Home Latest News ಸಸ್ಪೆಂಡ್ ಆಗಿದ್ದ ಡಾ. ಬಸವರಾಜು : ಜಿಲ್ಲಾ ಸರ್ಜನ್ ಆಗಿ ವಕ್ಕರಿಸುತ್ತಾರಾ?
Latest News

ಸಸ್ಪೆಂಡ್ ಆಗಿದ್ದ ಡಾ. ಬಸವರಾಜು : ಜಿಲ್ಲಾ ಸರ್ಜನ್ ಆಗಿ ವಕ್ಕರಿಸುತ್ತಾರಾ?

Share
Share

ಚಿಕ್ಕಮಗಳೂರು : ನಗರದ ಮಲ್ಲೇಗೌಡ ಜನರಲ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾಗಿದ್ದ ಮೋಹನ್ ಕುಮಾರ್ ರವರಿಗೆ ತುಮಕೂರು ಜಿಲ್ಲೆಗೆ ವರ್ಗಾವಣೆ ಆಗಿದೆ ಅವರ ಸ್ಥಾನಕ್ಕೆ ಚಿತ್ರದುರ್ಗದಲ್ಲಿ ಸಸ್ಪೆಂಡ್ ಆಗಿದ್ದ ಬಸವರಾಜು ಬರಲು ಕಾತುರರಾಗಿದ್ದಾರೆ ಎಂಬ ಮಾಹಿತಿ ಇದೆ.
ಡಾಕ್ಟರ್ ಮೋಹನ್ ಕುಮಾರ್ ಕಳೆದ ಐದು ವರ್ಷಗಳಿಂದ ಸೇವೆ ಸಲ್ಲಿಸಿ ಸಣ್ಣ ಪುಟ್ಟ ವ್ಯತ್ಯಾಸಗಳ ನಡುವೆ ಸಾರ್ವಜನಿಕರಿಗೆ ಸ್ಪಂದಿಸುವ ರೀತಿ ಸಮಾಧಾನಕರವಾಗಿದೆ. ಸಿಬ್ಬಂದಿ ಮತ್ತು ಸಾರ್ವಜನಿಕರೊಂದಿಗೆ ಮಂದಸ್ಮಿತರಾಗಿ ಬೆರೆತು ಈಗಾ ವರ್ಗಾವಣೆಯಾಗಿದ್ದಾರೆ.
ಮೋಹನ್ ಕುಮಾರ್ ಸ್ಥಾನಕ್ಕೆ ಬರುತ್ತಿರುವ ಬಸವರಾಜು ಹಿನ್ನೆಲೆ ವೃತ್ತಿಯಲ್ಲಿ ಸಮಾಧಾನ ತರುವುದಿಲ್ಲ .ಬಹುತೇಕ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿರುವ ಇವರನ್ನು ಕರೆಯುವ ಹಸು ಎಂದು ಕರೆಯುವುದು ಏಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.ಇನ್ನೂ ಕೇವಲ ಹದಿಮೂರು ತಿಂಗಳಲ್ಲಿ ನಿವೃತ್ತಿಯಾಗಲಿದ್ದು ಈಗಲೂ ಆಯಾಕಟ್ಟಿನ ಸ್ಥಳಕ್ಕೆ ಬರಲು ಹಣಬಲ ಮತ್ತು ರಾಜಕೀಯ ಬಲ ಬಳಸುತ್ತಿರುವುದರ ಗುಟ್ಟು ರಟ್ಟಾಗಿದ್ದರೂ ಯಾರು ಏನು ಮಾಡಲಾಗುತ್ತಿಲ್ಲ.

ಕಳೆದ ವರ್ಷ ಅರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಆಸ್ಪತ್ರೆಯ ಅವ್ಯವಸ್ಥೆ ಮತ್ತು ಇವರ ನಡವಳಿಕೆ ಮತ್ತು ದೂರುಗಳ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಅಮಾನತು ಮಾಡಿ ತನಿಖೆಗೆ ಆದೇಶ ಮಾಡಿದ್ದರು. ಆದರೂ ಬಸವರಾಜು ಅಮಾನತು ಆದೇಶ ರದ್ದು ಪಡಿಸಿಕೊಂಡು ಬೀರೂರು ಆಸ್ಪತ್ರೆಗೆ ಬಂದು ಅಲ್ಲಿಂದ ಚನ್ನಗಿರಿ ಆಸ್ಪತ್ರೆಯಲ್ಲಿದ್ದಾರೆ.ಈಗಾ ಅಯಾ ಕಟ್ಟಿನ ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆ ಗೆ ಬರಲಿ ಸಕಲ ಸಿದ್ದತೆ ಮಾಡಿ ಟವೆಲ್ ಹಾಕಿ ನನ್ನ ಪ್ರಭಾವ ಎಂತದ್ದು ಎನ್ನುತ್ತಲೇ ಚಿಕ್ಕಮಗಳೂರಿಗೆ ಬರಲು ಸಜ್ಜಾಗಿದ್ದಾರಂತೆ.
ಇವರ ಬಗ್ಗೆ ಚಿತ್ರದುರ್ಗದ ಸಾರ್ವಜನಿಕರು ಮತ್ತು ಪತ್ರಕರ್ತರು ಹೇಳುವುದು ಕೇಳಿದರೆ ಚಿಕ್ಕಮಗಳೂರು ಆಸ್ಪತ್ರೆ ಕತೆ ಏನಾಗಬಹುದು ಎಂದು ಸಿಬ್ಬಂದಿವರ್ಗ ಯೋಚಿಸುವಂತಾಗಿದೆ .
ಸರಿಯಾದ ಕಾನೂನು, ಕಾಗುಣಿತ ಹೇಳುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ತನಿಖೆ ನಡೆಯುತ್ತಿರುವಾಗ ಆಡಳಿತಾತ್ಮಕ ಹುದ್ದೆಗೆ ವರ್ಗಾವಣೆ ಮಾಡುವುದು ಎಷ್ಟರಮಟ್ಟಿಗೆ ಸರಿ .ಅರೋಗ್ಯ ಮಂತ್ರಿ ಅಮಾನತು ಮಾಡಿದರೆ ಮುಖ್ಯಮಂತ್ರಿಗಳು ಅಯಾ ಕಟ್ಟಿನ ಸ್ಥಾನ ಕೊಟ್ಟರೆ ಸೋತರು ಬಂಪರ್ ಪ್ರೈಜ್ ಕೊಟ್ಟಂತಾಗುವುದಿಲ್ಲವೆ.ಇನ್ನೂ ಶಾಸಕ ತಮ್ಮಯ್ಯ ಈ ಬಗ್ಗೆ ವಿಚಾರಿಸಲು ಮೊಬೈಲ್ ಗೆ ಕರೆ ಮಾಡಿದರೆ ಸ್ವೀಕರಿಸದಷ್ಟು ಒತ್ತಡದಲ್ಲಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...