Home namma chikmagalur chikamagalur ಶತೃದೇಶದ 93 ಸಾವಿರ ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತ
chikamagalurHomeLatest Newsnamma chikmagalur

ಶತೃದೇಶದ 93 ಸಾವಿರ ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತ

Share
Share

ಚಿಕ್ಕಮಗಳೂರು: ಇಂಡೋ-ಪಾಕ್‌ನ ೭೧ರ ಯುದ್ಧದಲ್ಲಿ ಮೊಟ್ಟ ಮೊದಲ ಬಾರಿಗೆ ಶತೃದೇಶದ ೯೩ ಸಾವಿರ ಸೈನಾಧಿಕಾರಿ ಮತ್ತು ಸೈನಿಕರನ್ನು ಶರಣಾಗತಿಗೊಳಿಸಿದ ಕೀರ್ತಿ ಭಾರತೀಯ ಹೆಮ್ಮೆಯ ಸೈನಿಕರಿಗೆ ಸಲ್ಲುತ್ತದೆ ಎಂದು ಲೆ.ಕರ್ನಲ್ ಹಾಗೂ ಸರ್ಕಾರಿ ವೈದ್ಯ ಡಾ|| ರಾಜೀವ್ ಹೇಳಿದರು.

ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಚಿಕ್ಕಮಗಳೂರು ಮಾಜಿ ಸೈನಿಕರ ಸಂಘದಿಂದ ಆಯೋಜಿಸಿದ್ಧ ೧೯೭೧ರ ಯುದ್ಧದ ೫೫ನೇ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂದಿನ ೭೧ರ ಯುದ್ಧದಲ್ಲಿ ಕ್ಯಾಪ್ಟನ್ ಮಾಣಿಕ್ ಶಾ ಅವರ ನಾಯಕತ್ವದಲ್ಲಿ ಪೂರ್ವ ತಯಾರಿ ನಡೆಸಿ ದ ಇಂಡೋ-ಪಾಕ್ (ಬಾಂಗ್ಲಾ) ಯುದ್ಧದಲ್ಲಿ ನಮ್ಮ ಸೈನಿಕರನ್ನು ಅಣಿಗೊಳಿಸಿತು. ನೆರೆದೇಶದ ಹಿಂಸಾತ್ಮಕ ಕೃತ್ಯಗಳಿಗೆ ಕಡಿವಾಣ ಹಾಕಲು ತಂತ್ರಗಾರಿಕೆ ನಡೆಸಿ ಯುದ್ಧದಲ್ಲಿ ಸಂಪೂರ್ಣ ಯಶಸ್ವಿಕಂಡಿತು ಎಂದರು.

ಭಾರತ ಏಕನಡೆಯೊಂದಿಗೆ ಎಂದಿಗೂ ಯುದ್ಧವನ್ನು ಸಾರಿಲ್ಲ. ಅಲ್ಲಿನ ಜಾತಿ ಆಧಾರದಲ್ಲಿ ನಡೆದ ಕೊ ಲೆ, ಸುಲಿಗೆ ಹಾಗೂ ದರೋಡೆಕೋರರನ್ನು ಮಟ್ಟಹಾಕಲು ಮತ್ತು ಭಾರತ ಗಡಿಭಾಗದಲ್ಲಿ ನುಸುಳುಕೋರರ ನ್ನು ತಡೆಗಟ್ಟಲು ಯುದ್ದವನ್ನು ಸಾರಿತು. ಅಲ್ಲದೇ ಬಂಧಿಸಿದ ನೆರೆದೇಶದ ಸೈನಿಕರನ್ನು ಸುರಕ್ಷಿತವಾಗಿ ವಾಪ ಸ್ ಕಳುಹಿಸಿಕೊಟ್ಟಿದೆ ಎಂದು ಹೇಳಿದರು.

ಪೂರ್ವ ಪಾಕಿಸ್ತಾನವನ್ನು, ಪಾಕಿಸ್ತಾನದ ದೌರ್ಜನ್ಯದಿಂದ ವಿಮುಕ್ತಿಗೊಳಿಸಿ, ಪ್ರತ್ಯೇಕ ‘ಬಾಂಗ್ಲಾದೇಶ’ ರಾ?ದ ಉಗಮಕ್ಕೆ ಕಾರಣವಾದ ಭಾರತದ ಹೋರಾಟಕ್ಕೆ ಗೆಲುವು ಸಿಕ್ಕ ವಿಜಯದ ದಿನವಿದು. ಈ ಹೋ ರಾಟದಲ್ಲಿ ರಾಷ್ಟ್ರದ ಹಲವಾರು ಸೈನಿಕರು ಬಲಿದಾನಗೈದಿದ್ದು, ಇಂದಿಗೂ ಕೆಲವರು ನಮ್ಮ ಜೊತೆಗಿರುವುದು ಹೆಮ್ಮೆಯ ಕ್ಷಣ ಎಂದರು.

