Home ಕಾಫಿ ತೋಟದ ಬದುಕಿನ ಬವಣೆ ಹೇಳಿತ್ತಿದೆ ಈ ಫೋಟೋ
Homenamma chikmagalur

ಕಾಫಿ ತೋಟದ ಬದುಕಿನ ಬವಣೆ ಹೇಳಿತ್ತಿದೆ ಈ ಫೋಟೋ

Share
Share

ಚಿಕ್ಕಮಗಳೂರು :

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನಲ್ಲಿ ಮಳೆ ಹೆಚ್ಚು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಇಲ್ಲಿನ ಬದುಕು ಕೂಡ ಅಷ್ಟೇ ಕಷ್ಟದಿಂದ ಇರುತ್ತದೆ. ಅದರಲ್ಲೂ ಕಾಫಿತೋಟದ ಕೆಲಸವನ್ನು ಹೇಳುವುದು ಅಸಾಧ್ಯ.
ಕಾಫಿತೋಟದ ಕೆಲಸಕ್ಕೆ ಬರುವ ಮಹಿಳೆಯರು ಪಡುವ ಕಷ್ಟ ವರ್ಣಿಸಲು ಬಲು ಕಷ್ಟ.

ಜಿಲ್ಲೆಗೆ ಹೊರ ರಾಜ್ಯದಿಂದ ಬರುವ ಕಾರ್ಮಿಕರ ಸಂಖ್ಯೆ ಪ್ರತಿ ವರ್ಷ ಹೆಚ್ಚಾಗುತ್ತಿದೆ. ಬಿಹಾರ, ಒರಿಸ್ಸಾ ನಾಗಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳಿಂದ ಕಾಫಿತೋಟದ ಕೆಲಸಗಳಿಗೆ ಮಕ್ಕಳ ಸಹಿತ ಬರುತ್ತಾರೆ. ಜಿಲ್ಲೆಗೆ ಬರುವವರ ಸಂಖ್ಯೆ ಎಷ್ಟು ಎಂಬುದು ತಿಳಿಯುವುದಿಲ್ಲ ಜೊತೆಗೆ ಇವರ ಪಕ್ಕಾ ವಿಳಾಸವೇ ಸಿಗುವುದಿಲ್ಲ ಇದರ ಮಧ್ಯೆ ಇವರಿಗೆ ಬರುವ ಖಾಯಿಲೆ ಅಪಘಾತ ತಿಳಿಯುವುದಿಲ್ಲ. ಇಲ್ಲಿನ ಅತಿಯಾದ ಮಳೆಗೆ ವಾತಾವರಣ ಹೊಂದಿಕೊಳ್ಳುವುದು ಕಷ್ಟ ಯಾರು ಸತ್ತರು ಮಾಹಿತಿ ಕೂಡ ಸಿಗುವುದಿಲ್ಲ. ದಿನಗೂಲಿ ಲೆಕ್ಕದಲ್ಲಿ ಬರುವುದರಿಂದ ಯಾವ ಸೌಲಭ್ಯಗಳನ್ನು ಪಡೆಯಲು ಸಾಧ್ಯವಿಲ್ಲ. ಬಹು ಸಂಕಷ್ಟದಿಂದ ಬದುಕಿದರೆ ಬದುಕಬೇಕು ಇಲ್ಲ ಎಂದರೆ ಗೋವಿಂದ.

ತೋಟದ ಕೆಲಸದಲ್ಲಿ ನಿರತರಾಗಿರುವ ತಾಯಿ ಮಗ ಮಳೆಯಲ್ಲಿ ಹೊಟ್ಟೆ ತುಂಬಿಸಿಕೊಳ್ಳಲು ಕಷ್ಟಪಡುತ್ತಾರೆ. ಬದುಕು ಜಟಾಕ ಬಂಡಿ ವಿಧಿ ಅದರ ಸಾಹೇಬ ಕದುರೆ ನೀನ್ ಅವನು ಪೇಳಿದಂತೆ ಪಯಣಿಗನು ಮದುವೇಗೋ ಮಸಣಕೋ ಹೋಗೆಂದ ಪದ ಕುಸಿಯ ನೆಲವಿವದು ಮಂಕುತಿಮ್ಮ. ಎಂಬ ಡಿವಿಜಿಯವರ ವಾಣಿಯಂತೆ
ಕಾರ್ಮಿಕರ ಮತ್ತು ಮಹಿಳಾ ಕಾರ್ಮಿಕರ ಬದುಕು ಕೂಡ ಹೊಟ್ಟೆ ತುಂಬಿಸಿಕೊಳ್ಳಲು ಮಗು ಜೊತೆಗೆ ತಾಯಿಯು ಮಳೆಯಲ್ಲಿ ತೋಯಲೇ ಬೇಕು. ಬಿಸಿಸಲಲ್ಲಿ ಒಣಗ ಬೇಕು ಕಾಫಿ ತೋಟದವರು ಶ್ರೀ ಮಂತರಾರದರು ಅಲ್ಲಿ ದುಡಿಯುವ ಜನರ ಬದುಕು ಕಷ್ಟ,ಕಷ್ಟ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...