Home namma chikmagalur chikamagalur ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನ ತೀರ್ಥಂಕರ ವಿಗ್ರಹ ಪತ್ತೆ
chikamagalurHomeLatest Newsnamma chikmagalur

ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನ ತೀರ್ಥಂಕರ ವಿಗ್ರಹ ಪತ್ತೆ

Share
Share

ಚಿಕ್ಕಮಳೂರು: ಕಡೂರು ತಾಲ್ಲೂಕಿನ ದೊಡ್ಡ ಪಟ್ಟಣಗೆರೆ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ಕುರುಬಗೆರೆ ಶ್ರೀಕಟ್ಟೆ ಹೊಳೆಯಮ್ಮ ದೇವಾಲಯದ ಎಡಭಾಗದಲ್ಲಿ ಹರಿಯುವ ವೇದಾ ನದಿ ಪಾತ್ರದಲ್ಲಿ, ಹೊಯ್ಸಳರ ಕಾಲದ ಎರಡು ಅಪ್ರಕಟಿತ ಜೈನ ತೀರ್ಥಂಕರ ವಿಗ್ರಹಗಳನ್ನು ಇತಿಹಾಸ ಸಂಶೋಧಕ ಕಳಸದ ಎಚ್.ಆರ್. ಪಾಂಡುರಂಗ ಶೋಧನೆ ಮಾಡಿದ್ದಾರೆ.

