ಚಿಕ್ಕಮಗಳೂರು: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ವತಿಯಿಂದ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಎಂಬ ಕಾರ್ಯಕ್ರಮವನ್ನು ಡಿ. ೧೮ರ ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಹೆಚ್.ಗುರುಮೂರ್ತಿ ತಿಳಿಸಿದರು.
ಅವರು ಇಂದು ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಪ್ರತಿಭಾವಂತ ಯುವಕ, ಯುವತಿಯರು. ಕಿರಿಯರು, ಗ್ರಾಮೀಣ ಪ್ರತಿಭೆಗಳಿಗೆ ಹಾಗೂ ಎಳೆಮರೆಕಾಯಿ ಹಾಗೆ ಇರುವ ಪ್ರತಿಭಾವಂತರಿಗೆ ಒಂದು ಅವಕಾಶ ದೊರಕಿಸಿಕೊಡುವ ಉದ್ದೇಶದಿಂದ ಈ ವೇದಿಕೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ರಾಜ್ಯದಲ್ಲಿ ಸುಮಾರು ೨೫ ವ?ಗಳಿಂದ ನಾಡು ನುಡಿ, ನೆಲ, ಜಲ, ಶೋಷಿತರು ಎಡವರು, ದೀನ-ದಲಿತರು, ಕಾರ್ಮಿಕರ ಪರವಾಗಿ ರಾಜ್ಯಾದ್ಯಂತ ಸಾಕ? ಹೋರಾಟಗಳನ್ನು ಮಾಡಿದ್ದು ಹಾಗೂ ಸೂರಿಲ್ಲವವರಿಗೆ ಸೂರಿನ ವ್ಯವಸ್ಥೆ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳು ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂದು ಬರಲಾಗಿದೆ ಎಂದರು
ಅದೇ ರೀತಿಯಲ್ಲಿ ಜಿಲ್ಲೆಯಲ್ಲಿ ಮೊದಲ ಬಾರಿಗೆ ಸ್ಥಳಿಯರಿಗೆ ಅವಕಾಶ ಸಿಗಬೇಕೆಂಬ ಉದ್ದೇಶದಿಂದ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಇದೇ ೧೮ನೇ ತಾರೀಕು ಕುವೆಂಪು ಕಲಾ ರಂಗಮಂದಿರದಲ್ಲಿ ಪ್ರತಿಭೆ ನಿಮ್ಮದು ವೇದಿಕೆ ನಮ್ಮದು ಎನ್ನುವ ಶೀರ್ಷಿಕೆ ಅಡಿಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ತಮ್ಮಲ್ಲಿ ಇರುವಂತಹ ವಿಶೇ?ವಾದ ಪ್ರತಿಭೆಗಳನ್ನು ತೋರಿಸುವುದಕ್ಕಾಗಿ ವೇದಿಕೆಯನ್ನು ಸಿದ್ಧಪಡಿಸಲಾಗಿದೆ ಎಂದರು.
ಈ ವೇದಿಕೆಯಲ್ಲಿ ಕಾರ್ಮಿಕರು, ಚಾಲಕರು, ಹೋಟೆಲ್ ಮಾಲೀಕರು. ಕೂಲಿ ಕಾರ್ಮಿಕರು ವಿವಿಧ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಸರ್ಕಾರಿ ನೌಕರರು ಹಾಗೂ ಅರೆಕಾಲಿಕ ನೌಕರರು ಮತ್ತು ಎಲ್ಲಾ ವರ್ಗದ ಹಿರಿಯರು. ಕಿರಿಯರು ತಂಡಗಳ ರೂಪದಲ್ಲಿ ಅಥವಾ ವೈಯುಕ್ತಿಕ ರೂಪದಲ್ಲಿ ನೃತ್ಯ, ಹಾಡು, ಸಂಗೀತ ಭರತನಾಟ್ಯ, ಮಿಮಿಕ್ರಿ, ಏಕಪಾತ್ರ ಅಭಿನಯ, ಸಣ್ಣ ನಾಟಕಗಳು ಹೀಗೆ ಸಮಾಜಮುಖ ಆದ ಕಾರ್ಯಕ್ರಮಗಳನ್ನು ನೀಡಲು ಮುಕ್ತವಾದ ಅವಕಾಶವನ್ನು ಮಾಡಿಕೊಡಲಾಗುವುದು ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಿರ್ದೇಶಕರ ತಂಡಗಳು ಬಂದಿರುತ್ತದೆ ಈ ಕಾರ್ಯಕ್ರಮದಲ್ಲಿ ಉತ್ತಮವಾಗಿ ಪ್ರದರ್ಶನ ನೀಡಿದವರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವವರು ಅಖಿಲ್. ೭೨೦೪೧೧೦೮೩೬, ತ್ಯಾಗರಾಜ್. ೮೧೫೦೯೪೪೪೨೪, ಶರತ್.೮೬೧೮೩೬೪೧೮೭, ನಿಶ್ಚಲ್ ರಾಜ್.೮೧೯೭೬೧೨೭೭೦, ಅನಿಲ್.೯೦೭೧೨೧೪೧೮೨, ಧರ್ಮ ೯೧೧೦೬೩೨೦೩೦, ರಂಗನಾಥ್.೭೮೯೯೯೦೫೧೦೧ ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.
ಪತ್ರಿಕಾಗೊಷ್ಠಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಗೌರವಾಧ್ಯಕ್ಷ ಮಂಜುನಾಥ್ ತೆರದಾಳ್, ಅನಿಲ್, ಹರ್ಷ, ಕಿರಣ್ ಕುಮಾರ್, ಚಂದ್ರಶೇಖರ್ ಉಪಸ್ಥಿತರಿದ್ದರು.
Talent search by the self-respecting faction of the K.R.V.
Leave a comment