Home Latest News ನಗರಸಭೆಯ ಅಧ್ಯಕ್ಷರ ಚುನಾವಣೆ- “ತ್ರೀ ಪಾರ್ಟಿ”ಗೆ ಮೂರು ನಾಮ ಸಿಂಬಲ್ ?
Latest NewschikamagalurHome

ನಗರಸಭೆಯ ಅಧ್ಯಕ್ಷರ ಚುನಾವಣೆ- “ತ್ರೀ ಪಾರ್ಟಿ”ಗೆ ಮೂರು ನಾಮ ಸಿಂಬಲ್ ?

Share
Share

ಚಿಕ್ಕಮಗಳೂರು: ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಶೀಲಾ ದಿನೇಶ್ ಅವಿರೋಧವಾಗಿ ಆಯ್ಕೆಯಾದರು. ಇದರಲ್ಲಿ ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ ಎಂದು ಕಾಂಗ್ರೆಸ್ ನವರು ಹಾದಿ,ಬೀದಿಯಲ್ಲಿ ಮಾತನಾಡುತ್ತಿರುವುದು ಮಾತ್ರ ಗುಟ್ಟಾಗಿ ಉಳಿದಿಲ್ಲ.

ಬಿಜೆಪಿ ಬಹುಮತ ಹೊಂದಿದ್ದರು ಗೆಲುವಿಗಾಗಿ ಜನತಾದಳವರ ಜೊತೆಗೆ ಕೈಜೋಡಿಸಿದೆ.ಬಿಜೆಪಿಯ ಸುಜಾತ ಶಿವಕುಮಾರ್ ರಾಜೀನಾಮೆ ನೀಡಿ ಜನತಾದಳ ಬೆಂಬಲಿತ ಶೀಲಾ ದಿನೇಶ್ ಅಧ್ಯಕ್ಷರಾಗುವ ಸಮಯದಲ್ಲಿ ಬಿಜೆಪಿ ವರಸಿದ್ದಿ ವೇಣುಗೋಪಾಲ ಮತ್ತು ದಿವ್ಯ ಬಸವರಾಜ್ ಹಾಗೂ ಅರುಣ್ ಎಂಬುವವರು ಕಾಂಗ್ರೆಸ್ ಬೆಂಬಲಿಸುವ ಬಗ್ಗೆ ಮಾತುಕತೆ ನಡೆದಿರುವುದು ಗುಟ್ಟಾಗಿ ಉಳಿದಿಲ್ಲ.

ಅದೇ ರೀತಿ ಕಾಂಗ್ರೆಸ್ ನ ಮೂರು ಜನ ಬಿಜೆಪಿ ದಳದವರನ್ನು ಸಂಪರ್ಕ ಮಾಡಿದ್ದರಂತೆ ಇದಕ್ಕೆ ಅಧಿಕಾರದಲ್ಲಿ ಇರುವವರ ಕುಮ್ಮಕ್ಕು ಎನ್ನುತ್ತಿದ್ದಾರೆ.

ಕಾಂಗ್ರೆಸ್ ನ ಅಕ್ಮಲ್ ಮತ್ತು ಎಸ್.ಡಿ.ಪಿ.ಐನ ಶ್ರೀನಿವಾಸ್ ಈ ಬಾರಿಯಾದರೂ ಕಾಂಗ್ರೆಸ್ ನವರು ಕುರ್ಚಿ ಹಿಡಿಯಬೇಕು ಎಂದು ಪ್ಲಾನ್ ಮಾಡಿ ತೊಡೆ ತಟ್ಟಲು ಮುನ್ನುಗಿದ್ದಾರೆ ಆದರೆ ಶಾಸಕರಾದ ತಮ್ಮಯ್ಯ ಸಹಕರಿಸಲಿಲ್ಲ ಕಾಂಗ್ರೆಸ್ ಮುಖಂಡರು ಕೂಡ ಇದರ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ನಗರಸಭೆ ಅಧ್ಯಕ್ಷರ ಚುನಾವಣೆ ಮುಗಿದ ನಂತರ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸುವಾಗ ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಮತ್ತು ಸಿ.ಟಿ.ರವಿ ಶಾಸಕ ತಮ್ಮಯ್ಯರ ಸಹಕಾರವನ್ನು ಬಹಿರಂಗವಾಗಿ ಹೇಳಿದ್ದಾರೆ.

ಶಾಸಕರುಗಳೇ ಖರೀದಿಯಾಗುತ್ತಿರುವಾಗ ನಗರಸಭಾ ಸದಸ್ಯರನ್ನು ಖರೀದಿಸುವುದು ಹೊಸದೇನಲ್ಲಾ ಹೀಗಾಗಿ ಕೋಟಿ ರೂಪಾಯಿಗಳ ಡೀಲ್ ಗೆ ಇಳಿದಿದ್ದ ಅಕ್ಮಲ್ ಟೀಮ್ ನಿರಾಸೆಯಾಗುವಂತೆ ಆಯಿತು ಶಾಸಕ ತಮ್ಮಯ್ಯ ಸೋಲುವುದಕ್ಕೆ ಚುನಾವಣೆ ಮಾಡುವುದು ಇಷ್ಟ ಇಲ್ಲ ಎಂದು ಹೇಳಿದ್ದಾರೆ ಎನ್ನಲಾಗಿದೆ. ಇದಕ್ಕೆ ಪರಸ್ಪರ ಹೊಂದಾಣಿಕೆ ರಾಜಕಾರಣವೇ ಕಾರಣ ಎಂದು ಹಾದಿ, ಬೀದಿಯಲ್ಲಿ ಮಾತನಾಡುತ್ತಿರುವುದು ಸತ್ಯ.

