Home namma chikmagalur chikamagalur ಮಲೆನಾಡಿನಲ್ಲಿ ಮಳೆ – ಬಯಲ ಸೀಮೆಯಲ್ಲಿ ಬರ-ಬರ
chikamagalurHomeLatest Newsnamma chikmagalur

ಮಲೆನಾಡಿನಲ್ಲಿ ಮಳೆ – ಬಯಲ ಸೀಮೆಯಲ್ಲಿ ಬರ-ಬರ

Share
Share

ಚಿಕ್ಕಮಗಳೂರು:  ಮಲೆನಾಡು ಪ್ರದೇಶಗಳಲ್ಲಿ ಮಳೆ ಬರುತ್ತಿದೆ ಆದರೆ ಬಯಲು ಪ್ರದೇಶದಲ್ಲಿ ಮಳೆ ಬಾರದೆ ರೈತರು ಮತ್ತು ಜನತೆ ತಲೆ ಮೇಲೆ ಕೈ ಹೊತ್ತುಕೊಂಡು ಪರಿತಾಪಿಸುತ್ತಿದ್ದಾರೆ.

ಮಲೆನಾಡು ಪ್ರದೇಶದ ಬಾಳೆಹೊನ್ನೂರು,ಕೊಪ್ಪ,ಕಳಸ ಮೂಡಿಗೆರೆ ಮತ್ತು ಶೃಂಗೇರಿಯಲ್ಲಿ ಎಡ ಬಿಡದೆ ಮಳೆ ಬರುತ್ತಿದೆ.ಚಿಕ್ಕಮಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳೆಗಾರರಿಗೆ ಮತ್ತು ರೈತರಿಗೆ ಸಮಾಧಾನ ತರುವಂತ ಮಳೆ ಬರುತ್ತಿದೆ. ಆದರೆ ಕೆರೆ ಕಟ್ಟೆಗಳಿಗೆ ನೀರು ತುಂಬಿಲ್ಲಾ ಆದರೂ ಮುಂದಿನ ದಿನಗಳಲ್ಲಿ ಮಳೆ ಬರುವ ಸಾಧ್ಯತೆ ಇದೆ.

ಬಯಲು ಸೀಮೆಯ ಕಡೂರು, ಬೀರೂರು ಮತ್ತು ತರೀಕೆರೆಯಲ್ಲಿ ಒಂದೆರಡು ದಿನ ಮಳೆ ಬಂದರು ಭೂಮಿ ತಂಪಾಗಿಲ್ಲ,ಇನ್ನುಳಿದಂತೆ ಕಡೂರು ತಾಲ್ಲೂಕಿನ ಯಗಟಿ,ಸಿಂಗಟಗೆರೆ ಪಂಚನಳ್ಳಿ ಮತ್ತು ಚೌಳಹಿರಿಯೂರು,ಹಿರೇನಲ್ಲೂರು ಮತಿಘಟ್ಟ ಪ್ರದೇಶಕ್ಕೆ ಮಳೆ ಬಂದಿಲ್ಲ

ಇದೇ ರೀತಿಯಲ್ಲಿ ಅಜ್ಜಂಪುರ ತಾಲ್ಲೂಕಿನ ಅಜ್ಜಂಪುರ ಮತ್ತು ಶಿವನಿ ಭಾಗದಲ್ಲಿ ಹನಿ ಮಳೆ ಬಾರದಿರುವುದು ರೈತರು ಸಂಕಷ್ಟದಿಂದ ನರಳುತ್ತಿದ್ದಾರೆ.ತೋಟಗಳು ಒಣಗುತ್ತಿವೆ ಭೂಮಿ ಬಿರುಕು ಬಿಟ್ಟಿದೆ ದನಕರುಗಳಿಗೆ ನೀರಿಲ್ಲ ಜೊತೆಗೆ ಜನರಿಗೂ ನೀರಿನ ಕಷ್ಟ ಹೇಳತೀರದಾಗಿದೆ.ಮುಂದುವರಿದು ಆಮೃತಾಪುರ ಸುತ್ತಮುತ್ತಲಿನಲ್ಲಿ ಆಗೊಮ್ಮೆ ಈಗೊಮ್ಮೆ ಮಳೆ ಹನಿಗಳು ಬಂದು ಹೋದರು ಜನರಿಗೆ ಉಪಯೋಗವಾಗುತ್ತಿಲ್ಲ.

