Home namma chikmagalur chikamagalur “ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್
chikamagalurHomeLatest Newsnamma chikmagalur

“ಕುರ್ಚಿ” ಮಹಾತ್ಮೆ: ಶೃಂಗೇರಿಯಲ್ಲಿ ಕಾಂಗ್ರೆಸ್ VS ಬಿಜೆಪಿ ದಂಗಲ್

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಮೂರು ವರ್ಷಗಳಿಂದ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿಯ ಮಾಜಿ ಶಾಸಕ ಜೀವರಾಜ್ ಮಧ್ಯೆ ಕಿತ್ತಾಟ,ಕಿರುಚಾಟ, ಪೊಲೀಸ್ ಠಾಣೆ ಮತ್ತು ನ್ಯಾಯಾಲಯ ಹೀಗೆ ಸಾಗಿ ಬಂದು ಮತ್ತೊಂದು ಮಗ್ಗಲು ಬದಲಾಯಿಸಿದೆ.

2023ರಲ್ಲಿ ಟಿ.ಡಿ.ರಾಜೇಗೌಡರು ಕೇವಲ 201 ಮತಗಳಿಂದ ಜಯಗಳಿಸಿ ಶಾಸಕರಾದರು.ಅಂದೇ ಪರಾಜಿತ ಅಭ್ಯರ್ಥಿ ಜೀವರಾಜ್ ಮರು ಮತ ಎಣಿಕೆ ಮಾಡಲು ಒತ್ತಯಿಸಿ ಅರ್ಜಿ ನೀಡಿದ್ದರು ಅಲ್ಲಿಂದ ಶುರುವಾದ ಲಡಾಯಿ ಕ್ಷೇತ್ರದಲ್ಲಿ ರಾಜಕೀಯ ಬೆಂಕಿ ಜ್ವಾಲೆಯಾಗಿ ಈಗ ಭಸ್ಮ ಆಗುವ ಹಂತಕ್ಕೆ ತಲುಪಿದೆ.ಇದರ ಭಾಗವಾಗಿ ಕೋರ್ಟ್ ನಲ್ಲಿ ದಾವೆ ಹೂಡಿದ ಜೀವರಾಜ್ ಹೈಕೋರ್ಟ್ ನಲ್ಲಿ ಅಂಚೆ ಮತಗಳ ಮರು ಎಣಿಕೆ ಮಾಡಲು ಜಡ್ಜಮೆಂಟ್ ಬಂದಿದೆ.

ಮೇ ಎರಡನೇ ತಾರೀಖು ಮತಗಳ ಎಣಿಕೆ ಪ್ರಾರಂಭಿಸುವಾಗ ಸ್ಟ್ರಾಂಗ್ ಓಪನ್ ಮಾಡುವಾಗ ಚುನಾವಣಾ ಬಾಕ್ಸ್ ಬೀಗ ತೆರೆಯಲಾಗಿದೆ ಡ್ಯಾಮೇಜ ಅಗಿವೆ ಎಂದು ತಕರಾರು ತೆಗೆದವರು ಸುಮ್ಮನಾಗಿದ್ದು ಏಕೆ ? ಕೇವಲ 279 ಮತ ಎಣಿಕೆ ಮುಗಿಯುವ ಮುನ್ನವೇ ಗೆದ್ದಾಗಿದೆ ಎಂದು ಮೆರವಣಿಗೆ ನಡೆಸಿ ಪಟಾಕಿ ಸಿಡಿಸಿದ್ದು ರಾಜೇಗೌಡರ ಕಡೆಯವರ ಆತುರ ತೋರಿಸುತ್ತಿದೆ.ಆದರೆ ಟೇಬಲ್ ಮುಂದೆ ಕುಳಿತ ಜೀವರಾಜ್ 1500 ಹೆಚ್ಚು ಅಂಚೆ ಮತಗಳನ್ನು ಎಣಿಸಲು ಒತ್ತಾಯಿಸಿ ಸಂಪೂರ್ಣ ಮತಗಳ ಎಣಿಕೆ ಮುಗಿದ ಮೇಲೆ 52 ಮತಗಳ ಅಂತರದಿಂದ ಗೆಲುವು ಖಚಿತವಾದ ಮೇಲೆ ಹೋಗಿದ್ದಾರೆ. ಇದರ ಮಧ್ಯೆ ಮತ ಎಣಿಕೆ ಕೇಂದ್ರದ ಮುಂದೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿಗರ ಮಧ್ಯೆ ಕಿತ್ತಾಟ ಕೂಗಾಟ ನಡೆದು ಪೊಲೀಸರು ಹೈರಾಣಾಗಿ ಹೋಗಿದ್ದಾರೆ.

