ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಡಿ.ಎಸ್.ಸುರೇಶ್, ಕೆ.ಆರ್.ಆನಂದ್, ಬೆಳ್ಳಿ ಪ್ರಕಾಶ್, ಬಸವರಾಜಪ್ಪ, ಹಳಸೆ ಶಿವಣ್ಣ,ಜಯಪಾಲ್, ದಿನೇಶ್ ಹೆಗ್ಡೆ ಮತ್ತು ಎಸ್.ಡಿ.ಸೋನಾಲ್ ಅವಿರೋಧ ಆಯ್ಕೆಯಾಗಿದ್ದಾರೆ. ಹೆಗ್ಡೆ ಹೊರತು ಪಡಿಸಿ ಉಳಿದವರು ಬಿಜೆಪಿ ಬೆಂಬಲಿಗರು.
ಇಂದು ಐದು ಸ್ಥಾನಗಳಿಗೆ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರ ಮಧ್ಯೆ ನಿರಂಜನ್ ಸ್ಪರ್ಧೆ ಕೌತಕ ಸೃಷ್ಟಿ ಮಾಡಿದ್ದರ ಜೊತೆಗೆ ಪ್ರತಿನಿಧಿಗಳಿಗೆ ಗುಂಡು,ತುಂಡಿನ ಜೊತೆಗೆ ಪ್ರವಾಸ ಭಾಗ್ಯ ಮತ್ತು ಲಕ್ಷ,ಲಕ್ಷ ಹಣ ಸಿಗುವಂತಾಯಿತು ರವಿ 25 ಮತ ಪಡೆದರೆ ಮತ್ತು ಬೋಜೇಗೌಡರು 30 ಮತ ಪಡೆದರೆ ನಿರಂಜನ್ ಐದು ಮತ ಪಡೆದರೆ ರವಿ ಮತ್ತು ಬೋಜೇಗೌಡರು ಸುಲಭವಾಗಿ ಜಯಗಳಿಸಿದರು.
ಟಿ.ಎ.ಪಿ.ಸಿ.ಎಂ.ಎಸ್.ಕ್ಷೇತ್ರದ ಇಂದು ಚುನಾವಣೆ ನಡೆದು ಆನಂದ್ ಮೂರು ಮತ ಪಡೆದರೆ ನಾಲ್ಕು ಮತ ಪಡೆದ ದಿನೇಶ್ ಹೊಸೂರು ಜಯಗಳಿಸಿದ್ದಾರೆ. ಜಿಲ್ಲಾ ಇತರೆ ಸಹಕಾರ ಸಂಘಗಳ ಚುನಾವಣೆ ಕುತೂಹಲ ಕೆರಳಿಸಿತ್ತು. ಟಿ.ಎಲ್.ರಮೇಶ್ ಎರಡು ಬಾರಿ ಎರಡು,ಮೂರು ಮತಗಳಿಂದ ಜಯಗಳಿಸಿದ್ದರೂ ಈ ಬಾರಿ 56 ಮತ ಪಡೆದು ಹ್ಯಾಟ್ರಿಕ್ ಜಯ ಸಾಧಿಸಿದ್ದಾರೆ.
ಅವರ ಜೊತೆಯಲ್ಲಿ ಇದ್ದ ನಿರ್ದೇಶಕರುಗಳು ವಿರೋಧ ಮಾಡುತ್ತಿರುವುದು ಮಾತ್ರ ಸೋಜಿಗ.ಜೊತೆಗೆ ಬ್ಯಾಂಕ್ ನೌಕರರು ವಿರೋಧ ವ್ಯಕ್ತಪಡಿಸಿದರೂ ಪ್ರತಿಸ್ಪರ್ಧಿ ಮಾಜಿ ಶಾಸಕ ಕುಮಾರಸ್ವಾಮಿ 38 ಮತ ಕುಮಾರಸ್ವಾಮಿ ಪಡೆದಿದ್ದಾರೆ ಕೊಪ್ಪ ಸಹಕಾರ ಸಂಘಗಳ ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಸತೀಶ್ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಸರ್ಕಾರ ಇರುವುದರಿಂದ ಬ್ಯಾಂಕ್ ನಲ್ಲಿ ನಟ್ಟು ಬೋಲ್ಟ್ ಟೈಟ್ ಮಾಡುವುದು ಮಾಡುವುದು ಖಚಿತ. ಮುಂದಿನ ವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತದೆ. ಮತ್ತೊಂದು ರೀತಿಯ ಬೆಳವಣಿಗೆ ಆಗುವುದು ಖಚಿತ.ಸುರೇಶ್ ಅಧ್ಯಕ್ಷರದಾಗ ಮಲೆನಾಡಿಗೆ ಅವಕಾಶ ಕೊಡಿ ಎಂಬ ಕೂಗು ಇತ್ತು.ಇದರ ಜೊತೆಗೆ ಲಿಂಗಾಯತv/s ವಕ್ಕಲಿಗರು ಎಂಬ ಗುಂಪುಗಾರಿಕೆ ಕೂಡ ಶುರು ಸಿ.ಟಿ.ರವಿ ಅಧ್ಯಕ್ಷರಾಗ ಬೇಕು ಎಂಬ ಆಸೆ ಏನಾಗ ಬಹುದು ಎಂಬ ಕುತೂಹಲ ಮಾತ್ರ ಇರುತ್ತದೆ.ಬೆಳ್ಳಿ ಪ್ರಕಾಶ್ ದಾರಳತನದಿಂದ ಮತ್ತೊಮ್ಮೆ ಬಿಜೆಪಿ ಡಿಸಿಸಿ ಬ್ಯಾಂಕ್ ಆಡಳಿತದ ಚುಕ್ಕಾಣಿ ಹಿಡಿದಿದೆ.
BJP takes over DCC Bank amid tight security
Leave a comment