Home Political News ಶಾಸಕ ತಮ್ಮಯ್ಯ ಪದೇ ಪದೇ ಫಾರಿನ್ ಟೂರ್ : ಕಾರ್ಯಕರ್ತರಿಂದಲೇ ವಿರೋಧ
Political News

ಶಾಸಕ ತಮ್ಮಯ್ಯ ಪದೇ ಪದೇ ಫಾರಿನ್ ಟೂರ್ : ಕಾರ್ಯಕರ್ತರಿಂದಲೇ ವಿರೋಧ

Share
Share

ಚಿಕ್ಕಮಗಳೂರು : ಕ್ಷೇತ್ರದ ಶಾಸಕ ಎಚ್.ಡಿ.ತಮ್ಮಯ್ಯ ಫಾರಿನ್, ಫಾರಿನ್ ಫಾರಿನ್ ಎಂದು ಹೆಚ್ಚು ಪ್ರವಾಸ ಮಾಡುತ್ತಿರುವುದರ ಬಗ್ಗೆ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರುಗಳು ಬಹಿರಂಗವಾಗಿ ಟೀಕಿಸತೊಡಗಿದ್ದಾರೆ. ಶಾಸಕರಾದ ಮೇಲೆ ಕ್ಷೇತ್ರ ಮತ್ತು ಜನರ ಜೊತೆಗೆ ಹೆಚ್ಚಾಗಿ ಇರಬೇಕು ಆದರೆ ತಮ್ಮಯ್ಯಗೆ ಫಾರಿನ್ ಆಸೆ ಹುಟ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಕಾಂಗ್ರೆಸ್ ಮುಖಂಡರು ಜರಿಯುವುದು ನೋಡಿ ನಗು ಬರುತ್ತದೆ.

ತಮ್ಮಯ್ಯ ಒಂದು ಕಡೆ ಇರುವ ಅಭ್ಯಾಸ ಇಟ್ಟುಕೊಂಡಿಲ್ಲ ಅಂದರೆ ಜನತಾದಳ,ಕಾಂಗ್ರೆಸ್, ಬಿಜೆಪಿ ಮತ್ತೆ ಕಾಂಗ್ರೆಸ್ ಗೆ ಬಂದಿರುವ ತಮ್ಮಯ್ಯಗೆ ಜಂಪಿಂಗ್ ಅಭ್ಯಾಸ ಇದನ್ನು ಈಗಾ ಫಾರಿನ್ ತಿರುಗುವ ಕಡೆ ಬೆಳೆಸಿಕೊಂಡಿದ್ದಾರೆ. ಜಿಲ್ಲೆಯ ಜನಪ್ರತಿನಿಧಿಗಳಲ್ಲಿ ಹೆಚ್ಚು ವಿದೇಶಿ ಟೂರು ಮಾಡಿದ ದಾಖಲೆ ತಮ್ಮಯ್ಯರವರಿಗೆ ಸಲ್ಲುತ್ತದೆ. ಈ ಹಿಂದೆ ಸ್ನೇಹಿತರು ಮತ್ತು ಶಾಸಕರ ಜೊತೆಗೆ ಹೋಗುತ್ತಿದ್ದವರು ಈಗ ಸ್ವ ಕುಟುಂಬ ಸಮೇತರಾಗಿ ಹೋಗಿದ್ದಾರೆ. ಅದು ಜರ್ಮನ್ ದೇಶದಲ್ಲಿ ಹದಿನೈದುದಿನಗಳ ಕಾಲ ಪ್ರವಾಸ ಭಾಗ್ಯ ಸಿದ್ದರಾಮಯ್ಯನವರ ಭಾಗ್ಯದ ಜೊತೆಗೆ ಸೇರಿಸಲು ಎಂ.ಎಲ್.ಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಎಂದು ಕಾಂಗ್ರೆಸ್ ನವರು ಹಾದಿ,ಬೀದಿಯಲ್ಲಿ ಹೇಳುತ್ತಿರುವುದು ಮಾತ್ರ ಸತ್ಯ. ಗೆದ್ದು ಎರಡು ವರ್ಷ ತುಂಬಿಲ್ಲ ತಮ್ಮಯ್ಯ ಮಾತ್ರ ನಾಲ್ಕು ಐದು ಸಾರಿ ಫಾರಿನ್ ಟ್ರಿಪ್ ಹೊಡೆಯುವ ಮೂಲಕ ದಾಖಲೆ ಬರೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ನಗರದಲ್ಲಿ ಎರಡು ಗುಂಪುಗಳ ನಡುವಿನ ಗಲಾಟೆ

