Home Latest News ನೌಕರರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ
Latest News

ನೌಕರರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಗೆದ್ದು ಬೀಗಿದ ದೇವೇಂದ್ರ

Share
Share

ಚಿಕ್ಕಮಗಳೂರು : ಗುಡ್ಡದ ತುದಿಯಲ್ಲಿ ನಿಂತರೆ ಮಾತ್ರ ಮತ್ತೊಂದು ಗುಡ್ಡದ ತುದಿ ಕಾಣುವುದು. ನಾನು ಗುಡ್ಡದ ಕೆಳಗೆ ನಿಂತು ನೋಡಿದರೆ ಏನು ಕಾಣಲಿಲ್ಲ ಎಂಬಂತ ಫಲಿತಾಂಶ ಚಿಕ್ಕಮಗಳೂರು ನೌಕರರ ಸಂಘದ ಚುನಾವಣೆಯಲ್ಲಿ ಬಂದಿದೆ.

ಕಳೆದ ಒಂದು ತಿಂಗಳಿಂದ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ನೌಕರರಿಗಿಂತ ರಾಜಕಾರಣಿಗಳು ಆಟ ಆಡ್ಡಿದ್ದು ಮಾತ್ರ ನಿಜ.
73 ಮತದಾರರಲ್ಲಿ 72 ಜನ ಮತ ಚಲಾವಣೆ ಮಾಡಿದ್ದು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ದೇವೇಂದ್ರ ಅತ್ಯಧಿಕ 46 ಮತ ಪಡೆದು ಅಯ್ಕೆ ಆದರೆ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪೂರ್ಣೇಶ್ 45 ಪಡೆದರೆ ರಾಜ್ಯ ಪರಿಷತ್ ಸ್ಥಾನಕ್ಕೆ ಮಂಜುನಾಥ್ ಎರಡು ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ.
ಹೇಮಂತ್ ಬಣದ ಇಬ್ಬರು ಸೋತರೆ ಒಬ್ಬರು ಗೆದ್ದಿದ್ದಾರೆ.
ಕಳೆದ ಒಂದು ತಿಂಗಳಿಂದ ಜಿದ್ದಾ,ಜಿದ್ದಿನಲ್ಲಿ ಪೈಪೋಟಿ ನಡೆಸಿ ಆರೋಪ ,ಪ್ರತ್ಯಾರೋಪದಲ್ಲಿ ಮುಳುಗಿದ್ದ ಚುನಾವಣೆಯಲ್ಲಿ ನೌಕರರು ಸ್ವಾಭಿಮಾನ ಮೆರೆದಿದ್ದಾರೆ ಎಂದು ಹೇಳುವುದರ ಜೊತೆಗೆ ಕುತಂತ್ರಕ್ಕೆ ಉತ್ತರ ಕೊಟ್ಟಿದ್ದಾರೆ ಎಂದು ನೂತನವಾಗಿ ಅಯ್ಕೆಯಾಗಿರುವ ಅಧ್ಯಕ್ಷ ದೇವೇಂದ್ರ ತಿಳಿಸಿದ್ದಾರೆ.
ವಿಧಾನ ಪರಿಷತ್ ಸದಸ್ಯ ರಾದ ಎಸ್,ಎಲ್,ಬೋಜೇಗೌಡ ಮತ್ತು ಮಾಜಿ ಎಂ,ಎಲ್,ಸಿ ಗಾಯಿತ್ರಿ ಶಾಂತೇಗೌಡ ಹೇಮಂತ್ ಕುಮಾರ್ ಪರ ಬ್ಯಾಟಿಂಗ್ ಮಾಡಿ ಕ್ಲೀನ್ ಬೋಲ್ಡ್ ಆದರೆ ಕಾಂಗ್ರೆಸ್ ವಕ್ತಾರ ಹೆಚ್,ಹೆಚ್.ದೇವರಾಜ್ ಮ್ಯಾನ್ ಅಫ್ ದ ಮ್ಯಾಚ್ ಆಗಿದ್ದಾರೆ.

