Home namma chikmagalur chikamagalur ದೇವಸ್ಥಾನದಲ್ಲೇ ಮಗುವನ್ನು ಮರೆತುಹೋದ ಪೋಷಕರು!
chikamagalurHomeLatest Newsnamma chikmagalur

ದೇವಸ್ಥಾನದಲ್ಲೇ ಮಗುವನ್ನು ಮರೆತುಹೋದ ಪೋಷಕರು!

Share
Share

ಕಳಸ: ಪಟ್ಟಣದ ಶ್ರೀಕಲಶೇಶ್ವರ ಸ್ವಾಮಿ ದೇವಸ್ಥಾನಕ್ಕೆ ಬಂದಿದ್ದ ದಂಪತಿ, ದೇವರ ದರ್ಶನ ಪಡೆದು ಹಿಂದಿರುಗುವಾಗ ತಮ್ಮ ನಾಲ್ಕು ವರ್ಷದ ಹೆಣ್ಣು ಮಗುವನ್ನು ದೇವಸ್ಥಾನದ ಆವರಣದಲ್ಲೇ ಮರೆತು ಕಾರಿನಲ್ಲಿ ಹೊರಟುಹೋದ ಘಟನೆ ಶನಿವಾರ ನಡೆದಿದ್ದು ಸ್ಥಳೀಯರ ಮಾನವೀಯತೆ ಹಾಗೂ ಕಳಸ ಪೊಲೀಸರ ತಕ್ಷಣದ ಕಾರ್ಯಾಚರಣೆಯಿಂದಾಗಿ ಮಗು ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದೆ.

ಕೊಳ್ಳೆಗಾಲದ ಶಿವಶಂಕರ್ ದಂಪತಿ ಕಳಸದ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದ ಬಳಿಕ ಹೊರನಾಡಿಗೆ ಹೊರಟಿದ್ದಾರೆ. ದೇವಸ್ಥಾನದ ಆವರಣದಿಂದ ಪೋಷಕರು ಕಾರು ಹತ್ತಿ ಹೊರಟಾಗ, ನಾಲ್ಕು ವರ್ಷದ ಪುಟ್ಟಮಗು ತಾನು ಒಂಟಿಯಾಗಿದ್ದನ್ನು ಕಂಡು ದಿಗಿಲುಗೊಂಡಿದೆ.

ತನ್ನ ಕಣ್ಣೆದುರೇ ಹೆತ್ತವರು ಕಾರಿನಲ್ಲಿ ಹೋಗುತ್ತಿರುವುದನ್ನು ಕಂಡು, ಕಣ್ಣೀರು ಹಾಕುತ್ತಾ ಕಾರಿನ ಹಿಂದೆಯೇ ರಸ್ತೆಯಲ್ಲಿ ಓಡಲಾರಂಭಿಸಿದೆ. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಮಗುವನ್ನು ರಕ್ಷಿಸಿದ್ದಾರೆ. ನಂತರ ಮಗುವಿಗೆ ಧೈರ್ಯ ತುಂಬಿ, ಕಳಸ ಪೊಲೀಸ್ ಠಾಣೆಗೆ ಕರೆತಂದು ಒಪ್ಪಿಸಿದ್ದಾರೆ.

ಪೊಲೀಸ್ ಠಾಣೆಯಲ್ಲಿ ಮಗು ಅಳುತ್ತಾ ತಾನು ಕೊಳ್ಳೆಗಾಲದವಳೆಂದು, ತನ್ನ ಹೆಸರು, ಹೆತ್ತವರ ಹೆಸರು ಹಾಗೂ ಸ್ಥಳೀಯರ ಮಾನವೀಯತೆ, ಪೊಲೀಸರ ಸಮಯ ಪ್ರಜ್ಞೆಯಿಂದ ಹೆತ್ತವರ ಮಡಿಲು ಸೇರಿದ ಕಂದಮ್ಮ
ಶಾಲೆಯ ಹೆಸರನ್ನು ಸ್ಪಷ್ಟವಾಗಿ ಹೇಳಿದೆ.

“ನನಗೆ ನನ್ನ ಅಪ್ಪ ಬೇಕು, ಅಮ್ಮ ಬೇಕು. ಅವರಿಗೆ ನಾನಂದ್ರೆ ಇಷ್ಟ, ನನಗೂ ಅವರಂದ್ರೆ ಇಷ್ಟ. ಆದರೆ, ನನ್ನನ್ನು ಇಲ್ಲೇ ಬಿಟ್ಟು ಹೋಗಿದ್ದಾರೆ. ನನ್ನನ್ನು ಅಪ್ಪನ ಹತ್ತಿರ ಕಳುಹಿಸಿ…” ಎಂದು ಮಗು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಗ ಅಲ್ಲಿದ್ದ ಸಾರ್ವಜನಿಕರು ಹಾಗೂ ಪೊಲೀಸರ ಕರುಳು ಹಿಂಡಿದಂತಾಗಿದೆ. ಪೊಲೀಸರು ಮಗುವಿಗೆ ಚಾಕೊಲೆಟ್ ನೀಡಿ, ಸಾಂತ್ವನ ಹೇಳಿದ್ದಾರೆ. ಅತ್ತ ಕಳಸದಿಂದ ಕಾರಿನಲ್ಲಿ ಹೊರಟ
ಪೋಷಕರು ಹೊರನಾಡು ತಲುಪಿದ್ದಾರೆ.

