Home namma chikmagalur chikamagalur ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಅನ್ಯಾಯ
chikamagalurHomeLatest Newsnamma chikmagalur

ಕಾರ್ಮಿಕ ವರ್ಗಕ್ಕೆ ಕೇಂದ್ರ ಸರ್ಕಾರ ಅನ್ಯಾಯ

Share
Share

ಚಿಕ್ಕಮಗಳೂರು:  ಸಮಸ್ತ ಕಾರ್ಮಿಕ ವರ್ಗಕ್ಕೆ ವಿರೋಧಿ ಕಾಯ್ದೆ ಅನುಷ್ಟಾನಗೊಳಿಸಲು ಮುಂದಾಗುತ್ತಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಫೆ.೧೨ ರಂದು ಜಿಲ್ಲೆಯಲ್ಲಿ ಬೃಹತ್ ಪ್ರತಿ ಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪ್ಲಾಂಟೇಷನ್ ವರ್ಕರ್‍ಸ್ ಯೂನಿಯನ್ಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಧರ್ಮ ರಾಜ್ ಹೇಳಿದರು.

ನಗರದ ತಮಿಳು ಕಾಲೋನಿಯಲ್ಲಿ ಜಿಲ್ಲಾ ಪ್ಲಾಂಟೇಷನ್ ವರ್ಕರ್‍ಸ್ ಯೂನಿಯನ್ಸ್ ವತಿಯಿಂದ ಗುರು ವಾರ ಆಯೋಜಿಸಿದ್ಧ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾ ಸಂಬಂಧ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೇಂದ್ರದ ಕಾರ್ಮಿಕ ವಿರೋಧಿ ನಡೆಯನ್ನು ಖಂಡಿಸಿ ಪ್ಲಾಂಟೇಷನ್ ವರ್ಕರ್‍ಸ್, ರೈತ ಸಂಘ ಸೇರಿದಂ ತೆ ಸುಮಾರು ೧೦ಕ್ಕೂ ಹೆಚ್ಚು ಸಂಘಟನೆಗಳ ನೇತೃತ್ವದಲ್ಲಿ ಆಯಾ ತಾಲ್ಲೂಕಿನ ಕೇಂದ್ರ ಸರ್ಕಾರದ ಕಚೇರಿ ಮುಚ್ಚಿಸುವ ಮೂಲಕ ಕಾರ್ಮಿಕ ವರ್ಗವು ದೊಡ್ಡ ಪ್ರತಿಭಟನೆ ಹಮ್ಮಿಕೊಳ್ಳಲಿದೆ ಎಂದರು.

ಕಾರ್ಮಿಕರಿಗೆ ಅನುಕೂಲವಾಗಲು ಮೊದಲು ಕಾಯ್ದೆಗಳು ಅನುಕೂಲವಿತ್ತು. ಇದೀಗ ಕಾರ್ಮಿಕ ಕಾ ಯ್ದೆಯಲ್ಲಿ ನಾಲ್ಕು ಕೋರ್ಡ್‌ಗಳನ್ನು ರಚಿಸುವ ಮೂಲಕ ಕಾರ್ಮಿಕರ ಸವಲತ್ತಿಗೆ ಕತ್ತರಿ ಹಾಕುವ ಕೆಲಸ ಕೇ ಂದ್ರ ಮಾಡುತ್ತಿದೆ. ಇದು ದೇಶದ ಬಹುತೇಕ ಕಾರ್ಮಿಕರಿಗೆ ಪೆಟ್ಟು ಬೀಳಲಿದೆ ಎಂದು ಹೇಳಿದರು.

ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಶಿವಮೊಗ್ಗದ ತೋಟದ ಕಾರ್ಮಿಕರಿಗೆ ಆರೋಗ್ಯ ಸಮ ಸ್ಯೆ ಕಂಡುಬಂದಲ್ಲಿ ತೋಟದ ಮಾಲೀಕರೇ ನಿರ್ವಹಿಸುತ್ತಿದ್ದರು. ಈ ಹೊಸ ಕಾಯ್ದೆಯಿಂದ ಇಎಸ್‌ಐ ಮಾ ಡಿಸಬೇಕು. ಎಲ್ಲಿ ವೈದ್ಯಕೀಯ ಸೇವೆ ಲಭ್ಯವಿದೆ ಅಲ್ಲಿಯೇ ತೆರಳಿ ಚಿಕಿತ್ಸೆ ಕೊಡಿಸಬೇಕಿದೆ. ತೋಟ ಮಾಲೀಕ ರು ಒಮ್ಮೆ ಇಎಸೈ ಹಣ ಪಾವತಿಸಿ ಸುಮ್ಮನಾಗುತ್ತಾರೆ ಎಂದರು.

