ಚಿಕ್ಕಮಗಳೂರು: – ಶ್ರೀಮಂತರು, ತೆರಿಗೆ ಭರಿಸುವ ವ್ಯಕ್ತಿಗಳಿಗೆ ಸೀಮಿತವಾಗಿದ್ಧ ಮತ ದಾನದ ದಿವ್ಯಾಸ್ತ್ರವನ್ನು ದೇಶದ ಸರ್ವಜನಾಂಗಕ್ಕೂ ವಿಸ್ತರಿಸಿದ ಮಹಾಚೇತನ ಡಾ|| ಬಿ.ಆರ್.ಅಂಬೇಡ್ಕರ್ ಎಂದು ಕೆ.ಎಸ್.ಆರ್.ಟಿ.ಸಿ. ಎಸ್ಸಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಗೌರವಾಧ್ಯ ಕ್ಷ ಹಿರೇಮಗಳೂರು ರಾಮಚಂದ್ರ ಹೇಳಿದರು.
ನಗರದ ಕೆ.ಎಸ್.ಆರ್.ಟಿ.ಸಿ. ಎಸ್ಸಿ, ಎಸ್ಟಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ದಿ ಸಂಘದ ಕಚೇ ರಿಯಲ್ಲಿ ಶನಿವಾರ ಭಾರತರತ್ನ, ಸಂವಿಧಾನ ಶಿಲ್ಪಿ ಡಾ|| ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನದ ಅಂಗ ವಾಗಿ ಮೌನಾಚರಣೆ ನಡೆಸಿ, ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
ಸರ್ವರಿಗೂ ಸಮಾನ ಅವಕಾಶ ಮತ್ತು ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೇ, ದೌರ್ಜನ್ಯಕ್ಕೆ ಒಳ ಗಾಗಿ ಕತ್ತಲೆಕೂಪದಲ್ಲಿ ನಲುಗಿ ಹೋಗಿದ್ಧ ಶೋಷಿತರನ್ನು ಸೂರ್ಯನ ಬೆಳಕಿನಂತೆ ದಾರಿತೋರಿದ ಅಪೂ ರ್ವ ಚೇತನ ಅಂಭೇಡ್ಕರ್. ಇವರ ಸನ್ಮಾರ್ಗದಲ್ಲಿ ಇಂದಿನ ಯುವಜನತೆ ಸಾಗುವ ಗುಣ ಮೈಗೂಡಿಸಿಕೊ ಳ್ಳಬೇಕು ಎಂದು ಸಲಹೆ ಮಾಡಿದರು.
ನೌಕರರ ಕುಟುಂಬ ಹಾಗೂ ಸಮಾಜದಲ್ಲಿ ಅಂಬೇಡ್ಕರ್ ವಿಚಾರಧಾರೆಯ ಬೀಜಭಿತ್ತಬೇಕು. ಅಲ್ಲದೇ ಸಂವಿಧಾನದ ಮಹತ್ವ ಹಾಗೂ ಅಂಬೇಡ್ಕರ್ ಜೀವನಚರಿತ್ರೆ ಅಧ್ಯಯನ ನಡೆಸುವ ಮೂಲಕ ಸಮಾಜದ ಒಳಿತಿಗಾಗಿ ಬಳಸಿಕೊಂಡರೆ ಮಾತ್ರ ಅಂಬೇಡ್ಕರ್ ತ್ಯಾಗ, ಬಲಿದಾನಕ್ಕೆ ನಿಜವಾದ ಅರ್ಥ ಬರಲಿದೆ ಎಂದರು.
ಸಮಾಜಬಾಂಧವರು, ನೌಕರರು ಪರಸ್ಪರ ಸ್ಪಂದಿಸುವ ಹಾಗೂ ಸಹಕರಿಸುವ ಗುಣ ಬೆಳೆಸಿಕೊಳ್ಳಬೇಕು. ಭಾರತದ ಅಪರೂಪ ಮಿನುಗು ನಕ್ಷತ್ರವಾದ ಅಂಭೇಡ್ಕರ್ ತತ್ವ, ಸಿದ್ದಾಂತಕ್ಕೆ ಎಲ್ಲೆಡೆ ಜಾಗೃತಗೊಳಿಸಬೇಕು. ಜಗತ್ತಿನಲ್ಲಿ ಸೂರ್ಯ, ಚಂದ್ರನ ಇರುವತನಕ ಅಂಬೇಡ್ಕರ್ ವಿಚಾರಧಾರೆ ಉಳಿಸಿ ಬೆಳೆಸುವ ಪಣ ತೊಡಬೇ ಕು ಎಂದು ಹೇಳಿದರು.
ಸಂಘದ ವಿಭಾಗದ ಅಧ್ಯಕ್ಷ ಉಮೇಶ್ ಮರ್ಲೆ ಮಾತನಾಡಿ ಶೋಷಿತರಿಗೆ ಜನ್ಮಕೊಟ್ಟವರು ಪಾಲಕರಾ ದರೆ, ಜೀವನದ ಮೌಲ್ಯ, ಪಾಠವನ್ನು ಬೋಧಿಸಿದವರು ಅಂಭೇಡ್ಕರ್. ಈ ಮಹಾನೀಯರ ಜೀವನವು ಪ್ರತಿ ಯೊಬ್ಬರಿಗೂ ಮಾದರಿ. ಆ ನಿಟ್ಟಿನಲ್ಲಿ ಸಂವಿಧಾನವನ್ನು ಸಂಪೂರ್ಣ ಅರಿತು ಬಾಲ್ಯದಿಂದಲೇ ಮಕ್ಕಳಿಗೆ ಬೋಧಿಸಿ ಅಂಬೇಡ್ಕರ್ ಋಣ ತೀರಿಸುವ ಕಾರ್ಯ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ವಿಭಾಗದ ಪ್ರಧಾನ ಕಾರ್ಯದರ್ಶಿ ಹೆಚ್.ಬಿ.ಕೃಷ್ಣಮೂರ್ತಿ, ಖಜಾಂಚಿ ಪ್ರಸನ್ನಕುಮಾರ್, ಉಪಾಧ್ಯಕ್ಷರಾದ ಡಿ.ಎಂ.ಹಾಲಪ್ಪ, ವೈ.ಆರ್.ದಿನೇಶ್ಕುಮಾರ್, ಪುಟ್ಟಸ್ವಾಮಿ ಕಾರ್ಯದ ರ್ಶಿ ರಮೇಶ್, ಮುಖಂಡರುಗಳಾದ ಕುಮಾರ್, ಉಪಸ್ಥಿತರಿದ್ದರು.
Ambedkar extended the right to vote to all
Leave a comment