ರೆಸಾರ್ಟ್, ಗುಂಡು,ತುಂಡುಗಳಿಗೆ ನೌಕರರು ಬಲಿಯಾಗದೆ ಹೀಗೂ ಉಂಟೇ ಎಂಬ ಫಲಿತಾಂಶ ಬಂದಿದೆ.
ರಾಜಕಾರಣಿಗಳ ವಿರುದ್ದ ಶೆಡ್ಡು ಹೊಡೆದ ದೇವೇಂದ್ರನ ಶಕ್ತಿ ಮಾತ್ರ ನಿಗೂಢ. ಮಂಜುನಾಥ್ ಸ್ವಾಮಿಯನ್ನು ಗೌರವ ಅಧ್ಯಕ್ಷ ರನ್ನಾಗಿ ರಾಜ್ಯ ಪರಿಷತ್ ನಲ್ಲಿ ಸೋತ ಅಭ್ಯರ್ಥಿ ಚೇತನ್ ರಾಜ್ಯ ಮಂಡಳಿಗೆ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ಅವರನ್ನು ನೇಮಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *

Don't Miss

ಮನೆಯ ಮೇಲ್ಛಾವಣಿಯ ಹೆಂಚು ತೆಗೆದು ನುಗ್ಗಿ ಸರಗಳ್ಳತನ

ನರಸಿಂಹರಾಜಪುರ: ಮನೆಯಲ್ಲಿ ದಂಪತಿ ಮಲಗಿದ್ದ ವೇಳೆ ಮೇಲ್ಛಾವಣಿಯ ಹೆಂಚು ತೆಗೆದು ಒಳನುಗ್ಗಿದ ಕಳ್ಳನೊಬ್ಬ ಮಹಿಳೆಯ ಕೊರಳಿನಲ್ಲಿದ್ದ ಸುಮಾರು ₹1.70 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನರಸಿಂಹರಾಜಪುರ...

ಕನಸು ಫೈನಾನ್ಸ್ ಹೆಸರಿನಲ್ಲಿ ₹1.60 ಲಕ್ಷ ವಂಚನೆ ಆರೋಪ

ಕಡೂರು: ಪ್ರತಿದಿನ ಉಳಿತಾಯದ ಹಣವನ್ನು ಸ್ವೀಕರಿಸಿ ಶೇ.7ರಷ್ಟು ಬಡ್ಡಿ ನೀಡುವುದಾಗಿ ನಂಬಿಸಿ, ಹಣವನ್ನು ವಾಪಸ್ ನೀಡದೆ ಫೈನಾನ್ಸ್ ಕಚೇರಿಗೆ ಬೀಗ ಹಾಕಿ ಮಾಲೀಕರು ನಾಪತ್ತೆಯಾಗಿರುವ ಆರೋಪದಡಿ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ...

Related Articles

2 ಲಕ್ಷರೂಗಳ ಲಂಚ ಪಡೆಯುವಾಗ ಲೋಕಯುಕ್ತ ಬಲೆಗೆ ಸರ್ವೆಯರ್ ದೊರೆರಾಜು

ಚಿಕ್ಕಮಗಳೂರು: ಇಲ್ಲಿನ ತಾಲ್ಲೂಕು ಕಛೇಯಲ್ಲಿ ಸರ್ವೆಯರ್ ಧೊರೆರಾಜು ಮತ್ತು ರಂಗನಾಥ್ ರವರು 2 ಲಕ್ಷರೂಗಳ ಲಂಚ...

ಲಾರಿ ಡಿಕ್ಕಿಗೆ ಪಶುವೈದ್ಯಕೀಯ ಇಲಾಖೆ ಸಿಬ್ಬಂದಿ ಸಾವು

ಅಜ್ಜಂಪುರ: ಕರ್ತವ್ಯಕ್ಕೆ ತೆರಳುತ್ತಿದ್ದ ಸ್ಕೂಟಿಗೆ ಹಿಂದಿನಿಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಪಶುವೈದ್ಯಕೀಯ ಇಲಾಖೆಯ ಅಟೆಂಡರ್...

ವಿದ್ಯುತ್ ಸ್ಪರ್ಶ: ಬೇಲಿ ಕಟಾವು ಮಾಡುತ್ತಿದ್ದ ವಾಚ್‌ಮನ್ ಸಾವು

ತರೀಕೆರೆ: ತೋಟದ ಬೇಲಿ ಕಟಾವು ಮಾಡುತ್ತಿದ್ದ ವೇಳೆ ವಿದ್ಯುತ್ ತಂತಿ ಸ್ಪರ್ಶಿಸಿ ವಾಚ್‌ಮನ್ ಮೃತಪಟ್ಟಿರುವ ಘಟನೆ...

ಕಡಿಮೆ ಬೆಲೆಗೆ ಬಟ್ಟೆ ಕೊಡಿಸುವುದಾಗಿ ನಂಬಿಸಿ ₹20.19 ಲಕ್ಷ ವಂಚನೆ ಆರೋಪ

ಕಡೂರು: ವ್ಯಾಪಾರಕ್ಕಾಗಿ ಕಡಿಮೆ ಬೆಲೆಯಲ್ಲಿ ಬಟ್ಟೆಗಳನ್ನು ಖರೀದಿಸಿ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ₹17.58 ಲಕ್ಷ ಪಡೆದು,...