ತರೀಕೆರೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಕೆಲವು ಸಂಘ ಸಂಸ್ಥೆಯವರು ಸ್ಥಳೀಯ ಶಾಸಕ ಶ್ರೀನಿವಾಸ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯ್ಕ್ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ. ಮೂರು ವರ್ಷಗಳು ಮೌನವಾಗಿದ್ದವರು ಇದ್ದಕ್ಕಿದ್ದಂತೆ ಪ್ರತಿಭಟನೆಗೆ ಮುಂದಾಗಿರುವುದು ಏಕೆ ?
ಶಾಸಕ ಶ್ರೀನಿವಾಸ್ ಗೆ ಧಿಕ್ಕಾರ,ಇನ್ಸ್ಪೆಕ್ಟರ್ ರಾಮಚಂದ್ರ ನಾಯ್ಕ್ ಗೆ ಧಿಕ್ಕಾರ ಎಂದು ಕೂಗಿದ್ದಾರೆ. ಅಕ್ರಮಗಳ ಚಟುವಟಿಕೆ , ಕಳಪೆ ಕಾಮಗಾರಿ ಮತ್ತು ಕುಟುಂಬ ರಾಜಕಾರಣಕ್ಕೆ ಪೊಲೀಸರು ಸರ್ಪಗಾವಲಾಗಿದ್ದಾರೆ ಎಂದು ಭಾಷಣ ಮಾಡಿದ್ದಾರೆ.
ಕಳೆದ ಮೂರು ವರ್ಷಗಳಿಂದ ತುಟಿ ಬಿಚ್ಚದವರು ಇದ್ದಕ್ಕಿದ್ದಂತೆ ಬೀದಿಗೆ ಇಳಿಯಲು ಕಾರಣವೇನು? ಎಂಬ ಪ್ರಶ್ನೆ ಸಹಜವಾಗಿದೆ. ಕಳೆದ ವಾರ ನಾಗಪ್ಪ ಕಾಲೋನಿ ಸಮೀಪ ಐದು ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗತ್ತಿದೆ ಇದು ಕಳಪೆ ಕಾಮಗಾರಿ ಎಂದು ಪುರಸಭಾ ಸದಸ್ಯ ಟಿ.ಎಂ.ಬೋಜ್ ರಾಜ್ ಕೆಲಸಕ್ಕೆ ತಡೆ ಒಡ್ಡಿದ್ದಾರೆ.
ತಕ್ಷಣ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯ್ಕ ಬಂದು ಬೀದಿಯಲ್ಲಿ ಕೂಗಾಡಿ ಧಮಕಿ ಹಾಕಿರುವುದರ ಹಿಂದೆ ಶಾಸಕರ ಕೈವಾಡ ಇದೇ ಎಂದು ಆರೋಪಿಸಿ ಪ್ರತಿಭಟನೆಗೆ ಕರೆ ಕೊಡಲಾಗಿತ್ತು.
ಶಾಸಕ ಶ್ರೀನಿವಾಸ್ ನಡೆಸುತ್ತಿರುವ ಆಡಳಿತದ ಬಗ್ಗೆ ಮಾಜಿ ಶಾಸಕ ಡಿ.ಎಸ್.ಸುರೇಶ್ ಮಾತನಾಡಿ ಕ್ಷೇತ್ರದಲ್ಲಿ ವಸೂಲಿ ಬಿಟ್ಟು ಮತ್ತೇನು ನಡೆಯುತ್ತಿಲ್ಲ. ಕಳಪೆ ಕಾಮಗಾರಿ, ನಕಲಿ ಬಿಲ್ ಗಳು ಪೊಲೀಸ್ ಕಾರ್ಯಭಾರದ ಬಗ್ಗೆ ಖಂಡಿಸಿ ಇನ್ನೂ ಮುಂದೆ ಹೋರಾಟ ಮಾಡುತ್ತೇವೆ ಎಂದಿದ್ದಾರೆ.
ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಟಿ.ಎಲ್.ರಮೇಶ್ ಮಾತಾನಾಡಿ ರಸ್ತೆ ಕಳಪೆ ಕಾಮಾಗಾರಿ ಕಳೆದ ಎರಡು ವರ್ಷಗಳಿಂದ ನಡೆಸಿ ವಸೂಲಿಗೆ ಇಳಿದಿರುವ ಶಾಸಕ ಶ್ರೀನಿವಾಸ್ ಮತ್ತು ಕುಟುಂಬ ಅಕ್ರಮ ಗಾಣಿಗಾರಿಕೆ, ಬ್ರಾಂಡಿ ಶಾಪ್ ಗಳಲ್ಲಿ ಪಾಲುದಾರಿಕೆ,ಇಸ್ಪೀಟು ,ಮಟ್ಕಾ ದಂಧೆ ಗೆ ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯ್ಕ ಟೊಂಕ ಕಟ್ಟಿಕೊಂಡು ನಿಂತಿದ್ದಾನೆ.ಹಲವರ ಮೇಲೆ ವಿನಾಕಾರಣ ದೂರು ದಾಖಲಿಸಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದು ನನ್ನ ಮೇಲೆ ದೂರು ದಾಖಲಿಸಿದ್ದಾರೆ ತಕ್ಷಣ ಇವರನ್ನು ಅಮಾನತು ಮಾಡಿ ತನಿಖೆ ನಡೆಸಲು ಆಗ್ರಹಿಸಿದರು.
ಪುರಸಭಾ ಸದಸ್ಯ ಬೋಜ್ ರಾಜ್ ಮಾತನಾಡಿ ತರೀಕೆರೆ ಕ್ಷೇತ್ರದಲ್ಲಿ ತುರ್ತುಪರಿಸ್ಥಿತಿ ಇದೆಯೇ ಜನಪ್ರತಿನಿಧಿಯಾಗಿ ನಾನು ಪ್ರಶ್ನೆ ಮಾಡಿದರೆ ಮನೆಯ ಬಳಿ ಪೊಲೀಸರನ್ನು ಕಳುಹಿಸಿ ಕೂಗಾಡುವಂತೆ ಮಾಡಿದ್ದಾರೆ. ರಸ್ತೆ,ಚರಂಡಿ, ಸೇತುವೆಗಳ ಹೆಸರಿನಲ್ಲಿ ಅಕ್ರಮವಾಗಿ ಬಿಲ್ ಮಾಡಲಾಗಿದೆ ಈ ಬಗ್ಗೆ ತನಿಖೆ ನಡೆಸಲು ಒತ್ತಾಯ ಮಾಡಿದರು.
ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಆರ್.ಕೃಷ್ಣಮೂರ್ತಿ, ಅಜ್ಜಂಪುರ ಪಟ್ಟಣ ಪಂಚಾಯಿತಿ ಅಧ್ಯಕ್ಷ ರೇವಣ್ಣ,ಅರುಂಧತಿ, ಮತ್ತಿತರರು ಮಾತನಾಡಿದರು. ತರೀಕೆರೆ ಕ್ಷೇತ್ರಕ್ಕೆ ತನ್ನದೇ ಆದ ಇತಿಹಾಸ ಇದೆ.ಈಗ ನಡೆಯುತ್ತಿರುವ ಘಟನೆಗಳನ್ನು ನೋಡಿ ಜನ ಥೂ,ಚೀ ಎಂದು ಉಗಿಯುತ್ತಿರುವುದು ಮಾತ್ರ ಕಂಡು ಬರುತ್ತಿದೆ.
Why are you suddenly protesting after 3 years of silence?
Leave a comment