Home namma chikmagalur ನ.10 ಕ್ಕೆ ಬಾಬಾಬುಡನ್ ದರ್ಗಾದಲ್ಲಿ ರೊಟ್ಟಿಭಾಜಿ ಧಾರ್ಮಿಕ ಆಚರಣೆ
namma chikmagalurchikamagalurHomeLatest News

ನ.10 ಕ್ಕೆ ಬಾಬಾಬುಡನ್ ದರ್ಗಾದಲ್ಲಿ ರೊಟ್ಟಿಭಾಜಿ ಧಾರ್ಮಿಕ ಆಚರಣೆ

Share
Share

ಚಿಕ್ಕಮಗಳೂರು: ಶ್ರೀಗುರು ಇನಾಂ ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ ನ.೧೦ ರಂದು ಸೋಮವಾರ ಬೆಳಗ್ಗೆ ೧೧ರಿಂದ ಮಧ್ಯಾಹ್ನ ೩ ರವರೆಗೆ ಶತಮಾನಗಳಿಂದ ನಡೆದು ಬರುತ್ತಿರುವ ಸೂಫಿ ಪರಂಪರೆಯ ಧಾರ್ಮಿಕ ಆಚರಣೆ ರೊಟ್ಟಿ ಭಾಜಿ ಫಾತಿಹಾ(ಮಾಮಾ ಜಿಗ್ನಿ ಫಾತಿಹಾ)ಸಹಜ ನಡೆಯಲಿದೆ ಎಂದು ಸೈಯದ್ ಬುಡೆನ್ ಶಾ ಖಾದ್ರಿ ವಂಶಸ್ಥರಾದ ಸೈಯದ್ ಫಕ್ರುದ್ದೀನ್ ಶಾ ಖಾದ್ರಿ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ರೊಟ್ಟಿ ಭಾಜಿ ಧಾರ್ಮಿಕ ಆಚರಣೆ ಕಾರ್ಯಕ್ರಮ ಬಾಬಾಬುಡನ್‌ಗಿರಿ ದರ್ಗಾದಲ್ಲಿ ಶತಮಾನಗಳಿಂದ ನಮ್ಮ ಪೂರ್ವಜರು ಆಚರಿಸಿಕೊಂಡು ಬಂದಿರುವ ಪರಂಪರೆಯಾಗಿದೆ. ಮುಹಮ್ಮದನ್ ರಾಜಕುಮಾರಿಯಾದ ಮಾಮಾ ಜಿಗ್ನಿ ಮಾಸಾಹಿಬ ಅವರ ಸ್ಮರಣಾರ್ಥವಾಗಿ ಈ ಧಾರ್ಮಿಕ ಆಚರಣೆಯನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದಿದ್ದಾರೆ.

ಅವರು ಆ ಕಾಲದಲ್ಲಿ ಫಕೀರ್‌ಗಳು ಮತ್ತು ಭಕ್ತರಿಗೆ ರೊಟ್ಟಿ ಹಾಗೂ ಭಾಜಿ ಹಂಚುವ ಶಾಂತಿಯುತ ಪರಂಪರೆ ಆರಂಭಿಸಿದ್ದು, ಅವರ ಶಾಂತಿ, ಐಕ್ಯತೆ ಮತ್ತು ಜ್ಞಾನದ ಸಂದೇಶ ಇಂದಿಗೂ ಎಲ್ಲ ಧರ್ಮಗಳ ಜನರಿಗೆ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ದರ್ಗಾ ಶತಮಾನಗಳಿಂದ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳು ಗೌರವಿಸುತ್ತಿರುವ ಶಾಂತಿಯ ತಾಣವಾಗಿದ್ದು, ಇತ್ತೀಚಿನ ಕೆಲವು ಚಟುವಟಿಕೆಗಳಿಂದಾಗಿ ದರ್ಗಾದ ಧಾರ್ಮಿಕ ಸ್ವರೂಪಕ್ಕೆ ಧಕ್ಕೆಯಾಗುತ್ತಿದೆ. ಇದು ದರ್ಗಾದ ಭಕ್ತರ ಧಾರ್ಮಿಕ ನಂಬಿಕೆಗೆ ಕುಂದುಂಟುಮಾಡಿದೆ.

