Home namma chikmagalur chikamagalur ಗ್ರೇಡಿಂಗ್ ಕೈಬಿಟ್ಟು ಫಲಿತಾಂಶ ಅಂಕ ಪರಿಗಣಿಸುವಂತೆ ಮನವಿ
chikamagalurHomeLatest Newsnamma chikmagalur

ಗ್ರೇಡಿಂಗ್ ಕೈಬಿಟ್ಟು ಫಲಿತಾಂಶ ಅಂಕ ಪರಿಗಣಿಸುವಂತೆ ಮನವಿ

Share
Share

ಚಿಕ್ಕಮಗಳೂರು: ಪ್ರೌಢಶಾಲಾ ಹಂತದಲ್ಲಿ ತೃತೀಯ ಭಾಷೆ ಪರೀಕ್ಷೆಯಲ್ಲಿ ಎಸ್.ಎಸ್. ಎಲ್. ಸಿ. ವಿದ್ಯಾರ್ಥಿಗಳಿಗೆ ಗ್ರೇಡಿಂಗ್ ಕೈಬಿಟ್ಟು ಬದಲಾಗಿ ಫಲಿತಾಂಶದಲ್ಲಿ ಅಂಕಗಳನ್ನು ಪರಿಗಣಿಸುವಂತೆ ಆಗ್ರಹಿಸಿ ಜಿಲ್ಲಾ ಪ್ರೌಢಶಾಲಾ ಹಿಂದಿ ಭಾಷಾ ಶಿಕ್ಷಕರ ಸಂಘವು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ ಅವರಿಗೆ ಮನವಿ ಸಲ್ಲಿಸಿದರು.

ಈ ಕುರಿತು ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ರಾಮಸ್ವಾಮಿ ನಾಯ್ಕ ತೃತಿಯ ಭಾಷೆಯ ಅಂಕಗಳ ನ್ನು ೨೦೨೬ನೇ ಸಾಲಿನ ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯಲ್ಲಿ ಪರಿಗಣಿಸದಿರುವಂತೆ ರಾಜ್ಯ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ಕೈಕೊಂಡಿರುವುದು ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯ ಮೇಲೆ ಕೆಟ್ಟ ಪರಿ ಣಾಮ ಬೀರಿದಂತಾಗಿದೆ ಎಂದರು.

ಹಿಂದಿ ಭಾಷೆ ಬಗ್ಗೆ ಯಾವುದೇ ತಜ್ಞರು, ಶಿಕ್ಷಕರು, ಪಾಲಕರು ಅಥವಾ ವಿದ್ಯಾರ್ಥಿಗಳಿಂದ ಅಭಿಪ್ರಾ ಯವನ್ನು ಸಂಗ್ರಹಿಸದೇ ದಿಡೀರನೇ ಈ ನಿರ್ಧಾರ ಕೈಗೊಂಡಿರುವುದು ದುಃಖಕರ ಸಂಗತಿ. ತೃತೀಯ ಭಾ ಷೆಯನ್ನು ವಿದ್ಯಾರ್ಥಿಗಳಲ್ಲಿ ಭಾಷಾ ಸಾಮರ್ಥ್ಯವನ್ನು ಅಭೀವೃದ್ದಿಪಡಿಸುವುದಲ್ಲದೇ ಸಂವಹನ ಕೌಶಲ್ಯಗಳ ನ್ನು ತರಗತಿಗಳಲ್ಲಿ ಬೆಳೆಸಲು ಹಕ್ಕನ್ನು ಮೊಟಕುಗೊಳಿಸಿದಂತೆ ಎಂದರು.

