ಚಿಕ್ಕಮಗಳೂರು: ನ್ಯಾಯಮೂರ್ತಿಗಳ ಮೇಲೆ ಹಲ್ಲೆಗೆ ಯತ್ನಿಸಿದ ವಕೀಲರ ವಿರು ದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಬಿಎಸ್ಪಿ ಹಾಗೂ ಶ್ರಾವಸ್ತಿ ಬುದ್ಧ ವಿಹಾರದ ಮುಖಂಡರುಗಳು ಬುಧವಾರ ಜಿಲ್ಲಾಡಳಿತ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ ಭಾರತ ಸಂವಿಧಾ ನದ ವ್ಯಾಪ್ತಿಯಡಿ ಬರುವ ಮೂರು ಅಂಗಗಳಲ್ಲಿ ನ್ಯಾಯಾಂಗಕ್ಕೆ ವಿಶೇಷವಾದ ಸ್ಥಾನಮಾನ ಹಾಗೂ ಗೌರ ವವಿದೆ. ನ್ಯಾಯಾಂಗವು ಗಟ್ಟಿಯಾದ ಕಾರಣ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಜೀವಂತಾಗಿದೆ ಎಂದರು.
ನ್ಯಾಯಾಂಗದ ಮೇಲಿನ ಯಾವುದೇ ದಾಳಿಯು ಪ್ರಜಾಪ್ರಭುತ್ವದ ಮೇಲೆ ಮತ್ತು ಭಾರತದ ಸಾರ್ವ ಭೌಮತ್ವದ ಮೇಲೆ ಮಾಡುವ ದಾಳಿಯಾಗಿದ್ದು ಆ ರೀತಿಯಲ್ಲಿ ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಗಳಿಗೆ ಶೂ ಎಸೆದು ವಕೀಲ ರಾಷ್ಟ್ರದ್ರೋಹದ ಕೃತ್ಯವೆಸಗಿದ್ದಾರೆ ಎಂದರು.
ನ್ಯಾಯಮೂರ್ತಿ ಬಿ.ಆರ್.ಗವಾಯಿಯವರು ಕಲಾಪದ ವೇಳೆಯಲ್ಲಿ ಮನುವಾದಿ ಮನಸ್ಥಿತಿಯ ವಕೀ ಲ ಸನಾತನದ ಮೇಲಿನ ದಾಳಿಯನ್ನು ಸಹಿಸುವುದಿಲ್ಲ ಎಂಬ ಘೋಷಣೆ ಕೂಗಿ ಧರಿಸಿದ್ಧ ಶೂ ಎಸೆಯ ಲು ಪ್ರಯತ್ನಿಸಿರುವುದು ಗಮನಿಸಿದರೆ ಭಾರತದಲ್ಲಿ ಇಂದಿಗೂ ಜಾತಿ ವ್ಯವಸ್ಥೆ ತಾಂಡವವಾಡುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ ಎಂದರು.
ಸುಪ್ರೀಂ ಕೋರ್ಟ್ ಬಿ.ಆರ್.ಗವಾಯಿ ಅವರು ದಲಿತ ಹಾಗೂ ಬೌದ್ಧ ಧರ್ಮದ ನ್ಯಾಯಮೂರ್ತಿ ಗಳಾಗಿದ್ದಾರೆ. ಸನಾತನಿ ಮನುವಾದಿ ಇರುವ ಜನರು ಇಂದಿಗೂ ಉನ್ನತ ಸ್ಥಾನಗಳಲ್ಲಿ ದಲಿತರು, ಹಿಂದು ಳಿದವರು, ಅಲ್ಪಸಂಖ್ಯಾತರು ಪದವಿ ಹೊಂದುವುದನ್ನು ವಿರೋಧಿಸುತ್ತಲೇ ಬಂದಿದ್ದು ಈ ಕೃತ್ಯವು ಕೂಡ ಒಂದು ಭಾಗವಾಗಿದೆ ಎಂದು ಹೇಳಿದರು.
ಶ್ರಾವಸ್ತಿ ಬುದ್ಧ ವಿಹಾರದ ಉಪಸಕ ಭರತ್ ಮಾತನಾಡಿ ನ್ಯಾಯಾಧೀಶರ ಮುಂದೆ ಹೇಗೆ ನಡೆದುಕೊ ಳ್ಳಬೇಕು ಎಂಬ ಕನಿಷ್ಟ ಪರಿಜ್ಞಾನವಿಲ್ಲದ ಈ ವಕೀಲರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕು ಹಾ ಗೂ ಉನ್ನತ ಮಟ್ಟದ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ರಾಜ್ಯಾ ದ್ಯಂತ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಕೆ.ಬಿ.ಸುಧಾ, ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಉಪಾ ಧ್ಯಕ್ಷ ಕೆ.ಎಸ್.ಮಂಜುಳಾ, ಅಸ್ಲೆಂಬಿ ಅಧ್ಯಕ್ಷ ಹೆಚ್.ಕುಮಾರ್, ಖಜಾಂಚಿ ಟಿ.ಹೆಚ್.ರತ್ನ, ಮುಖಂಡರುಗಳಾ ದ ಪುಟ್ಟಸ್ವಾಮಿ, ಕೆ.ಆರ್.ಗಂಗಾಧರ್, ಪಿ.ಕೆ.ಮಂಜುನಾಥ್, ಮಂಜಯ್ಯ, ಬುದ್ಧವಿಹಾರದ ಚಂದ್ರಶೇಖರ್, ಶೇಖರ್, ಪುನೀತ್, ಶೃಂಗಾರ್ ಮತ್ತಿತರರಿದ್ದರು.
Appeal for arrest of accused in assault on judges
Leave a comment