Home Latest News ಎಸ್ಎಲ್ ಭೋಜೇಗೌಡರಿಂದ ನೀಚ ಕೃತ್ಯ : ದೇವೆಂದ್ರ ಗಂಭೀರ ಆರೋಪ
Latest News

ಎಸ್ಎಲ್ ಭೋಜೇಗೌಡರಿಂದ ನೀಚ ಕೃತ್ಯ : ದೇವೆಂದ್ರ ಗಂಭೀರ ಆರೋಪ

Share
Share

ಚಿಕ್ಕಮಗಳೂರು : ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದು ಮತ ಹಾಕುವ ನಿರ್ದೇಶಕರುಗಳನ್ನು ಮನೆಗೆ ಕರೆಸಿ ಆಣೆ ಪ್ರಮಾಣ ಮಾಡಿಸುತ್ತಿದ್ದಾರೆ ಎಂದು ನೌಕರರ ಸಂಘದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ದೇವೇಂದ್ರ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ದೇವೇಂದ್ರ, ನಿರ್ದೇಶಕರುಗಳಿಗೆ ಹಣ,ಬೆಳ್ಳಿ ಬಟ್ಟಲು ಆಮಿಷ ಓಡುತ್ತಿದ್ದು, ರೆಸಾರ್ಟ್ ಗೆ ಬಂದು ವಾಸ್ತವ್ಯ ಹೂಡುವಂತೆ ಒತ್ತಡ ಏರುತ್ತಿದ್ದಾರೆ. ಇಂತಹ ನೀಚ ಕೃತ್ಯವನ್ನು ಬೋಜೇಗೌಡರು ಮಾಡಬಾರದು ಎಂದಿರುವ ದೇವೇಂದ್ರ, ನೌಕರರ ಸಂಘದ ಚುನಾವಣೆಯ ವಿಷಯವನ್ನು ಮತ್ತೋರ್ವ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಹೇಮಂತ್ ಕುಮಾರ್ ಸಾರ್ವಜನಿಕ ಗೊಳಿಸುತ್ತಿರುವುದು ದುರಂತ ಇದು ಸಂಘಕ್ಕೆ ವಿನಾಶಕಾರಿ, ಕಂದಾಯ ನೌಕರರ ಸಂಘವನ್ನು ವರ್ಷಾನುಗಟ್ಟಲೆ ಸಭೆ ನಡೆಸದೆ, ಯಾವುದೇ ಚಟುವಟಿಕೆಗಳನ್ನು ನಡೆಸದೆ ಶಾಶ್ವತವಾಗಿ ಮುಚ್ಚಿರುವ ಇವರ ಅಹಂಕಾರದಿಂದಲೇ ಮತದಾರರ ಪಟ್ಟಿಯಲ್ಲಿ ಹಲವರ ಹೆಸರು ಕೈ ಬಿಡಲಾಗಿತ್ತು.

ನೌಕರರ ಕ್ಯಾಂಟೀನ್ ನಿರ್ಮಾಣದಲ್ಲಿ 30 ಲಕ್ಷ ಭ್ರಷ್ಟಾಚಾರ ಆಗಿದೆ ಎಂದು ಆರೋಪಿಸಿರುವ ಕಿರಣ್ ಕುಮಾರ್ ಮೇಲೆ ಮಾನ ನಷ್ಟ ದಾವೆ ಹೂಡುವುದಾಗಿ ದೇವೇಂದ್ರ ಇದೆ ವೇಳೆ ಹೇಳಿದ್ದಾರೆ. ಕಿರಣ್ ಕುಮಾರ್ ಬಿಇಒ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯಲ್ಲಿ ಮೂವರು ಶಿಕ್ಷಕರಿಗೆ ಮೆಡಿಕಲ್ ನಕಲಿ ಬಿಲ್ ಸೃಷ್ಟಿಸಿ 15 ಲಕ್ಷ ಭ್ರಷ್ಟಾಚಾರ ನಡೆಸಿ ಬಿ.ಇ.ಓ ತಲದಂಡ ಆಗುತ್ತದೆ ಎಂಬುದು ಗೊತ್ತಾಗಿ ಮತ್ತೆ ಸರ್ಕಾರಕ್ಕೆ 15 ಲಕ್ಷ ವಾಪಸ್ ಕಟ್ಟಿದ್ದು ಏಕೆ ಸ್ಪಷ್ಟಪಡಿಸಲಿ ಎಂದರು.

