Home namma chikmagalur ಜಾನಪದ ಸಿರಿ ಲಕ್ಷ್ಮೀದೇವಮ್ಮಗೆ ಸಿಗಲಿದೆಯಾ ರಾಜ್ಯೋತ್ಸವ ಪ್ರಶಸ್ತಿ
namma chikmagalur

ಜಾನಪದ ಸಿರಿ ಲಕ್ಷ್ಮೀದೇವಮ್ಮಗೆ ಸಿಗಲಿದೆಯಾ ರಾಜ್ಯೋತ್ಸವ ಪ್ರಶಸ್ತಿ

Share
Share

ಚಿಕ್ಕಮಗಳೂರು : ಜಾನಪದ ಕ್ಷೇತ್ರದಲ್ಲಿ ಮುಗುಳಿ ಲಕ್ಮೀದೇವಮ್ಮನವರ ಹೆಸರು ನಾಡಿನಲ್ಲಿ ಚಿರಪರಿಚಿತ. ಲಕ್ಷೀದೇವಮ್ಮನವರಿಗೆ ಈಗ ಎಪ್ಪತ್ತೈದು ವರ್ಷಗಳ ಸನಿಹ ಹಾಡಲು ನಿಂತರೆ ಇಪ್ಪತೈದರ ಹರೆಯದಂತ ಧ್ವನಿ ಯಾರಪ್ಪ ಇವರು ಎಂದು ಕಿವಿಯಾಲಿಸುವ ಜನ.ಇಳಿ ವಯಸ್ಸಿನಲ್ಲೂ ಹರೆಯದವರಂತೆ ಕಾರ್ಯಗಳಲ್ಲಿ ಹಾಡುತ್ತಾ ಇದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲ್ಲೂಕಿನ ಮುಗುಳಿ ಎಂಬ ಗ್ರಾಮದ ಹಿಂದುಳಿದ ಕುಟುಂಬದಲ್ಲಿ ತಂದೆ,ತಾಯಿ,ಅಣ್ಣನ ಜೊತೆಗೆ ಬಾಲ್ಯದಲ್ಲಿ ಭಜನೆ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಹಾಡಿನ ಜಾಡು ಹಿಡಿದವರು.
ಭಜನೆ,ಕೋಲಾಟ,ಲಾವಣಿ,ಸೋಬಾನೆ ಗೀತೆಗಳು,ಬಿಸೇಕಲ್ಲು ಹಾಡಿನ ಜೊತೆಗೆ ಜಾನಪದ ಗೀತೆಗಳನ್ನು ಹಾಡಿದ್ದಾರೆ ಹಾಡುತ್ತಿದ್ದಾರೆ.

1981 ರಲ್ಲಿ ಮುಗಳಿಯಲ್ಲಿ ಅರುಣೋದಯ ಯುವತಿ ಮಂಡಳಿ ಸ್ಥಾಪಿಸಿ ಅಕ್ಷರ ಅಭ್ಯಾಸ ಮತ್ತು ಹಾಡುಗಾರಿಕೆ ಕಲಿಸಿರುವ ಇವರಿಗೆ ಜಾನಪದಾ ಅಕಾಡೆಮಿ ಪ್ರಶಸ್ತಿ ಸೇರಿದಂತೆ ನಾಡಿನ ಸಾವಿರಾರು ಪ್ರಶಸ್ತಿ ಮತ್ತು ಗೌರವ ದೊರೆತಿವೆ.
ಜಿಲ್ಲೆಯಲ್ಲಿ ಪ್ರಾರಂಭವಾದ ಅಕ್ಷರ ಧಾರ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಇವರು ಕೇರಳ ಮತ್ತು ಗೋವಾದಲ್ಲಿ ನಡೆದ ಅಂತರರಾಷ್ಟ್ರೀಯ ತರಭೇತಿಯನ್ನು ನೀಡಿದ್ದಾರೆ ಜಾನಪದ ಅಕಾಡೆಮಿ ಸದಸ್ಯರಾಗಿದ್ದ ಈ ಹಿರಿಯ ಜೀವಕ್ಕೆ ನಾಡಿನ ರಾಜ್ಯೋತ್ಸವ ಪ್ರಶಸ್ತಿ ಸಿಗಲಿಲ್ಲ ಎಂಬ ಕೊರಗಿದೆ.ಹಳ್ಳಿಯಿಂದ ದಿಲ್ಲಿವರೆಗೆ ಕಲೆಯಲ್ಲಿ ತೊಡಗಿಸಿಕೊಂಡ ಲಕ್ಮೀದೇವಮ್ಮನವರಿಗೆ ರಾಜ್ಯ ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಜ್ಞಾನವಿದ್ದರೆ ಸ್ಪಂದಿಸಿ ಇವರ ಆಯ್ಕೆ ಮಾಡಿದರೆ ಅರ್ಹರನ್ನು ಗುರುತಿಸಿದ ಸಾರ್ಥಕತೆಗೆ ಭಾಜನರಾಗುತ್ತಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...