Home namma chikmagalur chikamagalur ನಗರದಲ್ಲಿ ಹಾಡುಹಗಲೇ ಶಿಕ್ಷಕಿಯ ಮಾಂಗಲ್ಯ ಸರ ಅಪಹರಣ
chikamagalurCrime NewsHomeLatest Newsnamma chikmagalur

ನಗರದಲ್ಲಿ ಹಾಡುಹಗಲೇ ಶಿಕ್ಷಕಿಯ ಮಾಂಗಲ್ಯ ಸರ ಅಪಹರಣ

Share
Share

ಚಿಕ್ಕಮಗಳೂರು: ಹಾಡುಹಗಲೇ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನಗರದ ಕೋಟೆಯಲ್ಲಿರುವ ಸೆಂಟ್ ಮೇರಿಸ್‌ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ,ಎಂ.ಪೂರ್ಣಿಮಾ ಸೋಮವಾರ ಶಾಲೆ ಮುಗಿಸಿಕೊಂಡು ಎಸ್ ಬಿಐ ಬ್ಯಾಂಕ್ ಗೆ ಹೋಗಲು ಕೋಟೆಯ ನಾಯ್ಡು ಮೆಸ್ ನಿಂದ ಎದುರು ಕೋರ್ಟ್ ಗೆ ಹೋಗುವ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.

ಕೋರ್ಟ್ ಕಡೆಯಿಂದ ಬೈಕ್ ನಲ್ಲಿ ಬಂದ ಇಬ್ಬರು, ಕುತ್ತಿಗೆಯಲ್ಲಿದ್ದ ಚಿನ್ನದ ಎರಡು ಎಳೆ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಂಡಿದ್ದಾನೆ. ಈ ವೇಳೆ ಅರ್ಧ ಭಾಗ ಮಾತ್ರ ಕಳ್ಳನ ಕೈ ಸೇರಿದೆ. ಉಳಿದರ್ಧ ಅಲ್ಲಿಯೇ ಕೆಳಗೆ ಬಿದ್ದಿದೆ.

ಕಿತ್ತುಕೊಂಡು ಹೋದ ಅರ್ಧ ಭಾಗ ಸರ ಸುಮಾರು 15 ಗ್ರಾಂ ತೂಕ ಇದ್ದು, ಅಂದಾಜು 2,10 ಲಕ್ಷ ರು, ಆಗಿದೆ. ಕಳ್ಳರನ್ನು ಪತ್ತೆ ಮಾಡಿ ಸರ ವಾಪಾಸ್‌ ಕೊಡಿಸುವಂತೆ ಶಿಕ್ಷಕಿ ಪೂರ್ಣಿಮಾ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ..

Teacher Mangalya Sara kidnapped in broad daylight in the city

Share

Leave a comment

Leave a Reply

Your email address will not be published. Required fields are marked *

Don't Miss

ಕ್ಷೇತ್ರ ಪುನರ್ ವಿಂಗಡಣೆ ಪಿಸು-ಪಿಸು, ಗುಸು-ಗುಸು !

ಚಿಕ್ಕಮಗಳೂರು: ಲೋಕಸಭಾ ಮತ್ತು ವಿಧಾನ ಸಭಾ ಕ್ಷೇತ್ರಗಳ ಪುನರ್ ವಿಂಗಡಿಸಿ ಹೊಸ ಕ್ಷೇತ್ರಗಳನ್ನು ರಚಿಸುವುದರ ಜೊತೆಗೆ ಮಹಿಳಾ ಮೀಸಲಾತಿ ನೀಡಲು ಏಪ್ರಿಲ್ ತಿಂಗಳ16 ರಂದು ಲೋಕಸಭೆಯ ವಿಶೇಷ ಅಧಿವೇಶನ ಕರೆಯಲಾಗಿದೆ ಲೋಕಸಭಾ...

ಕ‌ಳ್ಳನಿಂದ ಬೆಲೆಬಾಳುವ ‌ಡ್ರೈಪೂಟ್‌ಗಳ ಕಳವು

ಶೃಂಗೇರಿ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧವು ಇದೀಗ ಕಾಫಿನಾಡಿನ ವ್ಯಾಪಾರಸ್ಥರಿಗೂ ಬಿಸಿ ಮುಟ್ಟಿಸಿದೆ. ಯುದ್ಧದ ಹಿನ್ನೆಲೆಯಲ್ಲಿ ವಿದೇಶಗಳಿಂದ ಆಮದಾಗುವ ಡ್ರೈಫೂಟ್ಸ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಮಾರುಕಟ್ಟೆಯಲ್ಲಿ ಇವುಗಳ ಬೆಲೆ...

Related Articles

ಅಂಬೇಡ್ಕರ್ ಜಯಂತಿ ಮೆರವಣಿಗೆ ಮೇಲೆ ಅಪಘಾತ-ಬಾಲಕಿ ಸಾವು

ಚಿಕ್ಕಮಗಳೂರು: ನಗರದ  ಬಿಳೇಕಲ್ಲು ಗ್ರಾಮದಲ್ಲಿ ಅಂಬೇಡ್ಕರ್ ಜಯಂತಿ ಮೆರವಣಿಗೆ ವೇಳೆ ಭಾರೀ ಅಚಾತುರ್ಯ ಸಂಭವಿಸಿ ದುರ್ಘಟನೆ...

ನಕಲಿ “ಐ.ಎ.ಎಸ್” ಮಿಥುನ್ ಬಂಧನ

ಬೆಂಗಳೂರು: ಚಿಕ್ಕಮಗಳೂರು ಮೂಲದ ಮಿಥುನ್ ಎಂಬತಾ ಐ.ಎ.ಎಸ್.ನ ನಕಲಿ ದಾಖಲೆ ಸೃಷ್ಟಿ ಮಾಡಿ ಹಲವರಿಗೆ ವಂಚನೆ...

ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಉರುಳಾಗಿ ಬಾಲಕಿ ಸಾವು

ಚಿಕ್ಕಮಗಳೂರು: ಮನೆ ಒಳಗೆ ಜೋಕಾಲಿ ಆಡುತ್ತಿದ್ದ ವೇಳೆ ಸೀರೆ ಉರುಳಾಗಿ ಕುತ್ತಿಗೆಗೆ ಸಿಲುಕಿದ ಪರಿಣಾಮ ಬಾಲಕಿ...

ಡಾ.ಅಂಬೇಡ್ಕರ್ ವಿಚಾರಧಾರೆಗಳು ವಿಶ್ವಕ್ಕೆ ದಾರಿದೀಪ

ಚಿಕ್ಕಮಗಳೂರು:  ೧೨ನೇ ಶತಮಾನದಲ್ಲಿ ಜಗಜ್ಯೋತಿ ಬಸವೇಶ್ವರರು ಕಂಡ ಸಮ ಸಮಾಜದ ಕನಸಿಗೆ, ೨೦ನೇ ಶತಮಾನದಲ್ಲಿ ಸಂವಿಧಾನ...