Home namma chikmagalur chikamagalur ಮೇ 17ಕ್ಕೆ ಮುಂಡಾಲ ಸಮಾಜದ ತಾಲೂಕು ಸಮ್ಮೇಳನ
chikamagalurHomeLatest Newsnamma chikmagalur

ಮೇ 17ಕ್ಕೆ ಮುಂಡಾಲ ಸಮಾಜದ ತಾಲೂಕು ಸಮ್ಮೇಳನ

Share
Oplus_153223168
Share

ಚಿಕ್ಕಮಗಳೂರು: ಕೈಮರ ಸಮೀಪದ ದಾಸರಹಳ್ಳಿಯ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮುಂಡಾಲ ಸಮಾಜದ ಚಿಕ್ಕಮಗಳೂರು ತಾಲೂಕು ಸಮಿತಿಯಿಂದ ಮೇ ೧೭ರಂದು ಮುಂಡಾಲ ಸಮಾಜದ ತಾಲೂಕು ಮಹಾಸಭೆ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ಮುಂಡಾಲ ಸಮಾಜದ ಜಿಲ್ಲಾಧ್ಯಕ್ಷ ವೈ.ಜೆ.ಸುರೇಶ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿ, ಸಂಘದ ಉದ್ದೇಶ, ಸಮಾಜದ ಸರ್ವ ಸದಸ್ಯರುಗಳಿಗೆ ಸಂಘಟನೆಯಿಂದ ಆಗುವ ಪ್ರಯೋಜನ, ಸಂಘದ ಏಳಿಗೆಗೆ ಮುಂದೆ ಮಾಡಬೇಕಾದ ಸಮಾಜಮುಖಿ ಕೆಲಸ ಕಾರ್ಯಗಳ ಬಗ್ಗೆ ಕಾರ್ಯಕ್ರಮದಲ್ಲಿ ತಿಳಿಸಲಾಗುವುದು. ಮುಂದೆ ಮುಂಡಾಲ ಸಮಾಜದ ಎಲ್ಲಾ ಸದಸ್ಯರು, ಸಮಾಜ ಬಾಂಧವರು ಒಟ್ಟಾಗಿ ಸೇರಿ ಸಂಘಟನೆ ಮುನ್ನಡೆಸಿಕೊಂಡು ಹೋಗುವುದರೊಂದಿಗೆ ಸಂಘದ ಏಳಿಕೆಗೆ ಒಂದಾಗಿ ಶ್ರಮಿಸಬೇಕಿದೆ ಎಂದು ಹೇಳಿದರು.

ಅಂದು ಬೆಳಿಗ್ಗೆ ೯.೩೦ಕ್ಕೆ ಮಹಾಸಭೆ ಸಮ್ಮೇಳನವನ್ನುಕಚ್ಚೂರು ಕ್ಷೇತ್ರದ ಧರ್ಮದರ್ಶಿ ಗೋಕುಲ್‌ದಾಸ್ ಉದ್ಘಾಟಿಸುವರು.ಮುಂಡಾಲ ಸಮಾಜದ ತಾಲೂಕು ಅಧ್ಯಕ್ಷ ವಿಜಯಕುಮಾರ್ ಅಧ್ಯಕ್ಷತೆವಹಿಸುವರು.ಸಮಾಜದ ಜಿಲ್ಲಾಗೌರವಾಧ್ಯಕ್ಷ ಜೆ.ಸಿ.ಲಕ್ಷ್ಮಣ ಪ್ರಾಸ್ತಾವಿಕವಾಗಿ ಮಾತನಾಡುವರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವೆ ಕೆ.ಜೆ.ಜಾರ್ಜ್,ಸಂಸದ ಕೋಟಶ್ರೀನಿವಾಸಪೂಜಾರಿ, ಶಾಸಕ ಹೆಚ್.ಡಿ.ತಮ್ಮಯ್ಯ, ವಿಧಾನಪರಿಷತ್ ಸದಸ್ಯರಾದ ಎಸ್.ಎಲ್.ಭೋಜೇಗೌಡ, ಸಿ.ಟಿ.ರವಿ, ವಿಧಾನಪರಿಷತ್ ಮಾಜಿ ಸದಸ್ಯೆ ಗಾಯತ್ರಿಶಾಂತೇಗೌಡ ಸಿಡಿಎ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಮಲ್ಲೇಶ್ವರ ಎಸ್ಟೇಟ್‌ನ ಮಿಥನ್ ಭಾಗವಹಿಸುವರೆಂದರು.

