Home namma chikmagalur ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್
namma chikmagalurchikamagalurHomeLatest NewsPolitical News

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್ ಮಧ್ಯೆ ಭಾರಿ ಲಡಾಯಿ ನಡೆಯುತ್ತಿದೆ.

ಮಲೆನಾಡಿನ ರಾಜಕಾರಣ ಬಯಲು ಸೀಮೆ ರಾಜಕಾರಣಕ್ಕಿಂತ ಹೆಚ್ಚು ರಂಗು ಪಡೆಯುತ್ತಿದೆ.ದಿನವೂ ಒಂದಲ್ಲ ಒಂದು ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ.ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಲುಪಿದೆ.

ಅನ್ಯಾಯದ ಪರಮಾವಧಿ ತಲುಪಿರುವ ಸ್ಥಿತಿಗೆ ಶೃಂಗೇರಿ ಕ್ಷೇತ್ರದ ರಾಜಕಾರಣ ತಲುಪಿದೆ. ದಿನನಿತ್ಯ ಶಾಸಕ ರಾಜೇಗೌಡರ ಮಧ್ಯೆ ಆರೋಪ ಪ್ರತಿ ಆರೋಪಗಳು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿವೆ.

ರಾಜೇಗೌಡ ಭ್ರಷ್ಟ ಅಲ್ಲ ಆದರೆ ಮೊದಲಿನ ಚಟುವಟಿಕೆ ಇಲ್ಲ ಆದರೂ ಭ್ರಷ್ಟಾಚಾರದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿದೆ.ಇದಕ್ಕೆ ಜೀವರಾಜ್ ಕಾರಣ ಎಂದು ಕಾಂಗ್ರೆಸ್ ನವರ ಆರೋಪ.

ಆದಾಯ ಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.ಈ ಬಗ್ಗೆ ತನಿಖೆ ನಡೆಯುತ್ತಿದೆ ಇದರ ಹಿಂದೆ ಸೋತಿರುವ ಜೇವರಾಜ್ ಬುಸುಗುಟ್ಟುತ್ತಿದ್ದಾರೆ.ಇದರ ಫಲವೇ ಹಾದಿ ಬೀದಿಯಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಪ್ರತಿ ಆರೋಪ ಮಾಡುತ್ತಿದ್ದಾರೆ.ಹಲ್ಲಿಲ್ಲದ ಹಾವು ಕಚ್ಚಲು ಸಾಧ್ಯವಿಲ್ಲ.ಆದರೆ ಸದಾ ಪ್ರಚಾರವೋ ಅಪಪ್ರಚಾರವೋ ನಡೆಯುತ್ತಿದೆ.

ಶಾಸಕ ರಾಜೇಗೌಡರ ಮೇಲೆ ದಿನಕ್ಕೊಂದು ದೂರು ಹೇಳುವುದೆ ಜೀವರಾಜ್ ಮತ್ತು ಬಿಜೆಪಿಯವರ ಕೆಲಸ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

ಚುನಾವಣೆಯಲ್ಲಿ ಘೋಷಣೆ ಮಾಡಿರುವ ಆದಾಯಕ್ಕಿಂತ ಹೆಚ್ಚಿನ ಆದಾಯ ಇದೆ ಎಂದು ಬಿಜೆಪಿಯ ದಿನೇಶ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ನೀಡಿದ್ದು ಜೀವರಾಜ್ ಮಾಧ್ಯಮಗಳ ಮುಂದೆ ಆರಚಿಕೊಳ್ಳುತ್ತಿದ್ದಾರೆ.ಇದಕ್ಕೆ ಶಾಸಕ ರಾಜೇಗೌಡ ಕೂಡ ಕೆಂಡ ಮಂಡಲರಾಗಿದ್ದಾರೆ. ಜನರು ಕೂಡ ಪುಕ್ಕಟ್ಟೆ ಮಜಾ ತೆಗೆದುಕೊಳ್ಳುತ್ತಿದ್ದಾರೆ.ಸದ್ಯ ಕಾಂಗ್ರೆಸ್ ನವರು”ಸತ್ಯ ಮೇವ ಜಯತೆ” ಎಂದು ತಿರುಗಿ ಬೀಳಲು ತಯಾರಾಗಿದ್ದಾರೆ.

