Home namma chikmagalur chikamagalur ಆಲ್ಲೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ
chikamagalurCrime NewsHomeLatest Newsnamma chikmagalur

ಆಲ್ಲೂರಿನಲ್ಲಿ ದಲಿತ ಮಹಿಳೆ ಮೇಲೆ ದೌರ್ಜನ್ಯ

Share
Share

ಚಿಕ್ಕಮಗಳೂರು: ದಲಿತ ಮಹಿಳೆಯೊಬ್ಬರ ಪಿತ್ರಾರ್ಜಿತ ಜಮೀನಿನ ಬೇಲಿ ಕತ್ತರಿಸಿ, ಜಾತಿನಿಂದನೆ ಮಾಡಿ, ಜೀವ ಬೆದರಿಕೆ ಒಡ್ಡಿರುವ ಗಂಭೀರ ಅಪರಾಧ ಪ್ರಕರಣವೊಂದು ಚಿಕ್ಕಮಗಳೂರು ತಾಲೂಕಿನ ಆಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಪಟ್ಟಣದ ಮೇದರಬೀದಿ ನಿವಾಸಿಯಾದ ವೆಂಕಟಮ್ಮ (65) ಎಂಬುವವರು ದೌರ್ಜನ್ಯಕ್ಕೊಳಗಾದ ವೃದ್ದೆ. ಇವರಿಗೆ ಮತ್ತು ಇವರ ಸಹೋದರಿಯರಿಗೆ ದೋಣಗುಡಿಗೆ ಗ್ರಾಮದ ಸರ್ವೆ ನಂಬರ್ 86ರಲ್ಲಿ 2 ಎಕರೆ 38 ಗುಂಟೆ ಪಿತ್ರಾರ್ಜಿತ ಜಂಟಿ ಖಾತೆ ಜಮೀನಿದೆ.

ಆದರೆ, ಇದೇ ದೋಣಗುಡಿಗೆ ಗ್ರಾಮದ ಸವರ್ಣೀಯ ಜಾತಿಗೆ ಸೇರಿದ ಡಿ. ಚಂದ್ರೇಗೌಡ, ಡಿ. ಮರಿಸಿದ್ದೇಗೌಡ ಹಾಗೂ ಈತನ ಮಗ ಭವಿತ್ ಎಂಬುವವರು ಮೇ 20ರಂದು ಬುಧವಾರ ತೋಟದ ಬೇಲಿಯ ಮೆಸ್ಸನ್ನು ದೌರ್ಜನ್ಯದಿಂದ ಕತ್ತರಿಸಿ ಹಾಕಿದ್ದಾರೆ.

ಈ ಅಕ್ರಮವನ್ನು ಪ್ರಶ್ನಿಸಲು ಹೋದ ವೆಂಕಟಮ್ಮ ಅವರಿಗೆ ಚಂದ್ರೇಗೌಡನ ಕುಮ್ಮಕ್ಕಿನಿಂದ ಮರಿಸಿದ್ದೇಗೌಡ ಮತ್ತು ಭವಿತ್ ಅತ್ಯಂತ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರಲ್ಲದೆ, “ಎಸ್ಸಿ ಎಸ್ಟಿ ಜಾತಿಗೆ ಸೇರಿದ ನೀನು ಏನು ಮಾಡುತ್ತೀಯಾ?” ಎಂದು ಜಾತಿ ಹಿಡಿದು ನಿಂದನೆ ಮಾಡಿದ್ದಾರೆ. ಅಷ್ಟಕ್ಕೇ ನಿಲ್ಲದೆ, ವೃದ್ಧೆಯ ಮೇಲೆ ಕೈಯಿಂದ ಹಲ್ಲೆ ನಡೆಸಲು ಮುಂದಾಗಿದ್ದಾರೆ.

“ಊರಿಂದ ಊರು ಬಿಟ್ಟು ಬಂದು ಜಮೀನು ಮಾಡುತ್ತೀರಾ, ನಿಮ್ಮನ್ನು ಬದುಕಲು ಬಿಡುವುದಿಲ್ಲ, ತೋಟದಲ್ಲಿ ಹೇಗೆ ಇರುತ್ತೀರಿ ಎಂದು ನೋಡುತ್ತೇನೆ” ಎಂಬುದಾಗಿ ಮರಿಸಿದ್ದೇಗೌಡ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಘಟನೆಯಿಂದ ಆಘಾತಕ್ಕೊಳಗಾಗಿದ್ದ ವೃದ್ದೆ ವೆಂಕಟಮ್ಮ, ತದನಂತರ ಮನೆಯ ಹಿರಿಯರು ಹಾಗೂ ನೆಂಟರಿಷ್ಟರ ಸಲಹೆ ಪಡೆದು ತಡವಾಗಿ ಆಲ್ಲೂರು ಪೊಲೀಸ್‌ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ.

