Home namma chikmagalur chikamagalur ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?
chikamagalurHomeLatest Newsnamma chikmagalurPolitical NewsState News

ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?

Share
Share

ಕರ್ನಾಟಕದ ರಾಜಕಾರಣದಲ್ಲಿ ಇಂತಹ ಬೆಳವಣಿಗೆ ನಡೆಯ ಬಹುದು ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ಮಂತ್ರಿಯಾಗಲಿಲ್ಲಾ.ಒಂದು ವರ್ಷಗಳ ಕಾಲ ಡಿ.ಕೆ.ಶಿ.ಪಟ್ಟ ಸಂಕಟವನ್ನು ಯಾರಿಗೂ ಹೇಳಲಿಲ್ಲ. ಈಗ ಇದೇ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಹುದ್ದೆಗೆ ಕರೆದುಕೊಂಡು ಬಂದು ಕೂರಿಸಿದ್ದಾರೆ ಎಂದರೆ ಡಿ.ಕೆ.ತಾಕತ್ತು ಮತ್ತು ತಾಳ್ಮೆ ಮೆಚ್ಚಲೇ ಬೇಕು.

ಸಿದ್ದರಾಮಯ್ಯ ನಡೆದು ಬಂದ ದಾರಿ,ಜ್ಞಾನ, ನಡವಳಿಕೆ, ಸ್ವಾಭಿಮಾನ ಮೆಚ್ಚುವ ಜನರೇ ಹೆಚ್ಚು. ಸಾರಸ್ವತ ಲೋಕದ ಜನ ಇವರನ್ನು ಮೆಚ್ಚಿ ಕೊಂಡಿದ್ದರು. ಆದರೆ ಆದೇ ಮಾತು ಡಿ.ಕೆ.ಶಿ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸಿದ್ದರಾಮಯ್ಯಗೆ ಸಿದ್ದರಾಮಯ್ಯ ಸರಿ ಸಾಟಿ.ಬಡತನದ ನೋವು ಜೊತೆಗೆ ಹೋರಾಟಗಾರರ ,ಸಾಮಾಜಿಕ ಹಿನ್ನೆಲೆಯಲ್ಲಿ ಅಳೆದು ತೂಗಿ ನೋಡುವ ಜನರು ಮೆಚ್ಚಿದ್ದು .ಆದರೆ ಶಿವಕುಮಾರ್ ನಂತಹ ವ್ಯಾಪಾರದ ಮನಸ್ಸು ಸ್ಥಿತಿಯ ಕೊತ್ವಾಲ್ ನ ನಡೆ ನುಡಿಯ ವ್ಯಕ್ತಿಯನ್ನು ಸಿಂಹಾಸನದ ಮೇಲೆ ಕೂರಿಸಲು ಸಿದ್ದರಾಮಯ್ಯ ಟೂಲ್‌ ಕಿಟ್ ಬಳಕೆಯಾಗಿದ್ದು ಇವತ್ತಿನ ವ್ಯಾಪಾರಸ್ಥರಿಗೆ ಈ ಪರಿ ಸೊಂಟ ಬಗ್ಗಿಸಿ ನಡೆದುಕೊಂಡ ಸಿದ್ದರಾಮಯ್ಯರನ್ನು ಕ್ಷಮಿಸಲು ಸಾಧ್ಯವಿಲ್ಲ.

ಎಲ್ಲಿಯ ಸಿದ್ದರಾಮಯ್ಯ, ಅದೇ ಎಲ್ಲಿಯ ಡಿ.ಕೆ.ಶಿವಕುಮಾರ್ ಉತ್ತರ ,ದಕ್ಷಣ ಧ್ರುವಗಳು ಈ ಹೇಸಿಗೆ ರಾಜಕಾರಣಕ್ಕೆ ಒಂದಾಗಿದ್ದು ಮಾತ್ರ ಜನ ಕ್ಷಮೆ ಮಾಡಲು ಸಾಧ್ಯವಿಲ್ಲ. ಇನ್ನೂ ಎರಡು ವರ್ಷ ಡಿ.ಕೆ.ಸಿ ಆಡಳಿತ ನೋಡ ಬೇಕು ಎಂಬುದು ಯಕ್ಷ ಪ್ರಶ್ನೆಯಲ್ಲ ಅನಿವಾರ್ಯ ತಂದಿಟ್ಟಿರುವ ರಾಹುಲ್, ಸೋನಿಯಾ ಮತ್ತು ಪ್ರಿಯಾಂಕ ಗಾಂಧಿಗಳು ಮುಂದಿನ ದಿನಗಳಲ್ಲಿ ನೋವು ಅನುಭವಿಸ ಬೇಕು ಜೊತೆಗೆ ಜನರು ಕೂಡ.

ಸಿದ್ದರಾಮಯ್ಯ ಹುಣ್ಣಿಮೆ ಯ ಬೆಳದಿಂಗಳ ರೀತಿಯಲ್ಲಿ ನಾಡಿನ ಜನರಲ್ಲಿ ಬೆರೆತರೆ,ಡಿ.ಕೆ.ಶಿವಕುಮಾರ್ ಅಮವಾಸ್ಯೆಯಂತೆ ಜನರ ಮನದಲ್ಲಿ ಇಟ್ಟುಕೊಂಡವರು ಹೆಚ್ಚು.ಸಿದ್ದರಾಮಯ್ಯ ಭಾಷೆ, ಆಡಳಿತ, ನಡೆ,ನಡಿಯಲ್ಲಿ ಕಂಗೊಳಿಸಿದ್ದಾರೆ.ಡಿ.ಕೆ.ಉತ್ತಮ ಸಂಘಟಕ ನಿಜ ಎಲ್ಲದರಲ್ಲೂ ವ್ಯವಹಾರ, ನಡೆ,ನುಡಿ ಭಾಷೆಯಲ್ಲಿ ಥೇಟ್ ಕೊತ್ವಲನ ಪಡಿಯಚ್ಚು ಎಂದು ಕರೆಯುವವರೆ ಹೆಚ್ಚು.