ಬಯಲು ಪ್ರದೇಶ ರಾಜಕಾರಣ ತಣ್ಣಗಾಗಿದೆ ಮಲೆನಾಡಿನಲ್ಲಿ ಬೆಂಕಿ ರಾಜಕಾರಣ ದಿನವೂ ಲಡಾಯಿ ನೋಡಿ ನಗಾಡುತ್ತಿದ್ದು ಮುಂದಿನ ಚುನಾವಣೆವರೆಗೂ ಇದು ಇದ್ದೆ ಇರುತ್ತದೆ ಎಂದು ಜನ ನಗುತ್ತಿದ್ದಾರೆ.

Sringeri Ladai MLA TD Rajegowda V/S Jeevaraj

Share

Leave a comment

Leave a Reply

Your email address will not be published. Required fields are marked *

Don't Miss

ನೋಟರಿ ವಿ.ಕೆ.ರಘುಯಿಂದ ನೀರಿನ ಮೇಲೆ ತೇಲುತ್ತಾ ಯೋಗ ಭಂಗಿ ಪ್ರದರ್ಶನ

ಚಿಕ್ಕಮಗಳೂರು: ಯೋಗ ಸಾಧಕ ನಗರದ ವಕೀಲ ಹಾಗೂ ನೋಟರಿ ವಿ.ಕೆ.ರಘು ಅವರು  ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ನೀರಿನ ಮೇಲೆ ತೇಲುತ್ತಾ ವಿವಿಧ ಯೋಗ ಭಂಗಿಗಳನ್ನು ಪ್ರದರ್ಶಿಸಿದರು. ಬೈಪಾಸ್ ರಸ್ತೆಯ ನರ್ಚರ್...

ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕ ಆತ್ಮಹತ್ಯೆಗೆ ಶರಣು

ಕಡೂರು: ಪೊಲೀಸರ ವಿಚಾರಣೆಗೆ ಒಳಗಾಗಿದ್ದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಡೂರು ತಾಲೂಕಿನ ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕುಲ್ಲೂರು ಗ್ರಾಮದ 20 ವರ್ಷದ ಚಂದನ್ ಮೃತಪಟ್ಟ ದುರ್ದೈವಿ. ಇತ್ತೀಚೆಗೆ...

Related Articles

ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ

ಚಿಕ್ಕಮಗಳೂರು: ನಗರದ ಎಐಟಿ ವೃತ್ತದ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಚೇರಿಯಿಂದ ಮೋಟಾರ್ ಸೈಕಲ್‌ನಲ್ಲಿ...

ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ

ಚಿಕ್ಕಮಗಳೂರು: ಅಭಿವೃದ್ಧಿ ಕೆಲಸಗಳ ಬಗ್ಗೆ ಕೆಲವರು ಪೂರ್ವಗ್ರಪಿಡಿತರಾಗಿ ಮಾತನಾಡುತ್ತಿದ್ದಾರೆ. ಈ ಹಿಂದೆ ಒಬ್ಬರಿಗೆ ಮಾತ್ರ ಗುತ್ತಿಗೆ...

ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಬಳಿ ಹೊಸ ವಿವಾದ

ಚಿಕ್ಕಮಗಳೂರು: ಕಾಫಿನಾಡಿನ ಧಾರ್ಮಿಕ ಕ್ಷೇತ್ರ ‘ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ’ (ದತ್ತಪೀಠ) ಆವರಣದಲ್ಲಿ ಈಗ ಮತ್ತೊಂದು...

ರ್‍ಯಾಪಿಡ್ ಬೈಕ್-ಆಟೋ ಪರವಾನಗಿ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟನೆ

ಚಿಕ್ಕಮಗಳೂರು: ರ್‍ಯಾಪಿಡ್ ಬೈಕ್ ಮತ್ತು ಆಟೋ ಪರವಾನಗಿಯನ್ನು ನಿಲ್ಲಿಸಬೇಕು ಎ ಂದು ಒತ್ತಾಯಿಸಿ ಸೋಮವಾರ ಚಿಕ್ಕಮಗಳೂರು...