ಜೀವರಾಜ್ ಗೆಲುವನ್ನು ಚುನಾವಣಾಧಿಕಾರಿ ಮಾಧ್ಯಮದವರಿಗೆ ತಿಳಿಸಿದ್ದಾರೆ.ನಂತರ ನಡೆದ ಬೆಳವಣಿಗೆಗಳು ರಾಜ್ಯ ಮಟ್ಟಕ್ಕೆ ಶಿಫ್ಟ್ ಆಗಿವೆ.ಅಡಳಿತ ಮತ್ತು ವಿಪಕ್ಷಗಳ ಮಧ್ಯೆ ನಿಂರತರ ಸಮರ ನಡೆಯುತ್ತಿದೆ. ಗೆದ್ದ ಅಭ್ಯರ್ಥಿಗೆ ಸರ್ಟಿಫಿಕೇಟ್ ನೀಡಲು ಸತಾಯಿಸಿದಾಗ ಲೀಗಲ್ ನೋಟೀಸ್ ಕೊಟ್ಟ ನಂತರ ಸರ್ಟಿಫಿಕೇಟ್ ಕೊಡಲಾಗಿದೆ.ಈಗ ವಿಧಾನ ಸಭಾ ಸದಸ್ಯರಾಗಿ ಪ್ರಮಾಣ ವಚನ ನೀಡದೆ ಸತಾಯಿಸಲಾಗುತ್ತಿದೆ ಎಂದು ರಾಜ್ಯಪಾಲರ ಬಳಿ ದೂರಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದು ಬಿಜೆಪಿಯವರ ಮತ ಚೋರಿಯಲ್ಲ ಡಖಾಯಿತಿ ಎಂದು ಟೇಬಲ್ ಗುದ್ದುತ್ತಿದ್ದಾರೆ.ಇದರ ಮಧ್ಯೆ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರಿಗೆ ಹೈಕೋರ್ಟ್ ಸ್ಟೇ ನೀಡಿದೆ.ಇಬ್ಬರಿಗೂ ಪ್ರತಿಷ್ಟೇ ನಿಜಾ ಇದು ಸದ್ಯಕ್ಕೆ ನಿಲ್ಲುವ ಲಕ್ಷಣಗಳಿಲ್ಲಾ.ರಾಜ್ಯ ಸರ್ಕಾರ ಮತ್ತು ವಿರೋಧ ಪಕ್ಷಗಳು ಪ್ರತಿಷ್ಠೆಯಾಗಿ ಪರಿಗಣಿಸಿರುವುದರಿಂದ ರಾಜಕೀಯ ಬೆಂಕಿ ಜ್ವಾಲೆ ಹೆಚ್ಚಾಗುತ್ತಿದೆ.ಉಳಿದಿರುವ ಎರಡು ವರ್ಷದ ಅಧಿಕಾರ ಯಾರಿಗೆ ದೊರೆಯುತ್ತದೆ ಎಂದರೆ ನ್ಯಾಯಾಲಯವೇ ಅಂತಿಮ ಜಡ್ಜಮೆಂಟ್ ನೀಡಬೇಕು.

ಅತ್ತು ಕರೆದು ಒತ್ತಾಯ ಮಾಡಿ ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.ಇನ್ನೂ ಮುಂದೆ ಮುಂದುವರೆಯಲಿದೆ ಮಾರಿ ಹಬ್ಬ ಏಕೆಂದರೆ ಘಾಸಿಗೊಂಡಿರುವ ರಾಜೇಗೌಡ ಮತ್ತು ಕಾಂಗ್ರೆಸ್ ಸರ್ಕಾರ ಇರುವುದರಿಂದ ಎಲ್ಲದಕ್ಕೂ ಆಡ್ಡಗಾಲು ಹಾಕುತ್ತಾರೆ. ಬಿಜೆಪಿಯವರು ಪ್ರತಿಭಟನೆ ಮಾಡುತ್ತಾರೆ ಹೀಗೆ ಎರಡು ವರ್ಷ ಕಾಂಗ್ರೆಸ್ ಮತ್ತು ಬಿಜೆಪಿ ಕಿತ್ತಾಟ,ಕೂಗಾಟ ಕೇಳ ಬೇಕಾದ ಅನಿವಾರ್ಯ ಕ್ಷೇತ್ರದ ಜನರಿಗಿದೆ.