ಹಿರಿಯ ನ್ಯಾಯವಾದಿ ಬಿ.ಎಂ.ಲಕ್ಷ್ಮಣಗೌಡ ಮಾತನಾಡಿ ಅಮೇರಿಕಾ ದೇಶ ಜಗತ್ತಿನ ಎದುರು ಬಲಾ ಡ್ಯ ರಾಷ್ಟ್ರವೆಂದು ಬಿಂಬಿಸಿಕೊಂಡು, ಭಾರತದ ಮೇಲೆ ವಿಪರೀತ ತೆರಿಗೆ ಏರಿಸುತ್ತಿದೆ. ಇದೀಗ ಆಧುನಿಕ ಭಾರ ತವು ಪ್ರಪಂಚದ ಮೂರನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು ಸದ್ಯದಲ್ಲೇ ಅಮೇರಿಕಾವನ್ನು ದೊಡ್ಡಣ್ಣ ಸ್ಥಾನದಿಂದ ಕೆಳಗಿಳಿಸಿ, ಭಾರತ ದೊಡ್ಡಣ್ಣನ ಪಟ್ಟಕ್ಕೆರಲಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಮಾಜಿ ಸೈನಿಕರ ಸಂಘ ದಿನೇ ದಿನೇ ಗಟ್ಟಿಯಾಗುತ್ತಿದೆ. ಬೆರಳಣಿಕೆಯಷ್ಟಿದ್ಧ ಸಂಘವು ಇಂ ದು ಅನೇಕ ಹಿರಿಯ ಅಧ್ಯಕ್ಷರ ನೇತೃತ್ವದಲ್ಲಿ ಬೃಹತ್ ಹೆಮ್ಮರವಾಗಿ ಬೆಳೆದಿದೆ. ಅಲ್ಲದೇ ಸಭೆ, ಸಮಾರಂಭ ಹಾಗೂ ವಿಜಯೋತ್ಸವ ಕಾರ್ಯಕ್ರಮ ಹಮ್ಮಿಕೊಂಡು ಶಕ್ತಿಯುತವಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸೈನಿಕರ ಸಂಘದ ಅಧ್ಯಕ್ಷ ಸಿ.ಎಸ್.ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿ ಭಾರತ ಸಾವಿ ರಾರು ಮೈಲುಗಳಲ್ಲಿ ಗಡಿಯ ವಿಸ್ತಾರ ಹಂಚಿಕೊಂಡಿದೆ. ಗಡಿರೇಖೆಯಲ್ಲಿ ಭಾರತೀಯ ನೆಲವನ್ನು ಕಾಪಾಡಿ ಕೊಳ್ಳಲು ನಮ್ಮ ಸೈನಿಕರು ಚಳಿ, ಬಿಸಿಲೆನ್ನದೇ ಹಗಲು-ರಾತ್ರಿಯಲ್ಲೂ ಕಾದು ದೇಶವನ್ನು ರಕ್ಷಿಸುವುದನ್ನು ಮ ರೆಬಾರದು ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ರಾಷ್ಟ್ರವು ಅನೇಕ ಯುದ್ಧಗಳನ್ನು ಎದುರಿಸಿತು. ಆದರೆ ಇಂಡೋ-ಪಾಕ್ ಯುದ್ಧವು ಭಾರತೀಯ ಸೈನ್ಯಕ್ಕೆ ಮನ್ನಣೆ ತಂದುಕೊಟ್ಟಿದೆ. ೭೧ರಲ್ಲಿ ನಡೆದ ೧೩ ದಿನಗಳ ಯುದ್ಧವು ಪಾಕಿಸ್ತಾ ನದೊಂದಿಗೆ ನಡೆದಿದ್ದು, ಇದನ್ನು ಬಾಂಗ್ಲಾದೇಶ ಯುದ್ಧವೇಂದೇ ಪ್ರತೀಕವಾಗಿದೆ. ಈ ಯುದ್ಧವು ಭಾರತದ ಇತಿಹಾಸದಲ್ಲಿ ಸದಾ ನೆನಪಿಸಲಿದೆ ಎಂದು ಹೇಳಿದರು.

ಇದೇ ವೇಳೆ ರೋಟರಿ ಕ್ಲಬ್‌ನಿಂದ ಮಾಜಿ ಸೈನಿಕರ ಸಂಘಕ್ಕೆ ಉಚಿತವಾಗಿ ಕಂಪ್ಯೂಟರ್ ಕೊಡುಗೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಕೃಷ್ಣೇಗೌಡ, ಕಾರ್ಯದರ್ಶಿ ಪ್ರದೀಪ್ ಕೋಟೆ, ಖಜಾಂಚಿ ರಾಜೇಗೌಡ, ಮಾಜಿ ಅಧ್ಯಕ್ಷ ನಾಗರಾಜ್, ರೋಟರಿ ಕ್ಲಬ್ ಅಧ್ಯಕ್ಷ ಲಿಖಿತ್ ಉಪಸ್ಥಿತರಿದ್ದರು.

India is credited with surrendering 93000 enemy soldiers.

 

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...