Home namma chikmagalur chikamagalur ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು
chikamagalurHomeLatest Newsnamma chikmagalur

ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು

Share
Share

ಚಿಕ್ಕಮಗಳೂರು: ಪ್ರತಿಯೋಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಿ ಪ್ರತಿನಿತ್ಯ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಹಾಗೂ ಯೋಗ, ಧ್ಯಾನದ ಮೂಲಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಶಾಸಕ ಹೆಚ್.ಡಿ ತಮ್ಮಯ್ಯ ತಿಳಿಸಿದರು.

ನಗರದ ಉರ್ದು ಶಾಲೆ ಆವರಣದಲ್ಲಿ ನ್ಯಾಶನಲ್ ವೆಲೇರ್ ಮತ್ತು ಚಾರಿಟೆಬಲ್ ಟ್ರಸ್ಟ್ ಹಾಗೂ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದಿಂದ ಭಾನುವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯಿಂದ ಕಳೆದ ೧೧ ವರ್ಷದಿಂದ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡಿ ಗುಣಮಾಡಿದ್ದಾರೆ. ಆರೋಗ್ಯವೇ ಭಾಗ್ಯ, ಆರೋಗ್ಯ ಒಂದಿದ್ದರೆ ಮುಂದಿನದನ್ನು ದೇವರು ಕೊಡುತ್ತಾನೆ. ಯಾವುದೇ ಸ್ವಾರ್ಥವಿಲ್ಲದೆ ಟ್ರಸ್ಟ್ ನ ಎಲ್ಲ ಪದಾಕಾರಿಗಳು ಬಡವರ ಆರೋಗ್ಯಕ್ಕಾಗಿ ದುಡಿಯುತ್ತಿರುವುದು ಒಳ್ಳೆಯ ಕೆಲಸ. ಈ ಸಂಸ್ಥೆಯಲ್ಲಿ ವೈದ್ಯರು ವೃತ್ತಿಯನ್ನು ಸೇವೆ ಎಂದು ಭಾವಿಸಿ ಮಾಡುತ್ತಿದ್ದಾರೆ ಎಂದ ಅವರು ಮುಂದಿನ ದಿನಗಳಲ್ಲಿ ಜಿಲ್ಲೆಯಿಂದ ಕಣಚೂರು ಮೆಡಿಕಲ್ ಆಸ್ಪತ್ರೆಗೆ ಹೋಗುವವರಿಗೆ ಒಂದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.

ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷ ಡಾ.ಯು.ಕೆ.ಮೋಣು ಮಾತನಾಡಿ ನಮ್ಮ ಸಂಸ್ಥೆ ಬರಿ ಮುಸಲ್ಮಾನರಿಗೆ ಸೀಮಿತವಾಗಿಲ್ಲ. ಸಮಾಜದ ಎಲ್ಲ ವರ್ಗದ ಜನರಿಗೆ ಈ ಆಸ್ಪತ್ರೆಯ ಉಪಯೋಗ ಪಡೆಯಬೇಕು. ಹಣವಿಲ್ಲದೆ, ಔಷಧಿ, ಚಿಕಿತ್ಸೆ ದೊರೆಯದೆ ಯಾರೂ ಮರಣ ಹೊಂದಬಾರದು ಎಂಬ ಉದ್ದೇಶದಿಂದ ಏನೂ ಇಲ್ಲದ ಅನಾಥರು, ಹಿಂದೆ ಮುಂದೆ ಇಲ್ಲದವರು ಆನಾರೋಗ್ಯ ಉಂಟಾದಲ್ಲಿ ನ್ಯಾಶನಲ್ ವೆಲೇರ್‌ಚಾರಿಟೆಬಲ್ ಟ್ರಸ್ಟ್ ಮೂಲಕ ನಮ್ಮ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದರು.