Congress VS BJP clash in Sringeri

Share

Leave a comment

Leave a Reply

Your email address will not be published. Required fields are marked *

Don't Miss

ಕಳ್ಳರ ತಂಡ ಬಂಧನ-32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ವಶ

ತರೀಕೆರೆ: ಸರಣಿ ಮನೆ ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ತರೀಕೆರೆ ಉಪ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದು, ಅಂತರಜಿಲ್ಲಾ ಕಳ್ಳರ ತಂಡವನ್ನು ಬಂಧಿಸಿ ಸುಮಾರು 32.74 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು...

ಕಾಡು ಹಂದಿ ದಾಳಿಗೆ ಮಹಿಳೆ ಗಂಭೀರ ಗಾಯ

ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಉಪಟಳ ದಿನದಿಂದ ದಿನಕ್ಕೆ ಮಿತಿಮೀರುತ್ತಿದ್ದು, ಕಾಡಾನೆ ಮತ್ತು ಕಾಡೆಮ್ಮೆಗಳ ಬೆನ್ನಲ್ಲೇ ಇದೀಗ ಕಾಡು ಹಂದಿಗಳ ಭೀತಿ ಹೆಚ್ಚಾಗಿದೆ. ಮೂಡಿಗೆರೆ ತಾಲೂಕಿನ ಆಲೂರು ಗ್ರಾಮದಲ್ಲಿ ತೋಟದಲ್ಲಿ...

Related Articles

ಬಾಲ್ಯ ವಿವಾಹ ನಡೆದರೆ ಪೋಕ್ಸೋ ಪ್ರಕರಣ ದಾಖಲಿಸಲು ಸೂಚನೆ

ಚಿಕ್ಕಮಗಳೂರು: ಬಾಲ್ಯ ವಿವಾಹಕ್ಕೆ ನಿಷೇಧವಿದ್ದರೂ, ರಹಸ್ಯವಾಗಿ ಅಪ್ರಾಪ್ತರ ಮದುವೆ ನಡೆದರೆ ಪೋಕ್ಸೋ ಕಾಯಿದೆಯಡಿಯಲ್ಲೂ ಪ್ರಕರಣ ದಾಖಲಿಸುವಂತೆ...

ಜೀವರಾಜ್ ವಿರುದ್ಧದ FIRಗೆ ಹೈಕೋರ್ಟ್ ತಡೆ

ಚಿಕ್ಕಮಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆ...

ನಗರಸಭೆಯ 2.60 ಕೋಟಿ ರು. ವೆಚ್ಚದ ಫುಡ್ ಕೋರ್ಟ್ ಗೆ ಚಾಲನೆ

ಚಿಕ್ಕಮಗಳೂರು: ನಗರದ ಜನರ ಹಿತದೃಷ್ಟಿಯಿಂದ ಏನು ಮಾಡುತ್ತೇವೆಯೋ, ಅದು ಶಾಶ್ವತವಾಗಿ ಇರುವಂತೆ ಕೆಲಸ ಮಾಡಬೇಕು. ಪಕ್ಷಾತೀತವಾಗಿ...

ಅಕ್ರಮಗಳ ತನಿಖೆಗೆ ಒತ್ತಾಯ ಪೊಲೀಸ್ ದಬ್ಬಾಳಿಕೆ ವಿರುದ್ದ ಪ್ರತಿಭಟನೆ

ತರೀಕೆರೆಯಲ್ಲಿ ಬಿಜೆಪಿ ನೇತೃತ್ವದಲ್ಲಿ ಕೆಲವು ಸಂಘ ಸಂಸ್ಥೆಯವರು ಸ್ಥಳೀಯ ಶಾಸಕ ಶ್ರೀನಿವಾಸ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್...