ಕೇಂದ್ರ ಸರ್ಕಾರ ಕಾರ್ಮಿಕ ಕಾಯ್ದೆ ತಂದೊಡ್ಡುವ ಮೂಲಕ ಕಾರ್ಪೋರೇಟ್ ಕಂಪನಿಗೆ ಲಾಭ ಮಾ ಡಿಕೊಡುತ್ತಿದೆ. ತಳಮಟ್ಟದ ಸಂಬಳವೆಂದರೆ ಕನಿಷ್ಟ ೧೭೦ ರೂ.ಗಳಿಗೆ ತಂದಿಳಿಸುವ ಕೆಲಸ ಮಾಡುತ್ತಿದೆ. ಪ್ರಸ್ತುತ ಒಂದು ಕುಟುಂಬವು ಪ್ರತಿದಿನ ಕನಿಷ್ಟ ೭೦೦-೮೦೦ ದುಡಿಯುವ ಅವಶ್ಯಕತೆಯಿದ್ದು, ಈಗಾಗಲೇ ಕಾರ್ಮಿಕರು ಕೇವಲ ೫೦೦ ರೂ. ಹಂತದಲ್ಲಿದ್ದು ಬಾಕಿ ಹಣ ಸಾಲ ಮಾಡಬೇಕಿದೆ ಎಂದು ಹೇಳಿದರು.

ಒಟ್ಟಾರೆ ಕಾರ್ಮಿಕರ ವಿರೋಧಿ ಕಾಯ್ದೆ ಸಂಬಂಧ ಯೂನಿಯನ್ ಹಾಗೂ ತೋಟದ ಮಾಲೀಕರೊ ಂದಿಗೆ ಚರ್ಚೆ ನಡೆಯುತ್ತಿದೆ. ಈ ರೀತಿಯ ಕಾರ್ಮಿಕ ವಿರೋಧಿ ಕಾಯ್ದೆಗೆ ಮನ್ನಣೆ ನೀಡದಂತೆ ಒತ್ತಾಯಿಸ ಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಯೂನಿಯನ್ ಜಿಲ್ಲಾ ಕಾರ್ಯದರ್ಶಿ ಜಿ.ರಮೇಶ್, ವಿಭಾಗೀಯ ಅಧ್ಯಕ್ಷ ಡೊಂಗ್ರೆ, ಹಾಸನ ಕಾರ್ಯದರ್ಶಿ ಬಸವರಾಜ್, ಸಕಲೇಶಪುರ ಕಾರ್ಯದರ್ಶಿ ಹರೀಶ್, ಸಿಪಿಐ ಮು ಖಂಡರಾದ ರಾಧಾಸುಂದ್ರೇಶ್ ಉಪಸ್ಥಿತರಿದ್ದರು.

The central government is unfair to the working class.

Share

Leave a comment

Leave a Reply

Your email address will not be published. Required fields are marked *

Don't Miss

ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯ

ಚಿಕ್ಕಮಗಳೂರು : ಇತಿಹಾಸ ಪ್ರಸಿದ್ಧ ಅಂತರಘಟ್ಟೆ ಜಾತ್ರಾ ಮಹೋತ್ಸವದಲ್ಲಿ ಎತ್ತಿನ ಗಾಡಿ ತೆರಿಗೆ ಬಡಿದು ಒಬ್ಬರಿಗೆ ಗಂಭೀರ ಗಾಯವಾಗಿದೆ. ರೇಸಿಗೆ ಬಿದ್ದ ಎತ್ತಿನಗಾಡಿಗಳ ಪೈಪೋಟಿ ಮಧ್ಯೆ ಎತ್ತಿನ ಗಾಡಿ ತೇರಿಗೆ ಡಿಕ್ಕಿಯೊಡೆದಿದೆ....

ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರ ಅಮಾನತು

ಚಿಕ್ಕಮಗಳೂರು: ಆಸ್ತಿ ಗುರುತಿನ ಸ್ವತ್ತಿನ ಚಕ್ಕುಬಂಧಿಯನ್ನು ಅಕ್ರಮವಾಗಿ ತಿದ್ದುಪಡಿ ಮಾಡಿರುವ ಹಿನ್ನೆಲೆಯಲ್ಲಿ ಕಡೂರು ಪುರಸಭೆಯ ಇಬ್ಬರು ದ್ವಿತೀಯ ದರ್ಜೆ ಸಹಾಯಕರನ್ನು ಜಿಲ್ಲಾಧಿಕಾರಿ ಎನ್.ಎಂ. ನಾಗರಾಜ್ ಸೇವೆಯಿಂದ ಅಮಾನತ್ತುಗೊಳಿಸಿ ಬುಧವಾರ ಆದೇಶಿಸಿದ್ದಾರೆ. ಪಟ್ಟಣದ...

Related Articles

ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್ ಸ್ಥಾಪನೆ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಲೆನಾಡು ಡ್ರೈವಿಂಗ್ ಸ್ಕೂಲ್ ಅಸೋಸಿಯೇಶನ್ ಸ್ಥಾಪಿಸಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಸುರಕ್ಷತೆ ಬಗ್ಗೆ...

ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ

ಚಿಕ್ಕಮಗಳೂರು: ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಭಿವೃದ್ಧಿ ಶೂನ್ಯ ಸಾಧನೆ ಮಾಡಿರುವ ಶಾಸಕರು ಉಳಿದಿರುವ...

ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ

ಚಿಕ್ಕಮಗಳೂರು : ಅಕ್ರಮವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಕೆಎಂ ರಸ್ತೆಯ...

ಮನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನದದು ಕಳವು

ಚಿಕ್ಕಮಗಳೂರು : ತಾಲೂಕಿನ ಕಂಚೇನಹಳ್ಳಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದ್ದು ರೈತ ಉಮೇಶ್ ಎಂಬುವವರ ಮನೆಯಿಂದ ಲಕ್ಷಾಂತರ...