ಚಿಕ್ಕಮಗಳೂರು: ಇಂದಿರಾಗಾಂಧಿ ಬಡಾವಣೆಯ ನಿವಾಸಿಗಳಿಗೆ ಮೂಲ ಸವಲತ್ತು ಕಲ್ಪಿ ಸಿಕೊಡಬೇಕು ಎಂದು ಕನ್ನಡಸೇನೆ ಮುಖಂಡರುಗಳು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಮನವಿ ಸಲ್ಲಿಸಿದರು.
ಈ ಕುರಿತು ಮಾತನಾಡಿದ ಕನ್ನಡಸೇನೆ ಜಿಲ್ಲಾಧ್ಯಕ್ಷ ಪಿ.ಸಿ.ರಾಜೇಗೌಡ ಹಿಂದಿನ ಸಚಿವ ಸಗೀರ್ ಅಹ್ಮದ್ ಕಾಲದಲ್ಲಿ ಬಡಾವಣೆ ನಿರ್ಮಾಣವಾಗಿದ್ದರೂ ಮೂಲಸೌಕರ್ಯಗಳು ಅಚ್ಚುಕಟ್ಟಾಗಿಲ್ಲ. ಜೊತೆಗೆ ಐದು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಬಡಾವಣೆಯಲ್ಲಿ ವಾಸಿಸುತ್ತಿದ್ದು ನ್ಯಾಯಬೆಲೆ ಅಂಗಡಿಯೂ ತೆರೆದಿಲ್ಲ ಎಂದು ಹೇಳಿದರು.
ರಾಜ್ಯಸರ್ಕಾರದ ಅನ್ನಭಾಗ್ಯ ಯೋಜನೆಯ ಅಕ್ಕಿ ಪಡೆಯಲು ನಿವಾಸಿಗಳು ಎರಡು ಕಿ.ಮೀ. ಕಾಲ್ನಡಿಗೆ ಯಲ್ಲೇ ಸಾಗಬೇಕಿದೆ. ಬಡಾವಣೆಗೆ ನಾಮಫಲಕವಿಲ್ಲ, ಚಾಮುಂಡೇಶ್ವರಿ ದೇವಾಲಯದ ಜೀರ್ಣೋದ್ದಾರ ಕ್ಕೂ ಅನೇಕ ಮನವಿ ಸಲ್ಲಿಸಿದರೂ ಜನಪ್ರತಿನಿಧಿಗಳು ಕೇವಲ ಆಶ್ವಾಸನೆಗಳು ಮಾತ್ರ ಜನತೆಗ ನೀಡಿ ತೆರಳುತ್ತಿ ದ್ದಾರೆ ಎಂದು ತಿಳಿಸಿದರು.
ಬಡಾವಣೆಯ ಮಸೀದಿ ಸೇರಿದಂತೆ ಕೆಲವೆಡೆ ಎಲ್ಲೆಂದರಲ್ಲಿ ಕಸ ಹಾಕಿ ಮಲೀನಗೊಳಿಸುತ್ತಿದ್ದಾರೆ. ಕಳೆ ದ ಎಂಟು ವರ್ಷಗಳಿಂದ ಸಮುದಾಯ ಭವನ ನಿರ್ಮಾಣ ಹಂತದಲ್ಲಿಯೇ ಇದೆ. ಜನರಿಗೆ ಕುಡಿಯುವ ನೀರಿನ ಸಮಸ್ಯೆ ಬಹಳಷ್ಟು ಕಾಡುತ್ತಿದ್ದು ಇಪ್ಪತ್ತು ದಿನಕ್ಕೊಮ್ಮೆ ನೀರನ್ನು ಬಿಡುವ ಜೊತೆಗೆ ಸಾಂಕ್ರಾಮಿಕ ರೋ ಗಗಳು ಹೆಚ್ಚಾಗುತ್ತಿವೆ ಎಂದರು.
ಈ ಸುತ್ತಮುತ್ತಲು ಬೀದಿ ದೀಪಗಳ ಕೊರತೆಯಿಂದ ಸಂಜೆ ಸಮಯ ಕೆಲಸ ಪೂರ್ಣಗೊಳಿಸಿ ಮಹಿಳೆ ಯರು ಮನೆಗೆ ಹಿಂತಿರುಗಲು ಭಯಭೀತರಾಗುತ್ತಿದ್ದಾರೆ. ಮುಖ್ಯವಾಗಿ ಬಡಾವಣೆಯಲ್ಲಿ ಪೊಲೀಸ್ ಠಾಣೆ ತೆರೆದರೆ ಬಹಳಷ್ಟು ಅನೈತಿಕ ಚಟುವಟಿಕೆಗಳಿಗೂ ಕಡಿವಾಣ ಹಾಕಬಹುದು. ಪೌರಕಾರ್ಮಿಕರು ಮುಖ್ಯರಸ್ತೆ ಯನ್ನು ಮಾತ್ರ ಸ್ವಚ್ಚಗೊಳಿಸಿ ಒಳಗಿನ ರಸ್ತೆಗಳಿಗೆ ಬರುತ್ತಿಲ್ಲ ಎಂದು ತಿಳಿಸಿದರು.
ಬಡಾವಣೆ ಅನೇಕ ವರ್ಷಗಳಿಂದ ವಾಸಿಸುತ್ತಿರುವ ನಿವಾಸಿಗಳಿಗೆ ಸ್ವಾಧೀನ ಪತ್ರ ವಿತರಣೆಯಾಗಿಲ್ಲ. ಇದಕ್ಕೆ ಮನನೊಂದು ಸ್ಥಳೀಯರು ಸ್ವಾಧೀನ ಪತ್ರಕ್ಕಾಗಿ ಹಲವು ರೀತಿಯ ಮನವಿ ಸಲ್ಲಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆತ್ತಿಲ್ಲ. ಇದರಿಂದಾಗಿ ಕೂಡಲೇ ಸಚಿವರು ಈ ಎಲ್ಲಾ ಸಮಸ್ಯೆಗಳ ಬಗ್ಗೆ ಕೂಲಂಕುಶವಾ ಗಿ ಪರಿಶೀಲಿಸಿ ಸಮಸ್ಯೆ ಪರಿಹರಿಸಬೇಕಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕನ್ನಡಸೇನೆ ವಕ್ತಾರ ಹುಣಸೇಮಕ್ಕಿ ಲಕ್ಷ್ಮಣ್, ಮುಖಂಡರುಗಳಾದ ಕಲ್ಲುದೊಡ್ಡಿ ಸತೀಶ್, ಜಯಪ್ರಕಾಶ್, ನಿಶ್ಚಿತ್, ಪಾಲಾಕ್ಷಿ, ಅನ್ವರ್ ಮತ್ತಿತರರು ಹಾಜರಿದ್ದರು.
Kannada Sena requests the minister to provide infrastructure for the barangay
Leave a comment