತ್ತು.
ಧಾರಾಕಾರ ಮಳೆಯ ನಡುವೆಯೂ ಚುಮುಚುಮು ಚಳಿ ಹಾಗೂ ಬೆಳ್ಳನೆಯ ಮಂಜಿನ ಹನಿಗಳ ಅದ್ಭುತ ವಾತಾವರಣಕ್ಕೆ ಪ್ರವಾಸಿಗರು ಮನಸೋತಿದ್ದಾರೆ. ಸುರಿಯುವ ಮಳೆಯ ಸಿಂಚನವನ್ನು ಆಸ್ವಾದಿಸುತ್ತಲೇ ಮಲೆನಾಡಿನ ನೈಸರ್ಗಿಕ ಸೌಂದರ್ಯವನ್ನು ಸವಿಯುತ್ತಿರುವ ಪ್ರವಾಸಿಗರು, ಈ ಪ್ರಕೃತಿಯ ವಿಸ್ಮಯಕ್ಕೆ ಹಾಗೂ ಹಸಿರ ಸಿರಿಯ ಅಂದಕ್ಕೆ ಫಿದಾ ಆಗಿದ್ದಾರೆ.
Coffee City completely cools down due to torrential rain
Leave a comment