Home namma chikmagalur chikamagalur ಬಾಕಿ ಪಾವತಿಸಲು ಟ್ರಾವೆಲ್ ಏಜೆನ್ಸಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ
chikamagalurHomeLatest Newsnamma chikmagalur

ಬಾಕಿ ಪಾವತಿಸಲು ಟ್ರಾವೆಲ್ ಏಜೆನ್ಸಿಗೆ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶ

Share
Share

ಚಿಕ್ಕಮಗಳೂರು: ವೀಸಾ ಒದಗಿಸಲು ವಿಫಲವಾದ ಪ್ರಯಾಣ ಸೇವೆಗಳ ಪ್ರತಿನಿಧಿ ಸಂಸ್ಥೆ(ಟ್ರಾವೆಲ್ ಏಜೆನ್ಸಿ)ಯು ಪೂರ್ಣ ಹಣ ಹಿಂದಿರುಗಿಸದೆ ಸೇವಾ ನ್ಯೂನತೆ ಎಸಗಿದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದೂರುದಾರರಿಗೆ ಬಾಕಿ ಹಣ ಪಾವತಿಸುವಂತೆ ಸಂಸ್ಥೆಗೆ ಸೂಚಿಸಿದೆ.

ಚಿಕ್ಕಮಗಳೂರು ತಾಲ್ಲೂಕು ಆವತಿ ಗ್ರಾಮದ ಎ.ಪಿ.ರಾಜಾರಾಮ್ ಎಂಬುವರು ತಮ್ಮ ಕುಟುಂಬದೊಂದಿಗೆ ಜಪಾನ್ ಪ್ರವಾಸ ಕೈಗೊಳ್ಳಲು ವೀಸಾ ಮತ್ತು ಟಿಕೆಟ್ ವ್ಯವಸ್ಥೆ ಮಾಡುವಂತೆ ಕೋರಿ ಬೆಂಗಳೂರು ಬಸವನಗುಡಿಯ ಫ್ಲೈಟ್ ಶಾಪ್‌ಗೆ ೨,೩೪,೫೦೦ ರೂ.ಗಳನ್ನು ನೀಡಿದ್ದರು.

ಆದರೆ ಫ್ಲೈಟ್ ಶಾಪ್ ವೀಸಾ ಒದಗಿಸಲು ವಿಫಲವಾಯಿತು ಎನ್ನಲಾಗಿದೆ. ಹಣ ಪಾವತಿಸುವ ಸಂದರ್ಭ ೧,೫೨,೫೦೦ ರೂ.ಗಳನ್ನು ಮಾತ್ರ ದೂರುದಾರರ ಖಾತೆಗೆ ವರ್ಗಾಯಿಸಿತ್ತು. ಮಿಕ್ಕ ೮೨ ಸಾವಿರ ರೂ.ಗಳನ್ನು ನೀಡುವಂತೆ ಕೋರಿದರೂ ಪಾವತಿಸದೆ ಫ್ಲೈಟ್ ಶಾಪ್ ಸೇವಾ ನ್ಯೂನತೆ ಎಸಗಿತೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ರಾಜಾರಾಮ್ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ಫ್ಲೈಟ್ ಶಾಪ್ ವಿರುದ್ಧ ಜನವರಿ ೨೨ ರಂದು ದೂರು ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಆಯೋಗವು ಮಾರ್ಚ್ ೨೭ ರಂದು ತೀರ್ಪು ನೀಡಿದ್ದು, ಪಾವತಿಸದೆ ಏಜೆನ್ಸಿಯು ಬಾಕಿ ಉಳಿಸಿಕೊಂಡಿದ್ದ ೮೨ ಸಾವಿರ ರೂ.ಗಳನ್ನು ಕಳೆದ ವರ್ಷದ ಮಾರ್ಚ್ ೩ ರಿಂದ ಇದುವರೆಗೆ ವಾರ್ಷಿಕ ಶೇ.೯ರ ದರದ ಬಡ್ಡಿ ಸಹಿತ ದೂರುದಾರರಿಗೆ ನೀಡುವಂತೆ ಸೂಚಿಸಿದೆ.