ಅಲ್ಲಿ ಕಾರಿನಿಂದ ಇಳಿಯುವಾಗ ತಮ್ಮೊಂದಿಗೆ ಮಗು ಇಲ್ಲದಿರುವುದು ಅರಿವಿಗೆ ಬಂದಿದೆ. ಗಾಬರಿಗೊಂಡು ತಕ್ಷಣವೇ ದೇವಸ್ಥಾನದ ಕಚೇರಿಯಲ್ಲಿ ವಿಚಾರಿಸಿದಾಗ, ಮಗು ಕಳಸ ಪೊಲೀಸ್ ಠಾಣೆಯಲ್ಲಿ
ಸುರಕ್ಷಿತವಾಗಿರುವ ಮಾಹಿತಿ ಲಭ್ಯವಾಗಿದೆ.

ಸುಮಾರು ಒಂದು ಗಂಟೆಯ ಕಾಲ ಹೆತ್ತವರಿಂದ ದೂರವಾಗಿ ಕಣ್ಣೀರಿಟ್ಟ ಕಂದಮ್ಮ. ಕೊನೆಗೂ ಪೊಲೀಸ್ ಠಾಣೆಗೆ ಧಾವಿಸಿ ಬಂದ ಪೋಷಕರನ್ನು ಕಂಡು
ನಿಟ್ಟುಸಿರುಬಿಟ್ಟಿದೆ. ಪೊಲೀಸರು ಸೂಕ್ತ ಪರಿಶೀಲನೆ ನಡೆಸಿ ಮಗುವನು ಪೋಷಕರಿಗೆ ಹಸ್ತಾಂತರಿಸಿದ್ದಾರೆ.

Parents who forgot their child in the temple!

Share

Leave a comment

Leave a Reply

Your email address will not be published. Required fields are marked *

Don't Miss

ಕಾಫಿನಾಡಿನಲ್ಲಿ ಮುಂದಿನ ಮೂರು ದಿನಗಳ ಭಾರೀ ಮಳೆ ಸಾಧ್ಯತೆ

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ಪ್ರವಾಸಿಗರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಜಿಲ್ಲಾಡಳಿತ ಮಹತ್ವದ ಸೂಚನೆ ನೀಡಿದೆ. ಭಾರತೀಯ ಹವಾಮಾನ ಇಲಾಖೆ...

ಹಿಂಬದಿಯಿಂದ ಬಂದ ಬೈಕ್ ಡಿಕ್ಕಿಗೆ ಕೂಲಿ ಕಾರ್ಮಿಕ ಸಾವು

ಶೃಂಗೇರಿ: ರಾಷ್ಟ್ರೀಯ ಹೆದ್ದಾರಿ 169ರ ಶೌಕತ್ ಅಲಿ ಗ್ಯಾರೇಜ್ ಮುಂಭಾಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಂಜುನಾಥ್ ಎಂಬ ಕೂಲಿ ಕಾರ್ಮಿಕನಿಗೆ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿದ್ದಾರೆ. ಜೂನ್...

Related Articles

ಗೂಡ್ಸ್‌ ವಾಹನ ಡಿಕ್ಕಿಗೆ ಯುವಕ ಸಾವು

ಕಡೂರು: ಸಖರಾಯಪಟ್ಟಣ ಸಮೀಪದ ಹಿರೇಗೌಜ ಗೇಟ್ ಬಳಿ ನಡೆದ ರಸ್ತೆ ಅಪ ಘಾತದಲ್ಲಿ ಗೂಡ್ಸ್ ವಾಹನ...

ಮಳಲೂರು ಏತ ನೀರಾವರಿ ಯೋಜನೆಗೆ ಮರುಜೀವ

ಚಿಕ್ಕಮಗಳೂರು: ಕಾಫಿನಾಡಿನ ರೈತರ ಬಹುದಿನಗಳ ಕನಸಾಗಿದ್ದ ಮಳಲೂರು ಏತ ನೀರಾವರಿ ಯೋಜನೆಗೆ ಕೊನೆಗೂ ಮರುಜೀವ ಬಂದಿದ್ದು,...

ಶ್ರೀ ವೀರನಾರಾಯಣ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಕಿಡಿಗೇಡಿಗಳು ವಿಕೃತಿ

ಚಿಕ್ಕಮಗಳೂರು: ಹೊಯ್ಸಳರ ಕಾಲದ ಅತ್ಯಂತ ಪ್ರಸಿದ್ಧ ಹಾಗೂ ಅಪೂರ್ವ ಕಲೆ-ವಾಸ್ತುಶಿಲ್ಪದ ಹೆಗ್ಗುರುತಾಗಿರುವ ಚಿಕ್ಕಮಗಳೂರು ತಾಲೂಕಿನ ಬೆಳವಾಡಿ...

ಹುಬ್ಬಳ್ಳಿ -ಚಿಕ್ಕಮಗಳೂರು ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸಂಚಾರ

ಚಿಕ್ಕಮಗಳೂರು: ನೈಋತ್ಯ ರೈಲ್ವೆಯು ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು ಹುಬ್ಬಳ್ಳಿ ಮತ್ತು ಚಿಕ್ಕಮಗಳೂರು ನಡುವೆ ವಿಶೇಷ...