ಬೆಂಗಳೂರು: ಚಿಕ್ಕಮಗಳೂರು ಮೂಲದ ಮಿಥುನ್ ಎಂಬತಾ ಐ.ಎ.ಎಸ್.ನ ನಕಲಿ ದಾಖಲೆ ಸೃಷ್ಟಿ ಮಾಡಿ ಹಲವರಿಗೆ ವಂಚನೆ ಮಾಡಿದ್ದು ಬೆಂಗಳೂರಿನ ಅಮೃತಹಳ್ಳಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಅರೋಗ್ಯ ಇಲಾಖೆಯ ಎನ್.ಹೆಚ್.ಎಮ್.ನ ಉಸ್ತುವಾರಿ ಎಂದು ಹೇಳಿಕೊಂಡ ಮಲ್ಲೇಗೌಡ ಜನರ ಆಸ್ಪತ್ರೆಯಲ್ಲಿ ಠೀಕಾಣೆ ಹೂಡಿದ್ದ ಈತ ಹಲವು ಮೆಡಿಕಲ್ ಶಾಪ್ ನವರನ್ನು ನಂಬಿಸಿ ಮೆಡಿಕಲ್ ಸಪ್ಲೈ ಮಾಡಿಸಿಕೊಡುವುದಾಗಿ ಹಣ ಪಡೆದಿದ್ದಾನೆ ಎನ್ನಲಾಗಿದೆ.
ಶ್ರೇಯಸ್ ಮೆಡಿಕಲ್ ಶಾಪ್ ನ ಸತೀಶ್ ಎಂಬುವರಿಂದ ನಲವತ್ತು ಲಕ್ಷಕ್ಕೂ ಹೆಚ್ಚು ಹಣ ತೆಗೆದುಕೊಂಡು ಮೋಸ ಮಾಡಿದ್ದಾನೆ ಎಂದು ದೂರು ದಾಖಲಾಗಿದೆ.ಇದೇ ರೀತಿಯಲ್ಲಿ ಹಲವರಿಗೆ ವಂಚಿಸಿರುವ ಮಾಹಿತಿಗಳು ಹರಿದಾಡುತ್ತಿವೆ.
ಬೆಂಗಳೂರಿನ ಲಾಡ್ಜ್ ಬಳಿ ಗಲಾಟೆಗೆ ಸಂಬಂಧಿಸಿದಂತೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಈತ ನಕಲಿ ದಾಖಲೆ ಸೃಷ್ಟಿ ಮಾಡಿರವುದು ಬೆಳಕಿಗೆ ಬಂದಿದೆ.
ನ್ಯೂಸ್ ಕಿಂಗ್ ನಲ್ಲಿ ಜಿಲ್ಲೆಯ ಮಿಥುನ್ ಐ.ಎ.ಎಸ್.ಮಾಡಿರುವ ಬಗ್ಗೆ ಈ ಹಿಂದೆ ಸುದ್ದಿ ಪ್ರಕಟಿಸಿತ್ತು.ಇದಕ್ಕೂ ಪೂರಕ ದಾಖಲೆ ಪರಿಶೀಲನೆ ಮಾಡಿತ್ತು.ಆದರೆ ಅವನ ವರ್ತನೆ ಮತ್ತು ನಡವಳಿಕೆ ಈತ ಐ.ಎ.ಎಸ್.ಮಾಡಿರಲು ಸಾಧ್ಯವಿಲ್ಲ ಎನ್ನುತ್ತಿರುವಾಗಲೇ ಈತನ ಬಂಧನ ಸುದ್ದಿ ಹೊರ ಬಂದಿದೆ.
ಜಿಲ್ಲೆಯಲ್ಲಿ ಎರಡು ಕೋಟಿಗೂ ಹೆಚ್ಚಿನ ವಂಚನೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.ಇನ್ನೂ ಬೆಂಗಳೂರಿನಲ್ಲಿ ಎಷ್ಟು ಜನರಿಗೆ ವಂಚನೆ ಆಗಿದೆ ಎಂಬದು ತಿಳಿದು ಬರಬೇಕಾಗಿದೆ.ಚಿಕ್ಕಮಗಳೂರು ಆಸ್ಪತ್ರೆಯಲ್ಲಿ ಗುತ್ತಿಗೆ ಅಧಾರದ ಮೇಲೆ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬಳ ಹೆಸರು ಕೇಳಿಬರುತ್ತಿದೆ.
Fake “IAS” Mithun arrested
Leave a comment