ಈ ಶಿಲಾ ವಿಗ್ರಹಗಳಲ್ಲಿ ಬಲಭಾಗದ ಮೊದಲನೆಯ ವಿಗ್ರಹವು ಸಿಂಹಪೀಠದ ಮೇಲೆ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದು, ಹಿಂಭಾಗದಲ್ಲಿ ಇಬ್ಬರು ಚಾಮರಧಾರಿಗಳ ಶಿಲ್ಪಗಳಿವೆ. ವಿಗ್ರಹದ ಮುಖದ ಮುಂಭಾಗ ಸವೆದಿದೆ. ಬಳಪದ ಕಲ್ಲಿನ ಈ ವಿಗ್ರಹವು ೧.೩೪ ಮೀಟರ್ ಎತ್ತರ ಹಾಗೂ ೦.೯೦ ಮೀಟರ್ ಅಗಲವಿದೆ. ವಿಗ್ರಹವನ್ನು ಸ್ಥಳೀಯರು ಮೊದಲಿನಿಂದಲೂ ಸಂತಾನ ಫಲ ನೀಡುವ ‘ಗಂಗಮ್ಮ’ ಎಂದು ಕರೆಯುತ್ತಿದ್ದು, ಮಕ್ಕಳಿಲ್ಲದ ಸ್ತ್ರೀಯರು ಈ ವಿಗ್ರಹವನ್ನು ಶ್ರದ್ಧೆ ಹಾಗೂ ಭಕ್ತಿಯಿಂದ ಬೆಳಗಿನ ಜಾವ ಪೂಜೆ ಮಾಡುವುದರಿಂದ ಸಂತಾನ ಭಾಗ್ಯ ದೊರೆಯುತ್ತದೆ ಎಂಬ ನಂಬಿಕೆಯಿಂದ ಈಗಲೂ ಪೂಜಿಸುತ್ತಿದ್ದಾರೆ. ವಿಗ್ರಹದ ಶಿಲ್ಪ ಲಕ್ಷಣದ ಆಧಾರದ ಮೇಲೆ ಇದು ಹೊಯ್ಸಳರ ಕಾಲದ ತೀರ್ಥಂಕರ ವಿಗ್ರಹವೆಂದು ಸಂಶೋಧಕ ಪಾಂಡುರಂಗ ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದು ವಿಗ್ರಹವು ಪದ್ಮಾಸನ ಭಂಗಿಯಲ್ಲಿದ್ದು, ಹಿಂಭಾಗದ ಪ್ರಭಾವಳಿಯ ಎರಡೂ ಕಡೆ ನಿಂತಿರುವ ಸಿಂಹ ಹಾಗೂ ಗಜಮುಖದ ಶಿಲ್ಪಗಳಿವೆ. ಮೂರ್ತಿಯ ಹಿನ್ನೆಲೆಯಲ್ಲಿ ಸರ್ವಾಲಂಕೃತವಾದ ಚಾಮರಧಾರೀ ಪುರುಷರ ಶಿಲ್ಪಗಳಿವೆ. ವಿಗ್ರಹದ ತಲೆಯ ಮೇಲೆ ಮೂರು ಹಂತದ ಮುಕ್ಕೊಡೆ ಶಿಲ್ಪವಿದೆ. ಈ ವಿಗ್ರಹ ಬಹು ಸುಂದರವಾಗಿದ್ದು, ೧.೨೫ ಮೀಟರ್ ಎತ್ತರ ಹಾಗೂ ೦.೭೯ ಮೀಟರ್ ಅಗಲ ಹೊಂದಿದೆ. ಶಿಲ್ಪ ಲಕ್ಷಣದ ಆಧಾರದ ಮೇಲೆ ಈ ವಿಗ್ರಹವೂ ಹೊಯ್ಸಳರ ಕಾಲದ್ದಾಗಿದ್ದು, ತೀರ್ಥಂಕರ ವಿಗ್ರಹವೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಈ ಎರಡು ಜೈನ ತೀರ್ಥಂಕರ ವಿಗ್ರಹಗಳ ಲಭ್ಯತೆಯ ಹಿನ್ನೆಲೆಯಲ್ಲಿ ದೊಡ್ಡಪಟ್ಟಣಗೆರೆ ಪ್ರದೇಶವು ೧೨-೧೩ನೇ ಶತಮಾನದಲ್ಲಿ ಹೊಯ್ಸಳರ ಆಡಳಿತಕ್ಕೆ ಒಳಪಟ್ಟು, ದ್ವಿಕೂಟ ಜೈನಬಸದಿಯೊಂದು ಇದ್ದು ಆ ಬಸದಿಯ ಮೂಲನಾಯಕ ತೀರ್ಥಂಕರರದ್ದೇ ಈ ವಿಗ್ರಹಗಳಾಗಿರುವ ಸಾಧ್ಯತೆಗಳಿವೆ. ಕಾಲದ ಪ್ರಭಾವ ಹಾಗೂ ಮತಸಂಘರ್ಷಗಳ ಕಾರಣದಿಂದ ಬಸದಿ ನಾಶವಾಗಿದ್ದು, ಈ ವಿಗ್ರಹಗಳನ್ನು ವೇದಾ ನದಿಗೆ ಎಸೆದಿರುವ ಸಾಧ್ಯತೆಗಳಿವೆ. ಈ ವಿಗ್ರಹಗಳ ಪಾದಪೀಠದಲ್ಲಿ ಲಾಂಛನಗಳು ಲಭ್ಯವಿಲ್ಲದ ಕಾರಣ ಇವು ಯಾವ ತೀರ್ಥಂಕರ ವಿಗ್ರಹಗಳೆಂದು ಹೇಳಲು ಸಾಧ್ಯವಾಗುತ್ತಿಲ್ಲ ಮತ್ತು ಈ ವಿಗ್ರಹಗಳಿದ್ದ ಜೈನ ಬಸದಿ ಅಸ್ತಿತ್ವದ ಕುರಿತು ಹೆಚ್ಚಿನ ಸಂಶೋಧನೆ ನಡೆಸಿದ್ದೇನೆ ಎಂದು ಎಚ್.ಆರ್. ಪಾಂಡುರಂಗ ತಿಳಿಸಿದ್ದಾರೆ.

ಕಟ್ಟೆಹೊಳೆಯಮ್ಮ ದೇವಾಲಯದ ಆಡಳಿತ ಮಂಡಳಿ ಪ್ರಮುಖರಾದ ಎಸ್.ಬಿ. ಹನುಮಂತಪ್ಪ ಮತ್ತು ಕೆ.ಎಂ. ಮಲ್ಲೇಶಪ್ಪ ಹಾಗೂ ದೇವಾಲಯದ ಅರ್ಚಕ ಟಿ. ಆನಂದ್ ಅವರು ಈ ತೀರ್ಥಂಕರ ವಿಗ್ರಹಗಳ ಶೋಧನಾ ಕ್ಷೇತ್ರ ಕಾರ್ಯದಲ್ಲಿ ಸಹಕಾರ ನೀಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Two unpublished Jain Tirthankara idols from the Hoysala period discovered

