Home namma chikmagalur chikamagalur ಲೋನ್ ಬಾಕಿ ವಸೂಲಾತಿಗಾಗಿ ಹೋಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು
chikamagalurCrime NewsHomeLatest Newsnamma chikmagalur

ಲೋನ್ ಬಾಕಿ ವಸೂಲಾತಿಗಾಗಿ ಹೋಗಿದ್ದ ಯುವಕ ರಸ್ತೆ ಅಪಘಾತದಲ್ಲಿ ಸಾವು

Share
Share

ಚಿಕ್ಕಮಗಳೂರು: ಕಾರು ಲೋನ್ ಬಾಕಿ ವಸೂಲಾತಿಗಾಗಿ ಹೋಗಿದ್ದ ಬೆಂಗಳೂರಿನ ಕಾರ್ ಚಾಲಕ ಯಶ್ವಂತ್ ಎಂಬ ಯುವಕನು ಗೂಡ್ಸ್ ವಾಹನ ಡಿಕ್ಕಿಯಾಗಿ ಮೃತಪಟ್ಟಿರುವ ದುರದೃಷ್ಟಕರ ಘಟನೆ ಸಕ್ಕರಾಯಪಟ್ಟಣ ಠಾಣಾ ವ್ಯಾಪ್ತಿಯ ಹಿರೇಗೌಜ ಗೇಟ್ ಬಳಿ ಸಂಭವಿಸಿದೆ.

ಹಾಸನ ವಿಜಯನಗರ ಬಡಾವಣೆಯ ನಿವಾಸಿ ರೂಪಾ ಎಂಬುವರ ಪುತ್ರ ಯಶ್ವಂತ್ ಬೆಂಗಳೂರಿನಲ್ಲಿ ಕಾರ್ ಡ್ರೈವಿಂಗ್ ಕೆಲಸ ಮಾಡುತ್ತಿದ್ದನು. ತಾನು ಈ ಹಿಂದೆ ಅಜ್ಜಂಪುರದ ವ್ಯಕ್ತಿಯೊಬ್ಬರಿಗೆ ನೀಡಿದ್ದ ಕಾರಿನ ಲೋನ್ ಮೊತ್ತವನ್ನು ಅವರು ಎರಡು ತಿಂಗಳಿನಿಂದ ಪಾವತಿಸದ ಕಾರಣ, ಆ ಕಾರನ್ನು ವಾಪಸ್ ತರಲು ಅಜ್ಜಂಪುರಕ್ಕೆ ಹೋಗುತ್ತಿರುವುದಾಗಿ ತಾಯಿಗೆ ತಿಳಿಸಿದ್ದನು.

ತಡರಾತ್ರಿ ಬಸ್ ಇಲ್ಲದ ಕಾರಣ ಸಖರಾಯಪಟ್ಟಣದ ನಯರಾ ಪೆಟ್ರೋಲ್ ಬಂಕ್ ಬಳಿ ಆತ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಕೆಎ-17 ಎಎ-1694 ನಂಬರಿನ ಮಹೀಂದ್ರ ಜಿತೋ ಗೂಡ್ಸ್‌ ವಾಹನವು ಯಶ್ವಂತನಿಗೆ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಡಿಕ್ಕಿ ಹೊಡೆದಿದೆ.

ಅಪಘಾತದಿಂದ ತೀವ್ರ ರಕ್ತಸ್ರಾವ ಗೊಂಡಿದ್ದ ಆತನನ್ನು ಅಂಬುಲೆನ್ಸ್ ಚಾಲಕ ವಿನಯ್ ಅವರು ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರಾದರೂ, ಚಿಕಿತ್ಸೆ ಫಲಿಸದೆ ಯಶ್ವಂತ್ ಕೊನೆಯುಸಿರೆಳೆದಿದ್ದಾನೆ. ಮೃತನ ತಾಯಿ ರೂಪಾ ನೀಡಿದ ದೂರಿನ ಮೇರೆಗೆ ಜಿತೋ ವಾಹನದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.

A young man who had gone to collect loan dues died in a road accident.

Share

Leave a comment

Leave a Reply

Your email address will not be published. Required fields are marked *

Don't Miss

ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ

ಚಿಕ್ಕಮಗಳೂರು: ರಾಜ್ಯದ ಅತ್ಯುನ್ನತ ಶಿಖರವಾದ ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಅಕ್ರಮವಾಗಿ ರಸ್ತೆ ನಿರ್ಮಾಣ ಹಾಗೂ ಮಣ್ಣು, ಅದಿರು ಸಾಗಾಣೆ ನಡೆಯುತ್ತಿರುವ ಆರೋಪ ಕೇಳಿಬಂದಿದ್ದು, ಪರಿಸರವಾದಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರಣ್ಯೇತರ...

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಪಲ್ಟಿ

ಚಿಕ್ಕಮಗಳೂರು : ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಓಮಿನಿ ಕಾರೊಂದು ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾದ ಘಟನೆ ಚಿಕ್ಕಮಗಳೂರು ತಾಲೂಕಿನ ದಿಣ್ಣೆಕೆರೆ ಗ್ರಾಮದ ಬಳಿ ಸಂಭವಿಸಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ. ಕೂದುವಳ್ಳಿಯ ಲಿಟಲ್...

Related Articles

A.C.F ಕೆ.ಎಸ್.ಮೋಹನ್ ನಿವಾಸದ ಮೇಲೆ ಲೋಕಾಯುಕ್ತಾ ದಾಳಿ

  ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಹಾಯಕ ಅರಣ್ಯ ಅಧಿಕಾರಿ ಕೆ.ಎಸ್.ನಿವಾಸ ಮತ್ತು ಸಂಭಂದಿಸಿದ ಹಲವು...

ಸಿ.ಟಿ.ರವಿಗೆ ಶೋಷಿತ ವರ್ಗದ ಅಪ್ಪಂದಿರಿಂದ ತಕ್ಕ ಪಾಠ

ಚಿಕ್ಕಮಗಳೂರು : ಆರ್‌ಎಸ್‌ಎಸ್ ನೊಂದಣಿ ಮಾಡಿಸಲು ಅವನಪ್ಪನಿಂದಲೂ ಆಗಲಿಲ್ಲ ಎಂದು ಪ್ರಿಯಾಂಕ ಖರ್ಗೆ ಬಗ್ಗೆ ಹೇಳಿರುವ...

ವಿಳಾಸ ಕೇಳುವ ನೆಪದಲ್ಲಿ ಎಂಟು ಲಕ್ಷ ರೂಪಾಯಿ ಹಣವಿದ್ದ ಬ್ಯಾಗ್‌ ಕಳವು

ಚಿಕ್ಕಮಗಳೂರು: ವಿಳಾಸ ಕೇಳುವ ನೆಪದಲ್ಲಿ ಗಮನ ಬೇರೆಡೆಗೆ ಸೆಳೆದು ಬರೋಬ್ಬರಿ ಎಂಟು ಲಕ್ಷ ರೂಪಾಯಿ ಹಣವಿದ್ದ...

ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ತರಾತುರಿಯಲ್ಲಿ ಮನೆಗೆ ಬೀಗ ಹಾಕದೆ ಹೊರಟ ದಂಪತಿಯ ನಿರ್ಲಕ್ಷ್ಯವನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಮನೆಯಲ್ಲಿದ್ದ...