ಕಳೆದ ಏಳು ದಶಕಗಳಿಂದ ನಡೆದುಕೊಂಡು ಬಂದಿರುವ ಶಿಕ್ಷಣ ನೀತಿಯನ್ನು ಬದಲಾಯಿಸುವುದು ನ್ಯಾಯ ಸಮ್ಮತವಾದ ತೀರ್ಮಾನವಲ್ಲ. ಪ್ರೌಢಶಾಲಾ ಶಿಕ್ಷಣದಲ್ಲಿ ತೃತೀಯ ಭಾಷೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗೆ ಅಡ್ಡಿಪಡಿಸಿದಂತಾಗುತ್ತದೆ ಹಾಗೂ ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಂದಿಸದಂತಾಗಲಿದೆ ಎಂದು ತಿಳಿಸಿದರು.

ಆದ್ದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಯನ್ನು ಹಿತದೃಷ್ಟಿಯಲ್ಲಿಟ್ಟುಕೊಂಡು ಗ್ರೇಡಿಂಗ್ ಕೈಬಿಟ್ಟು, ಬದಲಾಗಿ ತೃತೀಯ ಭಾಷೆಯ ಅಂಕಗಳನ್ನು ಎಸ್.ಎಸ್.ಎಲ್.ಸಿ. ವಾರ್ಷಿಕ ಪರೀಕ್ಷೆಯ ಫಲಿತಾಂಶದಲ್ಲಿ ಪರಿಣಿಸಬೇಕು. ಇದು ಭಾಷಾ ಅಧ್ಯಯನ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಶಿಕ್ಷಕರಿಗೂ ತಮ್ಮ ಪರಿಶ್ರಮಕ್ಕೆ ಸಮರ್ಪಕ ಮಾನ್ಯತೆ ದೊರೆದಂತಾಗಲಿದೆ ಎಂದರು.

ಅಲ್ಲದೇ ವಿದ್ಯಾರ್ಥಿಗಳು ಸ್ವ ಇಚ್ಚೆಯಂತೆ ತಮಗೆ ಬೇಕಾದ ವಿಷಯವನ್ನು ಆಯ್ಕೆ ಮಾಡಿಕೊಂಡು ತೇರ್ಗಡೆ ಹೊಂದಿ ಜೀವನವನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡಲು ಸರ್ಕಾರ ನಿರ್ದೇಶನ ನೀಡ ಬೇಕು ಎಂಬುದು ಹಿಂದಿ ಶಿಕ್ಷಕರ ಮೂಲ ಒತ್ತಾಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾ ಕಾರ್ಯದರ್ಶಿ ಅನ್ಸಾರ್ ಷರೀಫ್, ಖಜಾಂಚಿ ಎನ್.ಜಿ.ಚಂದ್ರಪ್ಪ, ಶಿಕ್ಷಕರಾದ ದೀಪಾ, ರೇಖಾ, ಪವಿತ್ರ, ರೂಪ, ವಿಶ್ವನಾಥ್, ಶ್ರೀನಿವಾಸ್, ಪ್ರಭಾಕರ್, ಪದ್ಮಾವತಿ, ಉಷಾ, ಸುನೀತಾ, ಕವಿತಾ ಮತ್ತಿತರರು ಉಪಸ್ಥಿತರಿದ್ದರು.

Appeal to abandon grading and consider result scores

 

 

Share

Leave a comment

Leave a Reply

Your email address will not be published. Required fields are marked *

Don't Miss

ಭದ್ರ ಅಭಯಾರಣ್ಯದ ಬಳಿ ಕಾನೂನು ಬಾಹಿರ ರೆಸಾರ್ಟ್ ನಿರ್ಮಾಣ ?

ಚಿಕ್ಕಮಗಳೂರು: “ಪ್ರಾಣಿಗಳ ಮೇಲೆ ದಯೆ” ಇರಲಿ”ಕಾಡು ಮಾತ್ರ ನಾಶ”ವಾಗಲಿ”ಹಣ ಮಾತ್ರ ಝಣ,ಝಣ “ನಮಗೆ ಬರಲಿ ಎಂಬುದು ಅರಣ್ಯ ಇಲಾಖೆಯ ಘೋಷ ವಾಕ್ಯವಾದರೆ ಒಳ್ಳೆಯದು ಎಂಬುದಕ್ಕೆ ಇಂಬು ಕೊಡುತ್ತದೆ ಆಕ್ರಮವಾಗಿ ರೆಸಾರ್ಟ್ ನಿರ್ಮಾಣವಾಗುತ್ತಿರುವುದು...

