Home namma chikmagalur chikamagalur ಗಲಿ-ಬಿಲಿ “ಗಿಲ್ಲಿ”ಆಟ ಕಿಂಗ್ ಮೇಕರ್ “ಕಿಂಗ್”
chikamagalurHomeLatest Newsnamma chikmagalur

ಗಲಿ-ಬಿಲಿ “ಗಿಲ್ಲಿ”ಆಟ ಕಿಂಗ್ ಮೇಕರ್ “ಕಿಂಗ್”

Share
Share

ಚಿಕ್ಕಮಗಳೂರು: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಗೆ ಇದುವರೆಗೆ ಕಿಂಗ್ ಮೇಕರ್ ಆಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ”ಕಿಂಗ್ ” ನಂತೆ ಕಂಗೊಳಿಸುತ್ತಿದ್ದಾರೆ.
ಇನ್ನೂ ಉಪಾಧ್ಯಕ್ಷರಾಗಿ ದಿನೇಶ್ ಹೊಸೂರು ಆಯ್ಕೆ ಯಾಗಿದ್ದಾರೆ.

ಕಳೆದ ಒಂದು ವರ್ಷದಿಂದ ದಿನಕ್ಕೊಂದು ಸುದ್ದಿ ಕ್ಷಣಕ್ಕೊಂದು ಸುದ್ದಿಗಳ ಮಧ್ಯೆ ಸುದ್ದಿಗಳಿಗೆ ತೆರೆ ಬಿದ್ದಿದೆ. ಕಾಂಗ್ರೆಸ್ ಸರ್ಕಾರ ಇರುವುದರಿಂದ ಚುನಾವಣೆ ನಡೆಸುವುದು ಕಷ್ಟ ಎನ್ನುವಂತಹ ಘಟನೆಗಳು ನಡೆದಿವೆ.ಕಡೂರು ಶಾಸಕ ಆನಂದ್ ಮತ್ತು ತರೀಕೆರೆ ಶಾಸಕ ಶ್ರೀನಿವಾಸ್ ಸರ್ಕಾರದ ಮೇಲೆ ಒತ್ತಡ ತಂದು ಬ್ಯಾಂಕ್ ಬಗ್ಗೆ ತನಿಖೆ ನಡೆಸಬೇಕು ಎಂಬ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಪ್ರಾರಂಭವಾದ ಮೇಲೆ ಚುನಾವಣೆ ಪ್ರಕ್ರಿಯೆಗೆ ತಾತ್ಕಾಲಿಕ ತಡೆಯಾಯಿತು.

ಇದರ ಬಗ್ಗೆ ನ್ಯಾಯಾಲಯ ಚುನಾವಣೆ ನಡೆಸಬೇಕು ಮತ್ತು ಆಡಳಿತ ಮಂಡಳಿ ಯಾತಾ ಸ್ಥಿತಿ ಮುಂದುವರೆಯಬೇಕು ಎಂದು ತೀರ್ಪು ನೀಡಿದ್ದು ಆಡಳಿತ ಮಂಡಳಿ ಅವಧಿ ಮುಗಿದರೂ ಆಡಳಿತ ನಡೆಸಿದ್ದು ದಾಖಲೆ .ಇದಕ್ಕೆ ಬೆಳ್ಳಿ ಪ್ರಕಾಶ್ ಕೊಡುಗೆ ಕಾರಣ ಎನ್ನಲಾಗಿದೆ. ಸ್ಥಗಿತಗೊಂಡಿದ್ದ ಚುನಾವಣೆಗೆ ಪ್ರಕ್ರಿಯೆ ಪ್ರಾರಂಭವಾಗಿ ಬಿಜೆಪಿ ಜೆಡಿಎಸ್ ಮೈತ್ರಿ ಕೂಟ ಕ್ಲೀನ್ ಸ್ವೀಪ್ ಮಾಡಿತು.

