Home namma chikmagalur chikamagalur ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?
chikamagalurHomeLatest Newsnamma chikmagalurPolitical NewsState News

ಸಿದ್ದು ಮೌನಂ ಸಮ್ಮತಿ ಯಾವಾಗ ಸ್ಪೋಟಿಸುತ್ತದೆ ?

Share
Share

ಕರ್ನಾಟಕದ ರಾಜಕಾರಣದಲ್ಲಿ ಇಂತಹ ಬೆಳವಣಿಗೆ ನಡೆಯ ಬಹುದು ಎಂದು ಯಾರು ಕೂಡ ನಿರೀಕ್ಷೆ ಮಾಡಿರಲಿಲ್ಲ. 2013 ರಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಡಿ.ಕೆ.ಶಿವಕುಮಾರ್ ಮಂತ್ರಿಯಾಗಲಿಲ್ಲಾ.ಒಂದು ವರ್ಷಗಳ ಕಾಲ ಡಿ.ಕೆ.ಶಿ.ಪಟ್ಟ ಸಂಕಟವನ್ನು ಯಾರಿಗೂ ಹೇಳಲಿಲ್ಲ. ಈಗ ಇದೇ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ರವರನ್ನು ಮುಖ್ಯಮಂತ್ರಿ ಹುದ್ದೆಗೆ ಕರೆದುಕೊಂಡು ಬಂದು ಕೂರಿಸಿದ್ದಾರೆ ಎಂದರೆ ಡಿ.ಕೆ.ತಾಕತ್ತು ಮತ್ತು ತಾಳ್ಮೆ ಮೆಚ್ಚಲೇ ಬೇಕು.

ಸಿದ್ದರಾಮಯ್ಯ ನಡೆದು ಬಂದ ದಾರಿ,ಜ್ಞಾನ, ನಡವಳಿಕೆ, ಸ್ವಾಭಿಮಾನ ಮೆಚ್ಚುವ ಜನರೇ ಹೆಚ್ಚು. ಸಾರಸ್ವತ ಲೋಕದ ಜನ ಇವರನ್ನು ಮೆಚ್ಚಿ ಕೊಂಡಿದ್ದರು. ಆದರೆ ಆದೇ ಮಾತು ಡಿ.ಕೆ.ಶಿ ಬಗ್ಗೆ ಹೇಳಲು ಸಾಧ್ಯವಿಲ್ಲ.
ಸಿದ್ದರಾಮಯ್ಯಗೆ ಸಿದ್ದರಾಮಯ್ಯ ಸರಿ ಸಾಟಿ.ಬಡತನದ ನೋವು ಜೊತೆಗೆ ಹೋರಾಟಗಾರರ ,ಸಾಮಾಜಿಕ ಹಿನ್ನೆಲೆಯಲ್ಲಿ ಅಳೆದು ತೂಗಿ ನೋಡುವ ಜನರು ಮೆಚ್ಚಿದ್ದು .ಆದರೆ ಶಿವಕುಮಾರ್ ನಂತಹ ವ್ಯಾಪಾರದ ಮನಸ್ಸು ಸ್ಥಿತಿಯ ಕೊತ್ವಾಲ್ ನ ನಡೆ ನುಡಿಯ ವ್ಯಕ್ತಿಯನ್ನು ಸಿಂಹಾಸನದ ಮೇಲೆ ಕೂರಿಸಲು ಸಿದ್ದರಾಮಯ್ಯ ಟೂಲ್‌ ಕಿಟ್ ಬಳಕೆಯಾಗಿದ್ದು ಇವತ್ತಿನ ವ್ಯಾಪಾರಸ್ಥರಿಗೆ ಈ ಪರಿ ಸೊಂಟ ಬಗ್ಗಿಸಿ ನಡೆದುಕೊಂಡ ಸಿದ್ದರಾಮಯ್ಯರನ್ನು ಕ್ಷಮಿಸಲು ಸಾಧ್ಯವಿಲ್ಲ.