ಇದೆ ವೇಳೆ ಮಾತನಾಡಿದ ಅವರು ಬಸ್ ಮಂಜರನ್ನು ಸಂಘ ವಿರೋಧಿ ಚಟುವಟಿಕೆಯಲ್ಲಿ ಅಮಾನತ್ತುಗೊಳಿಸಿರುವುದು ನಾವಲ್ಲ ಹೊರತಾಗಿ ರಾಜ್ಯ ಸಂಘ. ಸಂಘದ ಬೈಲಾನೆ ಗೊತ್ತಿಲ್ಲದ ಮಂಜುನಾಥ್ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದಕ್ಕೆ ಅಮಾನತ್ತುಗೊಂಡಿದ್ದರು. ನಾನು ಬೋಜೇಗೌಡರ, ಬೆದರಿಕೆಗೆ ಹೆದರುವುದಿಲ್ಲ., ನಮಗೆ ಯಾವುದೇ ಭಯವೂ ಇಲ್ಲ, ಬುಧವಾರ ನಡೆಯಲಿರುವ ಚುನಾವಣೆ ನಿಸ್ಪಕ್ಷಪಾತವಾಗಿ, ಸುಸೂತ್ರವಾಗಿ, ಪಾರದರ್ಶಕವಾಗಿ ನಡೆಯಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ದೇವೇಂದ್ರಪ್ಪ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಇದೇ ವೇಳೆ ಸರ್ಕಾರಿ ನೌಕರರ ಸಂಘದ ಪರಿಷತ್ ಸ್ಥಾನಕ್ಕೆ ಸ್ಥಾನದ ಅಭ್ಯರ್ಥಿ ಪೂರ್ಣೇಶ್ , ಖಜಾಂಚಿ ಸ್ಥಾನದ ಅಭ್ಯರ್ಥಿ ಚೇತನ್ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *

Don't Miss

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದು, ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಜಿಪಂ–ತಾಪಂ ಸದಸ್ಯ...

Related Articles

ಮಳೆಗಾಲದಲ್ಲಿ ಟಿಂಬರ್ ಸಾಗಣೆರಸ್ತೆಯಿಂದ ರಸ್ತೆ ಹಾಳು

ಕೊಪ್ಪ: ತಾಲೂಕಿನ ಅಸಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯಿಂದ ಮಳೆಗಾಲದಲ್ಲಿಯೇ ಟಿಂಬರ್‌ಗಳನ್ನು ಕಡಿದು ಸಾಗಿಸುತ್ತಿರುವುದರಿಂದ...

ನಗರಕ್ಕೆ ಎರಡು ದಿನಗಳ ಕಾಲ ಕುಡಿಯುವ ನೀರಿನ ಸರಬರಾಜು ಸ್ಥಗಿತ

ಚಿಕ್ಕಮಗಳೂರು: ನಗರದ ದಂಟರಮಕ್ಕಿ ವ್ಯಾಪ್ತಿಯಲ್ಲಿ 600 ಎಂಎಂ ಸಾಮರ್ಥ್ಯದ ಪ್ರಮುಖ ಕುಡಿಯುವ ನೀರಿನ ಕೊಳವೆ ಮಾರ್ಗ...

ಚಿಕ್ಕಮಗಳೂರು-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸಂಚಾರ ಸ್ಥಗಿತ…?

ಚಿಕ್ಕಮಗಳೂರು: ಮಲ್ಲಸಂದ್ರ ಮತ್ತು ಗುಬ್ಬಿ ರೈಲ್ವೆ ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಗೇಟ್ (LC-48) ಬದಲಿಗೆ...

ಅಣ್ಣ-ತಮ್ಮಂದಿರ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯ

ತರೀಕೆರೆ: ಮನೆಯಲ್ಲಿ ಆಟವಾಡುತ್ತಿದ್ದ ಮಗುವಿನ ಕೆನ್ನೆ ಊದಿಕೊಂಡಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಕ್ಷುಲ್ಲಕ ಕಾರಣಕ್ಕೆ ಅಣ್ಣ-ತಮ್ಮಂದಿರ ನಡುವೆ...