ಚಿಕ್ಕಮಗಳೂರಿನಲ್ಲಿ ಪಕ್ಷಗಳಿಗಿಂತ ಅಧಿಕಾರಸ್ಥರ ಹೊಂದಾಣಿಕೆ ರಾಜಕೀಯ ನೋಡಿ” ತ್ರೀ ಪಾರ್ಟಿ “ಗೆ ಮೂರು ನಾಮವೇ ಸಿಂಬಲ್ ಎಂದು ಕುಟುಕಿಸುತ್ತಿರುವುದು ಮಾತ್ರ ಸತ್ಯ.

Municipal Council President Election – Three Name Symbols for “Three Parties”?

Share

Leave a comment

Leave a Reply

Your email address will not be published. Required fields are marked *

Don't Miss

ಗುಡುಗು-ಸಿಡಿಲಿನ ಭಾರಿ ಮಳೆಗೆ ಇಡೀ ನಗರ ತಲ್ಲಣ

ಚಿಕ್ಕಮಗಳೂರು: ಶುಕ್ರವಾರ ಮಧ್ಯರಾತ್ರಿ ಗುಡುಗು-ಸಿಡಿಲಿನ ಅಬ್ಬರದೊಂದಿಗೆ ಸುರಿದ ಭಾರಿ ಮಳೆಗೆ ಇಡೀ ನಗರ ತಲ್ಲಣಗೊಂಡಿದೆ. ಮರಗಳು ವಿದ್ಯುತ್ ಕಂಬಗಳ ಸಹಿತ ರಸ್ತೆಗೆ ಉರಳಿದವು. ಹಲವು ಕಟ್ಟಡಗಳ ಚಾವಣಿ ಹಾರಿ ಹೋಗಿವೆ. ಮಧ್ಯರಾತ್ರಿ...

ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ನೇಮಕ ನಿಯಮ ಬಾಹಿರ

ಚಿಕ್ಕಮಗಳೂರು: ಇತ್ತೀಚೆಗೆ ಡಿ. ರಾಮೇಗೌಡರವರನ್ನು ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಮಗಳೂರು ತಾಲ್ಲೂಕು ಘಟಕದ ಅಧ್ಯಕ್ಷನಾಗಿ ನೇಮಕ ಮಾಡಿರುವುದು ನಿಯಮ ಬಾಹಿರವಾಗಿದ್ದು, ಈ ಆಯ್ಕೆ ಅಮಾನ್ಯ ಎಂದು ಜಿಲ್ಲಾಧ್ಯಕ್ಷ ಮಹೇಶ್ ಹೇಳಿದರು....

Related Articles

‘ನಮ್ಮೂರಿಗೆ ರಸ್ತೆ ಅಭಿವೃದ್ಧಿ ಬೇಡ’ ಎಂದು ಗ್ರಾಮಸ್ಥರು….?

ಚಿಕ್ಕಮಗಳೂರು: ಸಾಮಾನ್ಯವಾಗಿ ಗ್ರಾಮಗಳಿಗೆ ರಸ್ತೆ ಬೇಕು, ಕುಡಿಯುವ ನೀರು ಬೇಕು, ವಿದ್ಯುತ್ ಬೇಕು ಎಂದು ಜನ...

ಜಿಲ್ಲೆಯಲ್ಲಿ ಅಧಿಕಗೊಂಡ ನಾಪತ್ತೆ ಪ್ರಕರಣಗಳು

ಚಿಕ್ಕಮಗಳೂರು: ಬೀರೂರು ಮತ್ತು ಲಿಂಗದಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ಪ್ರತ್ಯೇಕ ನಾಪತ್ತೆ ಪ್ರಕರಣಗಳು ದಾಖಲಾಗಿದ್ದು,...

ಮಲೆನಾಡಿನಲ್ಲಿ ಮತ್ತೆ ಅಪಾಯಕಾರಿ ಕಾಲುಸಂಕಗಳನ್ನೇ ಆಶ್ರಯ ಪಡೆದ ಗ್ರಾಮಸ್ಥರು

ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಸ್ತಬ್ಧವಾಗುತ್ತಿದ್ದಂತೆ ಸರ್ಕಾರ ಅಲ್ಲಿನ ಕುಗ್ರಾಮಗಳನ್ನು ಸಂಪೂರ್ಣವಾಗಿ ಕೈಬಿಟ್ಟಿದೆ...

ಜೆಜೆಎಂನಲ್ಲಿ ನಕಲಿ ಛಾಪಾ ಕಾಗದ ಬಳಸಿ ಸರ್ಕಾರಕ್ಕೆ ವಂಚನೆ

ಶೃಂಗೇರಿ:  ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಜೆಜೆಎಂ (ಜಲ ಜೀವನ್ ಮಿಷನ್) ಹಾಗೂ ಟಾಸ್ಕ್ ಫೋರ್ಸ್...