ಟ್ರಸ್ಟ್ ಅಧ್ಯಕ್ಷ ಹಾಫೀಝ್ ಮೊಹಮ್ಮದ್ ರಿಯಾಜ್ ಖಾನ್ ಮಾತನಾಡಿ ಈ ಶಿಬಿರದಲ್ಲಿ ನುರಿತ ವೈದ್ಯರು ತಪಾಸಣೆ ನೆಡೆಸಲಿದ್ದು ವೈದ್ಯಶಾಸ್ತ್ರ ತಜ್ಞರು, ಚರ್ಮ ರೋಗ ತಜ್ಞರು, ಶಸ್ತ್ರ ಚಿಕಿತ್ಸಾ ತಜ್ಞರು, ಮಕ್ಕಳ ತಜ್ಞರು, ಮೂಳೆ, ಕಿವಿ, ಮೂಗು, ಗಂಟಲು ತಜ್ಞರು, ಶ್ವಾಸಕೋಶ ತಜ್ಞರು ಹಾಗೂ ಸ್ತ್ರೀ ರೋಗ ಮತ್ತು ಪ್ರಸೂತಿ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಭಾಗವಹಿಸುವ ಸುಮಾರು ೧೫೦೦ ಬಡವರಿಗೆ ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಶಸ್ತ್ರ ಚಿಕಿತ್ಸೆ ನೀಡಲು ಗುರಿ ಹೊಂದಲಾಗಿದೆ ಶಿಬಿರದಲ್ಲಿ ಪಾಲ್ಗೋಳ್ಳುವ ಎಲ್ಲರಿಗೂ ಕಣಚೂರು ಕ್ಯಾಂಪ್ ಕಾರ್ಡನ್ನು ನೀಡಲಾಗುವುದು ಅಲ್ಲದೇ ಅಭಾ ಕಾರ್ಡನ್ನು ಉಚಿತವಾಗಿ ಆಧಾರ್ ಕಾರ್ಡ್ ಪ್ರತಿ ನೀಡಿದವರಿಗೆ ಕೊಡಲಾಗುವುದು ಎಂದು ಹೇಳಿದರು.

ನ್ಯಾಷನಲ್ ವೆಲ್ಫೇರ್ ಅಂಡ್ ಚಾರಿಟಬಲ್ ಟ್ರಸ್ಟ್ ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ವೈದ್ಯಕೀಯ ಸೇವೆ, ಬಡವರಿಗೆ ಉಚಿತ ಆರೋಗ್ಯ ತಪಾಸಣೆ, ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ನೀಡಲಾಗುತ್ತಿದ್ದು, ಕಡಿಮೆ ದರದಲ್ಲಿ ಟ್ರಸ್ಟ್ ವತಿಯಿಂದ ಆಂಬುಲೆನ್ಸ್ ಸೇವೆಯನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

. ಮಾಜಿ ಸಚಿವ ಸಗೀರ್ ಅಹ್ಮದ್, ಕೆಪಿಸಿಸಿ ವಕ್ತಾರ ಎಚ್.ಎಚ್.ದೇವರಾಜ್ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ರಿಯಾಜ್ ಖಾನ್ ಮತ್ತು ಪದಾಕಾರಿಗಳು, ಸಿಪಿಐ ಮುಖಂಡ ಅಮ್ಜದ್, ಜೆಡಿಎಸ್ ಮುಖಂಡ ನಿಸಾರ್, ನಗರಸಭೆ ಸದಸ್ಯ ಶಾದಾಬ್ ಅಲಂಖಾನ್, ಆಶ್ರಯ ಸಮಿತಿ ಸದಸ್ಯ ಫೈಯಾಜ್ ಅಹ್ಮದ್, ಸಿರಾಜ್ ಖಾನ್, ನಜೀರ್ ಅಹ್ಮದ್, ಎಂ.ಕೆ ನಿಸಾರ್. ಕಮಿಟಿ ಉಪಾಧ್ಯಕ್ಷ ಸೈಯದ್ ಗೌಸ್ ಮೋಹಿದ್ದೀನ್ ಶಾಖಾದ್ರಿ, ಕಾರ್ಯದರ್ಶಿ ಶಫೀಹುಲ್ಲಾ, ಅಫರಫ್ ನವಾಜ್, ಮೊಹಮ್ಮದ್ ಯೂನುಸ್ ಸಲೀಮ್, ಬಿ.ಎ ಅಕ್ಮಲ್, ಅಹ್ಮದ್ ಖುರುಶಿ, ಅನ್ವರ್‌ಆಲಿ, ಫರ್ವೀಜ್, ಅಸ್ಲಾಂ, ಫೈಯಾಜ್ ಅಹ್ಮದ್, ಮೊಹಮ್ಮದ್ ಜಿಯಾ, ನವೀದ್ ಪಾಶಾ, ರಫೀಕ್ ಅಹ್ಮದ್, ಸುಹೀಲ್ ತಾಜ್, ಮೊಹಮ್ಮದ್ ಇಶ್ರದ್ ಮತ್ತಿತರರು ಉಪಸ್ಥಿತರಿದ್ದರು.