ಎಲ್ಲಿಯ ಸಿದ್ದರಾಮಯ್ಯ, ಅದೇ ಎಲ್ಲಿಯ ಡಿ.ಕೆ.ಶಿವಕುಮಾರ್ ಉತ್ತರ ,ದಕ್ಷಣ ಧ್ರುವಗಳು ಈ ಹೇಸಿಗೆ ರಾಜಕಾರಣಕ್ಕೆ ಒಂದಾಗಿದ್ದು ಮಾತ್ರ ಜನ ಕ್ಷಮೆ ಮಾಡಲು ಸಾಧ್ಯವಿಲ್ಲ. ಇನ್ನೂ ಎರಡು ವರ್ಷ ಡಿ.ಕೆ.ಸಿ ಆಡಳಿತ ನೋಡ ಬೇಕು ಎಂಬುದು ಯಕ್ಷ ಪ್ರಶ್ನೆಯಲ್ಲ ಅನಿವಾರ್ಯ ತಂದಿಟ್ಟಿರುವ ರಾಹುಲ್, ಸೋನಿಯಾ ಮತ್ತು ಪ್ರಿಯಾಂಕ ಗಾಂಧಿಗಳು ಮುಂದಿನ ದಿನಗಳಲ್ಲಿ ನೋವು ಅನುಭವಿಸ ಬೇಕು ಜೊತೆಗೆ ಜನರು ಕೂಡ.

ಸಿದ್ದರಾಮಯ್ಯ ಹುಣ್ಣಿಮೆ ಯ ಬೆಳದಿಂಗಳ ರೀತಿಯಲ್ಲಿ ನಾಡಿನ ಜನರಲ್ಲಿ ಬೆರೆತರೆ,ಡಿ.ಕೆ.ಶಿವಕುಮಾರ್ ಅಮವಾಸ್ಯೆಯಂತೆ ಜನರ ಮನದಲ್ಲಿ ಇಟ್ಟುಕೊಂಡವರು ಹೆಚ್ಚು.ಸಿದ್ದರಾಮಯ್ಯ ಭಾಷೆ, ಆಡಳಿತ, ನಡೆ,ನಡಿಯಲ್ಲಿ ಕಂಗೊಳಿಸಿದ್ದಾರೆ.ಡಿ.ಕೆ.ಉತ್ತಮ ಸಂಘಟಕ ನಿಜ ಎಲ್ಲದರಲ್ಲೂ ವ್ಯವಹಾರ, ನಡೆ,ನುಡಿ ಭಾಷೆಯಲ್ಲಿ ಥೇಟ್ ಕೊತ್ವಲನ ಪಡಿಯಚ್ಚು ಎಂದು ಕರೆಯುವವರೆ ಹೆಚ್ಚು.

ಕುರ್ಚಿ ಕಾಳಗದಲ್ಲಿ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸಿದಂತೆ ಆಡಳಿತದಲ್ಲಿ ಸೈ ಅನ್ನಿಸಿಕೊಂಡರೆ ಮಾತ್ರ ಮುಂದೆ ರಾಜಕಾರಣ ಮಾಡಬಹುದು. ಇಲ್ಲದಿದ್ದರೆ ಬಂದ ಪುಟ್ಟ, ಹೋದ ಪುಟ್ಟ ಎನ್ನಿಸಿಕೊಳ್ಳು ಬೇಕಾಗುತ್ತದೆ.ಕಾಂಗ್ರೆಸ್ ನಲ್ಲಿ ಬೂದಿ ಮುಚ್ಚಿದ ಕೆಂಡ ಇರುವುದು ಸ್ಪಷ್ಟ ಅದು ಯಾವಾಗ ಬೇಕಾದರೂ ಹತ್ತಿ ಕೊಳ್ಳಬಹುದು.

ಅಧಿಕಾರ ಎಂಬುದು ಮಾಯೆಯಂತೆ,ಅದರ ನಶೆ ಏರಿಕೆ ಹೆಚ್ಚಾದರೂ ಕಷ್ಟ.ಕಡಿಮೆಯಾದರೂ ಸಂಕಷ್ಟ. ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಮುಖ್ಯ. ಡಿ.ಕೆ.ಪರಿಸ್ಥಿತಿ ಮುಳ್ಳಿನ ದಾರಿ ಅವರ ವಿರೋಧಿಗಳು “ಮೌನ” ವಾಗಿದ್ದಾರೆ ಎಂದು ತಿಳಿದು ಹೆಜ್ಜೆಗಳನ್ನು ಇರಬೇಕಾಗುತ್ತದೆ. ಮೌನ ಸ್ಫೋಟವಾದರೆ ಕಷ್ಟ,ಕಷ್ಟ.

When will the silent consent explode?

Share

Leave a comment

Leave a Reply

Your email address will not be published. Required fields are marked *

Don't Miss

ಅಧಿಕಾರ ಎಂಬ ಮಾಯಾ ಜಿಂಕೆ ಮರೆಯಾಗಿದ್ದು ಏಕೆ ?

