ಅಲ್ಲೂರು: ಇಲ್ಲಿಗೆ ಸಮೀಪದ ಹಾಂದಿಯ ಅಂಬೇಡ್ಕರ್ ವೃತ್ತದ ಬಳಿಯ ರಜಾ ಕ್ಯಾಂಟೀನ್ ಎದುರು 5 ವರ್ಷ ವಯಸ್ಸಿನ ಹೋರಿಯನ್ನು ಪಿಕಪ್ ವಾಹನದಲ್ಲಿ ಶನಿವಾರ ಅಕ್ರಮವಾಗಿ ಸಾಗಿಸಲು ಪ್ರಯತ್ನಿಸುತ್ತಿದ್ದನ್ನು ಪೊಲೀಸರು ಪತ್ತೆಮಾಡಿದ್ದಾರೆ.
ಹೋರಿಯ ಕಾಲುಗಳನ್ನು ಕಟ್ಟಿ ಟಾರ್ಪಾಲಿನಿಂದ ಮುಚ್ಚಿ ಸಾಗಿಸಲು ಪ್ರಯತ್ನಿಸುತ್ತಿದ್ದಾಗ ಪೊಲೀಸರನ್ನು ಕಂಡು ಒಬ್ಬ ಆರೋಪಿ ವಾಹನದಿಂದ ಜಿಗಿದು ಓಡಿಹೋಗಿದ್ದ. ವಾಹನದಲ್ಲಿದ್ದ ಆರೋಪಿಗಳಾದ ಮಂಜುನಾಥ್, ಕಿರಣ್, ಮಹಮ್ಮದ್ ಮುಬಾರಕ್ ಅವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದು, ಹೋರಿಯನ್ನು ಸಬ್ಬೇನಹಳ್ಳಿಯಿಂದ ಕಸಾಯಿಖಾನೆಗೆ ಸಾಗಾಟ ಮಾಡಲು ಕೊಂಡೊಯ್ಯುತ್ತಿದ್ದೆವು ಎಂದು ಮಾಹಿತಿ ನೀಡಿದ್ದಾರೆ.
ಪೊಲೀಸರು ವಾಹನ ಮತ್ತು ಹೋರಿಯನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೋರಿ ₹15 ಸಾವಿರ ಮೌಲ್ಯದ್ದಾಗಿದೆ. ಹೋರಿಯನ್ನು ಇಂದಾವರದಲ್ಲಿರುವ ಗೋಶಾಲೆಗೆ ಕಳುಹಿಸಿಕೊಡಲಾಗಿದೆ ಎಂದು ಪಿಎಸ್ಐ ರವಿ ಜಿ.ಎ. ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ರವಿ, ಸಂದೀಪ್ ಎಂ.ಜಿ., ಪ್ರಸನ್ನ ಎಂ.ಎಚ್., ರಘು ಎಲ್.ಎಲ್., ಅಣ್ಣಪ್ಪ ಭಾಗವಹಿಸಿದ್ದರು.
Cattle smuggling: Case registered
Leave a comment