ಕುರ್ಚಿ ಕಾಳಗದಲ್ಲಿ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದಂತೆ ಆಡಳಿತದಲ್ಲಿ ಸೈ ಅನ್ನಿಸಿಕೊಂಡರೆ ಮಾತ್ರ ಮುಂದೆ ರಾಜಕಾರಣ ಮಾಡಬಹುದು. ಇಲ್ಲದಿದ್ದರೆ ಬಂದ ಪುಟ್ಟ, ಹೋದ ಪುಟ್ಟ ಎನ್ನಿಸಿಕೊಳ್ಳು ಬೇಕಾಗುತ್ತದೆ.ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡ ಇರುವುದು ಸ್ಪಷ್ಟ ಅದು ಯಾವಾಗ ಬೇಕಾದರೂ ಹತ್ತಿ ಕೊಳ್ಳಬಹುದು.

ಅಧಿಕಾರ ಎಂಬುದು ಮಾಯೆಯಂತೆ,ಅದರ ನಶೆ ಏರಿಕೆ ಹೆಚ್ಚಾದರೂ ಕಷ್ಟ.ಕಡಿಮೆಯಾದರೂ ಸಂಕಷ್ಟ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಮುಖ್ಯ. ಡಿ.ಕೆ.ಪರಿಸ್ಥಿತಿ ಮುಳ್ಳಿನ ದಾರಿ ಅವರ ವಿರೋಧಿಗಳು “ಮೌನ” ವಾಗಿದ್ದಾರೆ ಎಂದು ತಿಳಿದು ಹೆಜ್ಜೆಗಳನ್ನು ಇರಬೇಕಾಗುತ್ತದೆ. ಮೌನ ಸ್ಫೋಟವಾದರೆ ಕಷ್ಟ,ಕಷ್ಟ.

When will the silent consent explode?

Share

Leave a comment

Leave a Reply

Your email address will not be published. Required fields are marked *

Don't Miss

ಸಮುದಾಯದ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಮಾಡಬೇಕು

ಚಿಕ್ಕಮಗಳೂರು: ಪರಿಶಿಷ್ಟಜಾತಿ,ಪರಿಶಿಷ್ಟ ಪಂಗಡದ ಸರ್ಕಾರಿ ನೌಕರರು, ನಿವೃತ್ತ ಸರ್ಕಾರಿ ನೌಕರ ಸಂಘದವರು ಸಮುದಾಯದ ಅಭಿವೃದ್ಧಿಗೆ ದುಡಿಯುವ ಸಂಕಲ್ಪ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೆಲಸ ನಿರ್ವಹಿಸಿ ಬೆಂಗಳೂರಿಗೆ ವರ್ಗಾವಣೆ ಗೊಂಡಿರುವ ಎನ್.ಎಂ. ನಾಗರಾಜ್...

ಗ್ರಾಮಲೆಕ್ಕಿಗನಿಗೆ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚನೆ

ಚಿಕ್ಕಮಗಳೂರು : ಗ್ರಾಮಲೆಕ್ಕಿಗರೊಬ್ಬರಿಗೆ ಚಿನ್ನ, ಬೆಳ್ಳಿ ಮೇಲೆ ಹೂಡಿಕೆ ಮಾಡಿ ಲಾಭಮಾಡಿಕೊಡುವ ಆಮಿಷವೊಡ್ಡಿದ ಬ್ಯಾಂಕ್ ಉದ್ಯೋಗಿಯೊಬ್ಬ ೪೫.೨೦ ಲಕ್ಷ ಹಣಕ್ಕೆ ೫೦ ನಕಲಿ ಕೆ.ಜಿ. ಬೆಳ್ಳಿ ಗಟ್ಟಿ ನೀಡಿ ವಂಚಿಸಿರುವ ಬಗ್ಗೆ...

Related Articles

ಗುಡುಗು-ಸಿಡಿಲಿನ ಭಾರಿ ಮಳೆಗೆ ಇಡೀ ನಗರ ತಲ್ಲಣ

ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು...

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೇಮಕ ನಿಯಮ ಬಾಹಿರ

ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ...

ಸಂವಿಧಾನ ವಿರೋಧಿ ಎಸ್.ಐ.ಆರ್ ರದ್ಧತಿಗೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ಸಂವಿಧಾನ, ಪ್ರಜಾತಂತ್ರ, ಜನವಿರೋಧಿ ಆಗಿರುವ ಸರ್ವಾಧಿಕಾರಿ ಗುಣವಿರುವ ಎಸ್.ಐ.ಆರ್ ರದ್ಧಾಗಬೇಕು ಸಂವಿಧಾನ ಬದ್ಧವಾದ, ಜನಸ್ನೇಹಿಯಾದ...

ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ-ವೃದ್ಧ ಸಾವು

ಕಡೂರು: ಎರಡು ಬೈಕ್‌ಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವೃದ್ಧರೊಬ್ಬರು ಹೆಚ್ಚಿನ ಚಿಕಿತ್ಸೆಗಾಗಿ...