ಬಿಜೆಪಿ ಮುಖಂಡ ಅನಿಲ್‌ಕುಮಾರ್, ದಾಸರಹಳ್ಳಿ ಪಂಚಾಯಿತಿ ಮಾಜಿ ದಸ್ಯ ಎಂ.ಟಿ.ಸತೀಶ್, ವಿವಿಧ ಸಂಘಟನೆ ಮುಖಂಡರಾದ ಪಿ.ಸಿ.ರಾಜೇಗೌಡ, ಡಿ.ಸುರೇಶ್, ದಾನೇಶ್,ಜೆ.ಡಿ.ಲೋಕೇಶ್, ಚನ್ನಕೇಶವ, ಮಂಜುನಾಥ, ಡಿ.ವಿ.ಸಂಜಯ್, ಬಿ.ಎಲ್.ಪ್ರವೀಣ್, ಈಶ್ವರ್, ಟಿ.ಎಸ್.ಶಿವಕುಮಾರ್, ದೀಪಕ್, ಅವಿಲಚಂದ್ರಶೇಖರ್, ಚಂದ್ರು, ವಿನೋದನಾಗೇಶ್, ಮಂಜುನಾಥ, ಲಲಿತಶಂಕರ್, ಲಕ್ಷ್ಮಣ್, ಶಾರದಗೋಪಾಲ್, ಜಯಲಕ್ಷ್ಮಿ, ವಸಂತಪ್ರಮೋದ್, ಅಕ್ಷತಾಸುರೇಶ್, ಎಂ.ಎಸ್.ರಾಜಪ್ಪ, ಹರೀಶ್, ಸತೀಶ್, ಚರಣ್, ಎಂ.ಟಿ.ಗುರುರಾಜ್, ಸುಜಾತಕೃಷ್ಣಪ್ಪ ಇದ್ದರು.

Mundala Samaj Taluk Conference on May 17th

Share

Leave a comment

Leave a Reply

Your email address will not be published. Required fields are marked *

Don't Miss

ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ

ಚಿಕ್ಕಮಗಳೂರು: ಬಾಲ್ಯ ವಿವಾಹಕ್ಕೆ ನಿಷೇಧವಿದ್ದರೂ, ರಹಸ್ಯವಾಗಿ ಅಪ್ರಾಪ್ತರ ಮದುವೆ ನಡೆದರೆ ಪೋಕ್ಸೋ ಕಾಯಿದೆಯಡಿಯಲ್ಲೂ ಪ್ರಕರಣ ದಾಖಲಿಸುವಂತೆ ಚಿಕ್ಕಮಗಳೂರು ತಹಶೀಲ್ದಾರ್ ರೇಶ್ಮಾ ಸೂಚಿಸಿದ್ದಾರೆ. ಅವರು ಮಂಗಳವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು...

ಜೀವರಾಜ್ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ ದಾಖಲಾದ ಎಫ್‌ಐಆರ್‌ಗೆ ಕರ್ನಾಟಕ ಹೈಕೋರ್ಟ್ ತಾತ್ಕಾಲಿಕ ತಡೆ ನೀಡಿದೆ. ಬಿಜೆಪಿ ಶಾಸಕ ಡಿ.ಎನ್. ಜೀವರಾಜ್...

Related Articles

ಹೃದಯಾಘಾತದಿಂದ ಶೃಂಗೇರಿಯ ಪಿ.ಸಿ. ಸತೀಶ್ ನಿಧನ

ಚಿಕ್ಕಮಗಳೂರು: ಶೃಂಗೇರಿ ಇಆರ್‌ಎಸ್‌ಎಸ್ (ERSS) ರೆಸ್ಪಾಂಡರ್ ಪಿ.ಸಿ. 612 ಸತೀಶ್ ಅವರು ಇಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಹಾಜರಾಗಲು...

ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಕ್ಕೆ ನೂತನ ಕಾರ್ಯಕಾರಿಸಮಿತಿ ಸದಸ್ಯರ ಆಯ್ಕೆ

ಚಿಕ್ಕಮಗಳೂರು : ನಗರದ ರತ್ನಗಿರಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಕ್ಕೆ ಕಾರ್ಯಕಾರಿಸಮಿತಿ ಸದಸ್ಯರ ಆಯ್ಕೆಗಾಗಿ ಭಾನುವಾರ...

ಜೀನವಸಂಧ್ಯಾದ ನವೀಕೃತ ಪಾಕಶಾಲೆ ಲೋಕಾರ್ಪಣೆ

ಚಿಕ್ಕಮಗಳೂರು: ಜೀನವಸಂಧ್ಯಾದಲ್ಲಿ ೩೫ಲಕ್ಷರೂ. ಅಂದಾಜುವೆಚ್ಚದ ನವೀಕೃತ ಪಾಕಶಾಲೆ ಮತ್ತು ಸಿಬ್ಬಂದಿ ವಸತಿಗೃಹವನ್ನು ರೋಟರಿಜಿಲ್ಲಾ ಮಾಜಿಗೌರ್‍ನರ್ ಎಂ.ಸಿ.ಶೇಖರ್...

ಮಲೆನಾಡು ಭಾಗದಲ್ಲಿ ವರುಣನ ಅಬ್ಬರ

ಮೂಡಿಗೆರೆ: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ವರುಣನ ಅಬ್ಬರ ಜೋರಾಗಿದ್ದು ಜಿಲ್ಲೆಯ ಹಲವೆಡೆ ಧಾರಾಕಾರ...