Home namma chikmagalur chikamagalur ಅಫೇರ್ ಆನಂದನ ಅಂದರ್ ಬಾಹರ್ ದಾಹ ಪುಲ್ ಸ್ಟಾಪ್ ಇಲ್ಲವೇ ?
chikamagalurCrime NewsHomeLatest Newsnamma chikmagalur

ಅಫೇರ್ ಆನಂದನ ಅಂದರ್ ಬಾಹರ್ ದಾಹ ಪುಲ್ ಸ್ಟಾಪ್ ಇಲ್ಲವೇ ?

Share
Share

ಚಿಕ್ಕಮಗಳೂರು: ಬಿ.ಜೆ.ಪಿ ಮುಖಂಡ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಫೇರ್ ಜೊತೆಗೆ ಹೋಂ ಸ್ಟೇ ಒಳಹೊಕ್ಕು ಬಟ್ಟೆ ಬಿಚ್ಚುವ ಸಮಯದಲ್ಲಿ ಈತನನ್ನು ಹಿಂಬಾಲಿಸಿ” ಕೆನ್ನೆ”ಗೆ ಬಾರಿಸಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತು.

ಆನಂದ ಮಯಾ ಈ ಸಮಯ ಎಂದು ಬಟ್ಟೆ ಬಿಚ್ಚಲು ರೆಡಿಯಾಗುತ್ತಿದ್ದ ಆನಂದನ ಮುಖವಾಡ ಕಳಚಿ ಬೀಳುವಂತ ಪಟೀರ್,ಪಟೀರ್ ಎನ್ನುವ ಪೆಟ್ಟು ಮುಖದ ಮೇಲೆ ಬೀಳುತ್ತದೆ. ಬಾ ಪದ್ದು,ಬಾ ಪದ್ದು ಮಾತನಾಡುವ ಎಂದು ಮುಗ್ದ ಹೋರಿ ಕರವಿನ ರೀತಿ ಗೋಗರೆದವನ ಸ್ಥಿತಿ ಬೇಲಿ ಹಾರುವ ಹೋರಿಗೆ ಬೀಜ ಹೊಡೆದಂತೆ ಆಗಿತ್ತು.

ಈತನಿಗೆ ಹಗ್ಗ ಕಡಿಯುವ ಚಾಳಿ ನಿನ್ನೆ ಮೊನ್ನೆಯದಲ್ಲ ಅಫೇರ್ ಸಹಿತ ಕೂಡಿ ಹಾಕಿ ರಂಪ ರಾಮಾಯಣ ಮಾಡಬಹುದಿತ್ತು.ಆದರೆ ಮಹಿಳೆಯ ಭವಿಷ್ಯ ಮುಖ್ಯ ಎಂದು ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ರೈಡ್ ತಂಡ ಇವನು ಮತ್ತೇಲ್ಲೂ ಹಗ್ಗ ಕಡಿಯದಂತೆ ಇರಲಿ ಎಂದು ಹೇಳುತ್ತಾರೆ.

ಈತ ಜೂಜುಬಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನ ಮುಖ್ಯ ಮಂತ್ರಿ ಹುದ್ದೆ ಎಂದು ವರ್ತಿಸುತ್ತಿದ್ದ ಅವನ ಸ್ಟೈಲ್ ಮಾತು ಕತೆ ಜನರನ್ನು ಮಾತನಾಡಿಸುವ ರೀತಿ ನೋಡಿದಾಗ ಇವನ್ಯಾರೋ ದೊಡ್ಡ ಆಫೀಸರ್ ಎಂದು ತಿಳಿಯ ಬೇಕಿತ್ತು.ಆದರೆ ಮೊನ್ನೆ ಗೂಸಾ ಬಿದ್ದ ಮೇಲೆ ಈತ ಬೇಲಿ ಹಾರುವ ಗಿರಾಕಿ ದೈನೇಶಿಯಾಗಿ ಬೇಡುತ್ತಿದ್ದ.

ಪ್ರಾಧಿಕಾರದ ಅಧ್ಯಕ್ಷನಾದಗ ಕಲ್ಲುದೊಡ್ಡಿ ಬಳಿ ನಿರ್ಮಾಣವಾಗಿರುವ ವಾಜಪೇಯಿ ಲೇಔಟ್ ಕರ್ಮಕಾಂಡದಲ್ಲಿ ಮಾಡಿದ ಕಾಸು ಲೆಕ್ಕ ಮಾಡಲು ಒಬ್ಬನನ್ನು ಇಟ್ಟುಕೊಂಡಿದ್ದ ಎಂದು ಪ್ರಾಧಿಕಾರದ ಏಜೆಂಟ್ ರು ಈಗ ಬಾಯಿ ಬಿಡುತ್ತಿದ್ದಾರೆ.

ವಾಜಪೇಯಿ ಲೇಔಟ್ ಜಾಗ ಯಾವದೇ ರೀತಿಯಲ್ಲಿ ಕಾನೂನು ಬದ್ದವಾಗಿಲ್ಲ.ಲೇಔಟ್ ಅಲಿ ನೇಷನ್ ಆಗಿಲ್ಲ. ಮೂಲ ಖಾತೆದಾರರ ಹೆಸರಿನಲ್ಲಿ ಜಮೀನಿಗಳು ಇವೆ ಎಂದು ಪ್ರಾಧಿಕಾರದ ಮೂಲಗಳು ಹೇಳುತ್ತಿವೆ.ಆದರೆ ಆಕ್ರಮವಾಗಿ ಮನೆ ಕಟ್ಟಲು ನೆರವಿಗೆ ಪುಕ್ಕಟ್ಟೆ ನಿಲ್ಲಲು ಸಾಧ್ಯವಿಲ್ಲ ಇದರಲ್ಲಿ ಬೇಕಾದಷ್ಟು ಹಣ ಮಾಡಿಕೊಂಡು ಈಗ ಸೆರಗಿನ ಸಂದಿಗೆ ಹಾತೊರೆಯುತ್ತಿದ್ದಾನೆ ಎಂಬ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ.

ಬೇಲಿ ಹಾರಿ ಸಿಕ್ಕಿಕೊಂಡು ಹೊಡೆತ ತಿಂದು ಎರಡು ದಿನವಾಗಿದೆ ಆನೇಕ ಮಾಧ್ಯಮ ಗಳಲ್ಲಿ ಸುದ್ದಿ ಬಂದಿವೆ ಹೋಂ ಸ್ಟೇಗೆ ಬಂದ ಅಧಿಕಾರಗಳಿಗೆ ಕೈ ಬೆಚ್ಚುಗೆ ಮಾಡಿ ಅಡಗಿ ಕುಳಿತ್ತಿದ್ದಾನೆ .ಜೊತೆಗೆ ಈತನನ್ನು ಕೆಲವರು ಹುಡುಕುತ್ತಿರುವುದು ಏಕೆ ಎಂಬ ಯಕ್ಷ ಪ್ರಶ್ನೆ ಕಾಡುತ್ತಿದೆ.

Affair Anandana Andar Bahar

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...