ಅಜ್ಜಂಪುರ: ಅರಣ್ಯ ಇಲಾಖೆಯ ಅಧಿಕಾರಿಯಂತೆ ನಟಿಸಿ ದಂಪತಿಯನ್ನು ನಂಬಿಸಿ, ಅವರಿಂದ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿರುವ ವಂಚನೆ ಪ್ರಕರಣವೊಂದು ಅಜ್ಜಂಪುರ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಭಕ್ತನಕಟ್ಟೆ ಮಹಿಳೆಯೊಬ್ಬರು ಮೇ 21 ರಂದು ತಮ್ಮ ಪರಿಚಯಸ್ಥರಾದ ಮಹೇಶ್ ಎಂಬುವವರ ಬೈಕಿನಲ್ಲಿ ಹೊಸದುರ್ಗಕ್ಕೆ ಹೊರಟಿದ್ದರು. ಮಧ್ಯಾಹ್ನ 12:30ರ ಸುಮಾರಿಗೆ ಭೂತನಹಳ್ಳಿ ವೀರಭದ್ರೇಶ್ವರ ದೇವಸ್ಥಾನದ ಬಳಿ ರಸ್ತೆ ಪಕ್ಕದ ಮರದ ನೆರಳಿನಲ್ಲಿ ಕುಳಿತು ಎಗ್ ಪಪ್ಸ್ ತಿನ್ನುತ್ತಿದ್ದಾಗ ಅಲ್ಲಿಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ ನಕಲಿ ಅರಣ್ಯ ಇಲಾಖೆಯ ಗುರುತಿನ ಚೀಟಿ ತೋರಿಸಿದ್ದಾನೆ.
“ಇಲ್ಲಿ ಕುಳಿತುಕೊಂಡರೆ ಕಳ್ಳರು ನಿಮ್ಮ ಸರ ಕಿತ್ತುಕೊಂಡು ಹೋಗುತ್ತಾರೆ, ಒಡವೆಗಳನ್ನು ಬಿಚ್ಚಿ ಕೊಡಿ, ನೀವು ಹೋಗುವಾಗ ವಾಪಸ್ ಕೊಡುತ್ತೇನೆ” ಎಂದು ನಂಬಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಮಹಿಳೆ ತನ್ನ 5 ಗ್ರಾಂ ತೂಕದ ಬಂಗಾರದ ಮಾಂಗಲ್ಯ, ತಲಾ ಒಂದು ಗ್ರಾಂನ 2 ಚಿನ್ನದ ಗುಂಡುಗಳು ಹಾಗೂ 6 ಗ್ರಾಂ ತೂಕದ ಒಂದು ಜೋಡಿ ಓಲೆಯನ್ನು ಬಿಚ್ಚಿ ಕೊಟ್ಟಿದ್ದಾರೆ.
ಒಡವೆಗಳನ್ನು ಕೈಗೆ ಪಡೆದ ಖದೀಮ ಅಲ್ಲಿಂದ ಬೈಕ್ನಲ್ಲಿ ಪರಾರಿಯಾಗಿದ್ದಾನೆ. ವಂಚನೆಗೊಳಗಾದ ಮಹಿಳೆ ಮೇ 30 ರಂದು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
Khadeema robbed of gold ornaments worth 70 thousand rupees from a couple
Leave a comment