Home namma chikmagalur ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್
namma chikmagalurchikamagalurHomeLatest NewsPolitical News

ಶೃಂಗೇರಿ ಲಡಾಯಿ: ಶಾಸಕ ಟಿ.ಡಿ.ರಾಜೇಗೌಡ V/S ಜೀವರಾಜ್

Share
Share

ಶೃಂಗೇರಿ: ಶೃಂಗೇರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಮತ್ತು ಬಿಜೆಪಿ ಮಾಜಿ ಸಚಿವ ಶಾಸಕ ಜೀವರಾಜ್ ಮಧ್ಯೆ ಭಾರಿ ಲಡಾಯಿ ನಡೆಯುತ್ತಿದೆ.

ಮಲೆನಾಡಿನ ರಾಜಕಾರಣ ಬಯಲು ಸೀಮೆ ರಾಜಕಾರಣಕ್ಕಿಂತ ಹೆಚ್ಚು ರಂಗು ಪಡೆಯುತ್ತಿದೆ.ದಿನವೂ ಒಂದಲ್ಲ ಒಂದು ಆರೋಪ ಪ್ರತಿ ಆರೋಪಗಳು ನಡೆಯುತ್ತಿವೆ.ಇಂದು ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ತಲುಪಿದೆ.

ಅನ್ಯಾಯದ ಪರಮಾವಧಿ ತಲುಪಿರುವ ಸ್ಥಿತಿಗೆ ಶೃಂಗೇರಿ ಕ್ಷೇತ್ರದ ರಾಜಕಾರಣ ತಲುಪಿದೆ. ದಿನನಿತ್ಯ ಶಾಸಕ ರಾಜೇಗೌಡರ ಮಧ್ಯೆ ಆರೋಪ ಪ್ರತಿ ಆರೋಪಗಳು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಬರುತ್ತಿವೆ.

ರಾಜೇಗೌಡ ಭ್ರಷ್ಟ ಅಲ್ಲ ಆದರೆ ಮೊದಲಿನ ಚಟುವಟಿಕೆ ಇಲ್ಲ ಆದರೂ ಭ್ರಷ್ಟಾಚಾರದ ಪ್ರಕರಣ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾಗಿದೆ.ಇದಕ್ಕೆ ಜೀವರಾಜ್ ಕಾರಣ ಎಂದು ಕಾಂಗ್ರೆಸ್ ನವರ ಆರೋಪ.

ಆದಾಯ ಕ್ಕಿಂತ ಹೆಚ್ಚು ವಹಿವಾಟು ನಡೆಸಿದ್ದಾರೆ ಎಂದು ದೂರು ದಾಖಲಾಗಿದೆ.ಈ ಬಗ್ಗೆ ತನಿಖೆ ನಡೆಯುತ್ತಿದೆ ಇದರ ಹಿಂದೆ ಸೋತಿರುವ ಜೇವರಾಜ್ ಬುಸುಗುಟ್ಟುತ್ತಿದ್ದಾರೆ.ಇದರ ಫಲವೇ ಹಾದಿ ಬೀದಿಯಲ್ಲಿ ಅವರ ಮೇಲೆ ಇವರು, ಇವರ ಮೇಲೆ ಅವರು ಆರೋಪ ಪ್ರತಿ ಆರೋಪ ಮಾಡುತ್ತಿದ್ದಾರೆ.ಹಲ್ಲಿಲ್ಲದ ಹಾವು ಕಚ್ಚಲು ಸಾಧ್ಯವಿಲ್ಲ.ಆದರೆ ಸದಾ ಪ್ರಚಾರವೋ ಅಪಪ್ರಚಾರವೋ ನಡೆಯುತ್ತಿದೆ.

ಶಾಸಕ ರಾಜೇಗೌಡರ ಮೇಲೆ ದಿನಕ್ಕೊಂದು ದೂರು ಹೇಳುವುದೆ ಜೀವರಾಜ್ ಮತ್ತು ಬಿಜೆಪಿಯವರ ಕೆಲಸ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ.

ಚುನಾವಣೆಯಲ್ಲಿ ಘೋಷಣೆ ಮಾಡಿರುವ ಆದಾಯಕ್ಕಿಂತ ಹೆಚ್ಚಿನ ಆದಾಯ ಇದೆ ಎಂದು ಬಿಜೆಪಿಯ ದಿನೇಶ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದೂರು ನೀಡಿದ್ದು ಜೀವರಾಜ್ ಮಾಧ್ಯಮಗಳ ಮುಂದೆ ಆರಚಿಕೊಳ್ಳುತ್ತಿದ್ದಾರೆ.ಇದಕ್ಕೆ ಶಾಸಕ ರಾಜೇಗೌಡ ಕೂಡ ಕೆಂಡ ಮಂಡಲರಾಗಿದ್ದಾರೆ. ಜನರು ಕೂಡ ಪುಕ್ಕಟ್ಟೆ ಮಜಾ ತೆಗೆದುಕೊಳ್ಳುತ್ತಿದ್ದಾರೆ.ಸದ್ಯ ಕಾಂಗ್ರೆಸ್ ನವರು”ಸತ್ಯ ಮೇವ ಜಯತೆ” ಎಂದು ತಿರುಗಿ ಬೀಳಲು ತಯಾರಾಗಿದ್ದಾರೆ.

