ಚಿಕ್ಕಮಗಳೂರು: ಬಿಜೆಪಿ ಮತ್ತು ಆರ್ಎಸ್ಎಸ್ ಸಂಘಟನೆ ಬಗ್ಗೆ ಪ್ರಚೋದಕಾರಿ ಹೇಳಿಕೆ ನೀಡಿರುವ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಕಾನೂನು ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಮುಖಂಡರುಗಳು ಗುರುವಾರ ಪೊಲೀಸ್ ವರಿಷ್ಟಾಧಿ ಕಾರಿ ಜಿತೇಂದ್ರಕುಮಾರ್ ದಯಾಮ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಅಸ್ಸಾಂ ಚುನಾವ ಣಾ ಭಾಷಣದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬಿಜೆಪಿ ಮತ್ತು ಆರ್ಎಸ್ಎಸ್ನ್ನು ವಿಷ ಸರ್ಪವೆಂದು ಬಣ್ಣಸಿದ್ದು. ಕುರಾನ್ನಲ್ಲಿ ಹೇಳಿದಂತೆ ನಮಾಜ್ ಮಾಡುವ ವೇಳೆ ವಿಷಸರ್ಪ ಕಂಡರೆ ಕೊಲ್ಲ ದಿದ್ದರೆ ಬದುಕುವುದಿಲ್ಲ ಎಂಬ ಪ್ರಚೋದಕಾರಿ ಹೇಳಿಕೆ ನೀಡಿದ್ದಾರೆ ಎಂದು ದೂರಿದರು.
ಅಸ್ಸಾಂನಲ್ಲಿ ಎಐಸಿಸಿ ಅಧ್ಯಕ್ಷರು ಪ್ರಚೋದನಕಾರಿ ಭಾಷಣ ಮಾಡಿರುವುದು ದೇಶಾದ್ಯಂತ ಇರುವ ಸಂ ಘ ಪರಿವಾರದ ಮೇಲೆ ಮಾಡಿರುವ ದೊಡ್ಡ ದಾಳಿಯಾಗಿದೆ. ಈ ಪರಿಣಾಮ ದೇಶವ್ಯಾಪಿ ಬೀರುವ ಸಂಭ ವವನ್ನು ತಳ್ಳೀಹಾಕಲಾಗದು. ಈ ಹೇಳಿಕೆಯು ಮತಿಕೇಡಿಗಳಿಗೆ ಉತ್ತೇಜನ ನೀಡಿ ತಮ್ಮ ಕಾರ್ಯಕರ್ತರ ಮೇಲೆ ದಾಳಿ ಸಂಭವಿಬಹುದಾಗಿದೆ ಎಂದರು.
ಧಾರ್ಮಿಕ ಮತ್ತು ಸಮುದಾಯಗಳ ನಡುವಿನ ಸೌಹಾರ್ದತೆಗೆ ಸಂಬಂಧಿಸಿದ ಕಾನೂನಿನಲ್ಲಿ ವಿವಿಧ ಧರ್ಮ, ಜನಾಂಗ, ಭಾಷೆ, ಪ್ರಾದೇಶಿಕ ಗುಂಪುಗಳ ಅಥವಾ ಸಮುದಾಯಗಳ ನಡುವೆ ದ್ವೇಷ, ಹಗೆತನ, ಕೆಟ್ಟ ಭಾವನೆ ಉತ್ತೇಜಿಸುವುದನ್ನು ನಿಷೇಧಿಸುತ್ತದೆ. ಈ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ಸಾರ್ವ ಜನಿಕ ಶಾಂತಿಗೆ ಭಂಗ ತರುವ ಕೃತ್ಯವಾಗಿದೆ ಎಂದು ಆರೋಪಿಸಿದರು.
ಮಲ್ಲಿಕಾರ್ಜುನ್ ಖರ್ಗೆಯವರು ಇಸ್ಲಾಂ ಪವಿತ್ರ ಗ್ರಂಥವಾದ ಕುರಾನ್ ಉಲ್ಲೇಖಿಸಿ ಹತ್ಯೆ ಮಾಡುವು ದು ನ್ಯಾಯ ಎಂದಿರುವುದು ಸಮುದಾಯದ ಮೂಲಭೂತವಾದಿಗಳಿಗೆ ಇದರಿಂದ ಹತ್ಯೆ ಮಾಡಲು ಉತ್ತೇ ಜನ ನೀಡಿದಂತಾಗಿದೆ. ಈ ಪ್ರಚೋದನೆಯ ಹೇಳಿಕೆಯ ಪರಿಣಾಮ ಉಂಟಾಗಿರುವ ಸೂಕ್ಷ್ಮ ಪರಿಸ್ಥಿತಿಯ ನ್ನು ಗಮನದಲ್ಲಿಟ್ಟುಕೊಂಡು ಸಂಘ-ಪರಿವಾರದ ಕಾರ್ಯಕರ್ತರನ್ನು ರಕ್ಷಿಸುವ ವ್ಯವಸ್ಥೆ ಪೊಲೀಸ್ ಇಲಾ ಖೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್ಗೌಡ, ಉಪಾಧ್ಯಕ್ಷೆ ಅಂಕಿ ತಾ, ಕಾರ್ಯದರ್ಶಿಗಳಾದ ರಾಜೇಶ್, ಪುನೀತ್, ನಗರ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಗೌತ ಮ್, ಕಾರ್ತಿಕ್, ಉಪಾಧ್ಯಕ್ಷ ತಿಲಕ್, ಮುಖಂಡರುಗಳಾದ ಪಾರ್ತಿಬನ್, ನವೀನ್, ಮಧು, ಪ್ರಶಾಂತ್ ಹಾಜರಿದ್ದರು.
Request for arrest of AICC president for provocative statement
Leave a comment