Share

Leave a comment

Leave a Reply

Your email address will not be published. Required fields are marked *

Don't Miss

ಮುಸ್ಲಿಂ ಕುಟುಂಬ ಇಲ್ಲದ ಬಿ. ಹೊಸಹಳ್ಳಿ ಗ್ರಾಮದಲ್ಲಿ ಮೊಹರಂ ಆಚರಣೆ

ಚಿಕ್ಕಮಗಳೂರು: ಕಾಫಿನಾಡಿನ ಮೂಡಿಗೆರೆ ತಾಲ್ಲೂಕಿನ ಬಿ. ಹೊಸಹಳ್ಳಿ ಗ್ರಾಮದಲ್ಲಿ ಈ ಬಾರಿಯ ಮೊಹರಂ ಹಬ್ಬವು ಭಕ್ತಿ, ಸಂಭ್ರಮ ಹಾಗೂ ಅಭೂತಪೂರ್ವ ಕೋಮು ಸೌಹಾರ್ದತೆಗೆ ಸಾಕ್ಷಿಯಾಗಿದೆ. ಸುಮಾರು 100 ವರ್ಷಗಳ ಸುದೀರ್ಘ ಇತಿಹಾಸ...

ಜಿಲ್ಲಾ ಆಟದ ಮೈದಾನದ ಬಳಿ ಎ.ಎಸ್.ಐ ಮೇಲೆ ಹಲ್ಲೆ

ಚಿಕ್ಕಮಗಳೂರು: ಜಿಲ್ಲಾ ಆಟದ ಮೈದಾನದ ಗೇಟ್ ಮುಂಭಾಗದ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಹೀಂದ್ರ ಥಾರ್ ಜೀಪನ್ನು ಅಡ್ಡವಾಗಿ ನಿಲ್ಲಿಸಿ ಗಲಾಟೆ ಮಾಡಿಕೊಳ್ಳುತ್ತಿದ್ದ ಇಬ್ಬರು ವ್ಯಕ್ತಿಗಳು, ಬುದ್ದಿ ಹೇಳಲು ಹೋದ ಎ.ಎಸ್.ಐ ಭುವನೇಶ್...

Related Articles

ಧರ್ಮಸ್ಥಳ ಸಂಘದ ಸಾಲದ ವಿಚಾರ-ದಂಪತಿಗಳ ಮೇಲೆ ದೊಣ್ಣೆಗಳಿಂದ ಹಲ್ಲೆ

ಶೃಂಗೇರಿ: ಧರ್ಮಸ್ಥಳ ಸಂಘದ ಸಾಲದ ವಿಚಾರವಾಗಿ ಉಂಟಾದ ಸಣ್ಣ ಭಿನ್ನಾಪ್ರಾಯ ವಿಕೋಪಕ್ಕೆ ತಿರುಗಿ, ದಂಪತಿಗಳ ಮೇಲೆ...

ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟ ಪ್ರದರ್ಶಿಸಿ

ಚಿಕ್ಕಮಗಳೂರು: ಕೃಷಿಯನ್ನೇ ಅವಲಂಬಿಸಿರುವ ರೈತರು ಒಗ್ಗಟ್ಟಿನ ಮಂತ್ರ ಪಠಿಸಬೇಕು. ಪರಸ್ಪರ ಒಡೆದಾಳುವ ನೀತಿ ಅನುಸರಿಸಿದರೆ, ಸರ್ಕಾರಗಳು...

ಜಿಲ್ಲೆಯಲ್ಲಿ 43 ಸಾವಿರಕ್ಕೂ ಹೆಚ್ಚು ಪ್ರಕರಣ ಬಾಕಿ

ಚಿಕ್ಕಮಗಳೂರು: ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಲು ಜುಲೈ ೧೧...

ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಗವನಹಳ್ಳಿ ಶಾಲೆಯ ಬಳಿ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಒನ್-ವೇನಲ್ಲಿ (ಏಕಮುಖ...