ಬಯಲು ಪ್ರದೇಶ ರಾಜಕಾರಣ ತಣ್ಣಗಾಗಿದೆ ಮಲೆನಾಡಿನಲ್ಲಿ ಬೆಂಕಿ ರಾಜಕಾರಣ ದಿನವೂ ಲಡಾಯಿ ನೋಡಿ ನಗಾಡುತ್ತಿದ್ದು ಮುಂದಿನ ಚುನಾವಣೆವರೆಗೂ ಇದು ಇದ್ದೆ ಇರುತ್ತದೆ ಎಂದು ಜನ ನಗುತ್ತಿದ್ದಾರೆ.

Sringeri Ladai MLA TD Rajegowda V/S Jeevaraj

Share

Leave a comment

Leave a Reply

Your email address will not be published. Required fields are marked *

Don't Miss

ಅಮಾನವೀಯ ಜಾನುವಾರು ಸಾಗಾಟ – ಮೂವರ ಬಂಧನ

ಎನ್.ಆರ್. ಪುರ: ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮ ಹಾಗೂ ಅಮಾನವೀಯ ಜಾನುವಾರು ಸಾಗಾಟ ಪ್ರಕರಣವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂಬಂಧ ಮೂವರನ್ನು ಬಂಧಿಸಿ, ವಾಹನ ಮತ್ತು ಜಾನುವಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ...

ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಧ್ಯಮಗಳು ಮಾಡಬೇಕು

ಚಿಕ್ಕಮಗಳೂರು: ಬಡವರ ಕಷ್ಟಗಳನ್ನು, ಸಮಸ್ಯೆಗಳನ್ನು ಸಮಾಜದ ಮತ್ತು ಸರ್ಕಾರದ ಗಮನಕ್ಕೆ ತರುವ ಕೆಲಸವನ್ನು ಮಾಧ್ಯಮಗಳು ಮಾಡಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಸಲಹೆ ಮಾಡಿದರು. ಹೊನ್ನ ಬಿತ್ತೇವು ಹೊಲಕೆಲ್ಲ ಮತ್ತು ನ್ಯೂಸ್ ಕಿಂಗ್...

Related Articles

ನೀರುಗಂಟಿ ಆತ್ಮಹತ್ಯೆ ಪ್ರಕರಣದಲ್ಲಿ ಎಫ್‌ಐಆರ್ ದಾಖಲು

ಚಿಕ್ಕಮಗಳೂರು: ಅಣೂರು ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದ ರಮೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ,...

ಹೇಮಾವತಿ ನದಿಯ ಅಕ್ರಮವಾಗಿ ಮರಳು ಸಾಗಣೆ ಪ್ರಕರಣ ಪತ್ತೆ

ಮೂಡಿಗೆರೆ: ಜೀವನದಿ ಹೇಮಾವತಿಯ ಒಡಲಿಗೆ ಕನ್ನ ಹಾಕಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಜಾಲದ ಮೇಲೆ ಗೋಣಿಬೀಡು...

ಕಾಫಿನಾಡಿನಲ್ಲಿ ರಂಜಾನ್ ಅಂಗವಾಗಿ ಸಾಮೂಹಿಕ ಪ್ರಾರ್ಥನೆ

ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಪವಿತ್ರ ರಂಜಾನ್ ಹಬ್ಬದ ಸಂಭ್ರಮವು ಸಡಗರ ಹಾಗೂ ಸೌಹಾರ್ದತೆಯಿಂದ ಕಳೆಗಟ್ಟಿತ್ತು. ಕೆಂಪನಹಳ್ಳಿಯ...

ಕಾಫಿ ತೋಟದಲ್ಲಿ ಮರಗಸಿ – ಕಾರ್ಮಿಕನ ಸಾವು

ಚಿಕ್ಕಮಗಳೂರು : ಕಾಫಿ ತೋಟದ ಮಾಲೀಕರು ಮತ್ತು ಮೇಸ್ತ್ರಿಗಳ ನಿರ್ಲಕ್ಷ್ಯಕ್ಕೆ ಅಮಾಯಕ ಕಾರ್ಮಿಕನೊಬ್ಬ ಬಲಿಯಾದ ದಾರುಣ...