ಲಕ್ಕವಳ್ಳಿ,ಲಿಂಗದಳ್ಳಿ ಪ್ರದೇಶದಲ್ಲಿ ಮತ್ತು ತರೀಕೆರೆ ಸುತ್ತ ಮುತ್ತ ಕೂಡ ಯಾವಾಗ ಹದ ಮಳೆ ಬರಬಹುದು ಎಂದು ಆಕಾಶದತ್ತ ಜನರ ಕಣ್ಣುಗಳು ನೋಡತೊಡಗಿವೆ. ಜೂನ್ ತಿಂಗಳಲ್ಲಿ ಮುಂಗಾರು ಮಳೆ ಬರುತ್ತದೆ ಎಂದು ನಿರೀಕ್ಷೆ ಮಾಡುವುದು ಸಹಜ ಆದರೆ ಜೂನ್ ಅರ್ಧ ತಿಂಗಳು ಮುಗಿಯುತ್ತಾ ಬಂದರು ಬಯಲು ಪ್ರದೇಶದಲ್ಲಿ ಮಳೆಯ ಸುಳಿವಿಲ್ಲ.ಭೂಮಿ ಹದ ಮಾಡಿ ಬಿತ್ತನೆ ಬೀಜ ಮತ್ತು ರಸಗೊಬ್ಬರ ಶೇಖರಣೆ ಮಾಡಿಕೊಂಡು ಕೈ,ಕೈ ಹಿಸಕಿ ಕೊಂಡು ಕತ್ತು ಮುಗಿಲು ನೋಡುತ್ತಿವೆ.

ರೈತರ ಮತ್ತು ಜನರ ಕಷ್ಟ ಕೇಳ ಬೇಕಾದ ಜನಪ್ರತಿನಿಧಿಗಳು ಮಂತ್ರಿ ಸ್ಥಾನ,ಬೋರ್ಡ್ ನೇತಾಕಿಕೊಂಡು ಬರುತ್ತೇವೆ ಎಂದು ಬೆಂಗಳೂರಿನಲ್ಲಿ ಲಾಭಿ ಮಾಡಿಕೊಂಡು ಮುಖಂಡರ ಹಿಂದೆ ಮುಂದೆ ಸುತ್ತುತ್ತಿದ್ದಾರೆ.
ಇನ್ನೂ ಒಂದು ವಾರದಲ್ಲಿ ಮಳೆ ಬರದಿದ್ದರೆ ಇಲ್ಲಿನ ರೈತರು ಮತ್ತು ಜನ ಗುಳೆ ಹೋಗುವ ದುಸ್ಥಿತಿ ಒದಗಿಬರುವುದು ಖಚಿತ. ದೇವರು ಪೂಜೆ ಪುನಸ್ಕಾರಲ್ಲಿ ಜನ ದಿನಗಳನ್ನು ದೂಡುತ್ತಿದ್ದಾರೆ.ಪ್ರಕೃತಿ ಮುಂದೆ ಯಾರು ಏನು ಮಾಡುವುದು ಎಂದು ಗೊಣಗುತ್ತಿದ್ದಾರೆ.

ದೃಶ್ಯ ಮಾಧ್ಯಮ ಮತ್ತು ಪತ್ರಿಕೆಗಳು ನೈಜ ಸ್ಥಿತಿ ಹೇಳದೆ ಚಿಕ್ಕಮಗಳೂರಿನಲ್ಲಿ ಮಳೆ ಬಂದರೆ ಸಿಂಗಟಗೆರೆ,ಶಿವನಿಯಲ್ಲಿ ಛತ್ರಿ ಹಿಡಿದುಕೊಂಡು ವರದಿ ಮಾಡುತ್ತಿದ್ದಾರೆ.ಜನಪ್ರತಿನಿಧಿಗಳು ಮಂತ್ರಿ ಸ್ಥಾನ ಬೋರ್ಡ್ ನೆತಾಕಿಕೊಂಡು ಬರಲು ಸಾಧ್ಯವಿಲ್ಲ ಎಂದು ಜನರ ಸಂಕಷ್ಟ ನಿವಾರಣೆಗೆ ಮುಂದಾಗದಿದ್ದರೆ ಜನ ಚುನಾವಣೆ ಎಂಬ ಮಾರಿ ಹಬ್ಬಕ್ಕೆ ಕಾಯುತ್ತಿದ್ದಾರೆ.

Rain in the hills – drought in the plains

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...