Home Latest News MLC ಎಸ್ ಎಲ್ ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು
Latest News

MLC ಎಸ್ ಎಲ್ ಭೋಜೇಗೌಡ ವಿರುದ್ಧ ಚುನಾವಣಾಧಿಕಾರಿಗೆ ದೂರು

Share
Share

ಚಿಕ್ಕಮಗಳೂರು : ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ದೇವೇಂದ್ರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡರ ಮೇಲೆ ಜಿಲ್ಲಾಧಿಕಾರಿಗೆ ದೂರು ಸಲ್ಲಸಿದ್ದು ನೌಕರರನ್ನು ಪದೇ,ಪದೇ ಮನೆಗೆ ಕರೆಯಿಸಿ ಬೆದರಿಕೆಯ ಜೊತೆಗೆ ಆಮಿಷ ಒಡ್ಡುತ್ತಿದ್ದು ರೆಸಾರ್ಟ್ನಲ್ಲಿ ಉಳಿಯಬೇಕು ನಾನು ಹೇಳಿದವರಿಗೆ ಮತ ನೀಡಬೇಕು ಎಂದು ಬೆದರಿಸುತ್ತಿರುವುದರಿಂದ ಮುಕ್ತ ಚುನಾವಣೆ ನಡೆಯುವುದಿಲ್ಲ ನಿರ್ಭಯವಾಗಿ ಚುನಾವಣೆ ನಡೆಸಲು ಕ್ರಮ ಕೈಗೊಳ್ಳಲು ಒತ್ತಾಯ ಮಾಡಿರುವುದು ಚುನಾವಣೆಯಲ್ಲಿ ನಡೆಯುತ್ತಿರುವ ರಂಗಿನಾಟಕ್ಕೆ ಹೊಸ ತಿರುವು ಬಂದಿದೆ.

ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಡಿಸೆಂಬರ್ 4 ರಂದು ನಡೆಯಲಿದೆ ಈಗಾಗಲೇ ಅಧ್ಯಕ್ಷ ,ಖಜಾಂಚಿ ಮತ್ತು ರಾಜ್ಯ ಪರಿಷತ್ ಗೆ ಸ್ಪರ್ಧೆಯಲ್ಲಿ ರುವವರು ದೇವೇಂದ್ರ ಮತ್ತು ಹೇಮಂತ್ ನೇತೃತ್ವದಲ್ಲಿ ಭರ್ಜರಿ ಬ್ಯಾಟಿಂಗ್ ಶುರುಮಾಡಿದ್ದಾರೆ. 73 ಮತದಾರರು ಇದ್ದು ಎರಡು ಗುಂಪಿನಲ್ಲಿ ನೇರವಾಗಿ ಗುರ್ತಿಸಿಕೊಂಡಿದ್ದರೆ ಕೆಲವರು ಅತ್ತಾ,ಇತ್ತಾ ಸುಳಿದಾಡಿದರೆ ಕೆಲವರು ನೇರವಾಗಿ ಯಾರ ಗುಂಪಿನ ಜೊತೆಯಲ್ಲಿ ಇಲ್ಲ ನಮಗೆ ಮತ ನೀಡುವುದು ಗೊತ್ತು ಎಂದಿದ್ದಾರೆ.

ಹತ್ತರಿಂದ ಹನ್ನೆರಡು ಜನಮಾತ್ರ ಅಯಾಯ ಗುಂಪಿನಲ್ಲಿ ರೆಸಾರ್ಟ್ ಪಾರ್ಟಿ ನಡೆಸುತ್ತಿದ್ದು ಕೆಲವರು ನಮಗೆ ಪಾರ್ಟಿ, ಪೇಮೆಂಟ್, ಗುಂಪು ಬೇಡ ಎಂದು ನೇರವಾಗಿ ಹೇಳಿ ಕಳಿಸಿದ್ದಾರೆ. ಹೀಗಾಗಿ ಇಬ್ಬರಿಗೂ ಚಿಂತೆ ಶುರುವಾಗಿದೆ.
ಎರಡು ಗುಂಪಿಗೂ ರಾಜಕಾರಣಿಗಳ ಬೆಂಬಲವಿದೆ.ಆದರೆ ಪ್ರಾರಂಭದಿಂದಲೂ ಎಂ,ಎಲ್,ಸಿ ಬೋಜೇಗೌಡ ನೇರವಾಗಿ ಹೇಮಂತ್ ಪರ ನಿಂತಿದ್ದಾರೆ.ಇದನ್ನು ಹೆದರಿಸಲು ದೇವೇಂದ್ರ ನುಗ್ಗುತ್ತಿದ್ದು ಡಿಸೆಂಬರ್4 ರ ಸಂಜೆ ಯಾರ ಶಕ್ತಿ ಏನು ಎಂಬ ರಿಯಾಲಿಟಿ ತಿಳಿಯುತ್ತದೆ.

ಗುಂಡು_ ತುಂಡಿನ ಜೊತೆಗೆ ಹಣ ಹಂಚಿಕೆ ಖಚಿತ ಎಂಬ ಮಾಹಿತಿಗೆ ಪೂರಕವಾಗಿ ಪ್ರತಿನಿಧಿ ಅಯ್ಕೆಯಲ್ಲಿ ಎರಡು ಸಾವಿರ ಹಣ ಮತ್ತು ಬೆಳ್ಳಿ ಬಟ್ಟಲು ಹಂಚಲಾಗಿದೆ.ಅಲ್ಲಲ್ಲಿ ಕೇಳಿಬರುತ್ತಿರುವಂತೆ ಇಪ್ಪತ್ತರಿಂದ ಮೂವತ್ತು ಸಾವಿರ ಹಂಚಬಹುದು ಎಂಬ ಗುಮಾನಿ ಮಾತ್ರ ಇದೆ.ಈ ಬಗ್ಗೆ ಅಭ್ಯರ್ಥಿಗಳು ಮಾತ್ರ ನಯವಾಗಿ ತಿರಸ್ಕರಿಸುತ್ತಾರೆ.
ಚುನಾವಣೆಯಲ್ಲಿ ಗೆಲ್ಲ ಬೇಕೆಂಬ ಹಠಕ್ಕೆ ಬಿದ್ದಿರುವ ಎರಡು ಗುಂಪಿನವರು ಎಲ್ಲಾ ಟ್ರಿಕ್ಸ್ ಗಳನ್ನು ಬಳಸುತ್ತಿದ್ದು ಅಣೆ,ಪ್ರಮಾಣ,ದೇವರ ಪ್ರಸಾದ ನೀಡಿ ಮತಗಳನ್ನು ಯಾವ ರೀತಿ ಹಾಕಬೇಕು ಯಾರಿಗೆ ಯಾವ ರೀತಿ ಸಂಖ್ಯೆ ಯಲ್ಲಿ ಒತ್ತ ಬೇಕು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ.ಜೊತೆಗೆ ಹೆದರಿಕೆ,ಬೆದರಿಕೆ ಕೂಡ ಉಚಿತವಾಗಿ ಕೊಡಲಾಗಿದೆ.
ಒಟ್ಟಾರೆ ಝಣ,ಝಣ ಕಾಂಚಾಣದ ಸದ್ದಿನೊಂದಿಗೆ ತಂತ್ರ, ಕುತಂತ್ರ ಬಳಸಿ ಗೆಲುವು ನಮ್ಮದೇ ಎನ್ನುವ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...