Home namma chikmagalur chikamagalur ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?
chikamagalurHomeLatest Newsnamma chikmagalurPolitical NewsState News

ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?

Share
Share

ಕರ್ನಾಟಕದ ರಾಜಕಾರಣದಲ್ಲಿ ಇಂತಹ ಬೆಳವಣಿಗೆ ನಡೆಯ ಬಹುದು ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ಮಂತ್ರಿಯಾಗಲಿಲ್ಲಾ.ಒಂದು ವರ್ಷಗಳ ಕಾಲ ಡಿ.ಕೆ.ಶಿ.ಪಟ್ಟ ಸಂಕಟವನ್ನು ಯಾರಿಗೂ ಹೇಳಲಿಲ್ಲ. ಈಗ ಇದೇ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಹುದ್ದೆಗೆ ಕರೆದುಕೊಂಡು ಬಂದು ಕೂರಿಸಿದ್ದಾರೆ ಎಂದರೆ ಡಿ.ಕೆ.ತಾಕತ್ತು ಮತ್ತು ತಾಳ್ಮೆ ಮೆಚ್ಚಲೇ ಬೇಕು.

ಸಿದ್ದರಾಮಯ್ಯ ನಡೆದು ಬಂದ ದಾರಿ,ಜ್ಞಾನ, ನಡವಳಿಕೆ, ಸ್ವಾಭಿಮಾನ ಮೆಚ್ಚುವ ಜನರೇ ಹೆಚ್ಚು. ಸಾರಸ್ವತ ಲೋಕದ ಜನ ಇವರನ್ನು ಮೆಚ್ಚಿ ಕೊಂಡಿದ್ದರು. ಆದರೆ ಆದೇ ಮಾತು ಡಿ.ಕೆ.ಶಿ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸಿದ್ದರಾಮಯ್ಯಗೆ ಸಿದ್ದರಾಮಯ್ಯ ಸರಿ ಸಾಟಿ.ಬಡತನದ ನೋವು ಜೊತೆಗೆ ಹೋರಾಟಗಾರರ ,ಸಾಮಾಜಿಕ ಹಿನ್ನೆಲೆಯಲ್ಲಿ ಅಳೆದು ತೂಗಿ ನೋಡುವ ಜನರು ಮೆಚ್ಚಿದ್ದು .ಆದರೆ ಶಿವಕುಮಾರ್ ನಂತಹ ವ್ಯಾಪಾರದ ಮನಸ್ಸು ಸ್ಥಿತಿಯ ಕೊತ್ವಾಲ್ ನ ನಡೆ ನುಡಿಯ ವ್ಯಕ್ತಿಯನ್ನು ಸಿಂಹಾಸನದ ಮೇಲೆ ಕೂರಿಸಲು ಸಿದ್ದರಾಮಯ್ಯ ಟೂಲ್‌ ಕಿಟ್ ಬಳಕೆಯಾಗಿದ್ದು ಇವತ್ತಿನ ವ್ಯಾಪಾರಸ್ಥರಿಗೆ ಈ ಪರಿ ಸೊಂಟ ಬಗ್ಗಿಸಿ ನಡೆದುಕೊಂಡ ಸಿದ್ದರಾಮಯ್ಯರನ್ನು ಕ್ಷಮಿಸಲು ಸಾಧ್ಯವಿಲ್ಲ.

ಎಲ್ಲಿಯ ಸಿದ್ದರಾಮಯ್ಯ, ಅದೇ ಎಲ್ಲಿಯ ಡಿ.ಕೆ.ಶಿವಕುಮಾರ್ ಉತ್ತರ ,ದಕ್ಷಣ ಧ್ರುವಗಳು ಈ ಹೇಸಿಗೆ ರಾಜಕಾರಣಕ್ಕೆ ಒಂದಾಗಿದ್ದು ಮಾತ್ರ ಜನ ಕ್ಷಮೆ ಮಾಡಲು ಸಾಧ್ಯವಿಲ್ಲ. ಇನ್ನೂ ಎರಡು ವರ್ಷ ಡಿ.ಕೆ.ಸಿ ಆಡಳಿತ ನೋಡ ಬೇಕು ಎಂಬುದು ಯಕ್ಷ ಪ್ರಶ್ನೆಯಲ್ಲ ಅನಿವಾರ್ಯ ತಂದಿಟ್ಟಿರುವ ರಾಹುಲ್, ಸೋನಿಯಾ ಮತ್ತು ಪ್ರಿಯಾಂಕ ಗಾಂಧಿಗಳು ಮುಂದಿನ ದಿನಗಳಲ್ಲಿ ನೋವು ಅನುಭವಿಸ ಬೇಕು ಜೊತೆಗೆ ಜನರು ಕೂಡ.

ಸಿದ್ದರಾಮಯ್ಯ ಹುಣ್ಣಿಮೆ ಯ ಬೆಳದಿಂಗಳ ರೀತಿಯಲ್ಲಿ ನಾಡಿನ ಜನರಲ್ಲಿ ಬೆರೆತರೆ,ಡಿ.ಕೆ.ಶಿವಕುಮಾರ್ ಅಮವಾಸ್ಯೆಯಂತೆ ಜನರ ಮನದಲ್ಲಿ ಇಟ್ಟುಕೊಂಡವರು ಹೆಚ್ಚು.ಸಿದ್ದರಾಮಯ್ಯ ಭಾಷೆ, ಆಡಳಿತ, ನಡೆ,ನಡಿಯಲ್ಲಿ ಕಂಗೊಳಿಸಿದ್ದಾರೆ.ಡಿ.ಕೆ.ಉತ್ತಮ ಸಂಘಟಕ ನಿಜ ಎಲ್ಲದರಲ್ಲೂ ವ್ಯವಹಾರ, ನಡೆ,ನುಡಿ ಭಾಷೆಯಲ್ಲಿ ಥೇಟ್ ಕೊತ್ವಲನ ಪಡಿಯಚ್ಚು ಎಂದು ಕರೆಯುವವರೆ ಹೆಚ್ಚು.