ಚಿಕ್ಕಮಗಳೂರು ಸಹಕಾರ ಸಂಘಗಳ ವತಿಯಿಂದ ವಿ,ಪ,ಸದಸ್ಯ ಸಿ.ಟಿ.ರವಿ ಮತ್ತು ಎಸ್.ಎಲ್.ಬೋಜೇಗೌಡರ ವಿರುದ್ಧ ಎಂ.ಎಸ್.ನಿರಂಜನ ತೊಡರುಗಾಲು ಕೊಟ್ಟರೂ ನಿರಾಯಾಸವಾಗಿ ಸಿ.ಟ.ರವಿ ಮತ್ತು ಎಸ್‌. ಎಲ್. ಬೋಜೇಗೌಡ ಆಯ್ಕೆಯಾದರೆ ಇತರೆ ಸಹಕಾರ ಸಂಘಗಳಿಂದ ಟಿ.ಎಲ್.ರಮೇಶ್ ಹ್ಯಾಟ್ರಿಕ್ ಸಾಧಿಸಿದರೆ ಇವರ ವಿರುದ್ಧ ಸ್ಪರ್ಧೆ ಮಾಡಿದ್ದ ಕಾಂಗ್ರೆಸ್ ನ ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಸೋಲ ಬೇಕಾಯಿತು.

ಟಿ.ಎ.ಪಿ.ಸಿ.ಎಂ.ಎಸ್ ಕ್ಷೇತ್ರದಿಂದ ಕಡೂರು ಶಾಸಕ ಆನಂದ್ ಸ್ಪರ್ಧೆ ಮಾಡಿದ್ದರಿಂದ ತೀವ್ರ ಕುತೂಹಲ ಕೆರಳಿಸಿದ ಚುನಾವಣೆಯಲ್ಲಿ ಆನಂದ್ ಸೋತರೆ ಇವರ ಪ್ರತಿ ಸ್ಪರ್ಧೆ ದಿನೇಶ್ ಹೊಸೂರು ಒಂದು ಮತದಿಂದ ಗೆಲುವು ಸಾಧಿಸಿದರು. ಕಳೆದ ಬಾರಿ ಲಿಂಗಾಯತರು ಬ್ಯಾಂಕ್ ನ ಅಯಾ ಕಟ್ಟಿನ ಅಧ್ಯಕ್ಷ ಮತ್ತು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿದ್ದರು .ಪ್ರಸ್ತುತ ಬ್ಯಾಂಕ್ ಒಕ್ಕಲಿಗರ ಬಿಗಿ ಹಿಡಿತಕ್ಕೆ ಸಿಕ್ಕಂತಾಯಿತು ಎಂಬ ವಿಶ್ಲೇಷಣೆಗಳು ಚರ್ಚೆ ಆಗುತ್ತಿವೆ.

ಸಿ.ಟಿ.ರವಿ ಕಿಂಗ್ ಮೇಕರ್ ಜೊತೆಗೆ “ಕಿಂಗ್” ಆದರೆ ಎಸ್.ಎಲ್.ಬೋಜೇಗೌಡರು ಎಲ್ಲಾ ನಾನೇ ಎಂಬಂತೆ ಆಗಿದ್ದಾರೆ ಬ್ಯಾಂಕ್ ಇಂದು ಬಿಜೆಪಿ ತೆಕ್ಕೆಗೆ ತರುವಲ್ಲಿ ಶ್ರಮಿಸಿದ ಬೆಳ್ಳಿ ಪ್ರಕಾಶ್ “ಹೀರೋ” ನಂತೆ ಕಂಡರೆ ಅಧ್ಯಕ್ಷರಾಗಿದ್ದ ಡಿ.ಎಸ್.ಸುರೇಶ್ ದುರಂತ ನಾಯಕರಾಗಿದ್ದಾರೆ.ಇನ್ನೂ ಉಳಿದವರು ಸೈಡ್ ಅಂಕ್ಟರ್ ತರಹ ಇದ್ದಾರೆ.ಪವರ್ ಇದ್ದರೂ ನಮ್ಮದು ಏನೂ ನಡೆಯಲಿಲ್ಲ ಮುಂದೆ ” ಮಾರಿ ಹಬ್ಬ ” ಇದೆ ಎಂದು ಕಾಂಗ್ರೆಸ್ ನವರು ಗೊಣಗುತ್ತಿದ್ದಾರೆ.

ಇಷ್ಟೆಲ್ಲಾ ಅಧಿಕಾರ ಪಡೆಯಲು ಕಸರತ್ತು ನಡೆಸಿದ್ದು ಏಕೆ ಎಂದರೆ “ಬ್ಯಾಂಕ್” ನೇಮಕಾತಿಗಾಗಿ ಎಂದು ಜನ ಮಾತನಾಡುತ್ತಿದ್ದಾರೆ.

Gali-bili “Gilli” Game King Maker “King”

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...