Everyone should pay more attention to health.

Share

Leave a comment

Leave a Reply

Your email address will not be published. Required fields are marked *

Don't Miss

ರೈತರು-ಹೋರಿಗಳಿಗೂ ಅವಿನಾಭಾವ ಸಂಬಂಧ

ಚಿಕ್ಕಮಗಳೂರು:  ರೈತನಿಗೂ ಹಾಗೂ ಹೋರಿಗಳಿಗೂ ಅವಿನಾವಭಾವ ಸಂಬಂಧವಿದೆ. ಜೋಡೆತ್ತಿನ ಓಟದ ಸ್ಪರ್ಧೆ ರೈತರಿಗೆ ಮನರಂಜನೆ ಜೊತೆಗೆ ಕ್ರೀಡಾಸ್ಪೂರ್ತಿ ನೀಡುತ್ತಿದ್ದು ಯುವಜನತೆ ಹೆಚ್ಚು ಗ್ರಾಮೀಣ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು ಎಂದು ಸಿಡಿಎ ಮಾಜಿ ಅಧ್ಯಕ್ಷ...

ಇಳೆಹೊಳೆ ಗ್ರಾಮದಲ್ಲಿ ನಮ್ಮೂರ ಶಾಲೆ ಪ್ರತಿರೋಧ ಚಳವಳಿಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲೆಯ ಇಳೆಹೊಳೆ ಗ್ರಾಮದಲ್ಲಿ “ನಮ್ಮೂರ ಶಾಲೆ ನಮ್ಮಯ ಕಣ್ಮಣಿ” ಎಂದು ಹೆಸರಿರುವಬ್ಯಾನರ್ ಅನ್ನು ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು, ಪೋಷಕರು, ಗ್ರಾಮಸ್ಥರು ಹಾಗೂ ಶಿಕ್ಷಣ ಉಳಿಸಿ ಸಮಿತಿ ಸದಸ್ಯರು ಕಟ್ಟುವ ಮುಖಾಂತರ...

Related Articles

ಕುವೆಂಪು ಕಲಾಮಂದಿರದ ಕಾಂಪೌಂಡ್‌ಗೆ ಕೆಎಸ್ಆರ್ಟಿಸಿ ಬಸ್ ಡಿಕ್ಕಿ

ಚಿಕ್ಕಮಗಳೂರು: ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ರಾತ್ರಿ 9.30ರ ಸುಮಾರಿಗೆ ಪ್ರಯಾಣಿಕರನ್ನೆಲ್ಲ ಇಳಿಸಿದ ಬಳಿಕ ಬಸ್ ಅನ್ನು...

ಮೇ 23 ಕ್ಕೆ ಮೂಡಿಗೆರೆಯಲ್ಲಿ ರೈತರಿಗಾಗಿ “ನಮ್ಮ ಭೂಮಿ ನಮ್ಮ ಹಕ್ಕು” ಸಮಾವೇಶ. 

ಕಡೂರು:  ರೈತರ ಪರವಾಗಿ ಇರಬೇಕಾದ ಸರ್ಕಾರ ಅವರ ಬೆನ್ನೆಲುಬನ್ನೇ ಮುರಿಯಲು ಹೊರಟಂತಿದೆ, 2010 ರಿಂದ 2023...

ಬಿದರೆ ಗ್ರಾಮದ ಕೋಳಿ ಗೂಡಿನಲ್ಲಿ ಮೂರು ನಾಗರಹಾವು ಪತ್ತೆ

ಚಿಕ್ಕಮಗಳೂರು: ಅತಿಯಾದ ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಹಾಗೂ ಆಹಾರದ ಹುಡುಕಾಟದಲ್ಲಿದ್ದ ಮೂರು ನಾಗರ ಹಾವುಗಳು ಒಂದೇ...

ಚುನಾವಣಾ ಆಯೋಗ ಬಿಜೆಪಿ ಏಜೆಂಟ್ ಗಳನ್ನು ಸಾಕ್ಷಿಯಾಗಿ ಪರಿಗಣಿಸಬೇಕು

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ನೆಡೆದಿರುವ ಚುನಾವಣಾ ಅಕ್ರಮ ದೇಶದ ಇತಿಹಾಸದಲ್ಲಿ ಹಾಗೂ ಭವಿಷ್ಯದಲ್ಲಿ ಹಿಂದೆಂದಿಗೂ...