Home Latest News ನೌಕರರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ
Latest News

ನೌಕರರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ

Share
Share

ಚಿಕ್ಕಮಗಳೂರು : ಗುಡ್ಡದ ತುದಿಯಲ್ಲಿ ನಿಂತರೆ ಮಾತ್ರ ಮತ್ತೊಂದು ಗುಡ್ಡದ ತುದಿ ಕಾಣುವುದು. ನಾನು ಗುಡ್ಡದ ಕೆಳಗೆ ನಿಂತು ನೋಡಿದರೆ ಏನು ಕಾಣಲಿಲ್ಲ ಎಂಬಂತ ಫಲಿತಾಂಶ ಚಿಕ್ಕಮಗಳೂರು ನೌಕರರ ಸಂಘದ ಚುನಾವಣೆಯಲ್ಲಿ ಬಂದಿದೆ.

ಕಳೆದ ಒಂದು ತಿಂಗಳಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೌಕರರಿಗಿಂತ ರಾಜಕಾರಣಿಗಳು ಆಟ ಆಡ್ಡಿದ್ದು ಮಾತ್ರ ನಿಜ.
73 ಮತದಾರರಲ್ಲಿ 72 ಜನ ಮತ ಚಲಾವಣೆ ಮಾಡಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ದೇವೇಂದ್ರ ಅತ್ಯಧಿಕ 46 ಮತ ಪಡೆದು ಅಯ್ಕೆ ಆದರೆ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪೂರ್ಣೇಶ್ 45 ಪಡೆದರೆ ರಾಜ್ಯ ಪರಿಷತ್ ಸ್ಥಾನಕ್ಕೆ ಮಂಜುನಾಥ್ ಎರಡು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹೇಮಂತ್ ಬಣದ ಇಬ್ಬರು ಸೋತರೆ ಒಬ್ಬರು ಗೆದ್ದಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿದ್ದಾ,ಜಿದ್ದಿನಲ್ಲಿ ಪೈಪೋಟಿ ನಡೆಸಿ ಆರೋಪ ,ಪ್ರತ್ಯಾರೋಪದಲ್ಲಿ ಮುಳುಗಿದ್ದ ಚುನಾವಣೆಯಲ್ಲಿ ನೌಕರರು ಸ್ವಾಭಿಮಾನ ಮೆರೆದಿದ್ದಾರೆ ಎಂದು ಹೇಳುವುದರ ಜೊತೆಗೆ ಕುತಂತ್ರಕ್ಕೆ ಉತ್ತರ ಕೊಟ್ಟಿದ್ದಾರೆ ಎಂದು ನೂತನವಾಗಿ ಅಯ್ಕೆಯಾಗಿರುವ ಅಧ್ಯಕ್ಷ ದೇವೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಾದ ಎಸ್,ಎಲ್,ಬೋಜೇಗೌಡ ಮತ್ತು ಮಾಜಿ ಎಂ,ಎಲ್,ಸಿ ಗಾಯಿತ್ರಿ ಶಾಂತೇಗೌಡ ಹೇಮಂತ್ ಕುಮಾರ್ ಪರ ಬ್ಯಾಟಿಂಗ್ ಮಾಡಿ ಕ್ಲೀನ್ ಬೋಲ್ಡ್ ಆದರೆ ಕಾಂಗ್ರೆಸ್ ವಕ್ತಾರ ಹೆಚ್,ಹೆಚ್.ದೇವರಾಜ್ ಮ್ಯಾನ್ ಅಫ್ ದ ಮ್ಯಾಚ್ ಆಗಿದ್ದಾರೆ.

ರೆಸಾರ್ಟ್, ಗುಂಡು,ತುಂಡುಗಳಿಗೆ ನೌಕರರು ಬಲಿಯಾಗದೆ ಹೀಗೂ ಉಂಟೇ ಎಂಬ ಫಲಿತಾಂಶ ಬಂದಿದೆ.
ರಾಜಕಾರಣಿಗಳ ವಿರುದ್ದ ಶೆಡ್ಡು ಹೊಡೆದ ದೇವೇಂದ್ರನ ಶಕ್ತಿ ಮಾತ್ರ ನಿಗೂಢ. ಮಂಜುನಾಥ್ ಸ್ವಾಮಿಯನ್ನು ಗೌರವ ಅಧ್ಯಕ್ಷ ರನ್ನಾಗಿ ರಾಜ್ಯ ಪರಿಷತ್ ನಲ್ಲಿ ಸೋತ ಅಭ್ಯರ್ಥಿ ಚೇತನ್ ರಾಜ್ಯ ಮಂಡಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಅವರನ್ನು ನೇಮಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಜೀವಾಣು ಹೆಚ್ಚಿಸುವ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು

ಚಿಕ್ಕಮಗಳೂರು: ಮಣ್ಣು ರೋಗಯುಕ್ತವಾಗಿದ್ದು, ಅದಕ್ಕೆ ಬೇಕಿರುವ ಜೀವಾಣುಗಳನ್ನು ಹೆಚ್ಚಿಸುವ ಮೂಲಕ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕಾದ ಅನಿವಾರ್ಯ ಇದೆ’ ಎಂದು ಕನ್ನೇರ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು. ಸಾವಯವ ರೈತರ ಬಳಗದಿಂದ...

ಅಡ್ಡ ಮತದಾನದ ಸತ್ಯಶೋಧನಾ ಸಮಿತಿ ವರದಿ ಸಿದ್ದ

ಚಿಕ್ಕಮಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನದ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಚಿಸಿರುವ ಸತ್ಯಶೋಧನಾ ಸಮಿತಿಯು ತನ್ನ ಪ್ರಾಥಮಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದೆ. ಸಮಿತಿಯ ಸದಸ್ಯರಾದ ಸಿ.ಟಿ. ರವಿ ಅವರು ಚಿಕ್ಕಮಗಳೂರಿನಲ್ಲಿ ಈ...

Related Articles

ಸ್ವಚ್ಛ ಪರಿಸರ ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ

ಚಿಕ್ಕಮಗಳೂರು: ಮಲೆನಾಡಿನ ನಿಸರ್ಗದತ್ತ ಸೌಂದರ್ಯ ಮತ್ತು ಸ್ವಚ್ಛ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರವಾದ ಹೊಣೆಗಾರಿಕೆ ನಮ್ಮೆಲ್ಲರ...

ಪ್ರವಾಹ ಪರಿಸ್ಥಿತಿ ಎದುರಿಸುವ ಅಣಕು ಪ್ರದರ್ಶನ

ಚಿಕ್ಕಮಗಳೂರು: ಕಾಫಿನಾಡಿನ ಹಿರೇಕೊಳಲೆ ಕೆರೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಅಗ್ನಿಶಾಮಕ ಮತ್ತು...

ಯುವಜನತೆ ಮಾದಕ ವಸ್ತು ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಲಿ

ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ...

ಭಿಕ್ಷುಕಿಯನ್ನು ಕೊಲೆ ಮಾಡಿದ ಆರೋಪಿಗೆ ಜೀವಾವಧಿ ಶಿಕ್ಷೆ

ಚಿಕ್ಕಮಗಳೂರು:  ಕ್ಷುಲ್ಲಕ ಕಾರಣಕ್ಕೆ ಸೈಜುಕಲ್ಲು ಎತ್ತಿಹಾಕಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಗೆ ಇಲ್ಲಿನ ಒಂದನೇ ಅಧಿಕ...