ಆದ್ದರಿಂದ ಶಾಂತಿಪ್ರಿಯ ನಾಗರಿಕರು, ಭಕ್ತರು ಮತ್ತು ಅಧಿಕಾರಿಗಳು ಶತಮಾನಗಳಿಂದ ನಡೆಯುತ್ತಿರುವ ಈ ಶಾಂತಿಯುತ ಫಾತಿಹಾ ಪರಂಪರೆಯನ್ನು ಬೆಂಬಲಿಸಬೇಕು. ದರ್ಗಾದ ಪವಿತ್ರತೆ ಮತ್ತು ಇತಿಹಾಸದ ಸತ್ಯವನ್ನು ಕಾಪಾಡಬೇಕು ಎಂದು ಅವರು ಮನವಿ ಮಾಡಿದ್ದಾರೆ.

ಪೂಜಾ ವಿಧಾನ ಕಾಯ್ದೆ, ೧೯೯೧ ರ ಪ್ರಕಾರ ಇದರ ಧಾರ್ಮಿಕ ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಕಾಪಾಡುವುದು ಕಡ್ಡಾಯವಾಗಿದೆ ಎಂದು ತಿಳಿಸಿರುವ ಅವರು, ಫಾತಿಹಾ ಸಂಪೂರ್ಣ ಶಾಂತಿಯುತವಾಗಿ ನಡೆಯಲಿದ್ದು, ಇದರ ಅಂಗವಾಗಿ ಹಜ್ರತ್ ದಾದಾ ಹಯಾತ್ (ದಾದಾ ಪೀರ್) ಅವರ ಪಾದುಕೆ (ಖಡವೇ) ದರ್ಶನ, ಚಿಲ್ಲಾ ಮತ್ತು ಪೀಠದ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದರು.

ಮಾಮಾ ಜಿಗ್ನಿ ಮಾಸಾಹಿಬ ಅವರ ಪವಿತ್ರ ಚಿಲ್ಲಾ ಮತ್ತು ಪೀಠದ ದರ್ಶನ, ಪವಿತ್ರ ಕಲಿಮಾ ತಯ್ಯಿಬ ಇರುವ ದ್ವಾರದ ದರ್ಶನ, ಗುಹೆಯ ಹೊರಗಿನ ಪವಿತ್ರ ಚೌಕಿ ಮತ್ತು ಅರೇಬಿಕ್ ಹಾಗೂ ಪರ್ಶಿಯನ್ ಭಾಷೆಯ ತಾವೀಜ್ ದರ್ಶನ ಮತ್ತು ಜಮಾಲುಲ್ಲಾ ಮಘ್ರಿಬಿ ಶಾ ಖಾದ್ರಿ (ಕಾಫಿ ಗೋರಿ) ಅವರ ದರ್ಶನ ನಡೆಯಲಿದೆ. ಫಾತಿಹಾ ನಂತರ ನಿಯಾಜ್ (ರೊಟ್ಟಿ-ಭಾಜಿ ಆಹಾರ ವಿತರಣೆ) ಮಾಡಲಾಗುತ್ತದೆ. ಭಕ್ತರು ಪ್ರೀತಿ ಮತ್ತು ಧಾರ್ಮಿಕ ಐಕ್ಯತೆಯೊಂದಿಗೆ ಈ ದರ್ಗಾದ ಸಂರಕ್ಷಣೆ ಹಾಗೂ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಈ ಧಾರ್ಮಿಕ ಆಚರಣೆಯಲ್ಲಿ ಭಾಗವಹಿಸಬೇಕೆಂದು ಅವರು ವಿನಂತಿಸಿದ್ದಾರೆ