ಅಲ್ಲದೆ, ಪರಿಹಾರವಾಗಿ ೧೦ ಸಾವಿರ ರೂ. ಹಾಗೂ ಖರ್ಚು-ವೆಚ್ಚವೆಂದು ೫ ಸಾವಿರ ರೂ.ಗಳನ್ನು ರಾಜಾರಾಮ್ ಅವರಿಗೆ ನೀಡುವಂತೆ ಆದೇಶಿಸಲಾಗಿದೆ. ಈ ತೀರ್ಪನ್ನು ಮುಂದಿನ ೪೫ ದಿನಗಳ ಒಳಗೆ ಪಾಲಿಸಬೇಕಾಗಿದ್ದು, ತಪ್ಪಿದಲ್ಲಿ ಸೂಚಿಸಿದ ಮೊತ್ತವನ್ನು ಪಾವತಿಸುವವರೆಗೂ ಶೇ.೬ರ ಬಡ್ಡಿಯನ್ನು ಪಾವತಿಸುವಂತೆ ತಿಳಿಸಲಾಗಿದೆ.

ಆಯೋಗದ ಅಧ್ಯಕ್ಷರಾದ ಎನ್.ಆರ್.ಚೆನ್ನಕೇಶವ, ಸದಸ್ಯರಾದ ಈ.ಪ್ರೇಮಾ, ಡಾ.ಮಂಜುನಾಥ ಎಂ.ಬಮ್ಮನಕಟ್ಟಿ ಇವರು ಈ ಆದೇಶವನ್ನು ನೀಡಿದ್ದು, ಎದುರುದಾರರು ಸೇವಾ ನ್ಯೂನತೆ ಎಸಗಿರುವುದನ್ನು ಪುರಾವೆ ಸಹಿತ ಸಾಬೀತುಪಡಿಸಿದ್ದು, ಗ್ರಾಹಕರಿಗೆ ನ್ಯಾಯ ಒದಗಿಸಿದ್ದಾರೆ. ಪ್ರಕರಣದಲ್ಲಿ ದೂರುದಾರರ ಪರವಾಗಿ ವಕೀಲರಾದ ಜಿ.ಆರ್.ಶ್ರವಣ್ ಅವರು ವಾದ ಮಂಡಿಸಿದ್ದರು.

Consumer Disputes Redressal Forum orders travel agency to pay dues

Share

Leave a comment

Leave a Reply

Your email address will not be published. Required fields are marked *

Don't Miss

ಸಂಪುಟ ಪುನರ್ರಚನೆ ಹೈಕಮಾಂಡ್ ಗೆ ಬಿಟ್ಟಿದ್ದು

ಚಿಕ್ಕಮಗಳೂರು: ಸಚಿವ ಸ್ಥಾನದ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನರ್ರಚನೆ ನಿರ್ಧಾರವನ್ನು ಹೈಕಮಾಂಡ್ ಕೈಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ಎನ್.ಆರ್.ಪುರ ಪ್ರವಾಸಿ...

ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರ ಸಾವು

ಚಿಕ್ಕಮಗಳೂರು: ಜಿಲ್ಲೆಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ಇಬ್ಬರು ವ್ಯಕ್ತಿಗಳು ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಮೂಡಿಗೆರೆ ಠಾಣಾ ವ್ಯಾಪ್ತಿಯ ಕುನ್ನಳ್ಳಿ ಗ್ರಾಮದ ವಿನೋದ್ (28) ಅವರು ಕೂಲಿ...

Related Articles

ಜನರ ಆಶೀರ್ವಾದದಿಂದ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ

ಕಡೂರು: ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವವನ್ನು ಪ್ರಶ್ನಿಸುವವವರಿಗೆ ಜನರೇ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದು, ಜನರ ಆಶೀರ್ವಾದ...

ಜಾತ್ಯತೀತ ಜನತಾದಳ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ

ಚಿಕ್ಕಮಗಳೂರು : ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಮ್ಮ ಸಿದ್ದಾಂತದಲ್ಲಿ ಯಾವುದೇ...

ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು

ಚಿಕ್ಕಮಗಳೂರು: ಮೀನು ಹಿಡಿಯಲು ಹೋಗಿದ್ದ ಇಬ್ಬರು ಯುವಕರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಚಿಕ್ಕಮಗಳೂರು ತಾಲೂಕಿನ...

ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ ರೈತರೊಬ್ಬರ ಎತ್ತಿನ ಗಾಡಿ ಕಳ್ಳತನ

ಅಜ್ಜಂಪುರ: ರೈತರೊಬ್ಬರ ಎತ್ತಿನ ಗಾಡಿ ಕಳ್ಳತನವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕಿನ ಆಸಂಧಿ ಗ್ರಾಮದಲ್ಲಿ...