ತರೀಕೆರೆ: ತರೀಕೆರೆ ಮತ್ತು ಅಜ್ಜಂಪುರ ತಾಲ್ಲೂಕಿನ ಹಲವು ಹಳ್ಳಿಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಜನ ತತ್ತರಿಸುತ್ತಿದ್ದಾರೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ತರೀಕೆರೆ ತಾಲ್ಲೂಕಿನ ತರೀಕೆರೆ ಪಟ್ಟಣದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಚಿರತೆ ಸಂಚಾರ ಮಾಡಿ ನಾಯಿಗಳನ್ನು ಭೇಟೆಯಾಡಿರುವುದು ಗಾಬರಿಗೆ ಕಾರಣವಾಗಿದೆ.
ತರೀಕೆರೆ ತಾಲ್ಲೂಕಿನ ಶಿವಪುರದಲ್ಲಿ ಬಾಲಕಿಯನ್ನು ತಿಂದು ತೇಗಿದ ಚಿರತೆ ಅರಣ್ಯ ಇಲಾಖೆ ಹಿಡಿದಿದೆ. ಆದರೆ ಮೊನ್ನೆ ಎ,ರಂಗಾಪುರದ ತೋಟದ ಮನೆಗೆ ಎಂಟ್ರಿ ಕೊಟ್ಟಿರುವ ಚಿರತೆ ನಾಯಿಯನ್ನು ಬಲಿ ಪಡೆದಿದೆ.
ತರೀಕೆರೆ ಪಟ್ಟಣದ ಸುತ್ತಮುತ್ತಲಿನ ಹಳ್ಳಗಳಲ್ಲಿ ಸಂಚಾರ ಮಾಡುತ್ತಿರುವ ಚಿರತೆಗಳ ಬಗ್ಗೆ ಜನ ಭಯ ಪಡುತ್ತಿದ್ದಾರೆ.ತರೀಕೆರೆ ಸುತ್ತಲಿನ ಹಳ್ಳಿಗಳಾದ ದೋರನಾಳ್,ಬೈರಾಪುರ,ಎ,ರಂಗಾಪುರ,ಎರೇಹಳ್ಳಿ,ಅತ್ತಿಗನಾಳ್,ಸುಣ್ಣದಹಳ್ಳಿ,ನಂದಿ,ಇನ್ನಿತರ ಹಳ್ಳಿಯಲ್ಲಿ ಜನ ಭಯ ಭೀತಿಯಿಂದ ಜೀವ ಕೈಯಲ್ಲಿ ಹಿಡಿದು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ಅಜ್ಜಂಪುರ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳಲ್ಲಿ ಇದೇ ಪರಿಸ್ಥಿತಿ ಇದೆ .ಅಜ್ಜಂಪುರ ಸುತ್ತಮುತ್ತಲಿನ ಹಳ್ಳಿಗಳಾದ ಮಲ್ಲೇನಹಳ್ಳಿ,ಎರೇಹೊಸರು,ನಾರಣಾಪುರ,ಬಗ್ಗವಳ್ಳಿ,ಅತ್ತಿಮೊಗ್ಗೆ ,ಹಣ್ಣೇ, ಗೌರಪುರ,ಮತ್ತಿತರ ಪ್ರದೇಶದಲ್ಲಿ ಚಿರತೆ ಸಂಚಾರ ಮಾಡಿರುವುದು ಸಿ.ಸಿ.ಕ್ಯಾಮರಾ ದಲ್ಲಿ ನೋಡಿರುವ ಜನತೆ ಸಂಜೆ ನಂತರ ಓಡಾಡಲು ಭಯ ಪಡುತ್ತಿದ್ದಾರೆ.ಅರಣ್ಯ ಇಲಾಖೆಗೆ ಬೆಂಕಿ ಬೀಳುವಂತೆ ಮಾಡಿರುವುದರಿಂದ ನಿಷ್ಕ್ರಿಯವಾಗಿವೆ ಎಂದು ಜನ ದೂರುತ್ತಿದ್ದಾರೆ.
ಅಧಿಕಾರ,ಹಣ ಎಂದು ಚಡಪಡಿಸುತ್ತಿರುವ ಜನಪ್ರತಿನಿಧಿಗಳಿರುವಾಗ ಜನ ಬಾಯಿ,ಬಾಯಿ ಬಡಿದು ಕೊಳ್ಳುತ್ತಿದ್ದಾರೆ ಕುಟುಂಬ, ಕುಟುಂಬ ಎನ್ನುವವರ ಬಾಯಿಗೆ ಚಿರತೆ,ಹುಲಿಗಿಂತ ಅಧಿಕಾರ, ಹಣ ಮುಖ್ಯ ಎನ್ನುವ ದುಸ್ಥಿತಿಗೆ ಮತದಾರರು ಪಶ್ಚಾತ್ತಾಪ ಪಡುತ್ತಿದ್ದಾರೆ ನಲುಗುತ್ತಿದ್ದಾರೆ, ಮತದಾರರು ಮತ್ತು ಜನರಿಗಿಂತ ಚಿರತೆಗಳು ಸಂಚಾರ ಮಾಡುತ್ತಿವೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತ ಇದ್ದಾರೆ.ಇಂತಹ ದುಸ್ಥಿತಿ ತರೀಕೆರೆ ಕ್ಷೇತ್ರದಲ್ಲಿ ಇದೆ.
Leopard attacks Tarikere-Ajjampura taluk four people injured
Leave a comment