ಚಿಕ್ಕಮಗಳೂರು: ಹಾಡುಹಗಲೇ ಶಿಕ್ಷಕಿಯ ಕೊರಳಿಗೆ ಕೈ ಹಾಕಿ ಮಾಂಗಲ್ಯ ಸರವನ್ನು ಕಿತ್ತುಕೊಂಡು ಹೋದ ಘಟನೆ ಸೋಮವಾರ ಸಂಜೆ ಚಿಕ್ಕಮಗಳೂರು ನಗರದಲ್ಲಿ ನಡೆದಿದೆ.
ಈ ಕುರಿತು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನಗರದ ಕೋಟೆಯಲ್ಲಿರುವ ಸೆಂಟ್ ಮೇರಿಸ್ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸಿ,ಎಂ.ಪೂರ್ಣಿಮಾ ಸೋಮವಾರ ಶಾಲೆ ಮುಗಿಸಿಕೊಂಡು ಎಸ್ ಬಿಐ ಬ್ಯಾಂಕ್ ಗೆ ಹೋಗಲು ಕೋಟೆಯ ನಾಯ್ಡು ಮೆಸ್ ನಿಂದ ಎದುರು ಕೋರ್ಟ್ ಗೆ ಹೋಗುವ ರಸ್ತೆಯಲ್ಲಿ ನೆಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.
ಕೋರ್ಟ್ ಕಡೆಯಿಂದ ಬೈಕ್ ನಲ್ಲಿ ಬಂದ ಇಬ್ಬರು, ಕುತ್ತಿಗೆಯಲ್ಲಿದ್ದ ಚಿನ್ನದ ಎರಡು ಎಳೆ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಂಡಿದ್ದಾನೆ. ಈ ವೇಳೆ ಅರ್ಧ ಭಾಗ ಮಾತ್ರ ಕಳ್ಳನ ಕೈ ಸೇರಿದೆ. ಉಳಿದರ್ಧ ಅಲ್ಲಿಯೇ ಕೆಳಗೆ ಬಿದ್ದಿದೆ.
ಕಿತ್ತುಕೊಂಡು ಹೋದ ಅರ್ಧ ಭಾಗ ಸರ ಸುಮಾರು 15 ಗ್ರಾಂ ತೂಕ ಇದ್ದು, ಅಂದಾಜು 2,10 ಲಕ್ಷ ರು, ಆಗಿದೆ. ಕಳ್ಳರನ್ನು ಪತ್ತೆ ಮಾಡಿ ಸರ ವಾಪಾಸ್ ಕೊಡಿಸುವಂತೆ ಶಿಕ್ಷಕಿ ಪೂರ್ಣಿಮಾ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ..
Teacher Mangalya Sara kidnapped in broad daylight in the city
Leave a comment