ಚಿಕ್ಕಮಗಳೂರು: ರಾಜ್ಯ ಹಾಗೂ ದೇಶದ ಹಲವೆಡೆ ನಡೆಯುತ್ತಿರುವ ಲವ್ ಜಿಹಾದ್ ಹಾಗೂ ಕಾರ್ಪೊರೇಟ್ ಜಿಹಾದ್ನಂತಹ ಕೃತ್ಯಗಳನ್ನು ಖಂಡಿಸಿ ವಿಶ್ವಹಿಂದೂ ಪರಿಷತ್-ಬಜರಂಗದಳ ಹಾಗೂ ಮಾತೃಶಕ್ತಿ ದುರ್ಗಾ ವಾಹಿನಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಆಜಾದ್ ಪಾರ್ಕ್ ಸರ್ಕಲ್ನಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತೃಶಕ್ತಿ ದುರ್ಗಾವಾಹಿನಿ ಪ್ರಮುಖ್ ಪುಷ್ಪಾಂಜಲಿ ಮೋಹನ್ ಮಾತನಾಡಿ, ಮುಂಬೈನ ಟಿಸಿಎಸ್ ಕಂಪನಿಯಲ್ಲಿ ಕೆಲಸ ಮಾಡುವ ಮುಸ್ಲಿಂ ಸಿಬ್ಬಂದಿ ಹಿಂದೂ ಹೆಣ್ಣು ಮಕ್ಕಳನ್ನು ಲವ್ ಜಿಹಾದ್ಗೆ ಬಲಿಯಾಗಿಸಿ ಅವರನ್ನು ಬ್ಲಾಕ್ ಮೇಲ್ ಮಾಡಿ, ಮತಾಂತರಗೊಳಿಸುವ ಕೃತ್ಯದಲ್ಲಿ ತೊಡಗಿದ್ದಾರೆ. ಈ ಬಗ್ಗೆ ಕೆಲವು ಯುವತಿಯರೇ ವಿಷಯ ಬಹಿರಂಗಗೊಳಿಸಿದ ನಂತರ ದೂರು ದಾಖಲಾಗಿದೆ ಎಂದರು.
ಹಿಂದೂ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿರುವುದಲ್ಲದೆ, ಅವರಿಗೆ ಬೇರೆ ಬೇರೆ ಆಹಾರ ಸೇವಿಸಲು ಒತ್ತಾಯಿಸುವುದು, ಇದೇ ರೀತಿ ವಸ್ತ್ರ ತೊಡಬೇಕು ಎಂದು ಪೀಡಿಸುವುದೆಲ್ಲವೂ ಈಗ ಹೊರ ಬಂದಿದೆ. ಪೊಲೀಸರು ೭ ಜನರನ್ನು ಬಂಧಿಸಿದ್ದಾರೆ. ಆದರೆ ಪ್ರಮುಖ ಆರೋಪಿ ನಿಧಾ ಎಂಬಾಕೆಯನ್ನು ಇನ್ನೂ ಬಂಧಿಸಿಲ್ಲ. ಇಂತಹ ಜಿಹಾದಿ ಚಟುವಟಿಕೆಗಳು ದೇಶದ ಹಲವು ರಾಜ್ಯಗಳಲ್ಲಿ ನಡೆಯುತ್ತಿರುವುದು ಕಂಡು ಬರುತ್ತಿದೆ. ಇದು ಮುಂದುವರಿದಲ್ಲಿ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದರು.
ಕೆಲವು ದುಷ್ಕರ್ಮಿಗಳು ಪೈಪೋಟಿ ಮೇಲೆ ಹಿಂದೂ ಹೆಣ್ಣು ಮಕ್ಕಳನ್ನು ಮತಾಂತರಗೊಳಿಸುತ್ತಿದ್ದಾರೆ. ಸುಮಾರು ೩೦೦ ಕ್ಕೂ ಹೆಣ್ಣು ಮಕ್ಕಳು ಈ ಜಾಲದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಗಲಾಟೆ ಆದಾಗ ಇದು ಬಹಿರಂಗವಾಗಿದೆ. ಚಿಕ್ಕಮಗಳೂರು ನಗರ ಜಿಲ್ಲೆಯಲ್ಲೂ ಇಂತಹ ಕೃತ್ಯಗಳು ನಡೆಯುತ್ತಿದೆ ಅದನ್ನು ಪತ್ತೆ ಹಚ್ಚಿ ನಮ್ಮ ಹೆಣ್ಣುಮಕ್ಕಳ ರಕ್ಷಣೆಗೆ ನಾವು ಮುಂದಾಗಲಿದ್ದೇವೆ ಎಂದು ಹೇಳಿದರು.
ವಿಶ್ವಹಿಂದೂ ಪರಿಷತ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ವಿಶ್ವಹಿಂದೂ ಪರಿಷತ್-ಬಜರಂಗದಳ ಸ್ಥಾಪನೆಯಾದಾಗಲೇ ಇಸ್ಲಾಂ ಹೆಸರಿನಲ್ಲಿ, ಪ್ರೀತಿ-ಪ್ರೇಮದ ನೆಪದಲ್ಲಿ ಮತಾಂತರ ಮಾಡುತ್ತಿದ್ದಾರೆ. ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಇದೆ ಎನ್ನುವುದನ್ನು ಹೇಳುತ್ತಲೇ ಬಂದಿದ್ದೇವೆ. ಪ್ಯಾಲಿಸ್ತೇನ್, ಪಾಕಿಸ್ಥಾನ್ ಧ್ವಜ ಹಿಡಿದು ಜಿಂದಾಬಾದ್ ಕೂಗುತ್ತಾರೆ. ಇರಾನಿನಲ್ಲಿ ಅಲ್ ಖಮೈನಿ ಸತ್ತಾಗ ಇಲ್ಲಿ ಶಾಂತಿ ಸೂಚಿಸುತ್ತಾರೆ ಈ ರೀತಿ ಸಂವಿಧಾನ ಬಾಹಿರವಾಗಿ ನಡೆದುಕೊಳ್ಳುತ್ತಿರುವವರು ಹಿಂದೂ ಹೆಣ್ಣುಮಕ್ಕಳನ್ನು ಯಾಮಾರಿಸುತ್ತಿದ್ದಾರೆ ಎಂದು ದೂರಿದರು.
ವಿಹೆಚ್ಪಿ ಜಿಲ್ಲಾ ಖಜಾಂಚಿ ಯೋಗೀಶ್ ರಾಜ್ ಅರಸ್, ಜಸಂತ ಅನಿಲ್ ಕುಮಾರ್, ಪುಷ್ಪ ಮೋಹನ್, ಆಟೋ ಶಿವಣ್ಣ, ಪ್ರದೀಪ್, ರೂಪ ಇತರರು ಇದ್ದರು.
Protest in the city condemning love jihad
Leave a comment