ಚಿಕ್ಕಮಗಳೂರು :ಕರ್ನಾಟಕ ರೈತ ಸಂಘದ ಚಿಕ್ಕಮಗಳೂರು ತಾಲೂಕು ಅಧ್ಯಕ್ಷರಾಗಿ ಹಾದಿಹಳ್ಳಿ ಭದ್ರೇಗೌಡ ಆಯ್ಕೆಯಾಗಿದ್ದಾರೆಂದು ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಹೇಶ್ ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಗುರುವಾರ ಮಾತನಾಡಿ, ರೈತ ಸಂಘದ ತಾಲೂಕು ಸಂಚಾಲಕರಾಗಿದ್ದ ಮತ್ತಾವರದ ಜಯರಾಂ ಅವರ ನೇತೃತ್ವದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜ್ ಅವರ ಅಧ್ಯಕ್ಷೆಯಲ್ಲಿ ಸೇರಿದ್ದ ತಾಲೂಕು ರೈತ ಸಂಘದ ಕಾರ್ಯಕರ್ತರು ಮತ್ತು ಜಿಲ್ಲಾ ಸಮಿತಿ ಪದಾಧಿಕಾರಿಗಳ ಸಭೆಯಲ್ಲಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು ಎಂದು ಹೇಳಿದರು.
ರೈತ ಸಂಘದ ತಾಲೂಕು ಕಾರ್ಯಾಧ್ಯಕ್ಷ ಮತ್ತಾವರ ಜಯರಾಂ, ಗೌರವಾಧ್ಯಕ್ಷರಾಗಿ ಆನಂದಕುಮಾರ್, ಮೂರ್ತಿ,ಲಕ್ಕೇಗೌಡ, ಪ್ರಧಾನಕಾರ್ಯದರ್ಶಿಯಾಗಿ ವೆಂಕಟೇಶ್, ಖಜಾಂಚಿಯಾಗಿ ಕೆ.ಟಿ.ಸುನಿಲ್ಕುಮಾರ್, ಉಪಾಧ್ಯಕ್ಷಾಗಿ ಪುಟ್ಟೇಗೌಡ, ಜಗದೀಶ್,ಪಾಂಡು, ಸುಂದ್ರೇಶ್, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದೇಗೌಡ, ಸಹಕಾರ್ಯದರ್ಶಿಯಾಗಿ ಹೇಮಂತ್, ನಾಗೇಶ್, ಬಸವರಾಜ್, ಜಯಣ್ಣ, ಗಿರೀಶ್, ಮಹಿಳಾ ಸಂಚಾಲಕರಾಗಿ ರಾಧಮ್ಮ, ಯುವಘಟಕದ ಅಧ್ಯಕ್ಷರಾಗಿ ಜೀವನ್, ಉಪಾಧ್ಯಕ್ಷರಾಗಿ ಗೋಪಾಲ್, ಚಂದ್ರಶೇಖರ್, ಲೋಕೇಶ್, ಸೇರಿದಂತೆ ೨೦ ಮಂದಿ ಕಾರ್ಯಕರ್ತರು ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಸರ್ವಾನುಮತದಿಂದ ಆಯ್ಕೆಮಾಡಲಾಗಿದೆ ಎಂದರು.
ಸಂಘಟನೆ ಬೆಳೆಯುತ್ತಾ ಹೋದಂತೆ ಕೆಲವು ಸ್ವಹಿತಾಸಕ್ತಿಗಾಗಿ ಬಂದ ನಾಯಕರು ಕಾರ್ಯಕರ್ತರು ಅವರ ಸ್ವಾರ್ಥ ಸಾಧನೆ ಆಗದೆ ಹೊರನಡೆಯುತ್ತಾರೆ. ಇದರಿಂದ ಸಂಘಟನೆಗೆ ಯಾವುದೇ ನಷ್ಟ ಉಂಟಾಗುವುದಿಲ್ಲ ಹೊಸ ಕಾರ್ಯಕರ್ತರುಗಳು ಸಂಘಟನೆಗೆ ಸೇರ್ಪಡೆಗೊಳ್ಳುತ್ತಾರೆಂದು ಹೇಳಿದರು.
ರೈತ ಸಂಘದ ಜಿಲ್ಲಾಗೌರವಾಧ್ಯಕ್ಷ ಎಂ.ಸಿ.ಬಸವರಾಜ್, ತಾಲೂಕು ಅಧ್ಯಕ್ಷ ಭದ್ರೇಗೌಡ, ಖಜಾಂಚಿ ಸುನಿಲ್ಕುಮಾರ್, ಉಪಾಧ್ಯಕ್ಷರಾದ ಆನಂದ್, ನೆರಡಿ ಸುಂದರೇಶ್, ಲಕ್ಕೇಗೌಡ, ಮಹಿಳಾ ಸಂಚಾಲಕಿ ರಾಧಮ್ಮ ಇದ್ದರು.
Hadihalli Bhadregowda elected as the president of the Taluk Farmers’ Association
Leave a comment