ಕುರ್ಚಿ ಕಾಳಗದಲ್ಲಿ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದಂತೆ ಆಡಳಿತದಲ್ಲಿ ಸೈ ಅನ್ನಿಸಿಕೊಂಡರೆ ಮಾತ್ರ ಮುಂದೆ ರಾಜಕಾರಣ ಮಾಡಬಹುದು. ಇಲ್ಲದಿದ್ದರೆ ಬಂದ ಪುಟ್ಟ, ಹೋದ ಪುಟ್ಟ ಎನ್ನಿಸಿಕೊಳ್ಳು ಬೇಕಾಗುತ್ತದೆ.ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡ ಇರುವುದು ಸ್ಪಷ್ಟ ಅದು ಯಾವಾಗ ಬೇಕಾದರೂ ಹತ್ತಿ ಕೊಳ್ಳಬಹುದು.

ಅಧಿಕಾರ ಎಂಬುದು ಮಾಯೆಯಂತೆ,ಅದರ ನಶೆ ಏರಿಕೆ ಹೆಚ್ಚಾದರೂ ಕಷ್ಟ.ಕಡಿಮೆಯಾದರೂ ಸಂಕಷ್ಟ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಮುಖ್ಯ. ಡಿ.ಕೆ.ಪರಿಸ್ಥಿತಿ ಮುಳ್ಳಿನ ದಾರಿ ಅವರ ವಿರೋಧಿಗಳು “ಮೌನ” ವಾಗಿದ್ದಾರೆ ಎಂದು ತಿಳಿದು ಹೆಜ್ಜೆಗಳನ್ನು ಇರಬೇಕಾಗುತ್ತದೆ. ಮೌನ ಸ್ಫೋಟವಾದರೆ ಕಷ್ಟ,ಕಷ್ಟ.

When will the silent consent explode?

Share

Leave a comment

Leave a Reply

Your email address will not be published. Required fields are marked *

Don't Miss

ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ತ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂಗಾರು ಮಳೆ ತಡವಾಗಿ ಆರಂಭಗೊಂಡಿದ್ದರೂ ಇದೀಗ ಭರ್ಜರಿಯಾಗಿ ಸುರಿಯುತ್ತಿದ್ದು, ಮಲೆನಾಡು ಭಾಗದಲ್ಲಿ ಭಾರೀ ಗಾಳಿ-ಮಳೆಯ ಅಬ್ಬರಕ್ಕೆ ಹಲವು ಅವಾಂತರಗಳು ಸೃಷ್ಟಿಯಾಗಿವೆ. ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಸುರಿಯುತ್ತಿರುವ ಮಳೆಗೆ ಹಲವು...

ಕಳಸದಲ್ಲಿ ಬೃಹತ್ ಮರ ಬಿದ್ದು ಆಟೋರಿಕ್ಷಾ ಜಖಂ

ಕಳಸ: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಗುಡ್ಡೆಮಕ್ಕಿ ಗ್ರಾಮದಲ್ಲಿ ಭಾರಿ ಗಾಳಿ-ಮಳೆಯ ಆರ್ಭಟಕ್ಕೆ ಸುಧೀರ್ ಆಚಾರ್ ಎಂಬುವವರ ಮನೆ ಮುಂದೆ ನಿಲ್ಲಿಸಲಾಗಿದ್ದ ಆಟೋರಿಕ್ಷಾ ಹಾಗೂ ಅವರ ಮನೆಯ ಮೇಲೆ ಬೃಹತ್ ಮರವೊಂದು...

Related Articles

ವೀರಶೈವ ಲಿಂಗಾಯತ ಸಮಾರಂಭದಲ್ಲಿ “ಕುರ್ಚಿ” ತಿಕ್ಕಾಟ ಹಲವು ಸ್ವಾಮಿಜೀಗಳ ವಿರೋದ

ಚಿಕ್ಕಮಗಳೂರು: ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸ್ವಾಮಿಗಳ ಮಧ್ಯೆ ಕುರ್ಚಿಗಾಗಿ ಪ್ರತಿರೋಧ ಪ್ಯಕ್ತಪಡಿಸಿ ಹೊರ ನಡೆದ ಘಟನೆ...

ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ

ಕಡೂರು: ಮುಂಗಾರು ಮಳೆಯ ಕೊರತೆಯಿಂದ ಕಡೂರು ತಾಲ್ಲೂಕಿನಲ್ಲಿ ಬರದ ಆತಂಕ ಎದುರಾಗಿದ್ದು, ಕುಡಿಯುವ ನೀರು, ಜಾನುವಾರುಗಳ...

ಜು.21ಕ್ಕೆ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶ

ಚಿಕ್ಕಮಗಳೂರು : ೪೬ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೊಪ್ಪಳದಲ್ಲಿ ಬೃಹತ್ ರೈತ ಸಮಾವೇಶವನ್ನು ಜು.೨೧...

ಅಕ್ರಮವಾಗಿ ಸಾಗಿಸುತ್ತಿ ಕಾಡುಜಾತಿಯ ಮರಗಳ ದಿಮ್ಮಿಗಳ ವಶ

ಮೂಡಿಗೆರೆ: ಕಾಡುಜಾತಿಯ ಮರಗಳ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದುದನ್ನು ತಾಲ್ಲೂಕಿನ ಹಂಡುಗುಳಿ ಗ್ರಾಮದ ಸಮೀಪ ಅರಣ್ಯ ಇಲಾಖೆ...