ಸದ್ಯ ಆಲ್ಲೂರು ಪೊಲೀಸರು ಆರೋಪಿಗಳಾದ ಚಂದ್ರೇಗೌಡ, ಮರಿಸಿದ್ದೇಗೌಡ ಮತ್ತು ಭವಿತ್ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿರುವ ದೂರನ್ನು ಸ್ವೀಕರಿಸಿ, ಅಟ್ರಾಸಿಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Dalit woman assaulted in Allur

Share

Leave a comment

Leave a Reply

Your email address will not be published. Required fields are marked *

Don't Miss

ಅಜ್ಜಂಪುರದ‌ಲ್ಲಿ ಇಂದು ನೂತನ ರಸ್ತೆ ಮೇಲ್ವೇತುವೆಯ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ

ಚಿಕ್ಕಮಗಳೂರು: ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ಸಚಿವರಾದ ವಿ.ಸೋಮಣ್ಣ ಅವರು ಮೇ 31 ರಂದು (ನಾಳೆ ಭಾನುವಾರ) ಚಿಕ್ಕಮಗಳೂರು ಜಿಲ್ಲೆಯ ವಿವಿಧ ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ...

ಶ್ರೀಗಂಧ ಮರಗಳ ರಕ್ಷಣೆ, ಪ್ಲಾಸ್ಟಿಕ್ ಮುಕ್ತಕ್ಕೆ ಆಗ್ರಹಿಸಿ ಮೌನ ಪ್ರತಿಭಟನೆ

ಚಿಕ್ಕಮಗಳೂರು: ನಾಡಿನಲ್ಲಿ ಶ್ರೀಗಂಧ ಮರಗಳ ರಕ್ಷಣೆ ಮತ್ತು ನಗರವನ್ನು ಪ್ಲಾಸ್ಟಿಕ್ ಮು ಕ್ತಗೊಳಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಜಿಲ್ಲಾ ಶ್ರೀಗಂಧ ಮತ್ತು ವನಕೃಷಿ ಬೆಳೆಗಾರರ ಸಂಘ ಮತ್ತು ವಿವಿಧ ಕನ್ನಡಪರ ಸಂಘಟನೆಗಳ...

Related Articles

ಪ್ಲೆಕ್ಸ್‌ ಹರಿದ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಚಿಕ್ಕಮಗಳೂರು: ಕಾಫಿನಾಡಿನ ಕಾಂಗ್ರೆಸ್ ಶಾಸಕ ಹೆಚ್.ಡಿ.ತಮ್ಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಭಾವಚಿತ್ರವಿದ್ದ ಪ್ಲೆಕ್ಸ್‌ಗೆ...

ಅಡಿಕೆ ಕಳವು ಪ್ರಕರಣದ ಆರೋಪಿಗಳ ಬಂಧನ

ಬಾಳೆಹೊನ್ನೂರು: ಇಲ್ಲಿಗೆ ಸಮೀಪದ ಜಕ್ಕಣಕ್ಕಿಯ ರೈತರ ಗೋದಾಮಿನಲ್ಲಿಟ್ಟಿದ್ದ ಅಡಿಕೆಯನ್ನು ಕಳವು ಮಾಡಿದ ಆರೋಪದಲ್ಲಿ ಪೊಲೀಸರು ಇಬ್ಬರನ್ನು...

ಮೂಡಿಗೆರೆಯಲ್ಲಿ ಬಾಗಿಲು ಮುರಿದು ಕಳ್ಳತನ

ಮೂಡಿಗೆರೆ: ಬೀಗ ಹಾಕಿದ್ದ ಮನೆಯೊಂದರ ಮುಂಬಾಗಿಲು ಮುರಿದು ಮನೆಯೊಳಗೆ ನುಗ್ಗಿ ನಗದು ಸಹಿತ ಅಪಾರ ಮೌಲ್ಯದ...

ನಾಗಲಕ್ಷ್ಮಿ ಚಿತ್ರಮಂದಿರದ ಪ್ರದರ್ಶನ ಸ್ಥಗಿತ

ಚಿಕ್ಕಮಗಳೂರು: ಅಗ್ನಿ ಸುರಕ್ಷತಾ ಪರಿಕರಗಳನ್ನು ಅಳವಡಿಸದ ಕಾರಣಕ್ಕೆ ನಗರದ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ ಚಲನಚಿತ್ರ ಪ್ರದರ್ಶನಗಳನ್ನು ಅಧಿಕಾರಿಗಳು...