Rottibhaji religious ceremony at Bababudan Dargah on November 10

Share

Leave a comment

Leave a Reply

Your email address will not be published. Required fields are marked *

Don't Miss

ಸಾಲದ ಹಣ ಕೇಳಿದ್ದಕ್ಕೆ ಹಲ್ಲೆ; ತಾಯಿ-ಮಗನ ವಿರುದ್ಧ ಪ್ರಕರಣ

ಕಡೂರು: ಸಾಲವಾಗಿ ನೀಡಿದ್ದ ₹50 ಸಾವಿರವನ್ನು ಹಿಂದಿರುಗಿಸುವಂತೆ ಕೇಳಿದ್ದಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ಯಗಟಿ ಪೊಲೀಸ್ ಠಾಣೆಯಲ್ಲಿ ತಾಯಿ-ಮಗನ ವಿರುದ್ಧ ಪ್ರಕರಣ ದಾಖಲಾಗಿದೆ. ಯಗಟಿ ಗ್ರಾಮದ ಮುದಿಯಪ್ಪ ಬಡಾವಣೆಯ...

ಹುಬ್ಬಳ್ಳಿಯಲ್ಲಿ ಆಗಸ್ಟ್ 9ರಂದು ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ

ಚಿಕ್ಕಮಗಳೂರು: ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಹಾಗೂ ಆದಿವಾಸಿ ಹರಣ ಶಿಖಾರಿ ಪಾರಿ ಸಮಾಜ ಕ್ಷೇಮಾಭಿವೃದ್ಧಿ ಸಂಘದ ಸಂಯುಕ್ತಾಶ್ರಯದಲ್ಲಿ ಆಗಸ್ಟ್ 9ರಂದು ಹುಬ್ಬಳ್ಳಿಯಲ್ಲಿ ರಾಜ್ಯಮಟ್ಟದ 32ನೇ ವಿಶ್ವ ಆದಿವಾಸಿ ದಿನಾಚರಣೆ ಅಂಗವಾಗಿ...

Related Articles

ಗ್ರಾಮೀಣ ಪ್ರದೇಶದಲ್ಲಿ ವಲಸೆ ತಡೆಗೆ ವಿಬಿ ಜಿ ರಾಮ್ ಜಿ ಆಸರೆ

ಚಿಕ್ಕಮಗಳೂರು: ಗ್ರಾಮೀಣ ಭಾಗದ ಜನರು ಉದ್ಯೋಗಕ್ಕಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗುವುದನ್ನು ತಪ್ಪಿಸಿ, ತಮ್ಮ ಗ್ರಾಮಗಳಲ್ಲಿಯೇ...

ಆಗಸ್ಟ್ 14 ಮತ್ತು 16 ರಂದು ವಿದ್ಯುತ್ ನಿಲುಗಡೆ

ಚಿಕ್ಕಮಗಳೂರು:  ಗ್ರಾಮೀಣ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹೊಸದಾದ ಗಾಣದಾಳು ವಿ.ವಿ ಕೇಂದ್ರದ ೧೧ ಕೆ.ವಿ ಲಿಂಕ್...

ವೃದ್ದರ ಮಾಶಾಸನ ಬಿಡುಗಡೆ ಆಗ್ರಹಿಸಿ ಕರವೇ (ಪ್ರವೀಣ್‌ಶೆಟ್ಟಿ)ಬಣ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದರ ಮಾಶಾಸನ ಬಿಡುಗಡೆ ಹಾಗೂ ಬಿಡದಿಯಲ್ಲಿ ರೈತರ ಜೀವನ ಉಳಿಸಬೇಕು ಎಂದು ಆಗ್ರಹಿಸಿ ಕರವೇ...

ವಿದ್ಯುತ್ ಸ್ಪರ್ಶದಿಂದ ಎರಡು ಜಾನುವಾರುಗಳ ಸಾವು

ನರಸಿಂಹರಾಜಪುರ: ಜಮೀನಿಗೆ ಅಳವಡಿಸಿದ್ದ ಐಬೆಕ್ಸ್ ತಂತಿ ಬೇಲಿಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಕಲ್ಪಿಸಿದ್ದ ಪರಿಣಾಮ ಎರಡು...