ಚಿಕ್ಕಮಗಳೂರು : ಮಧ್ಯರಾತ್ರಿ ರಸ್ತೆಯಲ್ಲಿ ಕೆಟ್ಟ ಶಬ್ದಗಳಿಂದ ಬೈದಾಡಿಕೊಳ್ಳುತ್ತಾ ಸಾರ್ವಜನಿಕರ ನೆಮ್ಮದಿಗೆ ಭಂಗ ತಂದ ಎರಡು ಗುಂಪುಗಳ ನಡುವಿನ ಗಲಾಟೆಯನ್ನು ತಡೆದ ಗಸ್ತು ಪೊಲೀಸರು ಮೂವರನ್ನು ವಶಕ್ಕೆ ಪಡೆದ ಘಟನೆ ಚಿಕ್ಕಮಗಳೂರು...

ಬಡ ಸಾಗುವಳಿದಾರರನ್ನು ಒಕ್ಕಲೆಬ್ಬಿಸಬಾರದು.

ಚಿಕ್ಕಮಗಳೂರು:   ಐದು ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡ ಸಾಗುವಳಿ ದಾರರನ್ನು ಯಾವುದೇ ಕಾರಣಕ್ಕೂ ಒಕ್ಕಲೆಬ್ಬಿಸಬಾರದು. ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಅರಣ್ಯ ಸಚಿ ವರು ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು...

Related Articles

ಅರತಿಕೃಷ್ಣಗೆ ಮಂತ್ರಿ ಗ್ಯಾರಂಟಿ – ಶ್ರೀನಿವಾಸ್ ತಿರುಪತಿಗೆ ? – ನಯನ ನವ ಅವತಾರಕ್ಕೆ ಭಂಗ, ಭಂಗ

ಚಿಕ್ಕಮಗಳೂರು: ಜಿಲ್ಲೆಯ ಲ್ಲಿ ಮಂತ್ರಿಯಾಗ ಬೇಕು ಎಂದು ಪಟ್ಟು ಹಿಡಿದವರು ಪಲ್ಟಿ ಹೊಡೆದಿದ್ದಾರೆ ಆದರೆ ಅರತಿಕೃಷ್ಣ...

ಮೌಲ್ಯ – ಸೇವೆ ಮರೆತು ಹಣ ದೂಚಲು ಪ್ರಜಾಪ್ರಭುತ್ವದ ಕಗ್ಗೂಲೆ…

ಅದಲು-ಬದಲು ಯಾವ ಪಕ್ಷಗಳಿಗೆ ಸಿದ್ದಾಂತ, ನೈತಿಕತೆ ಇದೆ ಭಾರತದಲ್ಲಿ ಸಾಧ್ಯವಿಲ್ಲ. ಎಲ್ಲಾ ಪಕ್ಷಗಳು ಬೆರಿಕೆಯ ತುರಿಕೆಯಲ್ಲಿವೆ.ಅದರಲ್ಲೂ...

ರಾಜಕಾರಣದಲ್ಲಿ ಮಠಗಳ, ಸಂಘಟನೆಗಳ “ಆರ್ಭಟ”

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಠಗಳ ಪ್ರಭಾವ ಮತ್ತು ಸಂಘಟನೆಗಳು ಆರ್ಭಟ ಮಾಡುತ್ತಿರುವುದು ನೋಡಿದರೆ ಎತ್ತ...

ಜಿಲ್ಲೆಯಲ್ಲಿ ಗೂಟದ ಕಾರಿಗಾಗಿ “ಕೈ ಪಡೆ” ಯ ಕಸರತ್ತು !

ಚಿಕ್ಕಮಗಳೂರು: ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದರಿಂದ ಉಳಿದ ಎರಡು ವರ್ಷಗಳ ಅವಧಿಗೆ ಡಿ.ಕೆ.ಮುಖ್ಯಮಂತ್ರಿಯಾಗಿ ದೇವಸ್ಥಾನ,...