ರಾಷ್ಟ್ರ ಮೊದಲೆಂಬ ಧ್ಯೇಯದೊಂದಿಗೆ ಭಾಜಪ ಕೆಲಸ

ಚಿಕ್ಕಮಗಳೂರು: ರಾಷ್ಟ್ರ ಮೊದಲು ಎಂಬ ಧ್ಯೇಯದೊಂದಿಗೆ ಸ್ಥಾಪಿತಗೊಂಡಿರುವ ಏಕೈಕ ರಾಜಕೀಯ ಪಕ್ಷ ಭಾಜಪ. ರಾಷ್ಟ್ರೀಯ ಹಿತಚಿಂತನೆ ಹಾಗೂ ದೇಶಸೇವೆಯೇ, ಜನಾರ್ಧನ ಸೇವೆ ಎಂಬ ನಂಬಿಕೆ ಮತ್ತು ವಿಶ್ವಾಸದಡಿ ಸಾಗುತ್ತಿದೆ ಎಂದು ವಿಧಾನ...

Related Articles

ಮೂಡಿಗೆರೆ ಚುನಾವಣಾ ಶಾಖೆಯಲ್ಲಿ ಸಿಬ್ಬಂದಿ ಕೊರತೆ

ಮೂಡಿಗೆರೆ: ಜಿಲ್ಲೆಯ ಮೂಡಿಗೆರೆ ಸೇರಿದಂತೆ ಹಲವು ತಾಲೂಕು ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಚುನಾವಣಾ ಶಾಖೆಗಳು ಸಿಬ್ಬಂದಿಗಳ...

ಕಂದಾಯ ವಸೂಲಾತಿ ಸಾಧನೆಯಲ್ಲಿ ಜಿಲ್ಲೆಗೆ ರಾಜ್ಯದಲ್ಲಿ 3ನೇ ಸ್ಥಾನ

ಚಿಕ್ಕಮಗಳೂರು: ೨೦೨೫-೨೬ನೇ ಆರ್ಥಿಕ ವರ್ಷದಲ್ಲಿ ಪ್ರಸಕ್ತ ಆರ್ಥಿಕ ವರ್ಷದ ಬೇಡಿಕೆಗೆ ಎದುರಾಗಿ ಜಿಲ್ಲೆಯ ಎಲ್ಲ್ಲ ೯...

ಶಾಲೆಗಳ ವಿಲೀನ ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ಪತ್ರಿಭಟನೆ

ಚಿಕ್ಕಮಗಳೂರು: ತಾಲೂಕಿನ ಬೊಂಬೈಲು ಸರ್ಕಾರಿ ಪ್ರಾಥಮಿಕ ಶಾಲೆಯನ್ನು ಬೇರೊಂದು ಶಾಲೆಗೆ ವಿಲೀನಗೊಳಿಸದಿರಲು ಒತ್ತಾಯಿಸಿ ಎಐಡಿಎಸ್‌ಓ ನೇತೃತ್ವದಲ್ಲಿ...

ಚಿಕ್ಕಮಗಳೂರು ನಗರದಲ್ಲಿ ಆಟೋ ಎಲ್‌ಪಿಜಿ ಗ್ಯಾಸ್ ಹಾಹಾಕಾರ

ಚಿಕ್ಕಮಗಳೂರು: ನಗರದಲ್ಲಿ ಕಳೆದ ಆರು ದಿನಗಳಿಂದ ಎಲ್‌ಪಿಜಿ ಗ್ಯಾಸ್ ಲಭ್ಯವಾಗದ ಕಾರಣ ಆಟೋ ಚಾಲಕರ ಜೀವನ...