ಚಿಕ್ಕಮಗಳೂರು: ಕಳೆದ ನಾಲ್ಕು ವರೆ ವರ್ಷಗಳ ಹಿಂದೆಯೇ ವಿಧಾನ ಪರಿಷತ್ ಸದಸ್ಯರಾಗ ಬೇಕಿದ್ದ ಗಾಯಿತ್ರಿ ಶಾಂತೇಗೌಡ ಅಧಿಕಾರ ಪಡೆಯಲು ಹೈಕೋರ್ಟ್, ಸುಪ್ರೀಂ ಕೋರ್ಟ್ ನಲ್ಲಿ ಕೋಟ್ಯಾಂತರ ಹಣ ಖರ್ಚು ಮಾಡಿ ನ್ಯಾಯಲಯದ...

ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ-ಲೂಟಿಗಾಗಿ ಪೈಪೋಟಿ

ಚಿಕ್ಕಮಗಳೂರು: ಬಿಜೆಪಿ ಸರ್ಕಾರದಲ್ಲಿ ಶಾಸಕರ ನಡುವೆ ಕ್ಷೇತ್ರದ ಅಭಿವೃದ್ಧಿಗೆ ಪೈಪೋಟಿ ನಡೆದರೆ, ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ,ಲೂಟಿಗಾಗಿ ಪೈಪೋಟಿ ನಡೆಯುತ್ತಿದೆ. ಇದೇ ಪರಿಸ್ಥಿತಿ ಮುಂದುವರೆದರೆ ರಾಜಕೀಯವಾಗಿ ರಸ್ತೆಬಿದ್ದಿರುವ ಗುಂಡಿಯಲ್ಲಿ ಮುಚ್ಚುತ್ತಾರೆಂದು ವಿಧಾನಪರಿಷತ್ ಸದಸ್ಯ...

Related Articles

ಮಲೆನಾಡಿನ ಮಡಿಲಲ್ಲಿ ಜ್ಞಾನದ ಎರಡು ದೀಪಗಳು

ಜಯಪುರದ ಶ್ರೀ ಸತ್ಯಸಾಯಿ ದಿವ್ಯ ನಿಕೇತನಂ ಮತ್ತು ಶ್ರೀ ಸತ್ಯಸಾಯಿ ಶ್ರೀ ನಿಕೇತನಂನಲ್ಲಿ ಉಚಿತ ಶಿಕ್ಷಣದೊಂದಿಗೆ...

ಕಡೂರು ತಾಲೂಕು ಸರ್ಕಾರದ ಬರಪಟ್ಟಿಗೆ ವೈ.ಎಸ್.ವಿ. ದತ್ತಾ ಆಗ್ರಹ

ಕಡೂರು: ಇಡೀ ಜಿಲ್ಲೆಯಲ್ಲಿ ಅತ್ಯಂತ ಬರಗಾಲಕ್ಕೆ ತುತ್ತಾಗಿರುವ ತಾಲೂಕು ಎಂದರೆ ಕಡೂರು ತಾಲೂಕು, ಈ ಸಾಲಿನಲ್ಲಿ...

ಟಿಪ್ಪು ಕಟೌಟ್‌ಗೆ ಪಾಕಿಸ್ತಾನ ಪರ ಹಾಡು ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಚಿಕ್ಕಮಗಳೂರು: ನಗರದ ಟಿಪ್ಪುನಗರದಲ್ಲಿ ಈದ್ ಮಿಲಾದ್ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಟಿಪ್ಪು ಸುಲ್ತಾನ್ ಅವರ ಬೃಹತ್ ಕಟೌಟ್‌ಗೆ...

ಕಡೂರು, ಚಿಕ್ಕಮಗಳೂರು ತಾಲ್ಲೂಕುಗಳನ್ನು ಬರಪಟ್ಟಿಗೆ ಸೇರಿಸಲು ರೈತ ಸಂಘ ಆಗ್ರಹ

ಚಿಕ್ಕಮಗಳೂರು: ರಾಜ್ಯ ಸರ್ಕಾರ ಬರಗಾಲ ಪೀಡಿತ ತಾಲ್ಲೂಕುಗಳ ಘೋಷಣೆಯಲ್ಲಿ ತಾರತಮ್ಯ ನೀತಿ ಅನುಸರಿಸಿದೆ ಎಂದು ಕರ್ನಾಟಕ...